Wednesday 9 December 2009

ಸಮಸ್ಯೆ -ಸಮಸ್ಯೆ-ಪರಿಹಾರ!

ಇಬ್ಬರು ಗೆಳೆಯರು ಬಾರ್ ಒಂದರಲ್ಲಿ ಕುಳಿತಿದ್ದರು.ಒಬ್ಬ ಅಮೆರಿಕನ್ ,ಮತ್ತೊಬ್ಬ ಭಾರತೀಯ.ಒಂದರ ಹಿಂದೆ ಒಂದು ಗ್ಲಾಸ್ಗಳನ್ನು ಪೂರ್ತಿ ಮಾಡುತ್ತಾ ಕುಳಿತಿದ್ದರು.ಇದ್ದಕ್ಕಿದ್ದ ಹಾಗೆ  ಭಾರತೀಯನಿಗೆ  ಮಾತನಾಡುವ ಉಮೇದು ಬಂತು...ಬಿಕ್ಕಳಿಸಿದ..! ಅವನ ದುಃಖ ಕಂಡ ಗೆಳೆಯನಿಗೂ ದುಃಖ ಶುರು  ಆಯ್ತು,ಆದರು ಸಾವರಿಸಿ ಕೊಂಡು ಯಾಕೋ ಅಣ್ಣ ಅಳ್ತಾ ಇದ್ದೀಯ ಅಂತ ಕೇಳಿದ! ಅವನು ' ನಿನಗೆ ಗೊತ್ತಿಲ್ಲದೇ ಇರುವ ವಿಷಯವೊಂದು ಹೇಳಬೇಕಾಗಿದೆ,ನಮ್ಮ ತಾಯಿ ತಂದೆ ಹಳ್ಳಿಯ ಹುಡುಗಿಯೊಬ್ಬಳನ್ನು ಸೊಸೆಯಾಗಿ ತರಲು ನಿಶ್ಚಯ ಮಾಡಿದ್ದಾರೆ.ಅಂತಹ ಹೆಣ್ಣುಮಕ್ಕಳು ಚೆನ್ನಾಗಿ ಹೊಂದಿಕೊಂಡು ಸಂಸಾರ ನಡೆಸುತ್ತಾರೆ ಅನ್ನುವ ಭಾವನೆ ಅವರದು.ಯಾವಳೋ ಅವಳು,ನನಗೆ ಗೊತ್ತೇ ಇಲ್ಲ,ಸ್ವಲ್ಪ ದಿನ ಪ್ರೀತಿ ಸಹ ಮಾಡಲಿಲ್ಲ ಅಂತಹವಳನ್ನು ನಾನು ಮದುವೆ ಆಗೋದ? ಛೇ ನನಗೆ ಈ ಕುಟುಂಬದ ಸಮಸ್ಯೆಗಳಿಂದ ಸಾಕಾಗಿದೆ'ಎಂದು ಜೋರಾಗಿ ಅತ್ತ...!
'ನೀನು  ಲವ್ ಮ್ಯಾರೇಜ್ ಬಗ್ಗೆ ಹೇಳ್ತಾ ಇದ್ದೀಯ ? ಹಾಗಾದರೆ ನನ್ನ ಕಥೆ ಕೇಳು! '
ನಾನು ಒಬ್ಬ ವಿಧವೆಯನ್ನು  ಗಾಢವಾಗಿ ಪ್ರೀತಿಸಿದೆ,ಎರಡು ವರ್ಷಗಳ ಕಾಲ ಅವಳ ಜೊತೆ ಡೆಟ್ ಮಾಡಿದೆ,ಆಮೇಲೆ ಮದುವೆ ಆದೆ,ಅದಾದ ಮಾರನೆಯ ವರ್ಷ ನನ್ನನ್ನು ಹೆತ್ತ ಅಪ್ಪನಿಗೆ  ನನ್ನ ಮಲಮಗಳ  ಜೊತೆ ಲವ್ ಶುರು ಆಯಿತು! ಪ್ರೀತಿ ಆದ್ರೆ ಸುಮ್ಮನೆ ಇರೋಕೆ ಆಗಲ್ವಲ್ಲ, ಇಬ್ಬರು ಮದುವೆಯಾದರು.ಆಗ ನನ್ನ  ಅಪ್ಪ ನನಗೆ ಅಳಿಯನಾದ,ನಾನು ಈ ರೀತಿ ನಮ್ಮ ಅಪ್ಪನಿಗೆ ಹೆಣ್ಣು ಕೊಟ್ಟ  ಮಾವನಾದೆ!
ಕಾನೂನು ಪ್ರಕಾರ ನನ್ನ ಮಗಳು ನನ್ನ ತಾಯಿ ಮತ್ತು ನನ್ನ ಹೆಂಡತಿ ನನಗೆ ಅಜ್ಜಿ .ಇನ್ನು  ಹೆಚ್ಚಿನ ಸಮಸ್ಯೆ ಯಾವಾಗ ಉಂಟಾಯಿತು ಗೊತ್ತ? ನನಗೆ ಮಗು ಹುಟ್ಟಿದಾಗ! ನನ್ನ ಮಗ ನನ್ನ ತಂದೆಯ ಸಹೋದರ! ಮತ್ತು ಆತ ನನ್ನ ಚಿಕ್ಕಪ್ಪ!
ಆದರೆ  ಮತ್ತಷ್ಟು  ಕೆಟ್ಟ ಪರಿಸ್ಥಿತಿ  ಉಂಟಾಗಿದ್ದು ನನ್ನ ಅಪ್ಪನಿಗೆ ಮಗು ಹುಟ್ಟಿತಲ್ಲ ಆಗ!  ಈಗ ನಮ್ಮ ಮನೆಯ ಸಂಬಂಧಗಳತ್ತ ಗಮನ ಹರಿಸಿದರೆ ನನ್ನ ತಂದೆಯ ಮಗ ನನ್ನ ತಮ್ಮ ಹಾಗೂ ನನ್ನ ಮೊಮ್ಮಗ! ಅಂದ್ರೆ ನಾನು ಅಜ್ಜ ಹಾಗೂ ಮೊಮ್ಮಗ ! ಎರಡು ಪಾತ್ರಗಳ ಒಡೆಯ...! ಹೇಳು ಗೆಳೆಯ  ಕೌಟುಂಬಿಕ ಸಮಸ್ಯೆ ನಿಜವಾಗಿಯೂ ನಿನಗೆ ಇದೆಯಾ ???????? ಎಂದು ಮತ್ತೊಂದು ಪೆಗ್ ಕುಡಿದು ನಕ್ಕ !

Saturday 5 December 2009

ಪದೇಪದೆ ನೆನಪಾದೆ!

ನಂಗೊತ್ತು ,
ಒಂದು ಹಿಡಿಯಷ್ಟು  ದಿನಗಳು ಬಾಕಿ ಇವೆ... ಅದು ಪೂರೈಸಿದರೆ ನಾವು ಹೃದಯ ಕಿತ್ತು ಬೇರೆಯಾದ ಆ ದಿನಕ್ಕೆ  ಅಮೋಘವಾಗಿ ಒಂದು ವರ್ಷದ ಸಂಭ್ರಮ !
ನಂಗೊತ್ತು,ನೀನಿನ್ನು ನನ್ನ ಮರೆತಿಲ್ಲಾಂತ ! ನಿನ್ನ ಹೃದಯ ಏನೂ ಅಂತ ನಿನಗಿಂತ ನನಗೆ ಚನ್ನಾಗಿ ಗೊತ್ತು , ಅದು ನಿನಗೂ ಗೊತ್ತು! ನಾನು ಪ್ರಾಕ್ಟಿಕಲ್...ನೀನು ಎಮೋಷನಲ್ ! ಸ್ನೇಹಕ್ಕೆ -ಪ್ರೀತಿಗೆ ಇದ್ಯಾವುದು ಬೇಕಾಗಿರಲಿಲ್ಲ! ಹೃದಯ ಏನು ಬೇಡುತ್ತಿದೆ ಎಂದು ತಿಳಿಯುವಷ್ಟರಲ್ಲಿ ನಾವಿಬ್ಬರು  ಇಷ್ಟ ಪಟ್ಟಿದ್ದೆವು. ಪೌರ್ಣಿಮೆಯ ಬೆಳದಿಂಗಳೇ ಎಂದು ಕನವರಿಸಿದೆ,ನನ್ನ ಜಾಜಿ ಮಲ್ಲಿಗೆ  ಎಂದು  ಹೊಗಳಿದೆ,ನಮ್ಮ ಪ್ರೀತಿಗೆ ಅಂತಹ ಯಾವ ಅಲಂಕಾರಗಳು ಬೇಕಿರಲಿಲ್ಲ ಅಲ್ವ! ನನ್ನನ್ನು ಒಂದು ಕ್ಷಣವೂ  ಪ್ರೀತಿಸದೆ ಬಿಡಲಿಲ್ಲ,ಪದಗಳಿಗೆ ಅಕ್ಷರವಾದೆ,ನೋಟಕ್ಕೆ ಶಕ್ತಿಯಾದೆ! ಆದರೆ ನೀನು ನನ್ನನ್ನು ಅಷ್ಟೆ ನೋಯಿಸಿದೆ!  ಪ್ರೀತಿಯ ಜೊತೆಗೆ  ನೋವನ್ನು ಮೊಗೆ ಮೊಗೆದು ಕೊಟ್ಟೆ! ಇದಕ್ಕೆ ಉತ್ತರ ?  ಐ ಡೋಂಟ್ ನೋ ವೈ !
ಆ ನೋವು ನೀನ್ಯಾಕೆ ನೀಡಿದೆ  ಅಂತ ನನಗಿಂತ ನೀನು ಬಲ್ಲೆ....ಇಲ್ಲ ಹಾಗಂತ ನಾನು ಹೇಳಲಾರೆ !ನಾನು ನಿನ್ನ ಮರೆತಿದ್ದೀನಿ ಅನ್ನುವ ಭಾವ ನಿನ್ನದು,ನಂಗೊತ್ತು ! ಆದರೆ ನಿನ್ನ ಈ ಭಾವವನ್ನು ಸ್ವೀಕರಿಸುತ್ತಿಲ್ಲ ನಿನ್ನ ಹೃದಯದ ಮೂಲೆಯ ಒಂದು ಭಾಗ! ಹೌದಲ್ವ?! ನಿಜ ತಾನೆ?!
ಹೇಗೆ ಮರೆಯಲಿ ನಿನ್ನನ್ನು ನಾನು? ಮರೆತರೆ ನಾನು ಕಟ್ಟಿದ ರಾಶಿ ಕನಸುಗಳು, ನಿನ್ನ ನೆನಪಿನಲ್ಲಿ ಕಳೆದ ಪ್ರತಿ ಕ್ಷಣವೂ ಸುಳ್ಳಾಗುತ್ತದೆ!  ಪ್ರತಿದಿನ ನಿನಗಾಗಿ ಮೀಸಲಿಟ್ಟ ಆ ಗಳಿಗೆಯಲ್ಲಿ ನನ್ನ ಕೈ  ಮೊಬೈಲ್ ಎತ್ತಿಕೊಳ್ಳುತ್ತದೆ !ಹೆಬ್ಬೆರಳಿಗೆ  ಸಂಭ್ರಮ,ನಿನ್ನ ನಂಬರ್ ಚಕಚಕ! ಉಹುಂ! ಆದರು ನಿನಗೆ ಫೋನ್ ಮಾಡಲಾಗದ ಸ್ಥಿತಿ,ಇದು  ಅಹಂಕಾರ,ದುರಭಿಮಾನ,ದುರಳತನ ಯಾವುದು ಅಲ್ಲ,ಇದು ನನ್ನ ಬದುಕಿನ ನಿಸ್ಸಹಾಯಕತೆ! ನಿನ್ನಲ್ಲಿ ಕೆಳುವುದಿಷ್ಟೇ  ನಿನಗೆ ಎಂದಾದರು ನನ್ನ ನೆನಪಾದರೆ ಯಾಕೆ ಹೀಗಾಯಿತು ಎಂದು ಯೋಚಿಸು....ಸಾಧ್ಯವಾದರೆ!
ದಿನಗಳು  ಕರಗಿಹೋಯ್ತು ಅನ್ನುವ ದುಃಖ ನಿನಗೂ-ಜೊತೆಗೆ ನನಗು ಸಹ! ಇಬ್ಬರಿಗೂ ಗೊತ್ತು ಒಬ್ಬರನ್ನೊಬ್ಬರು ಮಿಸ್ ಮಾಡ್ತಾ ಇದ್ದೀವಿ ಅಂತ! ಆದರು ಇಬ್ಬರು ಅದ್ಯಾವುದೋ ಅರಿಯದ ಧೂರ್ತ ಮೌನದ ಕೋಟೆಯೊಳಗೆ  ಬಂಧಿಗಳು!
ಇಂದ್ಯಾಕೋ ಪದೇಪದೆ ನಿನ್ನ ನೆನಪು ಕಾಡುತ್ತಿದೆ ನನಗೆ,ನಿನಗೆ  ನನ್ನ ನೆನಪು ಉಳಿದಿದೆಯೇ ?! ಇದರ ಉತ್ತರ ನನಗೆ ಗೊತ್ತಿಲ್ಲ...ನಿನಗೆ ????
ನಾನು 

Thursday 26 November 2009

ತ್ಯಾಗ ಬಲಿದಾನದ ಸಂಕೇತ


ಹಬ್ಬ ವಿಶ್ವದ ಪ್ರತಿಯೊಬ್ಬರಲ್ಲೂ ಸಂತೋಷ ಸಂಭ್ರಮ ತಂದು ಕೊಡುವ ಆಚರಣೆ.ಸಾಕಷ್ಟು ಸರ್ತಿ ನಮಗೆ ಹಬ್ಬದ ಬಗ್ಗೆ ವಾಖ್ಯಾನಿಸುವಾಗ ಸಣ್ಣ ಗೊಂದಲ ಉಂಟಾಗುತ್ತದೆ,ಯಾವ ರೀತಿ ವಿವರಿಸ ಬೇಕು ಎಂದು ಅರಿಯದ ಮನಸ್ತತ್ವ ಉಂಟಾಗುತ್ತದೆ.ಆದರೆ ನಮ್ಮಂತಹ ಪಾಮರರು ಹೆಚ್ಚಿನ ಪ್ರಮಾಣದಲ್ಲಿ ಈ ವಿಶ್ವದಲ್ಲಿ ಇರೋದು,ಅವರು ತಿಳಿದಿರೋದು ಹಬ್ಬ ಅಂದ್ರೆ ದೇವ್ರು,ಖುಷಿ,ಬಣ್ಣ ಬಣ್ಣ ,ಉತ್ಸಾಹ ಹಾಗೂ ಉಲ್ಲಾಸ ! ಪ್ರಪಂಚದ ಎಲ್ಲ ಧರ್ಮದ ಜನರಲ್ಲೂ ಈ ಅಂಶ ಇದ್ದೆ ಇದೆ.ಕಾರಣ ಅವರು ಮಾನವರು...ನೂರಕ್ಕೆ ನೂರರಷ್ಟು ಸಾಮಾನ್ಯರು...!
*  ಬಲಿದಾನದ ಹಬ್ಬ ಬಕ್ರೀದ್ ! ಮಹದೀಯರ ಅನೇಕ ವಿಶೇಷ ಹಬ್ಬಗಳಲ್ಲಿ ಇದು ಒಂದು.ಮುಸ್ಲೀಮರ ಇದು ಪಂಚಾಂಗದ ಅನ್ವಯ ಇದು ಹನ್ನೆರಡನೆಯ ತಿಂಗಳಲ್ಲಿ ಅಂದರೆ ಜಿಲ್ಹಾಜ್ ಮಾಸದ ಹತ್ತನೆಯ ದಿನ ಬರುತ್ತದೆ. 'ಈದುಲ್ ಅಜ್ ಹ' ಬಕ್ರೀದ್ ಹಬ್ಬದ ಮೂಲ ಹೆಸರು.ಅಜ್ ಹ ಅಂದ್ರೆ ವಿಶ್ವವನ್ನು  ರಕ್ಷಿಸುತ್ತಿರುವ ಭಗವಂತ (ಅಲ್ಲಾ ಹ್)  ನಿಗೆ ಸಮರ್ಪಿಸುವ ಬಲಿದಾನ ಎನ್ನುವ ಅರ್ಥ ಬರುತ್ತದೆ.ಈದ್ ಉಲ್ ಖುರ್ಬಾನಿ ಎಂದು ಸಹ ಇದನ್ನು ಕರೆಯುತ್ತಾರೆ.ಒನ್ಸ್ ಅಗೇನ್ ಖುರ್ಬಾನಿ ಎಂದರೆ ಬಳಿ ಎನ್ನುವ ಅರ್ಥ ಪಡೆದು ಕೊಳ್ಳುತ್ತದೆ..ಒಟ್ಟಾರೆ ಬಕ್ರೀದ್ ಬಲಿದಾನದ ಪ್ರತೀಕ.
ಕಥೆ ಹೀಗಿದೆ..
ಇಸ್ಲಾಂ ಧರ್ಮದಲ್ಲಿ ದೇವದೂತ ( ಪ್ರವಾದಿ) ಎನ್ನುವ ಹೆಸರು ಪಡೆದವರಲ್ಲಿ ಹಜರತ್ ಇಬ್ರಾಹಿಂ ಸಹ ಮುಖ್ಯರಾಗಿದ್ದಾರೆ.ಇವರ ಬಗ್ಗೆ ತಿಳಿಯ ಬೇಕಾದರೆ ನಾವು ನಾಲ್ಕು ಸಾವಿರ ವರ್ಷದ  ಹಿಂದೆ ಹೋಗ ಬೇಕು.ಇಬ್ರಾಹಿಂ ಇರಾಕ್ ದೇಶದಲ್ಲಿ ಜನ್ಮಿಸಿದ್ದರು..ಅವರು ಬದುಕಿದ್ದ ಕಾಲದಲಿ ಇರಾಕ್ ದೇಶ ಸಂಪತ್ಬರಿತವಾಗಿತ್ತು ,ಆದರೆ ನೈತಿಕವಾಗಿ ಮತ್ತು ಧಾರ್ಮಿಕವಾಗಿ ಕೆಳಗಿಳಿದಿತ್ತು..ಬಹುದೇವತಾರಾಧನೆ ,ರಾಜರು,ಧರ್ಮಾಧಿಕಾರಿಗಳು ತಮನ್ನು ತಾವು ದೇವರೆಂದು ಸ್ವಯಂ  ಘೋಷಿಸಿಕೊಂಡು ಸಾಮಾನ್ಯರ ಬದುಕನ್ನು ಮೂರಾಬಟ್ಟೆ ಮಾಡಿದ್ದ ಕಾಲ.ಹಣವಂತರ ಅಹಂಕಾರ ಎಲ್ಲೇ  ಮೀರಿತ್ತು.ಆ ಸಂದರ್ಭದಲ್ಲಿ ವಿಶ್ವಕ್ಕೆ ಅಲ್ಲಾ ಹ್  ಒಬ್ಬನೇ ದೇವ,ಇವರೆಲ್ಲ ಆತನ ಸೃಷ್ಟಿಗಳೇ ವಿನಃ ದೇವರಲ್ಲ..ಆತನ ಪ್ರೀತಿ ಗಳಿಸಲು ಅಧರ್ಮ,ದುರ್ಗುಣವನ್ನು ಹತ್ತಿರ ಸೆಳೆಯಗೊಡಬಾರದು,ಯಾವುದೇತ್ಯಾಗಕ್ಕಾಗಲಿ  ಸದಾ ಸಿದ್ಧರಾಗಿ ಇರಬೇಕು ಎನ್ನುವ ಸಂದೇಶ ಸಾಮಾನ್ಯರ ಮನದಲ್ಲಿ ಬಿತ್ತಿದ.ಒಳ್ಳೆಯವರಿಗೆ  ಕಾಲ ಎಲ್ಲಿದೆ ಅನ್ನುವ ಮಾತೊಇದೆಯಲ್ಲ,ಆತನ ಈ ವರ್ತನೆಗೆ ಸರ್ಕಾರ-ಶ್ರೀಮಂತರ ಕೆಂಗಣ್ಣು ಬಿದ್ದು ಆತನಿಗೆ ದೇಶದಿಂದ ಬಹಿಷ್ಕಾರ.
* ಧೃತಿಗೆಡಲಿಲ್ಲ ಇಬ್ರಾಹಿಂ .ಆತನ ಜೊತೆಯಾದಳು ಪತ್ನಿ ಹಾಜೀರಾ..ಇವರಿಗೊಬ್ಬ ಮಗ ಇಸ್ಮಾಯಿಲ್. ಒಮ್ಮೆ ದೇವರಿಗೆ ಇಬ್ರಹಂ ಅವರನ್ನು ಪರೀಕ್ಷೆ ಮಾಡ ಬೇಕು ಅಂತ ಅನ್ನಿಸಿತು.ತಕ್ಷಣ ಆತ ಭಕ್ತನ ಬಳಿ ಹೇಳಿದ್ದು ನೋಡು ನೀನು ನಿನ್ನ ಹೆಂಡತಿ-ಮಗುವನ್ನು ಬೆಂಗಾಡಿನಲಿ ಬಿಟ್ಟು  ನನ್ನ ಬಳಿ ಬಾ! ಆಗ ಆತ ಇಬ್ಬರನ್ನು ಮರಳು ಗಾಡಿನಲ್ಲಿ  ಬಿಟ್ಟು ಬಂದ,ಕುಡಿಯಲು  ಒಂದು ಹನಿ ನೀರಿಲ್ಲದ ಪ್ರದೇಶ.ಎಳೆಯ ಕಂದ ಹಸಿವಿನಿಂದ ಬಳಲಿತು,ದಯಾಮಯನಾದ  ದೇವನು ಅಂತಹ ಸ್ಥಳದಲ್ಲಿ ನೀರಿನ ಸೆಲೆಯನ್ನು ಉದ್ಭವ ಮಾಡಿದ.ಅದು ಈಗ ಮೆಕ್ಕಾ ನಗರಲ್ಲಿ ದೊರಕುವ  ಈ ಜಲವು  'ಅಬೆ ಜಮ್ ಜಮ್ ' ಹೆಸರಿನ ಪವಿತ್ರ ತೀರ್ಥವೆಂದು  ಪ್ರಸಿದ್ಧಿ ಪಡೆದಿದೆ.
* ಮತ್ತೊಮ್ಮೆ  ಇಬ್ರಾಹಿಮ್ ಕಾಲದತ್ತ ...!  ಇಸ್ಮಾಯಿಲ್ ದೊಡ್ಡವನಾದ,ದೇವರಿಗೆ ಪುನಃ ತನ್ನ ಭಕ್ತರನ್ನು ಪರೀಕ್ಷಿಸ ಬೇಕೆಂಬ ಆಸೆ.ಸರಿ ಆತ ಇಬ್ರಾಹಿಮ್ ಬಳಿ ನನಗೆ ನಿನ್ನ ಮಗನ ಬಳಿ ಬೇಕು ಕೊಡ್ತೀಯ ಅಂದಾಗ ಆತ ಸಮ್ಮತಿ ಕೊಟ್ಟ,ಆ ಬಾಲಕ ಇಸ್ಮಾಯಿಲ್ ಸಹ ಅಪ್ಪನ  ಆಸೆಯನ್ನು ಸಂತೋಷದಿಂದ ನೆರವೇರಿಸಲು ಸಿದ್ಧನಾದ.ಸರಿ ಇಸ್ಮಾಯಿಲ್ ವಧಾ ಸ್ಥಾನದ ಬಳಿಬಂದ ಇನ್ನೇನು ಇಬ್ರಾಹಿಮ್ ಮಗನ ತಲೆ ಕತ್ತರಿಸ ಬೇಕು ಆಗ ದೇವರ ಆಜ್ಞೆಯಂತೆ ಇತರ ದೇವದೂತರು ಆತನ ಮಗನ ಸ್ಥಾನದಲ್ಲಿ  ಕುರಿ ನಿಲ್ಲಿಸಿದರು.ಇದ್ಯಾವುದರ ಅರಿವೇ ಇಲ್ಲದೆ ಇಬ್ರಾಹಿಮ್ ದೇವರಿಗೆ ಬಲಿ ಕೊಟ್ಟರು.ಭಟ್ನ ಈ ತ್ಯಾಗ ಗುಣ ದೇವನಲ್ಲಿ ಅಪರಿಮಿತ ಪ್ರೀತಿ ಹುಟ್ಟುವಂತೆ ಮಾಡಿತು ಇಬ್ರಾಹಿಮ್ ಬಗ್ಗೆ!  ಆಬಳಿಕ ತಂದೆ ಮಕ್ಕಳು ಭಗವಂತನ ಹೃದಯದಲ್ಲಿ ಚಿರಸ್ಥಾಯಿ ...!
* ಬಕ್ರೀದ್ ಅಂದ್ರೆ ಬಲಿ ಕೊಡುವ ಹಬ್ಬ ಎಂದುತಿಳಿಯುವುದಕ್ಕಿಂತ  ಅದು ತ್ಯಾಗ ಬಲಿದಾನದ ಸಂಕೇತದ ಪ್ರತೀಕ ಎಂದು ಅರಿತರೆ ಹಬ್ಬದ ಆಚರಣೆಯ  ಮತ್ತಷ್ಟು ಉದಾತ್ತತೆ ಪಡೆದುಕೊಳ್ಳುತ್ತದೆ.ಹ್ಯಾಪಿ ಬಕ್ರೀದ್ !

Thursday 29 October 2009

ಸೇಮ್ ಸೇಮ್ ರಿಸೆಂಬಲ್ !


ತಂದೆ-ತಾಯಿಯ ಹೋಲಿಕೆ ಮಕ್ಕಳಲ್ಲಿ ಬರುವುದು ಸಾಮಾನ್ಯ ಸಂಗತಿ.ಆದರೆ ಸೆಲೆಬ್ರಿಟಿಗಳ ಮಕ್ಕಳ ವಿಷಯಕ್ಕೆ ಬಂದರೆ ಅವರ ಅಭಿಮಾನಿಗಳ ಸಂತೋಷ ಹೇಳತೀರದ್ದಾಗುತ್ತದೆ . ಸ್ಯಾಂಡಲ್ ವುಡ್ಡಿನಲ್ಲಿ ಅಣ್ಣಾವರನ್ನು ಶಿವರಾಜ್ ರಾಜ್ ಕುಮಾರ್ ಹೋಲ್ತಾರೆ,ಅದೇ ರೀತಿ ಗಿರಿಜಾ ಲೋಕೇಶ್ ಥರ ಸೃಜನ್,ವಿನೋದ್ ಪ್ರಭಾಕರ್ ಥೇಟ್ ಪ್ರಭಾಕರ್ ರೀತಿಯಲ್ಲಿ ಇದ್ದಾರೆ,ದ್ವಾರಕೀಶ್ ಮಕ್ಕಳ ಬಗ್ಗೆ ಹೇಳುವಷ್ಟೇ ಇಲ್ಲ...! ಈ ಸಂಗತಿಯನ್ನು ಮುಂದಿಟ್ಟುಕೊಂಡು ಬಾಲಿವುಡ್ ಕಡೆ ಕಣ್ ಹಾಯಿಸಿದರೆ ಇಂತಹ ಅನೇಕ ನಮೂನೆಗಳು ಕಣ್ಣಿಗೆ ಬೀಳುತ್ತದೆ.
ಶ್ರುತಿ ಹಾಸನ್ :- ಪಂಚ ಭಾಷಾ ತಾರೆ ಕಮಲ ಹಾಸನ್ ಹಾಗೂ ಮಾದಕ ನಟಿ ಸಾರಿಕ ಅವರ ಕರುಳ ಬಳ್ಳಿ ಶ್ರುತಿ ಹಾಸನ್.ಥೇಟ್ ಅಮ್ಮನ ಹಾಗೆ ಇರುವ ಈ ಸುಂದರಿ ಲಕ್ ಸಿನೆಮಾದಲ್ಲಿ ನಟಿಸಿ ಸೋತು ಸೊಟ್ಟ ಮುಖ ಹಾಕಿ ಕೊಂಡು ಬಂದಾಗಿದೆ.ಈಗ ತೆಲುಗು ಹಾಗೂ ತಮಿಳು ಮಂದಿ ಈ ಇಳವರಸಿಯನ್ನು ಬೆಳೆಸಲು ಪರದಾಡ್ತಾ ಇದ್ದಾರೆ.ಈ ಮುದ್ದು ಹುಡುಗಿ ಸಿನಿ ಕ್ಷೇತ್ರದಲ್ಲಿ ತಾಯಿಯಂತೆ ಗ್ಲಾಮರ್ ಬೊಂಬೆಯಾಗಿ ಉಳಿತಾಳೋ ಇಲ್ಲ... ತಂದೆಯಂತೆ ಅಪ್ಪಟ ಪ್ರತಿಭೆಯಾಗಿ ವೀಕ್ಷಕರ ಮನ ಗೆಲ್ತಾಲೋ? ಕಾಲವೇ ಹೇಳುತ್ತೆ!!!
ರಣಬೀರ್ ಕಪೂರ್ :- ರಾಜ್ ಕಪೂರ್ ಖಾಂದಾನ್ ಕುಡಿ ಈ ಚಲುವಾಂತ ಚನ್ನಿಗ ರಿಷಿಕಪೂರ್ ಮತ್ತು ನೀತುಸಿಂಗ್ ಒಡಲ ಬಳ್ಳಿ.ಈ ನಟ ಥೇಟ್ ಅಮ್ಮನ ಥರ ಇದ್ದಾನೆ ಸಧ್ಯ ! ಸಾವರಿಯ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟರು ತಕ್ಷಣ ಗೆಲುವು ಸಿಕ್ಕಲಿಲ್ಲ.ಈಗಿನ ಪರಿಸ್ಥಿತಿಯಲ್ಲಿ ಆತ ಗೆಲ್ಲುವ ಕುದುರೆಯಾಗಿ ನಿರ್ಮಾಪಕರಲ್ಲಿ ಭರವಸೆ ಹುಟ್ಟಿಸ್ತಾ ಇದ್ದಾನೆ.
ಇಷ ಡಿಯೋಲ್ :- ಒನ್ಸ್ ಅಪಾನ್ಎ ಟೈಮ್ ಪಡ್ಡೆ ಹೈಕಳ ಡ್ರೀಂ ಗರ್ಲ್ ಆಗಿದ್ದ ಹೇಮಮಾಲಿನಿ ಮಗಳು ಇಷ,ಅಮ್ಮ ತದ್ರೂಪು.ಆದರೆ ಹೇಮಳಂತೆ ಪ್ರತಿಭೆಯಿಂದ ಹೆಸರು ಮಾಡಲಿಲ್ಲ ,ತನ್ನ ಬಿಚ್ಚು ಸ್ವಭಾವದಿಂದ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಿದಳು ಈ ಚಲುವೆ.
ರೈಮ ಸೇನ್ :- ಅಮ್ಮ ಮೂನ್ಮೂನ್ ಸೇನ್ ಅಮ್ಮೋ ಅನ್ನುವಷ್ಟು ಗ್ಲಾಮರಸ್,ಇನ್ನು ಆಕೆಯ ಮಗಳು ಪ್ರೇಕ್ಷಕರ ಕಥೆ ಬ್ಯಾ...ಡಾ.....!ಭಾರತೀಯ ಚಿತ್ರ ರಂಗದಲ್ಲಿರುವ ಅನೇಕ ವುಡ್ ಗಳ ವೀಕ್ಷಕರ ಗಮನ ಸೆಳೆದಿರುವ ರೈಮ ರೂಪದಲ್ಲಿ ಅಮ್ಮನ ಹೋಲಿಕೆ ಪಡೆದಿದ್ದಾಳೆ.
ಸೋಹ ಅಲಿಖಾನ್ :- ಪಟೌಡಿ ಖಾಂದಾನ್ ಕೂಸು.ಅಪ್ಪನ ಹಾಗೆ ಹುಟ್ಟಿಲ್ಲ,ಥೇಟ್ ಅಮ್ಮಿಜಾನ್ ಶರ್ಮಿಳಾ ಠಾಕೂರ್ ಥರ ಹುಟ್ಟಿರೋದು.ನಟನೆ ಸಹ ಓಕೆನೆ!.ಆದರೆ ಹೇಳಿಕೊಳ್ಳುವಂತಹ ಅಚಿವ್ ಮೆಂಟ್ ಆಗಿಲ್ಲ.
ಹೃತಿಕ್ ರೋಶನ್ :- ಗ್ರೀಕ್ ದೇವತೆಯ೦ತಹ ಮುಖ ಈತನ ವಿಶೇಷತೆ.ರೂಪ ನಟನೆ ಎರಡರಲ್ಲೂ ಸೈ! ಈತನಿಗೆ ಅಪ್ಪ ರಾಕೇಶ್ ರೋಶನ್ ಕಣ್ಣು ಬಳುವಳಿಯಾಗಿ ಬಂದಿದೆ .ಜೊತೆಗೆ ಪ್ರತಿಭೆಯನ್ನು ಅಪ್ಪನಿಂದ ಬಳುವಳಿಯಾಗಿ ಪಡೆದಿದ್ದಾನೆ.
ಅಭಿಷೇಕ್ ಬಚ್ಚನ್ :-ಭಾರತೀಯ ಚಿತ್ರ ರಂಗದ ಅದ್ವಿತೀಯ ಕಾಲಾವಿದರಾದ ಅಮಿತಾಬ್ ಬಚ್ಚನ್ ಹಾಗೂ ಜಯ ಬಾದುರಿ ಪ್ರೀತಿಯ ಮಗ ಅಭಿಷೇಕ್ ಪಕ್ಕ ಅಪ್ಪ ಅಮಿತಾಬ್ ಥರಾನೇ ಇರೋದು.ಅಪ್ಪ ಬಿಗ್ ಬಿ ಯ ರೀತಿ ಗೆಲ್ಲುವುದಕ್ಕೆ ಸಾಧ್ಯ ಆಗಿಲ್ಲ .ಆದರು ಬಾಲಿವುಡ್ ನಲ್ಲಿ ಈತ ಒಂದೊಳ್ಳೆಯ ಸ್ಥಾನ ಪಡದೆ ಪಡೀತಾನೆ ಅನ್ನುವ ಭರವಸೆ ಸಿನಿ ಪಂಡಿತರಿಗಿದೆ !
ಸನ್ನಿ ಡಿಯೋಲ್ :- ಹೋಲಿಕೆ ಅಂದ್ರೆ ಹೀಗಿರಬೇಕು.ಈ ರೀತಿಯ ರಿಸೆಂಬಲ್ ಯಾವ ಮಕ್ಕಳು ತಮ್ಮ ತಾಯ್ತಂದೆಗಳಿಂದ ಪಡೆದೇ ಇಲ್ಲ ಅಂತ ಹೇಳ ಬಹುದು.ರೂಪದಲ್ಲಿ ಮಾತ್ರವಲ್ಲ ಪ್ರತಿಭೆಯಲ್ಲೂ ಸಹ ಅಪ್ಪನಂತೆ !!

ಸಹಾಯ -ಒಳಿತು

1 -) ಸಿಯಾಟಿಲ್ ವಿಕಲಚೇತನರ ಸ್ಪೆಷಲ್ ಒಲಿಂಪಿಕ್ಸ್ ಕ್ರೀಡೆಯಲ್ಲಿ ಒಂಬತ್ತು ಮಂದಿ ನಡುವೆ ಓಟದ ಸ್ಫರ್ಧೆ ನಡೀತಾ ಇತ್ತು.ಓಟದ ನಡುವೆ ಒಬ್ಬ ಸ್ಪರ್ಧಿ ಕೆಳಕ್ಕೆ ಬಿದ್ದೆ ಬಿಟ್ಟ.ಉಳಿದವರು ಓಡುವತ್ತ ತಮ್ಮ ಗಮನ ನೆಟ್ಟಿದ್ದರು ಒಬ್ಬನನ್ನು ಹೊರೆತುಪಡಿಸಿ.ಆತ ಬಿದ್ದವನ ಬಳಿ ಬಂದು ಎಲ್ಲಿ ನೋವಾಗ್ತಿದೆ ಪುಟ್ಟ ಅಂತ ಕೇಳಿದ ,ಆಗ ಆ ಹುಡುಗ ಅಳುತ್ತ ತೋರಿಸಿದ.ಆಗ ಆತ ನಿಧಾನವಾಗಿ ಅವನನ್ನು ಮೇಲೆತ್ತಿ ಕೈ ಹಿಡಿದು ನಡೆಸಿಕೊಂಡು ಬಂದ.ಇಡೀ ಸ್ಟೇಡಿಯಂ ನಲ್ಲಿದ್ದ ಅಷ್ಟೂ ಜನ ಎದ್ದು ನಿಂತು ಚಪ್ಪಾಳೆ ತಟ್ಟಿತು ಈ ದೃಶ್ಯ ಕಂಡು ! ಆನಂತರ ಕೆಲವರು ಆಟದಲ್ಲಿ ನೀನು ಮೊದಲಿದ್ದೆ ,ಅದ್ಯಾಕೆ ನೀನು ಗೆಲ್ಲುವುದು ಬಿಟ್ಟು ಅವನನ್ನು ರಕ್ಷಿಸಿದೆ ? ಎಂದು ಕೇಳಿದರು.ಆಗ ಆ ಸ್ಪರ್ಧಿ ಆತ ಏಳಲಾಗದೆ ಅಳುತ್ತ ಇದ್ದ.ಆಗ ನಂಗೆ ಈ ಸ್ಪರ್ಧೆಯಲ್ಲಿ ಗೆಲ್ಲುವುದಕ್ಕಿಂತ ಅವಶ್ಯಕತೆ ಇರುವವರಿಗೆ ಸಹಾಯ ಮಾಡುವುದು ಒಳಿತು ಅಂತ ಅನ್ನಿಸಿತು,ಆದಕಾರಣ ಆರೀತಿ ಮಾಡಿದೆ ಅಂತ ಹೇಳಿದ.ಆಗ ಗೆದ್ದವರಿಗೆ ಬಹುಮಾನ ವಿತರಣೆ ಮಾಡಿದ ಬಳಿಕ ಅತಿಥಿಯಾಗಿ ಬಂದಿದ್ದ ಆ ರಾಜ್ಯದ ಗವರ್ನರ್ 'ಸ್ಪರ್ಧೆಯಲ್ಲಿ ಗೆದ್ದು ಬಹುಮಾನ ಪಡೆದ ವ್ಯಕ್ತಿಗಿಂತ ನಿಜವಾಗಿಯು ಮಾನವತೆಯಿಂದ ಗೆದ್ದಿರುವ ವ್ಯಕ್ತಿತ್ವದ ಬಗ್ಗೆ ನನಗೆ ಹೆಚ್ಚು ಗೌರವ ಉಂಟಾಗಿದೆ 'ಎಂದು ಹೇಳಿದರಂತೆ.
2 -) ಅಮೆರಿಕದ ಒಗ್ದೆನ್ ಹೈ ಸ್ಕೂಲ್ನ ಕೆಲವು ವಿದ್ಯಾರ್ಥಿಗಳು ಹೋಂ ಬೋಲ್ಟ್ ಶಾಲೆಯಲ್ಲಿ ನಡೆಯುವ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಲೆಂದು ಬಂದಿದ್ದರು .ಸಾಮಾನ್ಯವಾಗಿ ಪ್ರತಿ ವರ್ಷ ಎರಡು ಶಾಲೆಯಲ್ಲೂ ಈ ಸ್ಪರ್ಧೆ ಇದ್ದೆ ಇರುತ್ತಿತ್ತು.ಹೋಂ ಬೋಲ್ಟ್ ಸ್ಕೂಲ್ ಕೋಚ್ ಒಗ್ದೆನ್ ವಿದ್ಯಾರ್ಥಿಗಳನ್ನು ಸ್ಪರ್ಧೆಗೆ ಆಹ್ವಾನಿಸಿದ ಬಳಿಕ 'ನಮ್ಮಲ್ಲಿ ಈ ಏಳು ಕುಸ್ತಿಪಟುಗಳಲ್ಲಿ ಭಾಗವಹಿಸುವವರಲ್ಲಿ ಬ್ರೆಂಟ್ ಅನ್ನುವ ವಿದ್ಯಾರ್ಥಿ ಡೌನ್ ಸಿಂಡ್ರೋಮ್ ಎನ್ನುವ ಕಾಯಿಲೆಯಿಂದ ಬಳಲುತ್ತಿದ್ದಾನೆ .ಆತನಿಗೆ ಕುಸ್ತಿಯಲ್ಲಿ ನೈಪುಣ್ಯತೆ ಇಲ್ಲ,ಆದರೆ ಭಾಗವಹಿಸಬೇಕೆನ್ನುವ ಉತ್ಸಾಹಕ್ಕೆ ಕೊರತೆಯಿಲ್ಲ.ನಿಮ್ಮಲ್ಲಿ ಯಾರು ಬೇಕಾದರೂ ಅವನನ್ನು ಕ್ಷಣದಲ್ಲಿ ಸೋಲಿಸ ಬಲ್ಲಿರಿ .ತಾನು ಸೋಲ್ ತೀನಿ ಅಂತ ತಿಳಿದಿದ್ದರೂ ಆತ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾನೆ.ನಿಮ್ಮಲ್ಲಿ ಯಾರು ಮೊದಲು ಕಣಕ್ಕೆ ಇಳೀತಿರಿ ?' ಎಂದು ಕೇಳಿದ.ಕೆಲಕ್ಷಣ ನಿಶಬ್ಧ.ಬಳಿಕ ಒಗ್ದೆನ್ ಟೀಂ ನಿಂದ ಒಂದು ಧ್ವನಿ ಕೇಳಿ ಬಂತು ' ನಾನು ಸಿದ್ಧ'ಆ ಟೀಂ ಕೆನ್ ಬ್ರುಲೆಂಡ್ ನಗುತ್ತ ಮುಂದೆ ಬಂದ.ಬ್ರೆಂಟ್ ಜೊತೆ ಆತ ಕುಸ್ತಿ ಆರಂಭ ಮಾಡಿದ.ಕ್ಷಣದಲ್ಲಿ ಈ ಕಾಳಗ ಮುಗಿದು ಹೋಗ್ತಾ ಇತ್ತು,ಆದರೆ ಹಾಗಾಗಲಿಲ್ಲ.ಆರು ನಿಮಿಷಗಳ ಕಾಲ ಈ ಸ್ಪರ್ಧೆ ನಡೆಯಿತು.ಅಷ್ಟೇ ಅಲ್ಲದೆ ಬ್ರೆಂಟ್ ಗೆಲ್ಲುವಷ್ಟು ಪಾಯಿಂಟ್ಗಳು ಬರುವಂತೆ ಮಾಡಿ ಕೆನ್ ಸೋತು ಹೋದ.ನಂತರ ಕೆನ್ಗೆ ನಿಯಮದ ಅನ್ವಯ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ತಪ್ಪಿ ಹೋಯ್ತು.' ಗೆಲುವು ನನ್ನದಾಯ್ತ?' ಆಶ್ಚರ್ಯ ತಡಿಯಲಾಗದೆ ಕೇಳಿದ ಬ್ರೆಂಟ್.ಹೌದು ಅಂತ ಹೇಳಿದ ಕೆನ್ ನಗುತ್ತ.ಜೊತೆಗೆ ಆತ ಗೆದ್ದ ಸೂಚಕವಾಗಿ ಬ್ರೆಂಟ್ ಬಲಗೈ ಮೇಲೆತ್ತಿದ.ಆ ಸ್ಪರ್ಧೆ ವೀಕ್ಷಣೆಗೆ ಬಂದಿದ್ದದ ಆರುಸಾವಿರ ಮಂದಿ ಎದ್ದು ಚಪ್ಪಾಳೆ ತಟ್ಟಿ ಹರ್ಷೋದ್ಗಾರ ಮಾಡಿದರು.
3 -) ಹಾರ್ಬರ್ಟ್ ಹೂಪರ್ ಸುಮಾರು ನಲವತ್ತೇಳು ವರ್ಷಗಳ ಕಾಲ ಅಮೆರಿಕದಲ್ಲಿ ಅಧ್ಯಕ್ಷರಾಗಿ-ವಿವಿಧ ಪದವಿಗಳಲ್ಲಿ ಕೆಲಸ ಮಾಡ ಬೇಕಾಗಿ ಬಂದರೂ ಆಡಳಿತ ನಡೆಸಿದರು.ಆದರೆ ಸರ್ಕಾರ ನೀಡಿದ ಸಂಬಳವನ್ನು ಆತ ತನಗಾಗಿ ಬಳಸದೆ ಬಡವರು,ನಿರ್ಗತಿಕರ ಸೇವೆಗಾಗಿ ಮುಡಿಪಾಗಿಟ್ಟ ಸಂಸ್ಥೆಗಳಿಗೆ ನೀಡಿದರು.ಮುಖ್ಯವಾಗಿ ರಾಜಕೀಯಕ್ಕೆ ಬರುವ ಮುಂಚಿನಿದಲು ಆತ ಶ್ರಿಮಂತನಾಗಿದ್ದ.
4 -) ಕೃತಜ್ಞತೆ ಕೇವಲ ಭಾವನೆ ಮಾತ್ರವಲ್ಲ ಅದೊಂದು ಕೃತಿ ಅಂತ ಹೇಳ್ತಾರೆ ತಿಳಿದೋರು.ಹಾಲಿವುಡ್ ಹೀರೋ ರಾಯ್ ರೋಗರ್ಸ್ ಇದನ್ನು ಸೂಕ್ತ ಪಾಲಿಸಿದ್ದಾರೆ .ಆತ ಹೀರೋ ಆಗಿ ನಟಿಸಿದ ಮೊದಲ ಚಿತ್ರ ' ಡಿ ವರ್ಲ್ಡ್ ಹೋಂ ಸೈಡ್'(1935), ಮತ್ತೊ ಮೂರು ಚಿತ್ರಗಳು ಬಿಡುಗಡೆಯಾದ ಬಳಿಕ ಆತನ ಅಭಿನಯಕ್ಕೆ ಮೆಚ್ಚಿ ಅಭಿಮಾನಿಗಳಾದ ಅನೇಕರು ರಾಯ್ ಗೆ ಪತ್ರಗಳನ್ನು ಬರೆಯುತ್ತಿದ್ದರು.ಆದರೆ ರಾಯ್ಸ್ಗೆ ದೊರೆಯುತ್ತಿದ್ದ ಹಣ ಅಷ್ಟು ಅಭಿಮಾನಿಗಳಿಗೆ ಉತ್ತರಿಸಲು ಬೇಕಾದ ಅಂಚೆ ವೆಚ್ಚಭರಿಸಲು ಅಸಮರ್ಥವಾಗಿತ್ತು.ಆಸಂದರ್ಭದಲ್ಲಿ ಆತನಿಗೆ ನಟನೆ ಮಾಡಲು ಅವಕಾಶ ಕೊಟ್ಟ ರಿಪಬ್ಲಿಕ್ ಪಿಕ್ಚರ್ಸ್ ಮುಖ್ಯಸ್ಥರನ್ನು ರಾಯ್ ಭೇಟಿ ಮಾಡಿ ಅಭಿಮಾನಿಗಳಿಗೆ ಪತ್ರಿಸಲು ತನಗೆ ಸ್ವಲ್ಪ ಧನಸಹಾಯ ಮಾಡ ಬೇಕೆಂದು ಕೇಳಿದಋ ,ಆದರೆ ಸಂಸ್ಥೆ ಇದಕ್ಕೆ ಸಮ್ಮತಿಸಲಿಲ್ಲ.ಜೊತೆ ಇಂತಹ ವಿಷಯಗಳನ್ನು ಗಂಭಿರವಾಗಿ ಪರಿಗಣಿಸ ಬೇಕಿಲ್ಲ ಎಂದು ಬಿಟ್ಟಿ ಸಲಹೆ ನೀಡಿತು.ಆದರೆ ರಾಯ್ ಸುಮ್ಮನಾಗದೆ ,ತನ್ನ ಸ್ವಲ್ಪ ಕಾಲವನ್ನು ವಯುಕ್ತಿಕ ಪ್ರದರ್ಶನ ನೀಡಲು ಮೀಸಲಾಗಿಟ್ಟು ಅದರಿಂದ ಬಂದ ಹಣವನ್ನು ಅಭಿಮಾನಿಗಳಿಗೆ ಪತ್ರಿಸಲೆಂದು ಮುಡಿಪಾಗಿಟ್ಟರು..ಆ ಕೆಲಸ ಮಾಡಲು ಮೂರೂ ಜನರಿಗೆ ಉದ್ಯೋಗನೀಡಿದರಂತೆ.

Saturday 17 October 2009

ದೀಪಗಳ ಹಬ್ಬ


ಕತ್ತಲೆಯಿಂದ ಬೆಳಕಿನೆಡೆಗೆ ದಾರಿ ತೋರುವ ಹಬ್ಬ ದೀಪಾವಳಿ.ಇದರ ಬಗ್ಗೆ ಹೇಳಿದಷ್ಟು ಮುಗಿಯದು ಅಂದು ವಿಷ್ಣು ಮಹಾಲಕ್ಷ್ಮಿಯನ್ನು ಮದುವೆಯಾದ ದಿನವೆಂದು ಪುರಾಣಗಳಲ್ಲಿ ತಿಳಿಸಿದೆ.ದೀಪಾವಳಿಯ ಬಗ್ಗೆ ಇರುವ ಅನೇಕ ವಿಶೇಷತೆಗಳುಹೀಗಿವೆ.
ಮಹಾ ಲಕ್ಷ್ಮಿಯ ಜನ್ಮದಿನ:- ಸಮುದ್ರ ಮಥನದಲ್ಲಿ ಮಹಾಲಕ್ಷ್ಮಿ ಕಾರ್ತಿಕ ಮಾಸದ ಆರಂಭದಲ್ಲಿ ಬರುವ ಅಮಾವಾಸ್ಯೆಯ ದಿನ ಜನ್ಮಿಸಿದಲೆಂದು ಪುರಾಣಗಳಲ್ಲಿ ಉಲ್ಲೇಖವಿದೆ.ಈ ಕಾರಣದಿಂದ ಭಕ್ತರು ತಾಯಿಯ ಜನ್ಮ ದಿನ ಆಚರಿಸುತ್ತಾರೆ.
ವಿಷ್ಣು ಬಿಡುಗಡೆ ಮಾಡಿದ್ದು:- ಬಲಿ ಚಕ್ರವರ್ತಿಯ ಸೆರೆಯಲ್ಲಿದ್ದ ಲಕ್ಷ್ಮಿಯನ್ನು ಮಹಾ ವಿಷ್ಣು ವಾಮನ ಅವತಾರ ತಾಳಿ ಬಿಡುಗಡೆ ಮಾಡಿದ ಎಂದು ಪುರಾಣಗಳಲ್ಲಿ ತಿಳಿಸಿದೆ.ಈ ಕಾರಣದಿಂದಲೂ ಹಬ್ಬ ತುಂಬಾ ವಿಶೇಷತೆ ಪಡೆದು ಕೊಂಡಿದೆ.( ಐದನೆಯ ಅವತಾರ).
ರಾಮಾಯಣದಲ್ಲಿ:- ರಾವಣಸುರನನ್ನು ವಧಿಸಿ ಅಯೋಧ್ಯೆಗೆ ಹಿಂತಿರುಗಿದಾಗ ಜನರು ಸಂಭ್ರಮದ ದೀಪಾವಳಿಯನ್ನು ಆಚರಿಸಿದರಂತೆ.
ನರಕಾಸುರ
ವಧೆ :-ಪ್ರಗ್ಜೋತೀ ಪುರವನ್ನು ಆಳುತ್ತಿದ್ದ ನರಕಾಸುರ ಹದಿನಾರು ಸಾವಿರ ಹೆಣ್ಣು ಮಕ್ಕಳನ್ನು ಸೇರೆಯಲ್ಲಿತೂ ಕೊಂಡಿದ್ದ.ಭೂಮಿಯ ಮಗನಾದ ಈತನ ಉಪಟಳ ಕಡಿಮೆ ಮಾಡಲು ಶ್ರೀ ಕೃಷ್ಣ ತನ್ನ ಮೆಚ್ಚಿನ ಮಡದಿ ಸತ್ಯಭಾಮಳೊಂದಿಗೆ ಯುದ್ಧಕ್ಕೆ ಹೊರಟ.(ಈ ಯುದ್ಧ ದಲ್ಲಿ ಸತ್ಯಭಾಮ ನರಕಾಸುರನ ವಧೆ ಮಾಡಿದಳೆಂದು ಕೆಲವು ಪುರಾಣಗಳು ಹೇಳುತ್ತವೆ.ಅಂದ್ರೆ ಈಕೆ ಭೂಮಿತಾಯಿಯ ಅವತಾರವಾಗಿದ್ದು ತನ್ನ ದುಷ್ಟ ಮಗನನ್ನು ಸಾಯಿಸಿ ಭೂಮಿಯನ್ನು ರಕ್ಷಿಸಿದಳಂತೆ)
ಪಾಂಡವರ ಶುಭದಿನ:- ಹನ್ನೆರಡು ವರ್ಷಗಳಕಾಲ ವನವಾಸ ಹಾಗೂ ಅಜ್ಞಾತವಾಸ ಮಾಡಿಮುಗಿಸಿದ ನಂತರ ವಿಜಯದ ಸಂತೋಷವನ್ನು ದೀಪಗಳನ್ನು ಹಚ್ಚಿ ಅನುಭವಿಸಿದರಂತೆ.ಅಂದು ಕಾರ್ತಿಕ ಮಾಸದ ಅಮಾವಾಸ್ಯೆಯ ದಿನವಾಗಿತ್ತಂತೆ!
ಇತಿಹಾಸ :-ಇತಿಹಾಸದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದ ದೊರೆ ವಿಕ್ರಮಾದಿತ್ಯ.ಆತ ನಿರ್ವಾಣ ಹೊಂದಿದ ದಿನ ದೀಪಾವಳಿ.ಈ ಮೂಲಕ ದೀಪಾವಳಿ ಇತಿಹಾಸ ಪ್ರಾಮುಖ್ಯತೆಯನ್ನು ಪಡೆದು ಕೊಂಡಿದೆ.
ಆರ್ಯ ಸಮಾಜ :- ಮಹರ್ಷಿ ದಯಾನಂದ ನಿರ್ವಾಣ ಪಡೆದ ದಿನ
ಜೈನರಿಗೂ ವಿಶೇಷ ದಿನ :-ಜೈನಧರ್ಮ ಸ್ಥಾಪಕ ಮಹಾವೀರ ತೀರ್ಥಂಕರ ನಿರ್ವಾಣ ಹೊಂದಿದ ದಿನ ದೀಪಾವಳಿ.
ದೀಪಾವಳಿ ಸಿಖ್ಖರ ವಿಶೇಷ ದಿನ :- ಸಿಖ್ಖರ ಮೂರನೆಯ ಗುರು ಆದ ಗುರು ಅಮರ್ ದಾಸ್ ದೀಪಾವಳಿಯನ್ನು ಕೆಂಪು ಪತ್ರದ ದಿನ ಎಂದು ಕರೆದರು..1577 ರಂದು ಅಮೃತಸರದಲ್ಲಿರುವ ಗೋಲ್ಡನ್ ಗೆ ಟೆಂಪಲ್ ಅಡಿ ಪಾಯ ಹಾಕಿದ ದಿನ.

Wednesday 14 October 2009

ಪ್ರಕೃತಿಯ ಆರಾಧಕರು

ಪ್ರಪಂಚದಲ್ಲಿ ಅನೇಕಾನೇಕ ಧರ್ಮಗಳಿವೆ,ಪಂಗಡಗಳಿವೆ.ಭಗವಂತನ ವಿಗ್ರಹಗಳಿಗೆ ,ಫೋಟೋಗಳಿಗೆ ಓಜೆ ಸಲ್ಲಿಸುವವರು ಇಲ್ಲಡಿಲ,ಅದೇ ರೀತಿ ವಿಗ್ರಹಗಳು ಇಲ್ಲದೆ ಪೂಜೆ ಮಾಡುವವರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.ಹೀಗೆ ಬಗೆ ಬಗೆಯ ಧರ್ಮಗಳು,ವಿಧವಿಧವಾದ ಆರಾಧನೆಗಳು ಇವೆ.ಆದರೆ ಗುಜರಾತಿನಲ್ಲಿ ನೆಲೆಸಿರುವ ಕೊಕ್ನೋ ಪಂಗಡಕ್ಕೆ ಸೇರಿರುವವರು ದೇವನನ್ನು ಆರಾಧಿಸುವ ವಿಧಾನವೇ ಭಿನ್ನವಾದುದು.ಭಗವಂತನನ್ನು ನಂಬುವ ಇವರು ವಿಗ್ರಹಾಕರಾಧನೆ ಮಾಡುವುದಿಲ್ಲ .ಬೆಟ್ಟ ಗುಡ್ಡಗಳಲ್ಲಿ ವಾಸ ಮಾಡುವ ಈ ಜನಾಂಗ ಪ್ರಕೃತಿಯ ಆರಾಧಕರು.ಅದೇ ರೀತಿ ಕಲ್ಲನ್ನು ಕೆತ್ತಿ ಅದಕ್ಕೆ ಭಿಲ್ ಎನ್ನುವ ಹೆಸರಲ್ಲಿ ಪೂಜೆ ಸಲ್ಲಿಸುತ್ತಾರೆ.ಆದರೆ ಆ ಕಲ್ಲಿಗೆ ವಿಶಿಷ್ಟವಾದ ರೂಪ ಇರುವುದಿಲ್ಲ.ಇವರ ಪೂಜೆಯ ,ಹಬ್ಬದ ಕೈಂಕರ್ಯ ನೆರವೇರಿಸಲು ಒಬ್ಬ ವ್ಯಕ್ತಿ ನಿಯೋಜಿತವಾಗಿರುತ್ತಾನೆ.ಆತನನ್ನು ಭಗತ್ ಎಂದು ಕರೆಯುತ್ತಾರೆ.ಈತ ಮಂತ್ರಗಳಿಂದ ಪೂಜೆ ಸಲ್ಲಿಸುವುದಷ್ಟೇ ಅಲ್ಲದೆ,ಸತ್ತವರ ಕರ್ಮಗಳನ್ನು ಮಾಡುತ್ತಾನೆ.ಭಗತ್ ಹೇಳಿದ್ದು ಈ ಕೊಕ್ನೋ ಪಂಗಡದವರಿಗೆ ವೇದವಾಕ್ಯ!ಮಗು ಹುಟ್ಟಿದಾಗ ದಿನ,ಗಳಿಗೆ,ಹೊಂದುವಂತೆ ಆ ಮಗುವಿಗೆ ಹೆಸರು ಸಜೆಸ್ಟ್ ಮಾಡುವ ಕೆಲಸವೂ ಭಗತ್ಗೆ ಸೇರಿರುತ್ತದೆ.ಮದುವೆ ದೊಡ್ಡವರ ನಿರ್ಣಯದ ಅನ್ವಯ ನೆರವೇರುತ್ತದೆ.ಇವರಲ್ಲಿ ಪ್ರೀತಿ,ಪ್ರೇಮ ಲವ್ವು-ಪವ್ವು ಇವುಗಳಿಗೆ ಜಾಗವೇ ಇಲ್ಲ.ಮದುವೆ ದೊಡ್ಡವರ ಸಮ್ಮತಿಯ ನಂತರ ನೆರವೇರುತ್ತದೆ.ಇವರು ಮದುವೆಯನ್ನು ಮುಂಜಾನೆ ಅಥವಾ ಸಂಜೆ ಮಾಡುತ್ತಾರೆ.
ಇನ್ನು ಬದುಕಿನತ್ತಾ ಕಣ್ ಹಾಯಿಸಿದರೆ,ಒಂಟಿ ಜೀವನ ಇವರಿಗೆ ಸಹ್ಯವಾಗದು.ತಮ್ಮವರೊಂದಿಗೆ ಸೇರಿ ಒಟ್ಟಾಗಿ ಬದುಕುತ್ತಾರೆ.ಅಂದರೆ ಒಂದು ಕಡೆ 10-15 ಪುಟ್ಟ ಪುಟ್ಟ ಮನೆಗಳನ್ನು ನಿರ್ಮಿಸಿಕೊಂಡು ಬದುಕುತ್ತಾರೆ.
ಗ್ರಾಮಕ್ಕೆ ಒಬ್ಬ ಪಟೇಲ್ ಇರುತ್ತಾನೆ.ಅಲ್ಲಿ ಆತನ ನಿರ್ಣಯವೇ ಅಂತಿಮ.ಮನೆಗಳು ವೃತಾ ಹಾಗೂ ಚೌಕ್ಕಾಕರದಲ್ಲಿ ರಚಿತವಾಗಿ ಇರುತ್ತದೆ.ಮನೆಯನ್ನು ಶುಭ್ರವಾಗಿ ತೊಳೆದು ರಂಗೋಲಿ ಇಡುವ ಪದ್ಧತಿ ಇವರದು.
ಪುರುಷರು ಮೊಣಕಾಲಿನ ವರೆಗೂ ವಸ್ತ್ರಗಳನ್ನು ಧರಿಸುತ್ತಾರೆ.ತಲೆ ಮೇಲೆ ಟೋಪಿ ಇದ್ದೆ ಇರುತ್ತದೆ.ಇನ್ನು ಸ್ತ್ರೀಯರು ಸೀರೆ ಉಟ್ಟರು ಅದು ಭಿನ್ನ ರೀತಿಯಲ್ಲಿ ಇರುತ್ತದೆ.ಮಣಿ,ನಾಣ್ಯಗಳಿಂದ ತಯಾರಿಸಿದ ಆಭರಣಗಳ ಬಳಕೆ ಮಾಡುತ್ತಾರೆ.
ವ\ವ್ಯವಸಾಯ ಇವರ ಜೀವನೋದ್ದಾರ ವೃತ್ತಿ..ಅದಕ್ಕಾಗಿ ಅರಣ್ಯವನ್ನು ಕತ್ತರಿಸಿ,ವ್ಯವಸಾಯಕ್ಕೆ ಯೋಗ್ಯ ಆಗುವಂತೆ ಭೂಮಿಯನ್ನು ಸಿದ್ದಪಡಿಸಿಕೊಳ್ಳುತ್ತಾರೆ.ಅರಣ್ಯದಲ್ಲಿ ದೊರೆಯುವ ಹಣ್ಣು ,ಕಾಯಿ ಹಾಗೂ ಕೆಲ ಬಗೆಯ ಎಲೆಗಳನ್ನು ಸಹ ಸೇವಿಸುತ್ತಾರೆ.ಬೇಟೆಯನ್ನು ಸಹ ಆಡುತ್ತಾರೆ.ಜೇನು ಗೂಡಿನಿಂದ ಜೇನು ಶೇಖರಿಸುವ ವಿದ್ಯೆ ಇವರಿಗೆ ಗೊತ್ತು.ಇವರು ಬಳಕೆ ಮಾಡುವ ಪಾತ್ರೆಗಳು ಮಣ್ಣಿನಿಂದ ಮಾಡಿದ್ದು.ಹಸು,ಮೆಕೆಯಂತಹ ಪ್ರಾಣಿಗಳನ್ನು ಸಹ ಅವರು ಸಾಕುತ್ತಾರೆ.ಕಾಡಿನಲ್ಲಿ ದೊರಕುವ ಗಿಡ ಮೂಲಿಕೆಗಳನ್ನು ಬಳಸಿ ತಮ್ಮ ದೇಹಕ್ಕೆ ಚಿಕಿತ್ಸೆ ಮಾಡಿಕೊಳ್ಳುತ್ತಾರೆ.ತಮ್ಮ ಜೊತೆ ಇರುವವರು ಸತ್ತರು ಆತ್ಮದ ರೂಪದಲ್ಲಿ ತಮ್ಮ ಜೊತೆ ಇರುತ್ತಾರೆ ಎಂದು ನಂಬುವ ಇವರು ಪುನರ್ಜನ್ಮದ ಬಗ್ಗೆಯೂ ಅಪಾರ ನಂಬಿಕೆ ಹೊಂದಿದ್ದಾರೆ.ಕೊಕ್ನೋ ಸಮಾಜದ್ದಲ್ಲಿ ಪುರುಷಾಧಿಪತ್ಯ ಹೆಚ್ಚು.ಸ್ತ್ರೀಯರು ಇಲ್ಲಿ ವಿಧೇಯರಾಗಿ ಇರುತ್ತಾರೆ.ಆದರೆ ಆಧಿನಿಕಥೆಯ ಗಾಳಿ ಈಗ ಈ ಸಮಾಜದಲ್ಲೂ ಕಾಣುತ್ತಿದೆ.ಸೊ ಬದಲಾವಣೆಯತ್ತ ಈ ಸಮಾಜಧಾವಿಸುತ್ತಿದೆ.

Friday 21 August 2009

ಜೈ ಜೈ ಗಣೇಶ!



ಪ್ರಥಮ ಸಮೀರ ಶ್ರೀ ಗಣೇಶಂ ಗೌರಿಸುತ ಪ್ರಿಯ ಮಹೇಶಂ....! ನಮ್ಮ ಧರ್ಮದಲ್ಲಿ ಅದೆಷ್ಟೇ ದೇವರಿದ್ದರು ನಾವು ಮೊದಲು ಪೂಜಿಸುವುದು ಗಣಪನನ್ನು.ಶುಭಕಾರ್ಯ ಆಗಿರಲಿ ಎಲ್ಲದಕ್ಕೂ ನಮ್ಮ ವಿನಾಯಕ ಇರಲೇ ಬೇಕು.ಪುರಾಣಗಳಲ್ಲೂ ಈತನಿಗೆ ವಿಶೇಷ ಸ್ಥಾನ.ಏಕದಂತ,ಮೂಷಿಕ ವಾಹನ,ಕೈಲ್ಲಿ ಪಾಶಂಕುಶ, ಕಡಬು,ಸ್ಥೂಲ ಹೊಟ್ಟೆ ,ಅದಕ್ಕೆ ಸುತ್ತಿರುವ ಹಾವು,ಆನೆ ಮುಖ....! ಮನುಷ್ಯ ಸಮಾಜ ಹೆಚ್ಚು ಹೆಚ್ಚು ಆದ್ಯತೆ ಕೊಡುವ ಯಾವ ಅಂಶವು ಗಣಪನಲ್ಲಿ ಇಲ್ಲ ಆದರು ಈತ ಹೆಚ್ಚು ಪ್ರಖ್ಯಾತ.ವಿಶ್ವಮಾನ್ಯ.ವಿಶ್ವದೆಲ್ ಗಣೇಶನ ಮೂರ್ತಿ,ಚಿತ್ರಪಟಗಳಿಗಿರುವ ಡಿಮ್ಯಾಂಡ್ ಬೇರ್ಯಾವ ಪ್ರಸಿದ್ಧ ದೇವರಿಗೂ ಇಲ್ಲ.ಪುರಾಣದತ್ತ ಸ್ವಲ್ಪ ಗಮನ ಹರಿಸಿದಾಗ -ಈತ ಪ್ರುಥ್ವಿತತ್ವ ಹೊಂದಿರುವ ದೇವ,ಅಂದ್ರೆ ನಮ್ಮ ಗಣಪ ಹುಟ್ಟಿದ್ದು ಪಾರ್ವತಿ ಲೆಪಿಸಿಕೊಂಡಿದ್ದ ಹಿಟ್ಟಿನ ಲೇಪನದಿಂದ.ಆದ್ದರಿಂದಲೇ ಮಣ್ಣಿನ ಗಣಪ ಹೆಚ್ಚು ಶ್ರೇಷ್ಠ ಅನ್ನುವ ನಂಬಿಕೆ ನಮ್ಮಲ್ಲಿ ಬೇರೂರಿದೆ.ಈತನಿಗೆ ಕೆಂಪು ಬಣ್ಣ ಅಂದ್ರೆ ಪ್ರಾಣ.ಧರಿಸುವ ಬಟ್ಟೆ,ಆಭರಣ,ಪೂಜಿಸುವ ಪುಷ್ಪ ಎಲ್ಲವು ಕೆಂಪು ಕೆಂಪು! ಈತನ ವ್ರತ ಮಾಡ ಬಯಸುವವರು ಕೆಂಪು ವಸ್ತ್ರ ಧರಿಸಿ ಮಾಡಿದರೆ ಹೆಚ್ಚು ಪ್ರಯೋಜನ ಅಂತಾರೆ ತಿಳಿದವರು.ಈತ ಪತ್ರೆ ಪ್ರಿಯ,ಇದರ ಬಗ್ಗೆ ವಿವರವಾಗಿ ನೋಡಲು ಹೋದರೆ ತಿಳಿದುಬರುವ ಸಂಗತಿ ಎಲೆಗಳು ಆರೋಗ್ಯದ ದೃಷ್ಟಿಯಲ್ಲಿ ಮಹತ್ವದ ಸ್ಥಾನ ಪಡೆದಿದೆ.ದತ್ತೂರ,ಮಾಚಿ,ಬಿಲ್ವ...! ಚರ್ಮರೋಗಗಳನ್ನು,ಶ್ವಾಸ ಕೋಶದ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಪಡೆದಿರುವ ಪತ್ರೆಗಳಾಗಿದೆ.ಆನೆ ಕಾಡಲ್ಲಿ ವಾಸ ಮಾಡುವ ಪ್ರಾಣಿ ಅದಕ್ಕೆ ಮೇಲೆ ತಿಳಿಸಿರುವ ಎಲೆಗಳು ಸುಲಭವಾಗಿ ದೊರೆಯುತ್ತದೆ,ಆದರೆ ತುಳಸಿ ಪಾಪ ಆನೆಗೆಲ್ಲಿ ಸಿಗುತ್ತೆ ,ಆದ್ದರಿಂದಲೇ ಇರಬೇಕು ಗಣಪನಿಗೆ ತುಳಸಿಪತ್ರೆ ಅಂದ್ರೆ ಅಷ್ಟಕಷ್ಟೇ! ಗರಿಕೆ,ತರ್ಪಣ,ಮೋದಕ.....!ಈತನಿಗೆ ಪ್ರಿಯ.
ಗಣೇಶ ಸಾರ್ವಜನಿಕ ದೇವರು.ಎಲ್ಲ ಜಾತಿ ವರ್ಗಗಳಿಗೆ ಮಾತ್ರವಲ್ಲ ಮಾತ್ರವಲ್ಲ ಭಿನ್ನಧರ್ಮಗಳಿಗೂ ಈತ ಪ್ರಿಯ.
ಒಂದು ಸಿದ್ಧಾಂತದ ಪ್ರಕಾರ ಆನೆ ತಲೆ ಅಧಿಕಾರದ ಸಂಕೇತ.ಆಗಿನ್ನೂ ಭಾರತವನ್ನು ಬುಡಕಟ್ಟು ಜನಾಂಗದವರು ಆಳ್ತಾ ಇದ್ದ ಕಾಲ.ಆ ಸಂದರ್ಭದಲ್ಲಿ ಒಂದಷ್ಟು ದಾಳಿಕೋರರು ಭಾರತದ ಕಡೆ ಬಂದು ಇಲ್ಲಿದ್ದ ಬುಡಕಟ್ಟು ಜನಾಂಗದವರ ಮೇಲೆ ದಾಳಿ ಮಾಡಿ ಆ ಪ್ರಾಂತ್ಯ ಗೆದ್ದರು,ಅವರು ಹೋಗುವ ಮುನ್ನ ಆನೆ ತಲೆ ಇರುವ ಮುಖವಾಡ ಊರ ಮಧ್ಯದಲ್ಲಿ ಇಟ್ಟು ತಮ್ಮ ಪರವಾಗಿ ಇದಕ್ಕೆ ಮರ್ಯಾದೆ ಸಲ್ಲಿಸಬೇಕು ಎಂದು ತಿಲಿಸೋದರಂತೆ.ಹೀಗೆ ಅನೇಕ ಸ್ಥಳಗಳಲ್ಲಿ ಆನೆಯ ಮುಖವಾಡ ಪ್ರತಿಷ್ಟಾಪಿಸಿ ನಂತರ ಹೊರತು ಹೋದರಂತೆ.ಅಂದಿನಿಂದ ಅಲ್ಲಿ ವಾಸ ಮಾಡುತ್ತಾ ಇದ್ದ ಜನರು ಆ ಮುಖವಾಡಕ್ಕೆ ಗೌರವ ಸಲ್ಲಿಸುತ್ತ ಬಂದರಂತೆ.ಹೀಗೆ ಗಣೇಶನ ಹುಟ್ಟು ಆಯ್ತು ಅಂತಾರೆ.ವಿಷಯ ಏನೇ ಇರಲಿ ಈತ ಎಲ್ಲರಿಗೂ ಪ್ರಿಯನಾದ ದೇವರು.ನನಗಂತೂ ಅತ್ಯಂತ ಆಪ್ತನಾದ ದೇವ.ನನ್ನ ಅತಿ ಮೆಚ್ಚಿನ ದೇವ ಈತ.ಜೈ ಜೈ ಗಣೇಶ!


Thursday 13 August 2009

ಬಾಂಧವ್ಯ ಗಟ್ಟಿ

ಚಿಕ್ಕಂದಿನಲ್ಲಿ ಕೇಳಿದ ಕಥೆ.ಇಷ್ಟವಾದ ಅನೇಕ ಕಥೆಗಳಲ್ಲಿ ಇದೂ ಒಂದು.ಕೆಲವು ಕಥೆಗಳೇ ಹಾಗೆ ಮನದಲ್ಲಿ ಸದಾ ನಳ ನಳಿಸುತ್ತಲೇ ಇರುತ್ತದೆ.ಬಿಡದ ಬಾಂಧವ್ಯ!
ಕೃಷ್ಣ ಸಾಮಾನ್ಯವಾಗಿ ಎಲ್ಲರು ಮೆಚ್ಚುವ ದೇವ.ಆತನ ಲೀಲೆಗಳು ಅಪಾರ.ಶ್ರೀಕೃಷ್ಣನ ಬಗ್ಗೆ ಅನೇಕ ಕಥೆಗಳು ಪ್ರಚಲಿತದಲ್ಲಿವೆ.ಕೆಲವು ಗೊತ್ತು ,ಒಂದಷ್ಟು ಹೀಗೆ ಜನಪದ ಸಾಹಿತ್ಯ.ಪ್ರಾಯಶ: ಇದು ಜನಪದ ಕಥೆ ಇರಬಹುದು ಅಂತ ಕಾಣುತ್ತೆ.ಇರ್ಲಿ ಈಗ ಆ ವಿಷ್ಯ ಅಪ್ರಸ್ತುತ.
ಹೀಗೊಂದೂರು.ಅಲ್ಲಿ ಒಬ್ಬ ಬಡವ ವಾಸ ಮಾಡ್ತಾ ಇದ್ದ.ಆತ ಕೃಷ್ಣ ಭಕ್ತ. ಒಪ್ಪತ್ತು ಗಂಜಿಗೂ ಪರದಾಟ! ಅಂತಹ ವ್ಯಕ್ತಿ ಕಷ್ಟಪಟ್ಟು ದುಡೀತಾ ಇದ್ದ.ಅಕಸ್ಮಾತ್ ಹಣ ಸಿಕ್ಕರೆ ಅದನ್ನು ದಾನ ಮಾಡಿ ಬಿಡುವ ವ್ಯಕ್ತಿತ್ವ.(ಆ ರೀತಿಯ ವ್ಯಕ್ತಿಗಳು ಈಗಿನ ಕಾಲಕ್ಕೆ ಖಂಡಿತ ಹೊಂದಲ್ಲ ಆ ಮಾತು ಬೇರೆ!) .ಆ ಊರಲ್ಲಿ ಇರುವ ಹಣವಂತರು ಕೃಷ್ಣನ ಭಕ್ತರು.ಅವರು ಆ ಕೃಷ್ಣ ಪರಮಾತ್ಮ ಬ್ಯಾಡ ಅಂತ ಅಂದ್ರೂ ಕೇಳದೆ ಯಥೇಚ್ಛವಾಗಿ ನೈವೇದ್ಯಗಳ ಅರ್ಪಣೆ! ಸಮಾಜ ಇರೋದು ಹಾಗೆ ಅಲ್ವ ಬಡ ಮಕ್ಕಳಿಗೆ ಮನೆಯಲ್ಲಿ ಇರೋ ಚಾಕಲೇಟ್ ಕೊಡೋಕೂ ಇಷ್ಟ ಪಡದ ಜನ ಸಿರಿವಂತ ಮಗುವಿಗೆ ಪಿಜ್ಜಾ ತಗೋ ಬರ್ಗರ್ ತಗೋ...! ಅಂತ ಕಾಡಿಸೋದು. ಆ ಕಾಲದಲ್ಲಿ ಪ್ರತಿ ಕೃಷ್ಣಾ ಷ್ಟಮಿಗೂ ಕೃಷ್ಣಪ್ಪ ರಾತ್ರಿ ಭಕ್ತರ ಮನೆಗೆ ಬಂದು ಸ್ವಲ್ಪ ಸ್ವಲ್ಪ ತಿಂಡಿ ತಿನಿಸು ಸ್ವೀಕರಿಸ್ತಾ ಇದ್ದನಂತೆ.ಈ ಬಡವನ ಮನೆಗೆ ಒಂದು ಸರ್ತೀನಿ ಬಂದೆ ಇರಲಿಲ್ಲವಂತೆ.ಈತನ ಪ್ರಿಯ ಪತ್ನಿ ಸತ್ಯಭಾಮಗೆ ಈ ವಿಷ್ಯ ಸಿಟ್ಟು ತರಿಸಿತು,ಅಲ್ಲ ಸ್ವಾಮಿ ನೀನು ಹೀಗೆ ಭಕ್ತಿಗಿಂತ ದುಡ್ಡಿನ ಮುಖ ನೋಡ್ತೀಯಲ್ಲ! ಈ ನಿನ್ ಗುಣ ನನಗೆ ಸ್ವಲ್ಪವೂ ಇಷ್ಟ ಆಗಲಿಲ್ಲ ಅಂತ ಹೇಳಿದಳು.ಆ ಆ ಜಗನ್ನಾಟಕ ಸೂತ್ರಧಾರಿ ನಗುತ್ತ 'ಸತ್ಯ ಆತನ ಮನೆಗೆ ಹೋಗಲು ಕಾಲ ಕೂಡಿ ಬರ ಬೇಕು,ನಾನು ಆತನ ಭಕ್ತಿಯನ್ನು ಪ್ರಪಂಚಕ್ಕೆ ತಿಳಿಸಿ ಹೇಳಬೇಕು ,ಅದಕ್ಕಾಗಿ ಇಷ್ಟು ತಡ ಮಾಡ್ತಾ ಇರೋದು' ಅಂತ ಹೇಳಿ ಬಾಯ್ಮುಚ್ಚಿಸಿದನಂತೆ.ಕೃಷ್ಣ ಹೇಳಿದ ಕಾಲವು ಬಂತು ಆತ ತನ್ನ ಜನ್ಮದಿನದಂದು ಆ ಊರಿಗೆ ಹೋದನಂತೆ.ಎಲ್ಲರ ಮನೆಯಲ್ಲಿಯೂ ತಿಂಡಿ ತಿಂದ ಬಳಿಕ ಆತನಿಗೆ ಬಾಯಾರಿಕೆ ಆಯ್ತಂತೆ.ನೀರನ್ನು ಹುಡುಕುತ್ತ ಹೋದಾಗ ಈ ಬಡವನ ಗುಡಿಸಿಲು ಸಿಕ್ಕಿತಂತೆ,ಪಾಪ ಹೇಳಿಕೇಳಿ ಬಡವ ಈತ,ನೀರನ್ನು ನೈವೇದ್ಯವಾಗಿ ಇಟ್ಟಿರುತ್ತಾನೆ.ಅದನ್ನು ಕಂಡು ಕೃಷ್ಣನಿಗೆ ಸಂತೋಷದಿಂದ ಕುಣಿದಾಡುವಂತೆ ಆಯ್ತಂತೆ.ತಕ್ಷಣ ದೇವನು ನೀರೆತ್ತಿ ಗಟಗಟನೆ ಕುಡಿದು ತನ್ನ ಭಕ್ತನನ್ನು ಆಶೀರ್ವದಿಸಿದನಂತೆ .ಮಾರೆಯ ದಿನ ಈ ಬಡವ ಶ್ರೀಮಂತನಾಗಿದ್ದ.ಊರಿನವರಿಗೆ ಆಶ್ಚರ್ಯ !ಅವರು ಕಾರಣ ಕೇಳಿದಾಗ ತಾನಿತ್ತ ನೀರು ಕೃಷ್ಣನಿಗೆ ಪ್ರಿಯವಾಗಿ ಆತ ನೀಡಿದ ವರದಿಂದ ತಾನು ಶ್ರೀಮಂತನಾದೆ ಅಂತ ಖುಷಿಯಿಂದ ಹೇಳಿದ ಆ ಭಕ್ತ.ಮತ್ತೊಂದು ವರ್ಷ ಬಂತು.ಪುನಃ: ಆ ಕೃಷ್ಣ ಆ ಊರಿಗೆ ಬಂದ ರಾತ್ರಿ ಎಲ್ಲರು ಮಲಗಿದ್ದರೆ,ಆದರೆ ಪ್ರತಿಯೊಬ್ಬ ಭಕ್ತ ನೈವೇದ್ಯಕ್ಕೆ ನೀರನ್ನು ಇಟ್ಟಿದ್ದ! ಪಾಪ ಚಕ್ಕುಲಿ ,ಕೋಡುಬಳೆ ನಿರೀಕ್ಷಿಸಿ ಬಂದಿದ್ದದ ದೇವರಿಗೆ ನೀರು ಕುಡಿದೂ...ಕುಡಿದೂ...! ಸಾಕಾಯ್ತಂತೆ.ಕೊನೆಗೆ ಅದೇ ಕಳೆದ ಬಾರಿ ಸಿರಿವಂತಿಕೆ ನೀಡಿದ್ದ ಆ ಭಕ್ತನ ಮನೆಗೆ ಬಂದಾಗ ಆತ ಸಿಕ್ಕಾಪಟ್ಟೆ ,ವಿಧ ವಿಧ ತಿನಿಸುಗಳನ್ನು ಮಾಡಿ ನೈವೇದ್ಯಕ್ಕೆ ಇಟ್ಟಿದ್ದನಂತೆ.ಕೃಷ್ಣನಿಗೆ ಖುಷಿ ತಡಿಯಲಾಗದೆ ಅಲ್ಲಿ ತಿಂಡಿಗಳನ್ನು ಒಂದು ಬಿಡದೆ ಮುಗಿಸಿ ಇನ್ನೂ ಜಾಸ್ತಿ ಉದ್ದಾರ ಆಗು ಅಂತ ಹರಿಸಿ ಮಾಯ ಆದನಂತೆ.ಮಾರನೆಯ ದಿನ ಈ ಭಕ್ತ ಮತ್ತೂ ಶ್ರೀಮಂತ ಆಗಿದ್ದ.ಇದೆಲ್ಲ ಹ್ಯಾಗಾಯ್ತಪ್ಪ ಅಂತ ಊರವರು ಕೇಳಿದರು.ಆಗ ಆತ 'ಅಯ್ಯಗಳಿರ! ದೇವರು ನಿಮಗೆ ಶ್ರೀರಕ್ಷೆ ಮಾಡೇ ಇದ್ದದ.ನೀವು ಆತ ಇನ್ನು ಕೊಡಲಿ,ಮತ್ತೂ ನೀಡಲಿ ಅಂತ ಆಶಿಸಿದಿರಿ.ಅದು ತಪ್ಪಲ್ಲ.ನೀವು ಯಾರಿಂದಲಾದರೂ ಪಡೆದರೆ ಕೊಡುವ ಅಭ್ಯಾಸವನ್ನು ಬೆಳೆಸಿಕೊಳ್ಳ ಬೇಕು.ನಿಜ ದೇವರಿಗೆ ಕೊಡಲು ನಾವ್ಯಾರು? ಆ ನಮಗೆ ನೀಡಿದ ಸವಲತ್ತುಗಳ ಬಗ್ಗೆ ನಮಗೆ ಆದಾಗಲೆಲ್ಲಾ ತಪ್ಪದೇ ಕೃತಜ್ಞತೆಯನ್ನು ತಿಳಿಸಬೇಕು,ಅದೂಉತ್ತಮಗುಣಗಳಲ್ಲಿ ಒಂದು.ಆಗಷ್ಟೆ ದೇವರೂ ಸೇರಿದಂತೆ ಮನುಷ್ಯರ ನಡುವೆಯೂ ಸಹ ಬಾಂಧವ್ಯ ಗಟ್ಟಿಆಗುವುದು ಎಂದನಂತೆ ಆ ಭಕ್ತ.

Saturday 8 August 2009

ಮರ್ತೆ ಹೋಗಿದ್ದೆ




ನನಗೆ ಬಂದ ಮೇಲ್ಗಳಲ್ಲಿ ಇಷ್ಟ ಆಗಿದ್ದುಮಧ್ಯಪ್ರಾಚ್ಯ ದೇಶಗಳಿಗೆ ಕೊಕೊಕೊಲ ಮಾರುವ ಅಸೈನ್ ಮೆಂಟ್ ಒಬ್ಬನಿಗೆ ಸಿಕ್ತು.ಕೆಲವು ದಿನಗಳಾದ ಬಳಿಕ ಆತ ಹ್ಯಾಪ್ ಮೊರೆ ಹಾಕಿಕೊಂಡು ಹಿಂತಿರುಗಿದ.ತುಂಬಾ ಬುದ್ಧಿವಂತನಾಗಿದ್ದ ಗೆಳೆಯ ಈ ಅಸೈನ್ ಮೆಂಟ್ನಲ್ಲಿ ಸೋತದ್ದೇಕೆ ಎಂದು ಗೊಂದಲ ಉಂಟಾಯಿತು ಗೆಳೆಯನಿಗೆ,ಸರಿ ಅವನನ್ನು ಭೇಟಿ ಮಾಡಲು ಹೋದ ಗೆಳೆಯ, ಇಬ್ಬರು ಸ್ವಲ್ಪ ಕಾಲ ಮಾತಾಡಿದ ಬಳಿಕ ನೀನು ಸೋತಿದ್ದೇಕೆ ಅಂತ ಕೇಳಿದ.ಆಗ ಅಸೈನ್ ಮೆಂಟ್ ತೆಗೆದು ಕೊಂಡಿದ್ದ ವ್ಯಕ್ತಿ ಹೇಳಿದ್ದು ಇಷ್ಟೇ,' ನಾನು ಮಧ್ಯಪ್ರಾಚ್ಯ ದೇಶಗಳಿಗೆ ಹೋದೆ ಅಲ್ವ,ನನ್ನ ವ್ಯಾಪಾರದ ತಂತ್ರದ ಬಗ್ಗೆ ತುಂಬ ಆತ್ಮವಿಶ್ವಾಸ ಇಟ್ಟು.ಅಲ್ಲಿ ಕೋಕೋ ಕೊಳ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ.ಆದರೆ ನನಗೆ ಅರೇಬಿಕ್ ಭಾಷೆ ತಿಳಿದಿರಲಿಲ್ಲವಲ್ಲ,ನನ್ನ ತಲೆ ಓಡಿಸಿದಾಗ ಯೋಜನೆಯೊಂದು ಹೊಳೆಯಿತು,ಸರಿ ನಾನು ಹೇಳಬೇಕಾದ್ದನ್ನು ಪೋಸ್ಟರ್ ಮೂಲಕ ತಿಳಿಸುವುದೆಂದು ನಿಶ್ಚಯಿಸಿದೆ.'
1-ಪೋಸ್ಟರ್ -ಬಿಸಿಯಾದ ಹಬೆಯಿಂದ ಕೂಡಿದ ಮರುಭೂಮಿಯಲ್ಲಿ ಸುಸ್ತಾಗಿ ಒಬ್ಬ ಮನುಷ್ಯ ಬಿದ್ದಿದ್ದ.
2-ಪೋಸ್ಟರ್ -ಆ ಮನುಷ್ಯ ನಮ್ಮ ಕೊಕೊಕೊಲ ಕುಡಿದ
3-ಪೋಸ್ಟರ್ -ಬಳಿಕ ಆತ ಸಂಪೂರ್ಣವಾಗಿ ಗುಣಮುಖನಾಗಿ ಉಲ್ಲಾಸದಿಂದ ಹೊರಟ.
ಇಷ್ಟು ಹೇಳಿ ಆ ಸೇಲ್ಸ್ ಮ್ಯಾನ್ ನಿಟ್ಟುಸಿರುಬಿಟ್ಟ ,ಆಗ ಅವನ ಗೆಳೆಯ 'ಇದರಲ್ಲೇನು ತಪ್ಪಿದೆ' ಅಂತ ಕೇಳಿದ.ಆಗ ಆತ 'ಅಲ್ಲೇ ಮಹರಾಯ ನಾನು ತಪ್ಪಿದ್ದು ಅರಬರು ಬಲ ಭಾಗದಿಂದ ಎಡಭಾಗ ಓದುತ್ತಾರೆ ಅನ್ನುವ ವಿಷಯ ನಾನು ಮರ್ತೆ ಹೋಗಿದ್ದೆ'

ಪ್ಲಟೊನಿಕ್ ಲವ್

ಗೋಪಿಕೆಯರಿಗೆ ಕೃಷ್ಣನ ಮೇಲಿರುವ ಪ್ರೀತಿ ಅಲೌಕಿಕವಾದುದು ಹಾಗೂ ದಿವ್ಯವಾದುದು.ಅಷ್ಟೊಂದು ಸಂಖ್ಯೆಯ ಗೋಪಿಕೆಯರು ಶ್ರೀಕೃಷ್ಣ ದೇವರು ಎನ್ನುವ ಸಂಗತಿ ತಿಳಿದಿತ್ತು.ಆದ ಕಾರಣ ಅವರು ತಮ್ಮ ಪ್ರೀತಿಯನ್ನು ಆತನಿಗೆ ಧಾರೆ ಎರೆದರು ಎಂದು ಭಕ್ತಿಸೂತ್ರದಲ್ಲಿ ನಾರದ ಮಹರ್ಷಿ ವಿವರಿಸಿದ್ದಾರೆ.ಅಲೌಕಿಕ  ರೀತಿಯಿಂದ ಪ್ರೀತಿಸುವುದಕ್ಕೂ ಹಾಗೂ ಲೌಕಿಕ ಪ್ರೇಮಕ್ಕೂ ನಡುವೆ ಇರುವ ವ್ಯತ್ಯಾಸದ ಬಗ್ಗೆಯೂ ಇದರಲ್ಲಿ ತಿಳಿಸಿದೆ,ಲೌಕಿಕ ಸ್ವಾರ್ಥಪೂರಿತ ,ಆದರೆ ಅಲೌಕಿಕ ನಿಸ್ವಾರ್ಥವಾದ ಪ್ರೀತಿ.ನಮಗೆ ಯಾವ ಸಂಗತಿ,ವಸ್ತು ಇಲ್ಲವೇ ಮನುಷ್ಯನಿಂದ ಸಂತಸ ಸಿಗುತ್ತದೆಯೋ ಅಂತಹವುಗಳನ್ನು ಪ್ರೀತಿಸುತ್ತೇವೆ,ಅದು ಸಹಜ ಕ್ರಿಯೆ.ಆದರೆ ಅದೇ ವ್ಯಕ್ತಿ,ಇಲ್ಲವೇ ವಸ್ತು ...ಸಂಬಂಧಿಸಿದಂತೆ ಬೇಸರ -ದುಃಖ ಉಂಟಾದರೆ ನಾವು ಅಷ್ಟು ಪ್ರೀತಿಸಿದ ವ್ಯಕ್ತಿಯನ್ನು ದ್ವೇಷಿಸುತ್ತೇವೆ,ಕೊಪಗೊಳ್ಳುತ್ತೇವೆ ಇದು ಪ್ರೀತಿಯ ಒಂದು ರೂಪವೇ ಅನ್ನುವ ಪ್ರಶ್ನೆ ಉದ್ಭವ ಆಗುತ್ತದೆ,ಆದರೆ ಲೌಕಿಕ ಪ್ರೀತಿಯಲ್ಲಿ ಇದು ಸಾಮಾನ್ಯ,ಆದ ಕಾರಣ ಗೋಪಿಕೆಯರು ಅಲೌಕಿಕದತ್ತ ತಮ್ಮ ಗಮನ ನೆಟ್ಟರು .ಆ ಭಗವಂತನನ್ನು ಪ್ರೀತಿಸಿದರು.ಇದು ಭಗವಂತನಿಗೂ  ಗೊತ್ತು,ತನ್ನ ಬಗ್ಗೆ ಅಪಾರ ಪ್ರೀತಿ ಹೊಂದಿದ ವ್ಯಕ್ತಿಗೆ ತನ್ನ ಹೃದಯದಲ್ಲಿ ಸ್ಥಾನ ಬೇಕೇ ಹೊರೆತು ಇಂದ್ರ,ಇಲ್ಲವೇ ರಾಜ್ಯಪದವಿ ಅಲ್ಲ .ಗೋಪಿಕೆಯರು ಬಯಸಿದ್ದು ಇದೆ ಅಂಶವನ್ನು,ಅವರು ಎಂದಿಗೂ ಕೃಷ್ಣ ನು ತಮ್ಮ ಬಳಿಯಲ್ಲಿಯೇ ಇರಬೇಕು ಎಂದು ಬಯಸಲಿಲ್ಲ,ಇದೊಂತರ ಈಗಿನ ತಿಳಿದವರು ಹೇಳುವ ಪ್ಲಟೊನಿಕ್ ಲವ್ ನಂತಹುದು.
ಗೋಪಿಕ ಸ್ತ್ರೀಯರ ಪ್ರೀತಿಯ ಬಗ್ಗೆ ಹೇಳುವುದಾದರೆ-ಒಮ್ಮೆ ಶ್ರೀ ಕೃಷ್ಣನಿಗೆ ಸಿಕ್ಕಾಪಟ್ಟೆ ತಲೆನೋವು ಬಂತಂತೆ.ಎಷ್ಟು ಉಪಚಾರ ಮಾಡಿದರೂ,ಔಷಧ ನೀಡಿದರು ನೋವು ಉಪಶಮನಕ್ಕೆಬರಲೇ ಇಲ್ಲ .ಎಲ್ಲರು ಚಿಂತಿತರಾದರು,ಆಗ ಶ್ರೀಕೃಷ್ಣ ಯಾರಾದರು ತಮ್ಮ ಪಾದ ಧೂಳು ಹಣೆಗೆ ಹಚ್ಚಿದರೆ ತನ್ನ ನೋವು ದೂರವಾಗುತ್ತದೆ ಎಂದು ತಿಳಿಸಿದಾಗ ಯಾರೂ ಆ ಕೆಲಸ ಮಾಡಲು ಮುಂದೆ ಬರಲೇಇಲ್ಲವಂತೆ.ಕೃಷ್ಣನಿಗೆ ತಲೆನೋವು ವಾಸಿ ಆಗಲೇ ಇಲ್ಲ,ಆಗ ಶ್ರೀ ಕೃಷ್ಣ ತನ್ನ ಸೇವಕರನ್ನು ಗೋಪಿಕ ಸ್ತ್ರೀಯರ ಬಳಿತನ್ನ ಸೇವಕರನ್ನು ಕಳುಹಿಸಿ ಪಾದ ಧೂಳು ತರುವಂತೆ ತಿಳಿಸಿದನು .ಆಗ ಅಲ್ಲಿದ್ದ ಗೋಪಿಕೆಯರು ಈ ಸೇವೆಗೆ ಸಿದ್ಧರಾದರಂತೆ.ಆಗ ಅವರ ಜೊತೆ ಇದ್ದ ಸೇವಕ ಈ ಕ್ರಿಯೆಯಿಂದ ನೀವು ನರಕಕ್ಕೆ ಹೋಗುವುದಿಲ್ಲವೇ ಎಂದು ಪ್ರಶ್ನಿಸುತ್ತಾನಂತೆ,ಆಗ ಆ ಹೆಣ್ಣುಮಕ್ಕಳು ನಮಗೆ ಕೃಷ್ಣ ಕಷ್ಟ ಪಡೋದನ್ನು ನೋಡಲು ಆಗುವುದಿಲ್ಲ,.ನಮ್ಮ ಈ ಕೆಲಸದಿಂದ ನಾವು ನರಕಕ್ಕೆ ಹೋದರು ಚಿಂತಿಲ್ಲ, ಕೃಷ್ಣ ಹುಶಾರಾದರೆ ಸಾಕು ಎಂದುಹೇಳಿದರಂತೆ.

Thursday 6 August 2009

ಈತನ ವ್ಯಕ್ತಿತ್ವ ಅತ್ಯಂತ ವಿಶೇಷ


ಭಾರತೀಯ ಸಾಹಿತ್ಯ ಸುಂದರ ಉದ್ಯಾನವನದಲ್ಲಿ ವಿಕಸಿತ ಹೂವುಗಳು ರಾಮಾಯಣ ಹಾಗೂ ಮಹಾ ಭಾರತ ಅಂತ ತಿಳಿದವರು ಹೇಳ್ತಾರೆ.ಅದು ನೂರಕ್ಕೆ ನೂರರಷ್ಟು ಸತ್ಯ.ಈ ಹೂಗಳ ಘಮಕ್ಕೆ ಬೆಲೆಕಟ್ಟಲಾಗದು ಅಷ್ಟೇ.ರಾಮಾಯಣ ಹಾಗೂ ಮಹಾ ಭಾರತ ಕೇವಲ ಭಾರತೀಯರಿಗೆ ಮಾತ್ರವಲ್ಲ ವಿಶ್ವದ ಜನಸಮುದಾಯಕ್ಕೆ ಮಾರ್ಗದರ್ಶಿ ಆಗಿರುವ ಮಹತ್ತರ ಗ್ರಂಥ ಅನ್ನುವವರು ಇದ್ದರೆ,ಅದು ನಿಜ! ಈ ಎರಡು ಮಹಾಗ್ರಂಥಗಳಲ್ಲಿ ಕೆಲವು ವಿಶಿಷ್ಟವಾದ ಪಾತ್ರಗಳು ಇವೆ.ರಾಮಾಯಣದ ವಿಷಯಕ್ಕೆ ಬಂದರೆ ಶತ್ರುಘ್ನ ಅತ್ಯಂತ ವಿಭಿನ್ನ ಪಾತ್ರವಾಗಿ ಕಾಣ ಸಿಗುತ್ತಾನೆ.ಈತನ ವ್ಯಕ್ತಿತ್ವ ಅತ್ಯಂತ ವಿಶೇಷ.ರಾಮಾಯಣವನ್ನು ವಿವರವಾಗಿ ಪರಿಶೀಲಿಸಿದರೆ ಶತ್ರುಘ್ನ ರಾಮನ ದಾಸರಲ್ಲಿ ಅಗ್ರಮಾನ್ಯ ಸ್ಥಾನ ಪಡೆದುಕೊಳ್ಳು ತ್ತಾನೆ.ಶತ್ರುಗಳ ಹೃದಯದ ಬಡಿತ ನಿಲ್ಲಿಸುವಶ್ತು ಪರಾಕ್ರಮಿ.ಹೇಗೆ ಲಕ್ಷ್ಮಣ ರಾಮನ ಬೆನ್ನೆಲುಬಾಗಿ ಇದ್ದನೋ ಅದೇ ರೀತಿ ಶತ್ರುಘ್ನ ಭರತನ ನ್ನೆಲುಬಾಗಿ ಇದ್ದ ಸಹೋದರ ಶತ್ರುಘ್ನ.ಅಯೋಧ್ಯಕಾಂಡ ದಲ್ಲಿ ಉಲ್ಲೇಕ ಇರುವ ಒಂದು ಪ್ರಸಂಗ "ಭಾರತ ತನ್ನ ಸೋದರ ಮಾವನ ಮನೆಗೆ ಹೋಗುವಾಗ ತನ್ನನ್ನು ಅನುಸರಿಸುತ್ತ,ಶತ್ರುಸಂಹಾರ ಮಾಡುತ್ತಾ ಶತ್ರುಘ್ನ ಪ್ರೀತಿಯಿಂದ ಕರೆದೊಯ್ದನಂತೆ".ಅಣ್ಣ ತಮ್ಮಂದಿರ ಪ್ರೀತಿಗೆ ಉತ್ತಮ ಉದಾಹರಣೆ ದಶರತ ಕುಮಾರರು.ಲಕ್ಷ್ಮಣನಿಗೆ ರಾಮ ಅತ್ಯಾಪ್ತನಾದರೆ,ಶತ್ರುಘ್ನನಿಗೆ ಭರತ ಪರಮ ಪ್ರೀತಿಪಾತ್ರ.ಈ ಅನ್ನತಮ್ಮಂದಿರಿಬ್ಬರು ಸುಮಿತ್ರೆಯ ಮಕ್ಕಳೇ!ರಾಮ ಕಾಡಿಗೆ ಹೋದ ಸಂಗತಿ ತಿಳಿದು ಅತ್ಯಂತ ದುಖಿತನಾಗಿ ಶತ್ರುಘ್ನ ಇದಕ್ಕೆ ಕಾರಣಳಾದ ಮಂಥರೆಯನ್ನು ವಧೆ ಮಾಡಲು ಹೋಗುತ್ತಾನೆ,ಆದರೆ ಸ್ತ್ರೀ ಹತ್ಯೆ ಮಹಾಪಾಪ ಎಂದು ತಡೆಯುತ್ತಾನೆ ಭರತ .ಶ್ರೀರಾಮನನ್ನು ವನವಾಸದಿಂದ ಹಿಂತಿರುಗಿ ಬರುವಂತೆ ಭರತನ ಒಡಗೂಡಿ ಒತ್ತಾಯಿಸುವ ಕೆಲಸವನ್ನು ಸಹ ಶತ್ರುಘ್ನ ಮಾಡುತ್ತಾನೆ,ಅದು ಫಲಕಾರಿ ಆಗದೆ ಭರತನ ಜೊತೆಗೂಡಿ ಅಯೋಧ್ಯೆಗೆ ಹಿಂತಿರುಗುತ್ತಾನೆ ಈತ.ಅದೇ ರೀತಿ ಶ್ರೀರಾಮ ವನವಾಸ ಮುಗಿದ ಬಳಿಕ ಆತನನ್ನು ಬರಮಾಡಿಕೊಳ್ಳಲು ಸಿದ್ಧತೆ ಮಾಡುವುದು ಸಹ ಶತ್ರುಘ್ನನೆ,
ರಾಮನ ಪಟ್ಟಾಭಿಷೇಕ ಆದ ಕೆಲವು ಕಾಲದ ಬಳಿಕ ಲವಣಾಸುರ ಎನ್ನುವ ರಾಕ್ಷಸನ ಉಪಟಳ ತಡೆಯಲಿಕ್ಕೆ ಆಗುತ್ತಿಲ್ಲ ಎನ್ನುವ ಮಹರ್ಷಿಗಳ ಮೊರೆ ಕೇಳಿ ಶ್ರೀರಾಮ ಆ ರಾಕ್ಷಸನನ್ನು ಸಂಹರಿಸುವ ಹೊಣೆ ಭರತನಿಗೆ ನೀಡಿದಾಗ,ಹದಿನಾಲ್ಕು ವರ್ಷ ಜಟಾಧಾರಿಯಾಗಿ ಕಂದಮೂಲ ಸೇವಿಸುತ್ತ ಬದುಕಿದ ಭರತನು ಈ ಕೆಲಸಕ್ಕೆ ಬೇಡ ನಾನು ಈ ಕೆಲಸ ಮಾಡುತ್ತೇನೆ ಎಂದು ಹಿರಿಯ ಅಣ್ಣನ ಬಳಿ ವಿನಯದಿಂದ ಕೇಳಿ ,ಅನುಮತಿ ಪಡೆದು ಲವಣಾಸುರನ ಸಂಹಾರ ಮಾಡುತ್ತಾನೆ.ಈ ರಾಕ್ಷಸನ ಸಂಹಾರ ಮಾಡಿದ್ದನ್ನು ಕಂಡು ಶ್ರೀರಾಮ ಈತನಿಗೆ ಆ ರಾಜ್ಯ ಆಳುವಂತೆ ಹೇಳಿದಾಗ ಇಲ್ಲ ನನಗೆ ಬೇಡ ಹಿರಿಯರು ಇರುವಾಗ ನನಗೆ ರಾಜ್ಯದ ಪಾಲನೆಯ ಅಗತ್ಯ ಇಲ್ಲ ಎಂದು ವಿನಯವಾಗಿ ತಿರಸ್ಕರಿಸುತ್ತಾನೆ ಆತ.ಕೈಗೆ ಸಿಕ್ಕ ಅಧಿಕಾರವನ್ನು ಬೇಡವೆಂದ ಶತ್ರುಘ್ನ ರಾಮನ ಬಳಿ 'ತಂದೆ ಹದಿನಾಲ್ಕುವರ್ಷ ನಿಮ್ಮ ವಿಯೋಗದಿಂದ ನಾನುಅನುಭವಿಸಿದ ದುಃಖ ಹೇಳ ತೀರದ್ದು,ಪುನಃ ಅಧಿಕಾರದ ಹೆಸರಲ್ಲಿ ನನ್ನನು ದೂರ ಮಾಡದಿರಿ ಎಂದು ಬೇಡಿಕೊಳ್ಳುತ್ತಾನೆ ಶತ್ರುಘ್ನ.ಹೀಗೆ ಬದುಕಿರುವಷ್ಟು ಕಾಲ ರಾಮನನ್ನು ಸೇವಿಸುತ್ತ ಮೋಕ್ಷ ಹೊಂದುತ್ತಾನೆ.

Thursday 30 July 2009

ಡಿಶ್ಯುಂ ಡಿಶ್ಯುಂ ....!


ಸಾಮಾನ್ಯವಾಗಿ ಸ್ಟೇಡಿಯಂನಲ್ಲಿ ಪಂದ್ಯಗಳನ್ನು ವೀಕ್ಷಿಸುವಾಗ ಎರಡು ತಂಡಗಳಿಗೂ ಅವರದೇ ಆದ ಅಭಿಮಾನಿ ವಲಯ ಇರುತ್ತಾರೆ,ಅವರ ಫೆವರೆಟ್ ಕ್ರೀಡಾಪಟುಗಳಿಗೆ ಜಯಕಾರ ಹಾಕಿ ಪ್ರೋತ್ಸಾಹ ನೀಡುವುದು ಸಾಮಾನ್ಯ.ಕೇವಲ ನಿರ್ದಿಷ್ಟ ಪಂದ್ಯಗಳಿಗೆ ಇಂತಹ ಪ್ರೋತ್ಸಾಹ ಸಿಕ್ಕುತ್ತೆ ಅಂತೇನೂ ಇಲ್ಲ,ಕ್ರೀಡಾಭಿಮಾನಿಗಳು ಇರುವ ತನಕ ಸಿಳ್ಳೆ,ಕಿರುಚಾಟ,ಕೂಗಾಟದ ಸದ್ದು ಇದ್ದೆ ಇರುತ್ತದೆ ಆಟದ ಬಯಲಲ್ಲಿ.ಇದು ಕ್ರೀಡಾಪಟುಗಳಲ್ಲಿ ಉತ್ಸಾಹವನ್ನು ಹೆಚ್ಚು ಮಾಡಿ ಅವರು ಮತ್ತಷ್ಟು ಉತ್ಸಾಹದಿಂದ ಆತ ಮುಂದುವರೆಸುತ್ತಾರೆ.ಇಂತಹ ಮನಸ್ತತ್ವ ಪಕ್ಷಿಗಳಲ್ಲೂಇದೆಯೆನ್ನುವ ಸಂಗತಿಯನ್ನು ವಿಜ್ಞಾನಿ ಗಳು ಕಂಡು ಹಿಡಿದಿದ್ದಾರೆ.ಅದು ಯಾವಾಗ ಗೊತ್ತೇ? ಎರಡು ಪಕ್ಷಿಗಳಲ್ಲಿ ದಿಷ್ಯುಂ ದಿಷ್ಯುಂ ....! ಆರಂಭ ಆದಾಗ! ಗುಂಪು ಗುಂಪಾಗಿ ಬದುಕ ಸಾಗಿಸುವ ಪಕ್ಷಿಗಳಲ್ಲಿ ಇಂತಹ ವರ್ತನೆ ಕಾಣ ಸಿಗುತ್ತದೆ ಅಂತ ಲಂಡನ್ಗೆ ಸೇರಿದ ವಿಜ್ಞಾನಿಗಳು ತಿಳಿಸಿದ್ದಾರೆ.ಇವರು ದಕ್ಷಿಣ ಆಫ್ರಿಕಾದಲ್ಲಿ ಕಾಣಸಿಗುವ ಗ್ರೀನ್ ವುಡ್ ಹೌಸ್ ಅನ್ನುವ ಪಕ್ಷಿಗಳ ಮೇಲೆ ನಡೆಸಿದ ಅಧ್ಯಯನದಿಂದ ಈ ಸಂಗತಿಯನ್ನು ಕಂಡು ಹಿಡಿದ್ದಾರಂತೆ! ಹನ್ನೆರಡು ಪಕ್ಷಿಗಳ ಒಂದು ವೃಂದ ಹೊಂದಿರುತ್ತದೆ,ಅವುಗಳಲ್ಲಿ ಒಂದು ಪಕ್ಷಿ ಲೀಡರ್ರು! ಮೊತ್ತೊಂದು ಗುಂಪಿನ ಪಕ್ಷಿಗಳು ಆಹಾರಕ್ಕಾಗಿಯೋ,ಮತ್ತೆ ಇನ್ಯಾವುದೋ ವಿಷಯಕ್ಕಾಗಿಯೋ ಕಿರಿಕ್ ಮಾಡಿದರೆ ಲೀಡರ್ ಸುಮ್ನೆ ಇರೋಕೆ ಆಗಲ್ವಲ್ವ,ಸರಿ ಹೊಡೆದಾಟ ಆರಂಭ.ಆಗ ತಮ್ಮ ನಾಯಕನನ್ನು ಬೆಂಬಲಿಸಲು ಇವುಗಳು ಕಿರುಚಾಡಲು ಶುರು ಮಾಡುತ್ತದಂತೆ.ಒಂದು ವೇಳೆ ನಾಯಕ ಓಡಿ ಹೋದ್ರೆ ಆಗ ಇವುಗಳ ಸದ್ದು ಅಡಗುತ್ತದೆಯಂತೆ! ಎಷ್ಟು ವಿಚಿತ್ರ!!

Wednesday 29 July 2009

ಜಾಣ ಸಂಕುಲಗಳು!

ಕಾಗೆ ಮಾನವನ ಜೊತೆ ವಾಸಿಸುವ ಪಕ್ಷಿ.ಅದು ತುಂಬ ಬುದ್ಧಿ ಇರುವ ಪಕ್ಷಿ ಎಂದು ನಮಗೆ ಗೊತ್ತೇ ಇದೆ.ಈ ಕಾಗೆ ಚಿಕ್ಕ ಹಾಗೂ ತೆಳುವಾದ ವೈರನ್ನು ಸಂಗ್ರಹಿಸಿ ಇಡುತ್ತದೆ,ಅದನ್ನು ತನಗೆ ಬೇಕಾದ ಆಕಾರಕ್ಕೆ ಬದಲಾಯಿಸಿ ನಂತರ ಮರದ ದಿಮ್ಮಿ,ಬಿಲಗಳಲ್ಲಿ ಈ ವೈರನ್ನು ತೂರಿಸಿ ಕ್ರಿಮಿ ಕೀಟಗಳನ್ನು ಎಳೆದು ತಿನ್ನುತ್ತದೆ.ಈ ಕಂಬಿಯನ್ನು ಅದು ಸದಾ ತನ್ನ ಜೊತೆ ಎಲ್ಲ ಕಡೆಯೂ ಕೊಂಡೊಯ್ಯುತ್ತದೆಯಂತೆ.!!
ಹೆರಾನ್

ಜಪಾನ್ ದೇಶದಲ್ಲಿ ವಾಸ ಮಾಡುವ ಹೆರಾನ್ ಅನ್ನುವ ಪಕ್ಷಿ ತನ್ನ ಆಹಾರ ಹೊಂಚು ಹಾಕಿ ಪಡೆಯುವುದು ಹೇಗೆ ಗೊತ್ತೇ? ಚಿಕ್ಕ ಚಿಕ್ಕ ಬೀಜಗಳನ್ನು,ಪುಟ್ಟ ಕ್ರಿಮಿ ಕೀಟಗಳನ್ನು ತಂದು ನೀರಿನ ಮೇಲೆ ಹಾಕುತ್ತದೆ.ಆಗ ನೀರಿನ ಒಳಗೆ ಇರುವ ಪುಟ್ಟ ಪುಟ್ಟ ಮೀನುಗಳು ಮೇಲೆ ಬರುತ್ತಲ್ಲ ಅವುಗಳನ್ನು ತಿನ್ನಲು,ತಕ್ಷಣ ಈ ಪಕ್ಷಿ ಲಬಕ್ ಅಂತ ಮೀನುಗಳನ್ನು ಹಿಡಿದು ಹೊಟ್ಟೆ ತುಂಬಿಸಿಕೊಳ್ಳುತ್ತದೆ.
ಆಟರ್
ಸಮುದ್ರದಲ್ಲಿ ಆಟರ್ ಅನ್ನುವ ಜೀವಿ ವಾಸ ಮಾಡುತ್ತದೆ.ಇದು ತನ್ನ ಹೊಟ್ಟೆಯನ್ನು ಡೈನಿಂಗ್ ಟೇಬಲ್ನಂತೆ ಬಳಸುತ್ತದೆ.ಸಮುದ್ರದಲ್ಲಿ ಹಿಡಿದ ಚಿಪ್ಪಿರುವ ಪ್ರಾಣಿಗಳನ್ನು ತನ್ನ ಹೊಟ್ಟೆ ಮೇಲೆ ಇಟ್ಟು ಕೈಯ್ಯಲ್ಲಿ ಹಿಡಿದು ಬಾಯಲ್ಲಿ ಕಲ್ಲು ಎತ್ತಿಕೊಂಡು ಅದನ್ನು ಒಡೆದು ಅದರೊಳಗೆ ಇರುವ ಜೀವಿಗಳನ್ನು ಭಕ್ಷಿಸಿ ಹೊಟ್ಟೆ ತುಂಬಿಸಿ ಕೊಳ್ಳುತ್ತದೆಯಂತೆ

ಪಕ್ಷಿಗಳಲ್ಲಿ ಇಂತಹ ಬುದ್ಧಿವಂತಿಕೆ ಇಲ್ಲ ಅಂತೇನೂ ಇಲ್ಲ.ಫೆಸಿಫಿಕ್ ಮಹಾ ಸಾಗರದಲ್ಲಿ ಇರುವ ಗಳ ಪಗಾಸ್ ದ್ವೀಪದಲ್ಲಿ ಇರುವ ಮರ ಕುಟುಕ ಎನ್ ಮಾಡುತ್ತೆ ಗೊತ್ತೇ? ಇದು ಗಿಡಗಳ ಒಣ ಕಡ್ಡಿ ಗಳನ್ನೂ ಶೇಖರಿಸಿ ,ಬಳಿಕ ಅದರ ಕೊನೆಯನ್ನು ಚೂಪು ಮಾಡುತ್ತದೆ.ಎಲ್ಲಿ ಅಂತೀರ? ಕಲ್ಲಿನ ಮೇಲೆ,ಬಳಿಕ ಅದನ್ನು ತನ್ನ ಕೊಕ್ಕಿಂದ ಹಿಡಿದು ಬಿಲ,ಇನ್ನು ಹಲವು ಕಡೆ ವಾಸಿಸುವ ಕ್ರಿಮಿಕೀಟಗಳು ಇರುವ ಕಡೆ ಈ ಕಡ್ಡಿಯನ್ನು ತೋರಿಸುತ್ತದೆ,ಬಳಿಕ ನಿಧಾನವಾಗಿ ತೆಗೆದು ಆ ಕ್ರಿಮಿಕೀಟಗಳನ್ನು ತಿಂದು ಹೊಟ್ಟೆ ತುಂಬಿಸಿ ಕೊಳ್ಳುತ್ತದೆ.

Tuesday 28 July 2009

ಇವುಗಳ ಆಯುಧಗಳು!


ಚಿಂಪಾಂಜಿ ಗಳು ಇರುವೆ ,ಗೆದ್ದಲು ರೀತಿಯ ಹುಳು ಹುಪ್ಪಟೆಗಳನ್ನು ಹಿಡಿಯುವುದು ಹೇಗೆ ಗೊತ್ತೇ? ಸಣ್ಣ ಬಿಲದ ರೀತಿ ಇರುವ ಸ್ಥಳ ದ ಬಳಿ ಬಂದು ಒಂದು ಚಿಕ್ಕ ಕಟ್ಟಿ ಅದರೊಳಗೆ ತೂರಿಸಿ ಇಡುತ್ತದೆ ಸ್ವಲ್ಪ ಹೊತ್ತಾದ ಬಳಿಕ ಇರುವೆಗಳು ಕಡ್ಡಿಗೆ ಅಂಟಿ ಕೊಳ್ಳುತ್ತದಲ್ಲ,ಆಗ ಅದನ್ನು ಬಾಯಲ್ಲಿ ಇತ್ತು ಕಚ ಕಚನೆ ಚಪ್ಪರಿಸುತ್ತಾ ತಿನ್ನುತ್ತದೆ.ವಾಟ್ ಅನ್ ಐಡಿಯ ಸರ್ ಜಿ!!
ಉರಂಗಟಾನ್


ಉರಂಗಟಾನ್ ಹಾಗೂ ಚಿಂಪಾಂಜಿ ತಮ್ಮ ರಕ್ಷಣೆಗಾಗಿ ಕೆಲವು ಆಯುಧಗಳನ್ನೂ ಸಿದ್ಧ ಮಾಡಿಕೊಂಡು ಇರುತ್ತವೆ,ಕಲ್ಲು,ಕಟ್ಟಿಗೆಯನ್ನು ಚೂಪು ಮಾಡಿರುತ್ತದೆ.ಹೀಗೆ ಸುಮಾರು ಐವತ್ತು ನಾಲ್ಕು ರೀತಿಯ ಆಯುಧಗಳನ್ನು ರೆಡಿ ಇಟ್ಟುಕೊಂಡಿರುತ್ತದೆ.ಹೊಳೆ,ನದಿ ದಾಟ ಬೇಕಾದ ಸಂದರ್ಭ ಒದಗಿದರೆ ಅವುಗಳು ತಮ್ಮ ಕೈಲಿ ಕಟ್ಟಿಗೆ ಹಿಡಿದು ನೀರಲ್ಲಿ ಬಿತ್ತು ನಂತರ ನಡೆಯುತ್ತದೆ,ಹೀಗೆ ಅದು ಆಳ ಕಂಡು ಹಿಡಿಯುತ್ತದೆ!
ಆಸ್ಟ್ರಿಚ್ ಮೊಟ್ಟೆ
ವಿಶ್ವದಲ್ಲಿರುವ ಪಕ್ಷಿ ಸಂಕುಲದಲ್ಲಿ ಆಸ್ಟ್ರಿಚ್ ಪಕ್ಷಿಯ ಮೊಟ್ಟೆ ತುಂಬಾ ದೊಡ್ಡದು.ಬೇರೆ ಪಕ್ಷಿಗಳ ಮೊಟ್ಟೆಯಂತೆ ಇದನ್ನು ಸುಲಭವಾಗಿ ಒಡೆಯಲಾಗದು.ಆದ ಕಾರಣ ಈಗಿಪ್ತ್ ದೇಶದ ಒಂದು ಪಕ್ಷಿ ಏನು ಮಾಡುತ್ತೆ ಗೊತ್ತೇ? ಈ ಮೊಟ್ಟೆ ಒಡೆಯಲು ತನ್ನ ಕೊಕ್ಕಿನ ತುದಿಗೆ ಕಲ್ಲನ್ನು ಸಿಕ್ಕಿಸಿ ಕೊಳ್ಳುತ್ತದೆ.ಅದರಿಂದ ಮೊಟ್ಟೆ ಒಡೆದು ರಸ ಹೀರುತ್ತದೆ.ಅದೇ ರೀತಿ ಈಜಿಪ್ಟಿನಲ್ಲಿರುವ ಮುಂಗುಸಿಗಳು ಮೊಟ್ಟೆಯನ್ನು ವೆರದು ಕಾಲುಗಳ ನಡುವೆ ಇತ್ತು ಬಂಡೆಗೆ ಒಡೆದು ಅದರಲ್ಲಿರುವ ರಸವನ್ನು ಸೇವಿಸುತ್ತದೆ.ಎಷ್ಟು ಆಶ್ಚರ್ಯಅಲ್ವ!

Monday 27 July 2009

ಉದರದಲ್ಲಿ ಚೀಲ!

ಕೋತಿಯ ಹೆಸರನ್ನು ಪಡೆದಿದೆ,ಗೂಡು ಹೊಂದಿದೆ,ಹೊಟ್ಟೆಯಲ್ಲಿ ಚೀಲ ಇದೆ ಆದರೆ ಇದು ಕೋತಿಯಾಗಲಿ,ಪಕ್ಷಿ ಆಗಲಿ ಇಲ್ಲವೇ ಕಾಂಗರೂ ಅಗಲಿ ಅಲ್ಲವೇ ಅಲ್ಲ.ಆದರೆ ವಿಶ್ವದಲ್ಲಿ ಇರುವ ಅಪರೂಪದ ಪ್ರಾಣಿಗಳಲ್ಲಿ ಇದೂ ಒಂದಾಗಿದೆ.ಸಾಮಾನ್ಯವಾಗಿ ನಮಗೆ ತಿಳಿದಿರುವ ಮಟ್ಟಿಗೆ ಪಕ್ಷಿ ಗೂಡು ಕಟ್ಟುತ್ತದೆ.ಆದರೆ ಕೋತಿ ಗೂಡು ಕಟ್ಟಿರುವುದನ್ನು ಕಂಡಿದ್ದೀರ? ಇಲ್ಲವೇ ಕೇಳಿದ್ದೀರಾ? ಅಂತಹ ವಿಶೇಷ ಜೀವಿ ಹೆಸರು ಲಿಟಲ್ ಮೌಂಟನ್ ಮಂಕಿ.ಮಂಕಿ ಎಂದು ಹೆಸರು ಇದ್ದ ಮೇಲೆ ಅದು ಕೋತಿ ಆಗಿರ ಬೇಕಿಲ್ಲ,ಏಕೆ ಅಂತ ಅಂದರೆ ಅದರ ನಿಜವಾದ ಹೆಸರು ಮಾನಿಟೋ ಡೆಲ್ಮಾಂಟೆ .ಇದನ್ನು ಇನ್ನು ಮುದ್ದಾದ ಹೆಸರಲ್ಲಿ ಕರೀತಾರೆ,ಅದೇ ಕೊಲೋಕೊಲೋ .ಇದರ ಬಗ್ಗೆ ಇನ್ನು ಆಸಕ್ತಿಕರ ಸಂಗತಿಗಳು ಇವೆ.
ಇದು ಆಸ್ಟ್ರೇಲಿಯ ವಾಸಿ ಕಾಂಗರೂ ಸಮೀಪದ ನೆಂಟ ಗೊತ್ತೇ.ಇದಕ್ಕೊ ಕಾಂಗೂರು ವಿನಂತೆ ಉದರದಲ್ಲಿ ಚೀಲ ಇದೆ.ಇಂತಹ ಜೀವಿಗಳನ್ನು ಮಾರ್ಸುಪಿಯಲ್ಸ್ ಎಂದು ಕರೆಯುತ್ತಾರೆ.ಆಕುಟುಂಬಕ್ಕೆ ಈ ಮಾಂಟೆ ಸೇರಿದೆ.ಆದರೆ ಇದು ಇಲಿಗಿಂತ ಸ್ವಲ್ಪ ದೊಡ್ದಗಾತ್ರ ಪಡೆದಿದೆ ಅಷ್ಟೇ.ಸಾಮಾನ್ಯವಾಗಿ ಗಿಡ-ಮರಗಳಲ್ಲಿ ವಾಸಿಸುವ ಮಾಂಟೆ ಕಟ್ಟುವ ಗೂಡುಗಳು ವಿಶೇಷವಾಗಿ ಇರುತ್ತವೆ.ಒಂದರ್ಥದಲ್ಲಿ ಇದು ಗೋಲಾಕಾರದಲ್ಲಿ ಗೂಡು ಕಟ್ಟುತ್ತದೆ. ಇದು ಮುಂದೆ ತನ್ನ ಮಕ್ಕಳಿಗಾಗಿ ಕಟ್ಟಿಡುವ ಮನೆಯಲ್ಲ,ಬದಲಿಗೆ ಚಳಿಗಾಲದಲ್ಲಿ ತನ್ನ ರಕ್ಷಣೆಗೆ ಸಿದ್ಧ ಮಾಡಿಕೊಳ್ಳುವ ಸುರಕ್ಷಿತ ಜಾಗ.ಇದು ನಾಲ್ಕರಿಂದ ಹದಿನಾಲ್ಕು ಮಕ್ಕಳನ್ನು ಹೆರುತ್ತದೆ.ತನ್ನ ಉದರದಲ್ಲಿ ಇರುವ ಚೀಲದಲ್ಲಿ ಇಟ್ಟುಕೊಂಡು ಸಂರಕ್ಷಿಸುತ್ತದೆ.
ಚಳಿಗಾಲದಲ್ಲಿ ಆಹಾರಕ್ಕಾಗಿ ಕಷ್ಟ ಪಡುವುದನ್ನು ತಪ್ಪಿಸಿಕೊಳ್ಳಲು ಇದು ತನ್ನ ದೇಹದಲ್ಲಿ ಮೊದಲೇ ಶೇಖರಿಸಿ ಇಟ್ಟುಕೊಂಡಿರುವ ಕೊಬ್ಬನ್ನು ಆ ಸಮಯದಲ್ಲಿ ಬಳಸಿ (ಕರಗಿ ಇದನ್ನು ರಕ್ಷಿಸುತ್ತದೆ) ಜೀವ ಉಳಿಸಿಕೊಳ್ಳು ತ್ತದೆ.ಈ ಕೊಬ್ಬು ಎಲ್ಲಿರುತ್ತದೆ ಗೊತ್ತೇ? ಅದರ ಬಾಲದಲ್ಲಿ.ಅನೇಕ ವೃಕ್ಷ ಸಂಪತ್ತನ್ನು ರಕ್ಷಿಸುವಲ್ಲಿ ಈ ಪುಟ್ಟ ಪ್ರಾಣಿ ತುಂಬಾ ಸಹಾಯಕಾರಿ .ಡೀ ಗ್ಲಿರೈಡ್ಸ್ ಎನ್ನುವ ಮರಗಳ ಹಣ್ಣುಗಳನ್ನು ಇದು ಸೇವಿಸುತ್ತದೆ.ಇವು ಬಿಸಾಡಿದ ಬೀಜಗಳಿಂದ ಈ ಗಿಡಗಳ ಹುಟ್ಟಿಗೆ ಕಾರಣ ಆಗ್ತಾ ಇದೆಯಂತೆ.ಈ ರೀತಿ ವೃಕ್ಷ ಸಂಪತ್ತಿನ ಬೆಳವಣಿಗೆಗೆ ಕಾರಣ ಆಗಿರುವ ಈ ಮಾಂಟೆ ಮಾಂಸಹಾರಿಯೂ ಆಗಿದೆ.ಏನೇ ಇರಲಿ ಈ ಪುಟ್ಟ ಪ್ರಾಣಿಗೆ ಮಾತ್ರ ಮುರೈನ್ ರಾಟ್ ಎನ್ನುವ ಪ್ರಾಣಿಯನ್ನು ಕಂಡರೆ ಮಾತ್ರ ಜೀವ ಪುಕಪುಕ!

Wednesday 1 July 2009

ರಕ್ಕಸಗಾತ್ರದ ಇಲಿ!

ಮೂಷಿಕವಾಹನ ವಿನಾಯಕ ದೇವನದು .ಆತನಿಂದ ಆ ಪುಟ್ಟ ಪ್ರಾಣಿಗೆ ಮಾನ್ಯತೆ ಸಿಕ್ಕಿದೆ ನಮ್ಮ ಬದುಕಲ್ಲಿ. ಸಾಮಾನ್ಯವಾಗಿ ಜನರಿಗೆ ಇಲಿ ಅಂದ್ರೆ ಕಿರಿಕಿರಿ ಬೇಸರ.ಬಿಳಿ ಇಲಿ ತನ್ನ ಬಣ್ಣದ ಕಾರಣದಿಂದ ಕೆಲವು ಜನರ ಮೆಚ್ಚುಗೆ ಗಳಿದೆ ಅಷ್ಟೇ.ಸಾಕಷ್ಟು ಜನರು ತಿಳಿದಿರುವಂತೆ ಇಲಿಗೆ ರಾಜಸ್ತಾನದ ಒಂದು ಸ್ಥಳದಲ್ಲಿ ಹೆಚ್ಚು ಮಾನ್ಯತೆ ಇದೆ.ಅದು ಮನೆ ಮಗನಿಗಿಂತ ಸರ್ವತಂತ್ರ ಸ್ವತಂತ್ರ.ಅದಕ್ಕೆ ಇಷ್ಟ ಬಂದಂತೆ ಇರಬಹುದು.ಸಾಮಾನ್ಯವಾಗಿ ನಮಗೆ ಇಲಿ ಹೆಚ್ಚು ಖುಷಿ ಕೊಡೋದು ಟಾಮ್ ಏನ್ ಜೆರ್ರಿ ಅನ್ನುವ ಕಾರ್ಟೂನ್ ಜೋಡಿಯಲ್ಲಿ. ಅದರಲ್ಲಿ ಇಲಿ ಹಾಗೂ ಬೇಕ್ಕಿನಾತ ಸದಾ ಸಂತಸ ನೀಡುತ್ತದೆ.ಅದರ ಆಟ,ತರಲೆತನ ಖುಷಿ ಕೊಡುತ್ತದೆ.ಇವೆಲ್ಲ ಈಗಿನ ವಿಷಯ,ಆದರೆ ನಾವು ಬೃಹತ್ ಗಾತ್ರದ ಇಲಿಗಳ ಬಗ್ಗೆ ತಿಳಿಯ ಬೇಕು ಅಂತ ಆಸೆ ಪಟ್ರೆ! ಇರಬೇಕಲ್ಲ ಅನ್ನುವ ಉತ್ರ ಎದುರಾಗುತ್ತದೆ.ಆದರೆ ಆಂಗ್ಲ ಹಾರರ್ ಕಥೆಗಳನ್ನು ಓದುವ ಅಭ್ಯಾಸ ಇರುವವರಿಗೆ ರಕ್ಕಸ ಇಲಿಗಳ ದರ್ಶನವನ್ನು ಲೇಖಕ ಕೊಡ್ತಾನೆ ಇರ್ತಾನೆ.
ಹತ್ತು ಅಡಿ ದೊಡ್ಡದಾದ ಶರೀರದಿಂದ ನೂರು ಕೆಜಿ ತೂಕ ಹೊಂದಿದ ಇಲಿಯ ಬಗ್ಗೆ ಹೇಳಲು ಹೊರಟರೆ ಅಬ್ಬ ಅಂತ ಅನ್ನಿಸುತ್ತದೆ ಅಲ್ವ! ಇಂತಹ ಇಲಿ ದಕ್ಷಿಣ ಅಮೆರಿಕದಲ್ಲಿ ಅಂತಹ ಇಲಿ ಇತ್ತು ಅದೂ ಸಾವಿರಾರು ವರ್ಷಗಳ ಹಿಂದೆ.ಒಬ್ಬ ವಿಜ್ಞಾನಿಗೆ ಇಲಿ ಆಕಾರದ ಒಂದು ಪಳಯುಳಿಕೆ ಸಿಕ್ಕಿತು.ಅದನ್ನು ಕಂಡು ಆತನಿಗೆ ವಿಸ್ಮಯ.ಇದು ವಿಶ್ವದ ಅತ್ಯಂತ ದೊಡ್ಡ ಇಲಿ ಎನ್ನುವ ಅಗ್ಗಳಿಕೆ ಪಡೆದುಕೊಂಡಿತು.ಏಕೆಂದರೆ ಈ ಇಲಿ ಆ ವಿಜ್ಞಾನಿ ಕೈಗೆ ಸಿಗುವ ಮೊದಲು ವೆನುಜುವಲ ದೇಶದಲ್ಲಿ ಸಿಕ್ಕ ಇಲಿ ಪ್ರಭೇದದ ಗುಂಪಿಗೆ ಸೇರಿದ ಪ್ರಾಣಿಯು ವಿಶ್ವದಲ್ಲಿ ಅತಿ ದೊಡ್ಡ ರೋಡೆ೦ಟ್ ಆಗಿತ್ತು.ಆದರೆ ಅದು ಈ ಇಲಿಯಿಂದ ಅದು ತನ್ನ ಮೊದಲ ಸ್ಥಾನ ಕಳೆದುಕೊಳ್ಳ ಬೇಕಾಗಿ ಬಂದಿದೆ.( ಈಗ ನಾನು ತಿಳಿಸುತ್ತಿರುವ ಈ ಇಲಿ ಸಹ ಸಿಕ್ಕು ವರ್ಷ ಆಗಿದೆ).ಇಷ್ಟು ಜೋರಾಗಿದ್ದರು ಪಾಪ ಪ್ರಾಣಿಗಳನ್ನು ಬೇಟೆ ಆಡ್ತಾ ಇರಲಿಲ್ಲ.ಅದರ ಊಟ? ಅನ್ನುವ ಪ್ರಶ್ನೆ ಉದ್ಭವ ಆಗೋದು ಸಹಜ. ಆದರೆ ಅದು ನೀರಲ್ಲಿ ಬೆಳೆಯುವ ಗಿಡಗಳು,ಹಣ್ಣುಗಳನ್ನು ಸೇವಿಸಿ ಬದುಕ್ತಾ ಇತ್ತಂತೆ! ಅಂದಂಗೆ ಅದರ ತೂಕ ಸರಿಸುಮಾರು ಮುನ್ನೂರು ಕಿಲೋಗಿಂತ ಹೆಚ್ಚಿದೆ ಅಂತಾರೆ ವಿಜ್ಞಾನಿಗಳು.
ಈ ಭಾರಿ ಇಲಿಯ ಹೆಸರು ಜೋಸೆಫೋಯಾರ್ಟಿಗೇಸಿಯಾ ಮೊನೆಸಿ .ಇದು ನಲವತ್ತು ವರ್ಷಗಳ ಹಿಂದೆ ಉರುಗ್ವೆ ನದಿ ತೀರದಲ್ಲಿ ವಾಸಿಸುತ್ತ ಇತ್ತಂತೆ.ಇಂತಹ ಬೃಹತ್ ಪ್ರಾಣಿಗಳು ಯಾವರೀತಿ ನಾಶ ಆಗಿರಬಹುದು ಎಂದು ಸಂಶೋಧಕರು ನಡೆಸಿದ ಸಂಶೋಧನೆಯಿಂದ ರಹಸ್ಯ ಹೊರ ಬಿದ್ದ ಸಂಗತಿ-ಆರು ಕೋಟಿ ವರ್ಷಗಳ ಹಿಂದೆ ದಕ್ಷಿಣ ಅಮೇರಿಕ ಒಂದು ದ್ವೀಪದಂತೆ ಇತ್ತಂತೆ.ಕ್ರಮೇಣ ಪನಾಮ ಭೂಭಾಗ ಮೇಲೆ ತೇಲಿದ ಕಾರಣ ಉತ್ತರ ಹಾಗೂ ದಕ್ಷಿಣ ಅಮೆರಿಕ ನಡುವೆ ದಾರಿ ಆಯಿತು.ಪರಿಣಾಮ ಕೆಲವು ಜೀವಿಗಳು ಉತ್ತರ ಅಮೆರಿಕಾದಿಂದ ದಕ್ಷಿಣ ಅಮೆರಿಕಕ್ಕೆ ವಲಸೆಬಂದವಂತೆ,ಇದು ಆ ಬೃಹತ್ ಇಲಿಗಳ ನಾಶಕ್ಕೆ ಕಾರಣ ಆಗಿರಬಹುದು ಎನ್ನುತ್ತಾರೆ ವಿಜ್ಞಾನಿಗಳು.

Saturday 27 June 2009

ನನಗೆ ಭಯ....!

ಇದು ತುಂಬ ಹಳೆಯ ವಿಷ್ಯ,ಆದರೆ ನಾನು ಈಗ ಅದರ ಬಗ್ಗೆ ಹೇಳೋಕೆ ಹೊರಟಿದ್ದೀನಿ.ಸಾಮಾನ್ಯವಾಗಿ ಭಯ ಎಲ್ಲರಲ್ಲೂ ಎಲ್ಲೋ ಒಂದು ಕಡೆ ಅವತು ಕುಳಿತಿರುವ ತರ್ಲೆ.ಕೆಲವರಿಗೆ ತನ್ನ ಪ್ರಭಾವ ಹೆಚ್ಚು ತೋರಿದರೆ,ಒಂದಷ್ಟು ಜನರ ಬಳಿ ತಗ್ಗಿಬಗ್ಗಿ ಇರುತ್ತದೆ ಆ ವಿಷ್ಯ ಬೇರೆ ! ಚಲನಚಿತ್ರ ಕಲಾವಿದರು ತೆರೆಯಮೇಲೆ ಹಾವನ್ನು ಹಿಡಿದು,ಹುಲಿಯನ್ನು ಹೊಡೆದು,ದೆವ್ವದೊಂದಿಗೆ ಬಡೆದಾಡಿದರು,ಮರೆಯಲ್ಲಿ ಅವರು ಕೆಲವು ವಿಷಯಗಳಿಗೆ ಭಯಭೀತರು!ಕೆಲವು ಸಿನಿಮಾಗಳಲ್ಲಿ ಹಿರೋಯಿನ್ ಒಲಿಬೇಕಾದ್ರೆ ನಮ್ ಹೀರೋ ಜಿರಳೆ ಹಿಡೀಲೆ ಬೇಕು ಅಂತಹ ಪರಿಸ್ಥಿತಿ! ನಮ್ಮ ಸ್ಯಾಂಡಲ್ ವುಡ್ಡಿನಲ್ಲಿ ತನ್ನ ಪ್ರತಿಭೆ ತೋರಿದ್ದ ನೆರೆಯ ರಾಜ್ಯದ ನಟಿ ಶ್ರೀದೇವಿ (ನವನಟಿ )ಗೆ ಹಲ್ಲಿ ಕಂಡ್ರೆ ಹೆದರಿ ಸಾಯೋ ಹಾಗೆ ಆಗುತ್ತಂತೆ ,ಅದೇ ರೀತಿ ಅದೇ ನಮ್ ಪುನಿತ್ ರಾಜ್ ಕುಮಾರ್ ಜೋಡಿ ಆಗಿದ್ದ ಮಲೆಯಾಳಂ ಕುಟ್ಟಿ ಮೀರ ಜಾಸ್ಮಿನ್ಗೆ ಸಹ ಹಲ್ಲಿ ಕಂಡ್ರೆ ಸಿಕ್ಕಾಪಟ್ಟೆ ಹೆದರಿಕೆ,ಅದೆಷ್ಟು ಅಂತ ಅಂದ್ರೆ ಕಿರ್ಚಾಡಿ...ಕಿರ್ಚಾಡಿ....! ಬ್ಯಾಡ ಮನೆಯವರ ಕಥೆ! ಇದೆ ವರ್ಗಕ್ಕೆ ಸೇರಿದ ಬಾಲಿವುಡ್ ಹೆಣ್ಣುಮಕ್ಕಳ ಬಗ್ಗೆ ಹೇಳೋದೇ ಆದ್ರೆ,ವಿದ್ಯಾಬಾಲನ್,ಪ್ರಿಯಾಂಕ ಚೋಪ್ರಾ,ಹಲ್ಲಿಪ್ರಿಯರು! ಆದರೆ ಮಾಧುರಿ ದೀಕ್ಷಿತ್ಗೆ ಜಿರಳೆ ಕಂಡ್ರೆ ಹೆದರಿಕೆಯಂತೆ!ಅಮಿಷ ಪಟೇಲ್,ಅಯೇಶ ತಕಿಯಾ,ಪರಿಸ್ಥಿತಿ ಸಹ ಹೀಗೆ ಇದೆ.ಹಲ್ಲಿ,ಜಿರಳೆ ನಂತರ ಸ್ಥಾನ ಪಡೆದುಕೊಳ್ಳುವುದು ಹಾವು....!
ಪ್ರಾಣಿಗಳ ವಿಷಯ ಹೀಗಾದ್ರೆ ಹೆಚ್ಚು ಜನರಿಗೆ ಹೆದರಿಕೆ ಉಂಟಾಗೋದು ದೆವ್ವಗಳನ್ನು ಕಂಡ್ರೆ.ದೆವ್ವದ ವಿಷಯಕ್ಕೆ ಬಂದ್ರೆ ಬಾಲಿವುಡ್ ದೆವ್ವಪ್ರಿಯ ರಾಮ್ಗೋಪಾಲ್ ವರ್ಮ ಜ್ಞಾಪಕಕ್ಕೆ ಬರ್ತಾರೆ.ಆತ ಸಹ ಸಿಕ್ಕಾಪಟ್ಟೆ ಹೆದರುಪುಕ್ಲ.ಆ ಹೆದರಿಕೆಯಿಂದ ದೂರ ಆಗಲು ಆತ ಜನ ಹೆದರುವ ಸಿನಿಮಾ ತೆಗೆಯುತ್ತಾನಂತೆ.ರಾಮುಗೆ ಕತ್ತಲು,ಒಂಟಿಯಾಗಿ ಪ್ರಯಾಣ,ಕಳ್ಳ-ಪೋಲೀಸ್ ಇಬ್ಬರನ್ನು ಕಂಡರೂ ಹೆದರಿಕೆಯಂತೆ!ಈತ ನಿರ್ಮಿಸಿದ ಸಿನಿಮಾ ನೋಡೋಕೆ ತುಂಬಾ ಹೆದರ್ತಾರಂತೆ ರಾಮು!ಬಿಂದಾಸ್ ನಟಿ ಬಿಪಾಸ ಬಸುಗೆ ಸಹ ಒಂಟಿಯಾಗಿ ಇರಲು,ದೆವ್ವಗಳನ್ನು ಕಂಡ್ರೆ ಭಯ....ಭಯ! ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ಗೆ ಅತಿ ಎತ್ತರದ ಕಟ್ಟಡದ ಮೇಲಿಂದ ಕೆಳಗೆ ನೋಡಲು ಸಿಕ್ಕಾಪಟ್ಟೆ ಹೆದರಿಕೆ.ರಿಸ್ಕ್ ಶಾಟ್ ಸಂದರ್ಭದಲ್ಲಿ ಆತ ಗಾಯತ್ರಿ ಮಂತ್ರವನ್ನು ಜಪಿಸುತ್ತಾನಂತೆ.ದೀಪಿಕಾ ಪಡುಕೋಣೆ ಸಹ ಇದೆ ಗುಂಪಿಗೆ ಸೇರಿದ್ದಾರೆ.ಶಾಲೆಯಲ್ಲಿ ಇದ್ದಾಗ ಎಲ್ಲರಿಗಿಂತ ಮೊದಲು ನಿಲ್ಲಲು,ಮಾತನಾಡಲು ಹೆದರಿಕೆ ಇತ್ತು ಇದು ತಬು ಪರಿಸ್ಥಿತಿ! ಎಗರೆಗರಿ ನಗುವ ನಿರೂಪಕ ಸಿದ್ದು ಗೆವ ಮಾತು ಆಡೋದು ಅಂದ್ರೆ ಅಷ್ಟಕಷ್ಟೇ.ಒಂಟಿತನ,ಸೋಲು,ಅಪನಿಂದೆ....! ಹಲವು ಕಾರಣಗಳು ಹೆದರಿಕೆಗೆ ಕಾರಣ ಆಗುತ್ತದೆ.ಆದ್ರೆ ಭಯ ನಿಜವಾಗಲು ಭಯ ಪಡಿಸುವ ವಿಷಯವೇ ತಾನೇ!

Thursday 25 June 2009

ನಮ್ಮ ಉನ್ನತಿಗಾಗಿ ಪ್ರಾರ್ಥನೆ

ಸಾಮಾನ್ಯವಾಗಿ ನಾವು ಅನೇಕ ರೀತಿಯ ಚಿಕಿತ್ಸಾ ವಿಧಾನದ ಬಗ್ಗೆ ಕೇಳಿ ಇರುತ್ತೇವೆ.ಕೆಲವು ಸರ್ತಿ ಅನುಭವದ ಮೂಲಕ ಅವುಗಳ ಫಲಿತಾಂಶ ತಿಳಿದೇ ಇರುತ್ತೇವೆ.ಆದರೆ ಪ್ರಾರ್ಥನಾ ಚಿಕ್ತಿಸೆ ಬಗ್ಗೆ ಎಷ್ಟು ಜನಕ್ಕೆ ತಿಳಿದಿದೆ?ಅದಕ್ಕೋ ಸಹ ಕೆಲವು ನಿಯಮಗಳನ್ನು ಅನುಸರಿಸ ಬೇಕು ಅಂತ ಹೇಳ್ತಾರೆ ತಜ್ಞರು.ಕ್ರಮಬದ್ಧ ಪದ್ದತಿಯಿಂದ ರೋಗಿಗಳು ರೋಗಮುಕ್ತರಾಗುತ್ತಾರೆ ಎಂದು ಸಹ ತಿಳಿಸಿದ್ದಾರೆ. ನಮ್ಮ ಶಾಸ್ತ್ರಗಳಲ್ಲಿ ಪ್ರಾರ್ಥನೆ ಮೂಲಕ ಮಹರ್ಷಿಗಳು ಚಿಕಿತ್ಸೆ ಮಾಡ್ತಾ ಇದ್ದರು ಅನ್ನುವ ಸಂಗತಿ ಗೊತ್ತೇ ಇದೆ.ಅದಕ್ಕೆ ಪೂರಕವಾದ ಪ್ರಮಾಣಗಳು ದೊರಕಿವೆ.ಯೇಸು,ಶಿರಡಿ ಸಾಯಿಬಾಬ,ರಾಮಕೃಷ್ಣ ಪರಮ ಹಂಸ ಮುಂತಾದ ಮಹಾನುಭಾವರು ಸ್ಪರ್ಶದ ಮೂಲಕ ರೋಗವನ್ನು ದೂರಮಾಡಿದ ಉದಾಹರಣೆಗಳು ಸಾಕಷ್ಟಿವೆ.ಇವೆಲ್ಲವೂ ಪ್ರಾರ್ಥನೆಯ ಮೂರ್ತ ರೂಪ ಅಂತಲೇ ಹೇಳ ಬೇಕು.ಪ್ರಾರ್ಥನೆ ಮಾಡುವವರ ದೇಹದಲ್ಲಿ ಕೆಲವು ರಾಸಾಯನಿಕ ಪರಿವರ್ತನೆಗಳು ನಡೆಯುತ್ತದೆ.ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಮನಸ್ಸು ನಿರ್ಮಲವಾಗಿ,ಸಕಾರಾತ್ಮಕ ವಾಗಿ ಆಲೋಚಿಸುವ ವ್ಯಕ್ತಿತ್ವ ಉಂಟಾಗುತ್ತದೆ.ಪ್ರಾರ್ಥನೆಗೆ ಎಲ್ಲದಕಿಂತ ಮುಖ್ಯವಾದುದು ಶ್ರದ್ಧೆ,ವಿಶ್ವಾಸ.ಚಂಚಲ ಮನಸಿನಿಂದ ಉತ್ತಮ ಫಲಿತಾಮ್ಶಕ್ಕೆ ಖೋತ ಬೀಳುತ್ತದೆ!ಪ್ರಾರ್ಥನೆಯ ವಿಶೇಷತೆ ಅಂತ ಅಂದ್ರೆ ಇದಕ್ಕೆ ಆಸ್ತಿಕ ಹಾಗೂ ನಾಸ್ತಿಕ ಅನ್ನುವ ಬೇಧ ಭಾವ ಇಲ್ಲ,ಎಲ್ಲರು ಇಷ್ಟಪಟ್ಟು ಮಾಡುವ ಒಂದು ಸಾರ್ವತ್ರಿಕ ಆರೋಗ್ಯ ರಕ್ಷಣಾ ವಿಧಾನವಾಗಿದೆ.
ಒಂದೊಂದು ಧರ್ಮದಲ್ಲಿ ಒಂದೊಂದು ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು ಮೂಲ ಉದ್ದೇಶದಲ್ಲಿ ಯಾವುದೇ ಭಿನ್ನತೆ ಇರದು.ಪ್ರಾರ್ಥನೆ ಅಂದರೆ ಕೆಲವರ ಪ್ರಕಾರ ಅವಸರವರವಾಗಿ ಮಾಡುವ ಕ್ರಿಯೆ.ಆದರೆ ಅದು ಆ ರೀತಿಯದ್ದಲ್ಲ,,ಸಹಜವಾಗಿ ಉದ್ಭವ ಆಗುವ ಪ್ರಕ್ರಿಯೆ!ಪ್ರಾರ್ಥನೆ ಪ್ರೇಮದ ಪರಮ ಉತ್ಕೃಷ್ಟ ರೂಪ ಆಗಿದೆ.'ಭಗವಂತಎಲ್ಲರಿಗೂ ಆರೋಗ್ಯ ನೀಡಪ್ಪ 'ಅಂದುಕೊಂಡರೆ ಸಾಕು ನಿಮ್ಮ ಆರೋಗ್ಯದಲ್ಲಿ ಮಹತ್ತರವಾದ ಬದಲಾವಣೆ ಸಿಗುತ್ತದೆ ಅಂತಾರೆ ತಜ್ಞರು!ಆದರೆ ಪ್ರಾರ್ಥನೆ ಮಾಡಲು ಮುಂಜಾನೆ ಅಥವಾ ಸಂಜೆ ಅತ್ಯಂತ ಸೂಕ್ತವಾದುದು.ಆ ಸಮಯದಲ್ಲಿ ಈಶ್ವರ ತತ್ವ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ.ಇದು ಸಹ ಗುರುವಿನ ಮೂಲಕ ಕಲಿಯ ಬೇಕಾದ ವಿದ್ಯೆ.ಗುರು ಇದರ ರಹಸ್ಯಗಳನ್ನು ಹೇಳಿಕೊಟ್ಟಾಗ ಸುಲಭ ರೀತಿಯಯಲ್ಲಿ ಏಕಾಗ್ರತೆ ಹೊ೦ದಬಹುದು .ಆದರೆ ಈ ಪ್ರಕ್ರಿಯೆಗೂ ಸಾಧನೆ ಅತ್ಯಗತ್ಯ!

Monday 25 May 2009

ಪೆಥಲಾಜಿಕಲ್ ಗ್ಯಾಮ್ಬ್ಲಿಂಗ್

ಈಗಷ್ಟೇ ಟ್ವೆಂಟಿ-20 ಮ್ಯಾಚ್ ಮುಗಿಯಿತು.ಅದರಿಂದ ಯಾರಿಗೆಷ್ಟು ಪ್ರಯೋಜನ ಆಗೋತ್ತೋ ಏನೋ ಗೊತ್ತಿಲ್ಲ,ಆದರೆ ಇಂತಹ ಪಂದ್ಯಗಳ ಆಟಗಾರರ ಮೇಲೆ ಕಟ್ಟುವ ಬೆಟ್ಟಿಂಗ್ ಹಾವಳಿ ಮಾತ್ರ ಸಿಕ್ಕಾಪಟ್ಟೆ ಜೋರಾಗಿ ಇರುತ್ತದೆ .ಈ ರೀತಿಯ ಬೆಟ್ಟಿಂಗ್ ಕಟ್ಟುವ ಅಭ್ಯಾಸಕ್ಕೆ ವೈದ್ಯಕೀಯ ಪರಿಭಾಷೆಯಲ್ಲಿ ಪೆಥಲಾಜಿಕಲ್ ಗ್ಯಾಮ್ಬ್ಲಿಗ್ ಎಂದು ಕರೆಯುತ್ತಾರೆ.ಇದು ಹೆಚ್ಚಾಗಿ ನಮಗೆ ಕ್ರೀಡಾ ಕ್ಷೇತ್ರದಲ್ಲೋ ಅಥವಾ ,ಕುದುರೆ ರೇಸ್ ನಲ್ಲಿಯೂ ಕಂಡು ಬರುತ್ತದೆ.ಇದೊಂದು ಮಾನಸಿಕ ವ್ಯಾಧಿ.ಈ ಸಮಸ್ಯೆಗೆ ಒಳಗಾದವರು ತಮ್ಮ ಹಿಂದಿನ ಅನುಭವಗಳನ್ನು ಮರೆತು ಹೋಗುತ್ತಾರಲ್ಲದೆ,ಪುನಃ ಹೊಸ ಯೋಜನೆಯ ತಯಾರಿಯತ್ತ ತಮ್ಮ ಗಮನ ಕೇಂದ್ರೀಕರಿಸುತ್ತಾರಂತೆ.ತಮ್ಮ ಮನಸ್ಸು ಖುಷಿಯಾಗಲು ಅವರು ಹೆಚ್ಚಿನ ಮೊತ್ತವನ್ನೇ ಖರ್ಚು ಮಾಡುತ್ತಾರೆ .ಮತ್ತೊಮ್ಮೆ ಇಂತಹ ಬೆಟ್ಟಿಂಗ್ ಕಡೆ ಕಣ್ಣೆತ್ತಿ ನೋಡಬಾರದು ಎಂದು ಸದಾ ನಿರ್ಣಯಗಳನ್ನು ತೆಗೆದುಕೊಂಡು ಅದನ್ನು ಪಾಲಿಸಲಾಗದೆ ವಿಫಲಗೊಳ್ಳುವುದುತನ್ನ ಇಂತಹ ಅಭ್ಯಾಸದಿಂದ .ಒಂದು ವೇಳೆ ಬಿಟ್ಟೆ ಬಿಡ ಬೇಕು ಎಂದು ಗಟ್ಟಿ ನಿರ್ಣಯ ತೆಗೆದುಕೊಂಡು ಬಳಿಕ ಅಶಾಂತಿಯಿಂದ ಎಗರಾದುವುದು,ಹಣಕ್ಕಾಗಿ ಮೋಸ,ವಂಚನೆ ಯತ್ತ ಕೈ ಹಾಕುವುದು.ಗ್ಯಾಮ್ಬ್ಲಿಂಗ್ ಕಾರಣದಿಂದ ಕೆಲಸ ಮಾಡುವ ಕಡೆ ಮತ್ತು ಸ್ನೇಹಿತರ ,ಆಪ್ತೇಷ್ಟರ ಬಳಿ ಸುಳ್ಳು ಹೇಳುವುದು.....! ಹೀಗೆ ಅನೇಕಾನೇಕ.ಇಂತಹ ಮನೋ ವ್ಯಾಧಿಗೆ ಗುರಿಯಾದ ವ್ಯಕ್ತಿಗಳಲ್ಲಿ ಈಗ ಲಕ್ಷಣಗಳು ಕಾಣಸಿಗುತ್ತದೆ.
ಗೆಲುವು :- ಗ್ಯಾಮ್ಬ್ಲಿಂಗ್ ನಲ್ಲಿ ಮೊದಲ ಬಾರಿ ದೊರೆತ ವಿಜಯವನ್ನು ದೊಡ್ಡದು ಮಾಡಿಕೊಂಡು ಸಂಭ್ರಮಿಸುವುದು.ನಂತರ ತಾವೆಷ್ಟು ಕ್ರೀಡಾ ನಿಪುಣರೆಂದು ಹೆಮ್ಮೆ ಪಡುವುದಲ್ಲದೆ,ಪ್ರತಿ ಸರ್ತಿ ಗೆಲುವು ತಮಗೆ ಕಟ್ಟಿ ಇಟ್ಟಿದ್ದು ಎಂದು ಕನಸು ಕಾಣುವುದು.
ಸೋತ ಮೊತ್ತ ಮತ್ತೆ ಪಡೆಯುವ ಪ್ರಯತ್ನ :-ತಾವು ಎಷ್ಟು ಹಣ ಕಳೆದುಕೊಂದಿದ್ದೆವೋ ಅದನ್ನು ಪುನಃ ಪಡೆಯುವತ್ತ ತಮ್ಮ ಗಮನ ನೆಟ್ಟಿರುತ್ತಾರೆ.ಪರಿಣಾಮ ಮತ್ತಷ್ಟು ಹಣದ ಹೂಡಿಕೆ.ಅಲ್ಲದೆ ಈಸರ್ತಿ ಅಷ್ಟೇ ಮತ್ತೆಂದಿಗೂ ಅದರತ್ತ ಸುಳಿಯೇ ಅನ್ನುವ ಆಶ್ವಾಸನೆ ......!

ನಿರಾಸೆ:-ಈ ರೀತಿಯ ಅಭ್ಯಾಸದಿಂದ ಹಣದ ಹೊಳೆ ಹರಿದು ಅವರ ಆರ್ಥಿಕ ಸ್ಥಿತಿ ಬತ್ತಿದ ನದಿಯಾಗುತ್ತದೆ.ಪರಿಣಾಮ ಚೆಕ್ ಬೌನ್ಸ್ !ತಮ್ಮ ಆಪ್ತರ ಸಹಾಯ ಪಡೆದು ಇವರು ಸಮಸ್ಯೆಯಿಂದ ಪಾರಾಗ ಬಹುದು,ಆದರೆ ಅದೇ ಚಟವಾಗಿ ಮಾರ್ಪಾಡಾಗುತ್ತದೆ.ಮೇಲೆ ತಿಳಿಸಿದ ಘಟ್ಟಗಳೂ ದಾಟಿದರೆ ಅವರ ಸ್ಥಿತಿ ದಮನೀಯವಾಗುತ್ತದೆ.ಯಾರ ಬಳಿಯೂ ಸಹಾಯ ಸಿಗದೇ ಡಿಪ್ರೆಶನ್ ಜೊತೆಯಾಗುತ್ತದೆ.ಆತ್ಮಹತ್ಯೆ ಮಾಡಿಕೊಳ್ಳುವ ಸಂಭವವು ಅಧಿಕವಾಗಿರುತ್ತದೆ.ಅಂತಹ ಸಮಯದಲ್ಲಿ ಆತ್ಮಹತ್ಯೆಗೆ ಶರಣಾಗುವ ಸಂಭವ ಇರುತ್ತದೆ.
ಚಿಕಿತ್ಸೆ:- ಉತ್ತಮ ಬಾಂಧವ್ಯ ಬೆಳೆಯುವುದರತ್ತ ಆದ್ಯತೆ ನೀದುದ್ವುದು.ಇಲ್ಲಿ ಕುಟುಂಬದ ಸದಸ್ಯರ ಪಾತ್ರ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದು ಕೊಳ್ಳುತ್ತದೆ..ಅವರನ್ನು ಕೆಲಸಕ್ಕೆ ಹೋಗುವಂತೆ ಪ್ರೋತ್ಸಾಹಿಸುವುದು.ಅವರನ್ನು ಮಾನಸಿಕ ತಜ್ಞರ ಬಳಿ ಕರೆದೊಯ್ಯುವುದು.ಅವರಿಂದ ಕೌನ್ಸಿಲಿಂಗ್ ಕೊಡಿಸುವುದು.....!
ನನ್ನ ಮಿತ್ರರೊಬ್ಬರು ಬೆಟ್ ಕಟ್ಟೋ ಗುಣ ಹೊಂದಿದ್ದಾರೆ.ಅವರಿಗೆ ಇವೆಲ್ಲ ಹೇಳಿದ್ದೇನೆ,ಆದರೆ ಆಟ ಸಾರಿ ಹೋಗಲ್ಲ ಅಂತ ಇನ್ನೊಬ್ಬ ಮಿತ್ರ ನನ್ನ ಬಳಿ ಬೆಟ್ ಕಟ್ಟಿದ್ದಾನೆ ನೋಡ್ ಬೇಕು ಯಾರು ಗೆಲ್ತೀವೋ ಅಂತ :-)

Saturday 9 May 2009

ವೇದಗಳಲ್ಲಿ ಇಂದ್ರ

ರಾಮಾಯಣ ಹಾಗು ಮಹಾ ಭಾರತ ಗಳಲ್ಲಿ ಇಂದ್ರನನ್ನು ತುಂಬಾ ಪರಾಕ್ರಮಶಾಲಿ ಎಂದು ಹಾಗೂ ಕಾಮುಕನೆಂದು ವರ್ಣಿಸಲಾಗಿದೆ.ಆದರೆ ವೇದಗಳಲ್ಲಿ ಈತನನ್ನು ಉದಾತ್ತಶಾಲಿ,ಪ್ರತಿಭಾವಂತ,ಶತ್ರು ಸಂಹಾರಕ ಎಂದು ವರ್ಣಿಸಲಾಗಿದೆ. ವೇದಗಳಲ್ಲಿ ಮುವ್ವತ್ಮೂರು ಕೋಟಿ ದೇವಿ ದೇವತೆಗಳ ವರ್ಣನೆ ಮಾಡಲಾಗಿದೆ .ಇದನ್ನು ಮೂರು ಭಾಗಗಳಾಗಿ ವಿಭಾಗಿಸಲಾಗಿದೆ. ದ್ಯು=ಆಕಾಶದಲ್ಲಿ ನೆಲೆಸಿರುವವರು,ದೇವತಾ=ಅಂತರಿಕ್ಷ(ಮಧ್ಯ),ಸ್ಥಳೀಯ ದೇವತೆ .ಅಂತರಿಕ್ಷ ದೇವತೆಗಳಲ್ಲಿ ಇಂದ್ರ ಅಗ್ರಮಾನ್ಯ.ಆರ್ಯರಿಗೆ ಇಂದ್ರ ಪ್ರಿಯನಾದ ದೇವತೆ.ಇಂದ್ರನನ್ನು ಸ್ತುತಿಸುವ ಇನ್ನೂರ ಐವತ್ತು ಶ್ಲೋಕಗಳು ( ಚಿಕ್ಕ-ದೊಡ್ಡ,ಎಲ್ಲವನ್ನು ಜೊತೆ ಸೇರಿಸಿದರೆ ಮುನ್ನೂರಾಗುತ್ತದೆ).ಶತ್ರು ಸಂಹಾರಕನಾದ ಇಂದ್ರನಿಗೆ ವಿಶೇಷ ಸ್ಥಾನ ಇದೆ.ವ್ರುತ್ತಾಸುರ,,ಶತ್ರುಪುರಿ,ಶಂಭಾರ....!ಇನ್ನು ಅನೇಕ ರಾಕ್ಷಸರನ್ನು ನಾಶ ಮಾಡಿದ ದೇವತೆ ಅನ್ನುವ ಅಗ್ಗಳಿಕೆ ಈತ ಹೊಂದಿದ್ದಾನೆ ಋಗ್ವೇದದಲ್ಲಿ .ಇಂದ್ರ ವಜ್ರಾಯುಧಡಿದ ಶತ್ರು ಸಂಹಾರ ಮಾಡಿದರೂ,ಆಗಾಗ ಆತ ಬಾಣ ಉಪಯೋಗಿಸಿ ಶತ್ರು ಸಂಹಾರ ಮಾಡುತ್ತಾನೆ.ಇಂದ್ರ ಬಾಣದಲ್ಲಿ ಯುದ್ಧ ಮಾಡಿದ ಬಗ್ಗೆ ಅಥರ್ವಣ ವೇದದಲ್ಲಿ ವರ್ಣನೆ ಇದೆ(19/13/4) . ಋಗ್ವೆದದಿಂದ ಹಿಡಿದು ಉಪನಿಷತ್ ತನಕ ಇಂದ್ರ ಶತ್ರುಸಂಹಾರಕ ಎಂದು ತಿಳಿಸಲಾಗಿದೆ.ವೈದಿಕ ಕಾಲದಲ್ಲಿ ಇಂದ್ರ ರಾಷ್ಟ್ರೀಯ ದೇವತೆಯಾಗಿ ಪೂಜಿಸಲ್ಪಡುತ್ತಿದ್ದ.ಈತ ಮಹಾ ಬುದ್ಧಿವಂತ ಎಂದು ಋಗ್ವೇದದಲ್ಲಿ ವರ್ಣಿಸುತ್ತದೆ.ಜನರ ಪ್ರಾಣ ರಕ್ಷಕ.....!ಹಲವಾರು ರೀತಿ ವರ್ಣಿಸಲಾಗಿದೆ.ಅಜೇಯ,ವೀರತೆ,ಸಾರ್ವಭೌಮತ್ವ ,ಜ್ಞಾನ ಇವೆಲ್ಲದರ ಅಧಿಪತಿ ಅನ್ನುವ ವರ್ಣನೆಯು ಇಂದ್ರನಿಗೆ ಗಿಟ್ಟಿದೆ.ಈ ಎಲ್ಲ ಕಾರಣದಿಂದ ಈತ ಸ್ವರ್ಗಕ್ಕೆ ರಾಜ ಹಾಗು ದೇವತೆಗಳ ಅಧಿಪತಿ. ಆದರೆ ಸಾಮಾನ್ಯವಾಗಿ ಪೌರಾಣಿಕ ಚಲನಚಿತ್ರಗಳಲ್ಲಿ ಹಾಗು ಪೌರಾಣಿಕ ಇಂದ್ರ ಋಗ್ವೇದದಲ್ಲಿ ತಿಳಿಸಿರುವಷ್ಟು ಬುದ್ಧಿವಂತನಲ್ಲ ... !ಜೊತೆಗೆ ವಿಲಾಸಿ,ಹೀಗೆ ಹತ್ತು ಹಲವಾರು ರೀತಿಯಲ್ಲಿ ಆತನನ್ನು ತೋರಿಸುತ್ತಾರೆ.ಏನಾದರು ಇಂದ್ರ ವೇದಗಳ ಕಾಲದ ಅಧಿಪತಿ ಅನ್ನುವುದನ್ನು ಮಾತ್ರ ಒಪ್ಪಿಕೊಳ್ಳಲೇ ಬೇಕು.

Tuesday 7 April 2009

ನೀನು ನೀನಾಗಿರು

ಗೆಳತಿ,
ಕಳೆದೆರಡು ದಿನದಿಂದ ನಾನು ನಿನ್ನ ಪತ್ರವನ್ನು ಜೊತೆಯಲ್ಲಿ ಇಟ್ಟುಕೊಂಡು ಮೌನವಾಗಿ ಕುಳಿತು ಬಿಟ್ಟಿದ್ದೇನೆ.ಏನು ಮಾಡೋದಕ್ಕೂ ಹೊಳಿತಾ ಇಲ್ಲ.ಅಷ್ಟು ಜಡತ್ವ.ನಿನ್ನ ಪರಿಸ್ಥಿತಿಯನ್ನು ನಾನು ಊಹಿಸಿಕೊಳ್ಳಬಲ್ಲೆ.ನಿನ್ನ ದುಃಖ ನನಗೆ ಅರ್ಥ ಆಗಿದೆ.ತಕ್ಷಣ ಬಂದು ನಿನ್ನ ಕಣ್ಣೀರನ್ನು ಒರೆಸುವ ಆಸೆ ಆದರೆ ನಾನು ಹೆಲ್ಪ್ ಲೆಸ್.ನನ್ನ ಕೆಲಸದ ರೀತಿಯೇ ಅಂತಹುದು.ಸಿಯಾಚಿನ್ ಗಡಿಯಲ್ಲಿ ನಾನು ಕರ್ಣಾಟಕದ ಮೂಲೆಯಲ್ಲಿ ನೀನೂ,ಆದರೆ ಮನಸ್ಸುಗಳಿಗೆ ಅಂತರ ಇದೆಯಾ?ನಿನ್ನ ಪ್ರೀತಿ ಒಡೆದು ಹೋಯ್ತು ಅಂತ ಬರೆದಿದ್ದಿಯಲ್ಲ ಆ ಅಂಶವೇ ನನ್ನನ್ನು ಕಂಗಾಲು ಮಾಡಿದೆ.ಅವನನ್ನು ಅದೆಷ್ಟು ಪ್ರೀತಿಸ್ತಾ ಇದ್ದೆ,ನಿನ್ನ ಪತ್ರದ ಒಂದೊಂದು ಅಕ್ಷರ ಈಗಲೂ ಅವನನ್ನು ಮರೆತಿಲ್ಲ ಅಂತ ಹೇಳ್ತಾ ಇದೆ.ನಿಜವಾ? ಮರೆಯೋದು ಸುಲಭ ಅಲ್ಲ ಅಂತ ನಂಗೆ ಗೊತ್ತು,ಗೆಳತಿ ನೀನೂ ಇನ್ನು ಅವನನ್ನು ಪ್ರೀತಿಸ್ತಾನೆ ಇದ್ದೀಯ ಹಾಗಂತ ನಂಗೆ ಈ ಪತ್ರ ಓದಿದಾಗ ಪದೇಪದೆ ಮನಸ್ಸಿಗೆ ಹೊಳೆದಿದೆ. ನಿಜವಾ ? ಯಾಕೋ ಗೊತ್ತಿಲ್ಲ ಏನು ಹೇಳ ಬೇಕು ಅಂತ ತೋಚ್ತಾನೆ ಇಲ್ಲ.ನಿನಗೆ ಮೋಸ ಮಾಡಿದ ಆ ನಿನ್ನ ಹಳೆಯ ಮಧುರ ನೆನಪಾದ ಅವನನ್ನು ಎಲ್ಲರ ಮುಂದೆ ಕ್ರೂರವಾಗಿ ನಿಂದಿಸ ಬೇಡ ಕಣೆ ಪ್ಲೀಸ್,ನೀನೂ ಇಷ್ಟು ದಿನ ಪ್ರಾಂಜಲವಾಗಿ ಪ್ರೀತಿಸಿದ್ದಕ್ಕೆ ಅವಮರ್ಯಾದೆ ಮಾಡಿದಂತೆ ಆಗುತ್ತದೆ.ನಿನ್ನಂತಹ ಅಪರೂಪದ ರತ್ನ ಪಡೆಯಲು ಆತನಿಗೆ ಲಕ್ ಇಲ್ಲ .ನೀನೂ ಅವನನ್ನು ಪ್ರೀತಿಸು ಅಂತ ಹೇಳಲ್ಲ,ದ್ವೇಷಿಸೋದು ಬೇಡ ಅಂತ ಹೇಳೋಕೆ ಇಷ್ಟ ಪಡ್ತೀನಿ .ಕ್ರೂರಿ ಅಂತ ತಿಳಿ ಬೇಡವೆ... ನೀನೂ ಎಲ್ಲರಿಗಿಂತ ಭಿನ್ನ ಅಂತ ಅವನು ಸಾಕಷ್ಟು ಸರ್ತಿ , ನನ್ನ ಮುಂದೆ ಅನೇಕರು ಹೇಳಿದ್ದಾರೆ,ಯಾವುದೋ ಒಬ್ಬ ವ್ಯಕ್ತಿಗಾಗಿ ನಿನ್ನತನ ಬಿಡಬೇಡ....!ತುಂಬಾ ಕ್ರೂರಿ ಅಥವಾ ಗಂಡಸರೆಲ್ಲ ಒಂದೇ ಅಂತ ಹೇಳ ಬೇಡ ... ನನಗೆ ನೀನೂ ನೀನಾಗಿರೋದು ಮುಖ್ಯ,ನೀನೂ ಎಂದಿಗೂ ನಿನ್ನಂತೆ ಇರಬೇಕು ಅದೇ ನನ್ನ ಆಸೆ.ಬರೆಯೋಕೆ ತೋಚ್ತಾ ಇಲ್ಲ ಕಣೆ .ಯೋಚಿಸು.. ದುಡುಕ ಬೇಡ
ನಿನ್ನ ಗೆಳೆಯ

Friday 3 April 2009

ರಾಮ ಎಂಬುವ ಎರಡು...

ರಾಮಾಯಣದಲ್ಲಿ ರಾಮನಿಗಿಂತ ಹೆಚ್ಚು ಪ್ರಭಾವಶಾಲಿ ಆಗಿರುವುದು ರಾಮ ನಾಮ ಅಂತ ತಿಳಿದೋರು ಹೇಳುತ್ತಾರೆ.ನಮ್ಮಲ್ಲೂ ಅದರ ಬಗ್ಗೆ ಅನೇಕ ಕೀರ್ತನೆಗಳುಜಾರಿಯಲ್ಲಿವೆ .'ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು ಪಾಮರರು ತಾವೇನು ಬಲ್ಲರೈಯ್ಯ'ಹೀಗೆ ಆರಂಭಗೊಂಡ ಹಾಡು ರಾ ಅಕ್ಶರದ ಮಹಿಮೆಯಿಂದ ಹೇಳುತ್ತಾ ಹೋಗುತ್ತದೆ.ಅದೇ ರೀತಿ ನಾವು 'ರಾಮನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ ವಿಠಲ ತುಪ್ಪವ ಬೆರೆಸಿ ಬಾಯಿ ಚಪ್ಪರಿಸಿರೋ 'ಅಂತಲೂ ಹಾಡಿದ್ದೆವು ಹಾಗು ಹಾಡುತ್ತಲು ಇದ್ದೇವೆ.ಅಂದ್ರೆ ರಾಮ ಅನ್ನುವ ವ್ಯಕ್ತಿಗಿಂತ ಆತನ ನಾಮ ಎಷ್ಟು ಪ್ರಾಮುಖ್ಯತೆ ಪಡೆದಿದೆ ಅಂತ ಆಯ್ತಲ್ಲ.'ಶ್ರೀ ರಾಮ ಕೇವಲ ಅಯೋಧ್ಯ ಅಳಿದರೆ ರಾಮನಾಮ ಇಡಿ ಲೋಕವನ್ನು ಅಳುತ್ತದೆ'ಎಂದು ಸ್ವಯಮ್ ಹನುಮಂತ ಹೇಳಿರುವುದಾಗಿ ರಾಮಾಯಣದಲ್ಲಿ ಉಲ್ಲೇಖ ಮಾಡಿದೆ.ಈ ರಾಮ ಅನ್ನುವ ಎರಡು ಅಕ್ಷರ ಯಾವುದರಿಂದ ಪಡೆಯಲಾಗಿದೆ ಅನ್ನುವ ಅಂಶವು ತುಂಬಾ ಆಸಕ್ತಿದಾಯಕ ಆಗಿದೆ."ಓಂ ನಮೋ ನಾರಾಯಣಾಯ" ಎನ್ನುವ ಅಷ್ಟಾಕ್ಷರಿ ಮಂತ್ರದಲ್ಲಿನ 'ರಾ' ಎನ್ನುವ ಐದನೇ ಅಕ್ಷರವನ್ನು ಹಾಗು 'ಓಂ ನಮಶಿವಾಯ' ಎನ್ನುವ ಪಂಚಾಕ್ಷರಿ ಮಂತ್ರದಲ್ಲಿ 'ಮ' ಅಕ್ಷರ ತೆಗೆದು ಕೊಳ್ಳಲಾಗಿದೆ.ಅಂದರೆ ರಾಮ 'ಶಿವಕೇಶವರ 'ಏಕೀಕೃತ ಮೂರ್ತಿ.ಹೀಗೆ ಅನೇಕ ರೀತಿಯಲ್ಲಿ ಭಗವಂತನ ಬಗ್ಗೆ ಹೇಳುತ್ತಾರೆ ಭಕ್ತರು.ಏಕ ಪತಿ ವ್ರತಸ್ಥ ಅಂತ ಹೇಳುತ್ತಾರೆ,ಆದರೆ ಇನ್ನೊಬ್ಬ ಲೇಖಕರ ಅನ್ವಯ ಆತನ ತಂದೆ ದಶರಥನಿಗೆ ಸ್ವಲ್ಪ ಸ್ತ್ರೀ ಮೋಹ ಅದನ್ನು ಕಣ್ಣಾರೆ ಕಂಡು ಆತ ಏಕ ಪತ್ನಿ ವ್ರತಕ್ಕೆ ಬದ್ಧನಾದ ಅಂತಾರೆ.ಅದೆಷ್ಟು ನಿಜವೋ ಗೊತ್ತಿಲ್ಲ! ಏನೇ ಆದರು ನಾರ್ತ್ ಇಂಡಿಯನ್ ರಾಮ ದಕ್ಷಿಣವನ್ನು ಹಾಗು ಸೌತ್ ಇಂಡಿಯನ್ ಹನುಮ ಉತ್ತರವನ್ನು ಆಳ್ತಾ ಇರೋದು ಮಾತ್ರ ಸೋಜಿಗದ ಸಂಗತಿ.ಇನ್ನೊಂದು ವಿಷಯ ರಾಮ ಅಂದರೆ ಕನ್ನಡದಲ್ಲಿ 'ಪ್ರಿಯ'ಅನ್ನುವ ಅರ್ಥ ಬರುತ್ತದೆ.ರಾಮ ಆದ್ದರಿಂದಲೇ ಎಲ್ಲ ಕಾಲಕ್ಕೂ ಎಲ್ಲರಿಗೆ ಹೇಗೋ ಅಂತು ಪ್ರಿಯ ತುಂಬ ಪ್ರಿಯ!

Tuesday 31 March 2009

ಚಿತ್ತು-ಚಿತ್ತಾರ ಇಲ್ಲ..!

ಗೆಳೆಯ...
ಗೊತ್ತು ನಂಗೆ ನೀನೂ ಈ ನನ್ನ ಮೇಲ್ ನೋಡಿದ ತಕ್ಷಣ ಪೆಚ್ಚಾಗಿ ಬಿಡ್ತಿಯಾಂತ.ಆದರೆ ನಾನು ಎಂದು ಮೇಲ್ ಮಾಡ್ತೀನಿ,ಯಾವಾಗ ಮೌನಾಗಿ ಕೂರ್ತೀನಿ ಅನ್ನುವ ಸಂಗತಿ ನನಗಿಂತ ನಿನಗೆ ಹೆಚ್ಚು ಗೊತ್ತಿದೆ ಅಂತ ಅಂದುಕೊಂಡಿದ್ದೇನೆ.ಪ್ಲೀಸ್ ಆ ನನ್ನ ನಂಬಿಕೆಯನ್ನು ಸುಳ್ಳು ಮಾಡ ಬೇಡ.ನನ್ನದೇನಿದ್ದರು ನೇರ ನುಡಿ,ನೇರ ವರ್ತನೆ.ಮೊಟ್ಟಮೊದಲು ನಿನ್ನನ್ನು ಕಂಡಾಗ ನಾನೇ ತಾನೆ ನಿನಗೆ ಪ್ರಪೋಸ್ ಮಾಡಿದ್ದು?ಏನ್ ಮಾಡ್ಲಿ ನನಗೆ ಮನಸಿನಲ್ಲಿ ಇಟ್ಟುಕೊಳ್ಳಲು ಬರೋದೇ ಇಲ್ಲ.ಎಲ್ಲವು ಬಯಲಾಗಿ ಬಿಡಬೇಕು.ಪ್ರಾಯಶ: ಆ ವರ್ತನೆ ನಿನ್ನನ್ನು ಹೆಚ್ಚು ಆಕರ್ಷಿತಾ ? ಉಹುಂ ನನಗೆ ಅದು ಗೊತ್ತಿಲ್ಲ.ಜಾಸ್ತಿ ಕೊರೀತಾ ಇದ್ದಿನಾ? ಗೊತ್ತು ನನಗೆ ಬೇರೆ ಯಾವ ವಿಷಯ ನನಗೆ ತಿಳಿದೇ ಇದ್ದರು ಈ ವಿಷಯ ಚೆನ್ನಾಗಿ ಗೊತ್ತು,ನೀನೂ ಪತ್ರವಿಲ್ಲದೆ ದಣಿದು ಬಿಟ್ಟಿದ್ದಿಯಾ ಅಂತ.ಪ್ರತಿದಿನ ಸಿಕ್ಕರೂ ನಾನು ನಿನಗೆ ವಾರಕ್ಕೊಮ್ಮೆ ನನ್ನ ಕೈಬರಹದಲ್ಲಿ ಒಂದು ಪತ್ರ ಬರೆದು ಕೊಡಬೇಕು.ಅದೇನು ತುಂಬಾ ನೀಟಾಗಿ ,ತಪ್ಪಿಲ್ಲದೆ ಇರಬೇಕು ಅಂತ ನೀನೂ ಎಂದಿಗೂ ಅಪೇಕ್ಷೆ ಮಾಡಲ್ಲ.ಪ್ರತಿ ಪತ್ರ ಓದಿದ ನಂತರ ನಿನ್ನ ತುಟಿಯಲ್ಲಿ ಒಂದು ಕಿರುನಗೆ .ಆದರೆ ನನಗೆ ಸಿಟ್ಟು ಬಂದಾಗ ಇಮೇಲ್ ಕಳುಹಿಸಿ ನನ್ನನ್ನು ನಾನು ಸಮಾಧಾನ ಮಾಡಿಕೊಳ್ಳುತ್ತಿದ್ದೆ.ನೀನೂ ನನಗೆ ಸಮಾಧಾನ ಮಾಡುವವರೆಗೂ ಈ ಕೆಲಸ ಮುಂದುವರೆಯುತ್ತಲೇ ಇರುತ್ತಿತ್ತು.ನಾನು ಎಲ್ಲಾ ಬಗೆಯ ಕೋಪದ ಸುನಾಮಿಗಳನ್ನು ದೂರ ಮಾಡಿ ಹಾಯಾದ ಗುಪ್ತಗಾಮಿನಿ ಮನಸ್ತತ್ವ ಪಡೆದ ಮೇಲೆ ನಿನ್ನ ವಿಶಾಲವಾದ ಅಂಗೈನಲ್ಲಿ ನನ್ನ ಪುಟ್ಟ ಹಸ್ತ ಇಮಡಿಸಿ 'ಮುದ್ದು ಪ್ಲೀಸ್ ಕೋಪ ಮಾಡ್ಕೋ ಪರವಾಗಿಲ್ಲ,ಪ್ರೀತಿಯಲ್ಲಿ ಕೋಪ ಇರಲೇ ಬೇಕು,ಆದರೆ ನನ್ನದೊಂದು ರಿಕ್ವೆಸ್ಟ್ ,ನಿನಗೆ ಎಷ್ಟೇ ಕೋಪ ಬಂದ್ರು ನನಗೆ ನಿನ್ನ ಕೈಬರಹದಲ್ಲಿ ಪತ್ರ ಬರಿ,ಆಮೇಲ್-ಈಮೇಲ್ ಅಂತ ಮಾಡಿ ಕರ್ತವ್ಯ ಮುಗೀತು ಅಂತ ಸುಮ್ಮನಾಗ ಬೇಡ.ಶುದ್ಧ ಅರಸಿಕ ಕಂಪ್ಯೂಟರ್ ಮೇಲ್ .ಕೈ ಬರಹದಲ್ಲಿ ಇರುವಂತೆ ಎಲ್ಲು ಚಿತ್ತು ,ಚಿತ್ತಾರ ಇರಲ್ಲ. ಸಣ್ಣ ಅಕ್ಷರ,ದಪ್ಪ ಅಕ್ಷರ,ಅಲ್ಲೆಲ್ಲೋ ದಾರಿ ತಪ್ಪಿದ ವಾಕ್ಯ,ಸ್ವಲ್ಪ ಗ್ರಾಮರ್ ಮಿಸ್ಟೇಕ್,ಮಧ್ಯೆ ನಿನ್ನ ಮೂಡ್ಗೆ ತಕ್ಕಂತೆ ರಂಗೋಲಿ,ಏನಿರುತ್ತೆ ಇಲ್ಲಿ,ಎಲ್ಲವು ಒಪ್ಪ.ಬ್ಯಾಡ ಕಣೆ ಬಂಗಾರಿ ನನಗೆ ಅಂತಹ ಪತ್ರ !ಪ್ಲೀಸ್..ಪ್ಲೀಸ್..! ಈ ವಿಷಯದಲ್ಲಿ ಕರುಣೆ ತೋರು' ಅಂತ ಹೇಳಿರ್ತೀಯಾ,ಆದರೆ ಕೋಪ ಬಂದಾಗ ನನ್ನದು ಮತ್ತದೇ ಇಮೇಲ್ ಗಲಾಟೆ.ಈ ಬಾರಿ ನನಗೆ ಯಾಕೆ ಕೋಪ ಬಂದಿದೆ ಅಂತ ನನ್ನನ್ನೇ ನೀನೂ ಕೇಳ್ತಿಯಾ? ನನಗೆ ಗೊತ್ತಿಲ್ಲ.ಆದರೆ ನಿನ್ನ ಮೇಲೆ ಸಿಟ್ಟು ಬಂದಿದೆ ಅಷ್ಟು ಮಾತ್ರ ಹೇಳಬಲ್ಲೆ.
ನಿನ್ನ ಗೆಳತಿ

Monday 16 February 2009

ಅವಳಿಗಳ ನಾಡು..!

ಇತ್ತೀಚೆಗೆ ಪತ್ರಿಕೆ ಒಂದರಲ್ಲಿ ಒಬ್ಬ ಹೆಣ್ಣು ಮಗಳು ಒಟ್ಟಿಗೆ ಎಂಟು ಮಕ್ಕಳನ್ನು ಹೆತ್ತ ಸುದ್ದಿ ! ಆಗಾಗಲೇ ಆಕೆಗೆ ಏಳು ಮಕ್ಕಳು ಇದ್ದರು.ಇಂತಹ ಸುದ್ದಿ ನಮಗೆ ಹೊಸದಲ್ಲ.ಆದರೆ ಕಳೆದ ವಾರ ತೆಲಗು ಪತ್ರಿಕೆ ಒಂದರಲ್ಲಿ ಒಂದು ಲೇಖನ ಓದಿದೆ ,ಅಲ್ಲಿ ಅವಳಿಗಳ ನಾಡಿನ ಬಗ್ಗೆ ತಿಳಿಸಲಾಗಿತ್ತು.ಬ್ರೆಜಿಲ್ ನಲ್ಲಿ ರುವ ಕೆನ್ಡಿದೋ ಗೊದಯ್ ಪಟ್ಟಣ ಅವಳಿಜವಳಿ ಮಾಯಾ.ಅಲ್ಲಿ ಹೋದರೆ ಎಲ್ಲಿ ನೋಡಿದರು ಕೆಂಪು ಕೂದಲು,ನೀಲಿ ಕಣ್ಣಿನ ಹೆಣ್ಣು,ಗಂಡು ಮಕ್ಕಳು ಹಿರಿಯರು,ಮಧ್ಯವಯಸ್ಕರು ಸಾಮಾನ್ಯ ಅಂತೆ.ಇಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅವಳಿಜವಳಿ ಹುಟ್ಟುವುದು ಕಾಮನ್ .ಅದು ಟ್ವಿನ್ ಟೌನ್ ಆಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.ವಿಶ್ವದಲ್ಲಿ ಎಂಬತ್ತು ಮಂದಿ ತಾಯಂದಿರಲ್ಲಿ ಒಬ್ಬರಿಗೆ ಮಾತ್ರ ಅವಳಿಜವಳಿ ಹುಟ್ಟುತ್ತದೆ ,ಆದರೆ ಈ ಊರಲ್ಲಿ ಪ್ರತಿ ಐದು ಜನ ತಾಯಂದಿರಲ್ಲಿ ಒಬ್ಬರಿಗೆ ಟ್ವಿನ್ಸ್ ಹುಟ್ಟೇ ಹುಟ್ಟು ತ್ತದೆಯಂತೆ ! ಕಳೆದ ಐವತ್ತು ವರ್ಷಗಳಿಂದ ಈ ಪ್ರಕ್ರಿಯೆ ನಿರಂತವಾಗಿ ಸಾಗುತ್ತಿದೆಯಂತೆ!ಇದರ ಬಗ್ಗೆ ವಿಜ್ಞಾನಿಗಳು ಸಾಕಷ್ಟು ತಲೆ ಕೆರೆದು ಕೊಂಡು ಒದ್ದಾಡಿದ್ದಂತೂ ಸತ್ಯ.ಜಾರ್ಜ್ ಕೆಮರಾನ್ ಎನ್ನುವ ಇತಿಹಾಸಕಾರ ಮಾಡಿದ ಸುದೀರ್ಘ ಅಧ್ಯಯನದಿಂದ ಅತಿ ಭಯಾನಕ ಸಂಗತಿ ಹೊರ ಬಿದ್ದಿದೆ.ಹಿಟ್ಲರ್ ನ ಶಕ್ತಿ ಬಲಗೊಳಿಸಲು ಆತನ ಬಳಿಯಲ್ಲಿದ್ದ ನಾಜಿ ಮೆಡಿಕಲ್ ಆಫಿಸರ್ ಜೋಸೆಫ್ ಮಂಜಿಲ್ ಎನ್ನುವ ರಕ್ತ ಪಿಪಾಸು ಮಾಡಿದ ಅನಾಹುತಕಾರಿಅನ್ಸ್ಹೊಧೆಗಳ ಫಾಲವೇ ಈಗಿನ ಅವಳಿ ನಾಡಿನ ಹುಟ್ಟಿಗೆ ಕಾರಣ.ಮಂಜಿಲ್ ವಂಶವಾಹಿನಿಗೆ ಸಂಬಂಧ ಪಟ್ಟಂತೆ ಸಂಶೋಧನೆ ಮಾಡುತ್ತಿದ್ದ. ಆತ ಹಿಟ್ಲರನನ್ನು ಅಮಿತವಾಗಿ ಆರಾಧಿಸುತ್ತಿದ್ದ.ನಾಜಿ ಸೈನ್ಯ ,ನಾಜಿಗಳು ಹೆಚ್ಚು ಮಾಡಲು ಒಟ್ಟಾರೆ ಆರ್ಯ ರ ಸಂತತಿ ಅಧಿಕ ಮಾಡಲು ಆತ ಬಳಸಿದ್ದು ಹಿಟ್ಲರ್ ಬಂಧಿಸಿದ್ದ ಕೈದಿಗಳನ್ನು.ಆತನ ಗಮನ ಅವಳಿಗಳ ಕಡೆಗೆ ಇತ್ತು. ಆಚ್ವಿದ್ಜ್ ಶಿಬಿರದಲ್ಲಿದ್ದ ಕೈದಿಗಳಲ್ಲಿ ತನ್ನ ಪ್ರಯೋಗಕ್ಕೆ ಉಪಯುಕ್ತ ಅನ್ನಿಸುವವರನ್ನು ಹೊರೆತು ಪಡಿಸಿ ಉಳಿದವರನ್ನು ಗ್ಯಾಸ್ ಚೆಂಬರ್ಗೆ ಕಲಿಸಲಾಗುತ್ತಿತ್ತು.ಆನಂತ ನಡೆಯುತ್ತಾ ಇದ್ದುದೇ ಮಾರಣ ಹೋಮ.ನೀಲಿ ಕಣ್ಣು ಹೇಗೆ ಆಗುತ್ತದೆ ಎಂದು ತಿಳಿಯಲು ಆತ ಚಿಕ್ಕಚಿಕ್ಕ ಮಕ್ಕಳ ಕಣ್ಣಿಗೆ ರಾಸಾಯನಿಕಗಳನ್ನು ಸುರಿಯುತ್ತಿದ್ದ.ಮಹಿಳೆಯರಿಗೆ ಗರ್ಭಸಂಬಂಧಿತ ಸರ್ಜರಿ ಮಾಡುತ್ತಿದ್ದ.ಕೆಲವರಿಗೆ ಶಾಕ್ ಟ್ರೀಟ್ಮೆಂಟ್,ಒಂದಷ್ಟು ಜನ ಹೆಣ್ಣು ಮಕ್ಕಳನ್ನು ನೇರವಾಗಿ ಎಕ್ಸರೇ ಮೆಷಿನ್ ಒಳಗೆ ಕಳುಹಿಸಿ ಬಿಡುತ್ತಿದ್ದ ಮೆಂಜಿಲ್! ಅನೇಕ ಹೆಣ್ಣುಮಕ್ಕಳು ನೋವು ತಡೆಯಲಾಗದೆ ಸತ್ತರೆ,ಕೆಲವು ಹೆನುಮಕ್ಕಳು ಸೋಂಕಿನಿಂದ ಸತ್ತು ಹೋಗ್ತಾ ಇದ್ದರಂತೆ.ಅಷ್ಟು ಭೀಭತ್ಸ .ಒಂದು ಸರ್ತಿ ತನ್ನ ಶಿರಕ್ಕೆ ಬಂದ ಹದಿನಾಲ್ಕು ಅವಳಿಗಳ ಮೇಲೆ ಪ್ರಯೋಗ ನಡೆಸಿದನಂತೆ ಮೆಂಜಿಲ್.ನಾಜಿ ಶಿಬಿರದಲ್ಲಿ ಇಪ್ಪತ್ತೊಂದು ತಿಂಗಳುಗಳ ಕಾಲ ನಿರಂತವಾಗಿ ಆತ ಮಾಡಿದ ವಿಕೃತ ಪ್ರಯೋಗಗಳ ಕಾರಣದಿಂದ ಮೆಜಿಲ್ನನ್ನು ಎನ್ಜಿಲ್ ಆಫ್ ಡೆತ್ ಎಂದು ಕರೆಯುತ್ತ ಇದ್ದರು..ಆತ ಮಾನವ ಮಾತ್ರರಿಗೆ ಅಲ್ಲದೆ ಪಶುಗಳ ಮೃತ್ಯು ದೇವತೆ ಆಗಿದ್ದ.ಸ್ವಲ್ಪವೂ ಮತ್ತಿನ ಪದಾರ್ಥ ನೀಡದೆ ಆತ ತನ್ನ ಪ್ರಯೋಗಗಳನ್ನು ಮಾಡುತ್ತಾ ಇದ್ದ ನಿರ್ದಯಿ.ಇದರ ಬಗ್ಗೆ ನೆನಪಿಸಿ ಕೊಂಡಿದ್ದಾರೆ ಅಲೆಕ್ಸ್ ದೆಕೆಲ್ (ಯುದ್ದ ಕೈದಿ ಆಗಿದ್ದು ಅದೃಷ್ಟವಶಾತ್ ಬಚಾವಾದ ವ್ಯಕ್ತಿ).1945 ವರೆಗೂ ಪ್ರಯೋಗ ನಡೆಸಿದ ಮೆಂಜಿಲ್ ಬಳಿಕ ಶತ್ರುಗಳಿಂದ ತಪ್ಪಿಸಿಕೊಳ್ಳಲು ಅಮೆರಿಕಾಕ್ಕೆ ಹೋದನಂತೆ.ಇವೆಲ್ಲವನ್ನೂ ಇತಿಹಾಸಕಾರ ಕೆಮರಾನ್ ತಮ್ಮ ಕೃತಿಯಲ್ಲಿ ಉಲ್ಲೆಕಿಸಿದ್ದಾರೆ.ಇದಕ್ಕೆ ಸಂಬಂಧ ಪಟ್ಟಂತೆ ಸ್ಥಳಿಯರು ರುಡಾಲ್ಫ್ ವೆಯೇಜ್ ಎನ್ನುವ ವೈದ್ಯ ಗರ್ಭಿಣಿಯರಿಗೆ ಅನೇಕ ರಾಸಾಯನಿಕಗಳನ್ನು ಇಂಜೆಕ್ಟ್ ಮಾಡುತ್ತಾ ಇದ್ದನಂತೆ.ಒಂದೇ ರೀತಿ ಇರುವ ಅವಳಿಗಳ ಮೇಲೆ ಅನೇಕ ಪ್ರಯೋಗ ಮಾಡುತ್ತಾ ಇದ್ದನಂತೆ.ತನಗೆ ಬೇಡದ ವ್ಯಕ್ತಿಯನ್ನು ಆತ ನಿರ್ದಾಕ್ಷಣ್ಯವಾಗಿ ಸಾಯಿಸಿ ಬಿಡುತ್ತಾ ಇದ್ದನಂತೆ..ಹೇಗೆ,ಎಂದು ಬಂದ ಎಂದು ಯಾರಿಗೂ ತಿಳಿದಿಲ್ಲ,1963 ರಿಂದ ಈ ಸ್ಥಳದ ಹೆಣ್ಣುಮಕ್ಕಳು ಅವಳಿಗಳಿಗೆ ಜನ್ಮ ನೀಡಲು ಆರಂಭ ಮಾಡಿದರಂತೆ.ಇಷ್ಟು ಕಾಲ ರಹಸ್ಯವಾಗಿ ಇದ್ದ ಅವಳಿಗಳ ನಗರದ ಕಥೆ ಈಗ ಈ ರೀತಿ ಪ್ರಪಂಚದ ಕಣ್ಣಿಗೆ ಬಿದ್ದಿದೆ.

Friday 13 February 2009

ನಾ ನಿನ್ನ ಕನಸಿಗೆ .....

ಅವಳು
ಪ್ರಾಯಶ: ಇನ್ನು ಮುಂದೆ ನೀನೂ ನನ್ನ ಪ್ರೀತಿ ಮಾಡಲ್ಲ ಅಂತ ಕಾಣುತ್ತೆ.. ಗೊತ್ತಿಲ್ಲ ಇಷ್ಟು ವರ್ಷಗಳ ಪ್ರೀತಿ ಮುರುಕೊಂಡು ಚೂರು ಚೂರು ಆಗಿದೆ ಅಂತ ನನಗೆ ಅನ್ನಿಸ್ತಾಯಿದೆ.ಚಿನ್ನ ನಿನಗೆ ಜ್ಞಾಪಕ ಇದೆಯಾ ಎಂತಹ ಸ್ಥಿತಿ ನೋಡು ನಂದು ಹಳೆದೆಲ್ಲ ಜ್ಞಾಪಿಸುವ ಪರಿಸ್ಥಿತಿ ನಂಗೆ.,ಅಂದು ನೀನೂ ನಾನು ಮೊದಲ ಬಾರಿ ಭೇಟಿ ಆದಾಗ ನಿನ್ನ ಸುತ್ತಲು ಫ್ರೆಂಡ್ಸ್ ಗುಂಪು.ನಾನು ಒಂದು ಕಡೆ ಸುಮ್ಮನೆ ಕುಳಿತಿದ್ದೆ,ಹಾಗಂತ ಮೊದಲ ನೋಟದಲ್ಲೇ ನಿನ್ನನ್ನು ಮೆಚ್ಚಿದೆ ಅಂತ ಅರ್ಥ ಅಲ್ಲ.ಸುಮ್ನೆ ಹಾಗೆ ಕುತೂಹಲದಿಂದ ಅವಡುಗಚ್ಚಿ ನೋಡಿದೆ.ನನಗೆ ಗೊತ್ತೇ ಆಗಿರಲಿಲ್ಲ ತುಂಬಾ ದಿನ ನೀನೂ ನನ್ನನ್ನು ಮೊದಲ ಭೇಟಿಯಲ್ಲೇ ಮೆಚ್ಚಿದ್ದೆ ಅಂತ,ನಾನು ಒರಟಿತುಸು ಹಠಮಾರಿ,ಗೆಳತಿಯರು ಸತ್ಯಭಾಮ ಅಂತ ಹೆಸರು ನಾಮಕರಣ ಮಾಡಿದ್ದರು,ಒಂದು ಸುಂದರ ಸಂಜೆ ನೀನೂ ನನಗೆ ಪ್ರಪೋಸ್ ಮಾಡಿದೆ,ಅದಕ್ಕೂ ಮುನ್ನ ನಂಗೆ ನೀನೂ ನನ್ನನ್ನು ಇಷ್ಟ ಪಡ್ತಾ ಇದ್ದೀಯ ಅನ್ನೋದು ಗೊತ್ತಾಗಿತ್ತು.ನೀನೂ ನನ್ನ ಹತ್ತಿರ ನಿನ್ನ ಮನ ಬಿಚ್ಚಿದರು ಉತ್ತರಿಸೋಕೆ ತುಂಬಾ ಸಮಯ ತೆಗೆದುಕೊಂಡೆ,ಯಾಕೋ ನಿನ್ನನ್ನು ಸತಾಯಿಸ ಬೇಕು ಅಂತ ಅನ್ನಿಸಿತ್ತು,ನನಗೆ ಗೊತ್ತಿಲ್ಲದೆ ನೀನೂ ಇಷ್ಟಾ ಆಗೋಕೆ ಶುರು ಆದೆ,ನಾನು ಸಮ್ಮತಿ ಸೂಚಿಸಿದೆ.ನಾನು ಸತ್ಯಭಾಮಳ ಪ್ರತಿರೂಪ ಅಂತ ನಿನಗೆ ಗೊತ್ತಿತ್ತಲ್ಲ ಆದಷ್ಟು ಹುಡುಗಿಯರ ಜೊತೆ ಮಾತಾಡುವಾಗ ಎಚ್ಚರ ವಹಿಸುತ್ತಿದ್ದೆ,ಎಲ್ಲ ವಿಷಯದಲ್ಲೂ ತುಂಬಾ ಗಮನ ಕೊಡ್ತಾಯಿದ್ದೆ,ಅದಷ್ಟೇ ಆಗಿದ್ದಿದ್ದರೆ ಎಷ್ಟು ಚೆನ್ನಿತ್ತು?ಮೊನ್ನೆ ಸುಮ್ಮಿ ಹೇಳೋತನಕ ನನಗೆ ವಿಷಯ ಆ ವಿಷಯದ ಬಗ್ಗೆ ಗೊತ್ತೇ ಆಗಿರಲಿಲ್ಲ.ನೀನೂ ಆ ರಾಧಿನ್ನ ಪ್ರೀತಿ ಮಾಡ್ತಾ ಇದ್ದಿಯಂತೆ? ನಿಜಾನ ಅಂತ ನಿನ್ನನ್ನು ಈ ಪತ್ರದ ಮೂಲಕ ಕೇಳೋ ಪ್ರಯತ್ನ ಮಾಡ್ತಾ ಇದ್ದೀನಿ.ಇಲ್ಲಿತನಕ ನಾನು ನಿನ್ನವಳು ಅಂತ ತಿಳಿದಿದ್ದೆ ಇನ್ನು ಮುಂದೆ ಏನ್ ಬರೀಬೇಕು ಅಂತ ಗೊತ್ತಿ ಲ್ಲಹೋಗು ಅಳು ಬರ್ತಾಯಿದೆ ಇನ್ನು ಮುಂದೆ ನನ್ನ ಕನಸಿನ ಕೋಟೆಗೆ ಬಾಗಿಲು ಹಾಕೋತಿನಿ ಯಾರು ಬೇಕಾಗಿಲ್ಲ ನಂಗೆ .ಒಂಟಿಯಾಗಿ ಇರ್ತೀನಿ ,ಅಳು ತಡಿಯೋಕೆ ಆಗ್ತಾ ಇಲ್ಲ .........
ಅವನು
ನನಗೆ ಗೆಳೆಯರ ಬಳಗ ತುಂಬಾ.ಗೊತ್ತಿಲ್ಲ ಅದ್ಯಾಕೆ ಈ ಪರಿ ನಂಗೆ ಫ್ರೆಂಡ್ಸ್ ಆಗ್ತಾರೋ.ಪ್ರೀತಿಯಿಂದ ನನ್ನ ಸ್ನೇಹವಲಯ ಕೃಷ್ಣಾ ಅಂತ ಕರೆಯೋದು.ನನ್ನ ಮಾತುಗಾರಿಕೆ,ಸಮಸ್ಯೆ ಬಗೆ ಹರಿಸುವ ವಿಧಾನ ಜನಕ್ಕೆ ಇಷ್ಟ ಆಗಿರ ಬೇಕು,ಗೊತ್ತಿಲ್ಲ,,ಯಾರಿಗೆ ಯಾವುದೇ ಇಷ್ಟ ಆಗಿರಲಿ ನನಗೆ ಸತ್ಯಳ ಮೊನಚು ಕೋಪ ತುಂಬಾ ತುಂಬ ಇಷ್ಟ.ಮೊದಲ ದಿನ ಅವಳು ನನ್ನನ್ನು ಅವಡುಗಚ್ಚಿ ನೋಡಿದ ರೀತಿಗೆ ನಾನು ಕ್ಲೀನ್ ಬೋಲ್ಡ್ ! ನಕ್ಕರೆ ಯಾವ ಪ್ರಪಂಚ ಮುಳುಗಿ ಹೋಗುತ್ತೋ ಅನ್ನುವ ಗಡಸು ಹುಡುಗಿ,ನಾನು ಅವಳನ್ನು ಇಷ್ಟ ಪಡ್ತಾ ಇದ್ದೀನಿ ಅಂತ ಗೊತ್ತಾದರೂ ಸಿಕ್ಕಾಪಟ್ಟೆ ಸತಾಯಿಸಿದ ತುಂಟ ಗೆಳತಿ,ಎಲ್ಲ ವಿಷಯದಲ್ಲೂ ಒಂದು ಕೈ ಮುಂದೆ ಇರುವ ಬುದ್ಧಿವಂತೆ.ಆದರು ಪ್ರೀತಿಯ ವಿಷಯದಲ್ಲಿ ಸಂಪೂರ್ಣ ದಡ್ಡಿ ,ಕೃಷ್ಣನ ಒಲವಿನ ಸಖಿ ಸತ್ಯಳಂತೆ ಪೊಸೆಸಿವ್ ,ಈ ವಿಷಯದಲ್ಲಿ ಸರಿ ಹೋಗಲು ಇಚ್ಚಿಸದೆ ಇರುವ ನನ್ನ ಒಲವು.ರಾಧಿ ನನ್ನ ಬಾಲ್ಯದ ಗೆಳತಿ,ಊರಿಂದ ಯಾವುದೋ ಕೆಲಸಕ್ಕಾಗಿ ನಮ್ಮ ಮನೆಗೆ ಬಂದು ಇದ್ದಾಳೆ ,ತುಂಬಾ ಸಲುಗೆ ನಮ್ಮಿಬ್ಬರಲ್ಲೂ ಇದೆ.ಅಪ್ಪ ಅಮ್ಮನಿಗೆ ಅವಳನ್ನು ಸೊಸೆ ಮಾಡಿಕೊಳ್ಳುವ ಆಸೆ.ಈ ವಿಷಯ ನನ್ನನ್ನು ಕೇಳಿದಾಗ ನಾನು ಯಾಕೋ ಏನು ಮಾತಾಡಲಿಲ್ಲ.ಅದನ್ನು ಸಮ್ಮತಿ ಅಂತ ಮನೆಯವರು ತಿಳಿದರು,ಅದಕ್ಕೆ ತಕ್ಕಂತೆ ನಾನು ನನ್ನ ಮುದ್ದು ಹುಡುಗಿಯನ್ನು ಮೀಟ್ ಮಾಡೋಕೆ ಆಗಲಿಲ್ಲ,ಚಿನ್ನ ನಂಗೊತ್ತು ಈ ರಾಧಿ ವಿಷ್ಯ ನಿನಗೆ ಸುಮ್ಮಿಯಿಂದ ಗೊತ್ತಾಗಿದೆ ಅಂತ.ಐ ಲವ್ ಯು ಕಣೆ ಹುಡುಗಿ,ಗೊತ್ತು ನಂಗೆ ನೀನೂ ನನಗೆ ಯಾರು ಬೇಡ ಅಂತ ಬಿಗಿದು ಕುಳಿತು ಬಿಟ್ಟು ಇರ್ತೀಯಾಂತ ,ಆದರೆ ನೀನೂ ಇಷ್ಟ ಬಂದಂಗೆ ಇರೋಕೆ ನಾನು ಬಿಡ್ತೀನ? ನಾ ನಿನ್ನ ಕನಸಿಗೆ ಚಂದಾದಾರನು ಚಂದ ಬಾಕಿ ನೀಡಲು ಬಂದೆ ಬರುವೆನು.. ನಿನ್ನವನು ಚಿನ್ನ ಅನುಮಾನವೇ ಬೇಡ.

Friday 6 February 2009

ಸೇಲ್ಸ್ ಮ್ಯಾನ್ :ಸರ್ ಇರುವೆಗೆ ಹಾಕುವ ಪೌಡರ್ ಇದೆ ದಯವಿಟ್ಟು ತಗೊಳ್ಳಿ...

ಸರ್ದಾರ್: ಬೇಡಪ್ಪ.. ಇವತ್ತು ಪೌಡರ್ ಹಾಕಿದರೆ,ನಾಳೆ ಲಿಪ್ಸ್ಟಿಕ್ ಕೇಳುತ್ತೆ,ನಾನು ಎಲ್ಲಿಂದ ತರಲಿ!!

Followers

Blog Archive