Monday 16 February 2009

ಅವಳಿಗಳ ನಾಡು..!

ಇತ್ತೀಚೆಗೆ ಪತ್ರಿಕೆ ಒಂದರಲ್ಲಿ ಒಬ್ಬ ಹೆಣ್ಣು ಮಗಳು ಒಟ್ಟಿಗೆ ಎಂಟು ಮಕ್ಕಳನ್ನು ಹೆತ್ತ ಸುದ್ದಿ ! ಆಗಾಗಲೇ ಆಕೆಗೆ ಏಳು ಮಕ್ಕಳು ಇದ್ದರು.ಇಂತಹ ಸುದ್ದಿ ನಮಗೆ ಹೊಸದಲ್ಲ.ಆದರೆ ಕಳೆದ ವಾರ ತೆಲಗು ಪತ್ರಿಕೆ ಒಂದರಲ್ಲಿ ಒಂದು ಲೇಖನ ಓದಿದೆ ,ಅಲ್ಲಿ ಅವಳಿಗಳ ನಾಡಿನ ಬಗ್ಗೆ ತಿಳಿಸಲಾಗಿತ್ತು.ಬ್ರೆಜಿಲ್ ನಲ್ಲಿ ರುವ ಕೆನ್ಡಿದೋ ಗೊದಯ್ ಪಟ್ಟಣ ಅವಳಿಜವಳಿ ಮಾಯಾ.ಅಲ್ಲಿ ಹೋದರೆ ಎಲ್ಲಿ ನೋಡಿದರು ಕೆಂಪು ಕೂದಲು,ನೀಲಿ ಕಣ್ಣಿನ ಹೆಣ್ಣು,ಗಂಡು ಮಕ್ಕಳು ಹಿರಿಯರು,ಮಧ್ಯವಯಸ್ಕರು ಸಾಮಾನ್ಯ ಅಂತೆ.ಇಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅವಳಿಜವಳಿ ಹುಟ್ಟುವುದು ಕಾಮನ್ .ಅದು ಟ್ವಿನ್ ಟೌನ್ ಆಗಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.ವಿಶ್ವದಲ್ಲಿ ಎಂಬತ್ತು ಮಂದಿ ತಾಯಂದಿರಲ್ಲಿ ಒಬ್ಬರಿಗೆ ಮಾತ್ರ ಅವಳಿಜವಳಿ ಹುಟ್ಟುತ್ತದೆ ,ಆದರೆ ಈ ಊರಲ್ಲಿ ಪ್ರತಿ ಐದು ಜನ ತಾಯಂದಿರಲ್ಲಿ ಒಬ್ಬರಿಗೆ ಟ್ವಿನ್ಸ್ ಹುಟ್ಟೇ ಹುಟ್ಟು ತ್ತದೆಯಂತೆ ! ಕಳೆದ ಐವತ್ತು ವರ್ಷಗಳಿಂದ ಈ ಪ್ರಕ್ರಿಯೆ ನಿರಂತವಾಗಿ ಸಾಗುತ್ತಿದೆಯಂತೆ!ಇದರ ಬಗ್ಗೆ ವಿಜ್ಞಾನಿಗಳು ಸಾಕಷ್ಟು ತಲೆ ಕೆರೆದು ಕೊಂಡು ಒದ್ದಾಡಿದ್ದಂತೂ ಸತ್ಯ.ಜಾರ್ಜ್ ಕೆಮರಾನ್ ಎನ್ನುವ ಇತಿಹಾಸಕಾರ ಮಾಡಿದ ಸುದೀರ್ಘ ಅಧ್ಯಯನದಿಂದ ಅತಿ ಭಯಾನಕ ಸಂಗತಿ ಹೊರ ಬಿದ್ದಿದೆ.ಹಿಟ್ಲರ್ ನ ಶಕ್ತಿ ಬಲಗೊಳಿಸಲು ಆತನ ಬಳಿಯಲ್ಲಿದ್ದ ನಾಜಿ ಮೆಡಿಕಲ್ ಆಫಿಸರ್ ಜೋಸೆಫ್ ಮಂಜಿಲ್ ಎನ್ನುವ ರಕ್ತ ಪಿಪಾಸು ಮಾಡಿದ ಅನಾಹುತಕಾರಿಅನ್ಸ್ಹೊಧೆಗಳ ಫಾಲವೇ ಈಗಿನ ಅವಳಿ ನಾಡಿನ ಹುಟ್ಟಿಗೆ ಕಾರಣ.ಮಂಜಿಲ್ ವಂಶವಾಹಿನಿಗೆ ಸಂಬಂಧ ಪಟ್ಟಂತೆ ಸಂಶೋಧನೆ ಮಾಡುತ್ತಿದ್ದ. ಆತ ಹಿಟ್ಲರನನ್ನು ಅಮಿತವಾಗಿ ಆರಾಧಿಸುತ್ತಿದ್ದ.ನಾಜಿ ಸೈನ್ಯ ,ನಾಜಿಗಳು ಹೆಚ್ಚು ಮಾಡಲು ಒಟ್ಟಾರೆ ಆರ್ಯ ರ ಸಂತತಿ ಅಧಿಕ ಮಾಡಲು ಆತ ಬಳಸಿದ್ದು ಹಿಟ್ಲರ್ ಬಂಧಿಸಿದ್ದ ಕೈದಿಗಳನ್ನು.ಆತನ ಗಮನ ಅವಳಿಗಳ ಕಡೆಗೆ ಇತ್ತು. ಆಚ್ವಿದ್ಜ್ ಶಿಬಿರದಲ್ಲಿದ್ದ ಕೈದಿಗಳಲ್ಲಿ ತನ್ನ ಪ್ರಯೋಗಕ್ಕೆ ಉಪಯುಕ್ತ ಅನ್ನಿಸುವವರನ್ನು ಹೊರೆತು ಪಡಿಸಿ ಉಳಿದವರನ್ನು ಗ್ಯಾಸ್ ಚೆಂಬರ್ಗೆ ಕಲಿಸಲಾಗುತ್ತಿತ್ತು.ಆನಂತ ನಡೆಯುತ್ತಾ ಇದ್ದುದೇ ಮಾರಣ ಹೋಮ.ನೀಲಿ ಕಣ್ಣು ಹೇಗೆ ಆಗುತ್ತದೆ ಎಂದು ತಿಳಿಯಲು ಆತ ಚಿಕ್ಕಚಿಕ್ಕ ಮಕ್ಕಳ ಕಣ್ಣಿಗೆ ರಾಸಾಯನಿಕಗಳನ್ನು ಸುರಿಯುತ್ತಿದ್ದ.ಮಹಿಳೆಯರಿಗೆ ಗರ್ಭಸಂಬಂಧಿತ ಸರ್ಜರಿ ಮಾಡುತ್ತಿದ್ದ.ಕೆಲವರಿಗೆ ಶಾಕ್ ಟ್ರೀಟ್ಮೆಂಟ್,ಒಂದಷ್ಟು ಜನ ಹೆಣ್ಣು ಮಕ್ಕಳನ್ನು ನೇರವಾಗಿ ಎಕ್ಸರೇ ಮೆಷಿನ್ ಒಳಗೆ ಕಳುಹಿಸಿ ಬಿಡುತ್ತಿದ್ದ ಮೆಂಜಿಲ್! ಅನೇಕ ಹೆಣ್ಣುಮಕ್ಕಳು ನೋವು ತಡೆಯಲಾಗದೆ ಸತ್ತರೆ,ಕೆಲವು ಹೆನುಮಕ್ಕಳು ಸೋಂಕಿನಿಂದ ಸತ್ತು ಹೋಗ್ತಾ ಇದ್ದರಂತೆ.ಅಷ್ಟು ಭೀಭತ್ಸ .ಒಂದು ಸರ್ತಿ ತನ್ನ ಶಿರಕ್ಕೆ ಬಂದ ಹದಿನಾಲ್ಕು ಅವಳಿಗಳ ಮೇಲೆ ಪ್ರಯೋಗ ನಡೆಸಿದನಂತೆ ಮೆಂಜಿಲ್.ನಾಜಿ ಶಿಬಿರದಲ್ಲಿ ಇಪ್ಪತ್ತೊಂದು ತಿಂಗಳುಗಳ ಕಾಲ ನಿರಂತವಾಗಿ ಆತ ಮಾಡಿದ ವಿಕೃತ ಪ್ರಯೋಗಗಳ ಕಾರಣದಿಂದ ಮೆಜಿಲ್ನನ್ನು ಎನ್ಜಿಲ್ ಆಫ್ ಡೆತ್ ಎಂದು ಕರೆಯುತ್ತ ಇದ್ದರು..ಆತ ಮಾನವ ಮಾತ್ರರಿಗೆ ಅಲ್ಲದೆ ಪಶುಗಳ ಮೃತ್ಯು ದೇವತೆ ಆಗಿದ್ದ.ಸ್ವಲ್ಪವೂ ಮತ್ತಿನ ಪದಾರ್ಥ ನೀಡದೆ ಆತ ತನ್ನ ಪ್ರಯೋಗಗಳನ್ನು ಮಾಡುತ್ತಾ ಇದ್ದ ನಿರ್ದಯಿ.ಇದರ ಬಗ್ಗೆ ನೆನಪಿಸಿ ಕೊಂಡಿದ್ದಾರೆ ಅಲೆಕ್ಸ್ ದೆಕೆಲ್ (ಯುದ್ದ ಕೈದಿ ಆಗಿದ್ದು ಅದೃಷ್ಟವಶಾತ್ ಬಚಾವಾದ ವ್ಯಕ್ತಿ).1945 ವರೆಗೂ ಪ್ರಯೋಗ ನಡೆಸಿದ ಮೆಂಜಿಲ್ ಬಳಿಕ ಶತ್ರುಗಳಿಂದ ತಪ್ಪಿಸಿಕೊಳ್ಳಲು ಅಮೆರಿಕಾಕ್ಕೆ ಹೋದನಂತೆ.ಇವೆಲ್ಲವನ್ನೂ ಇತಿಹಾಸಕಾರ ಕೆಮರಾನ್ ತಮ್ಮ ಕೃತಿಯಲ್ಲಿ ಉಲ್ಲೆಕಿಸಿದ್ದಾರೆ.ಇದಕ್ಕೆ ಸಂಬಂಧ ಪಟ್ಟಂತೆ ಸ್ಥಳಿಯರು ರುಡಾಲ್ಫ್ ವೆಯೇಜ್ ಎನ್ನುವ ವೈದ್ಯ ಗರ್ಭಿಣಿಯರಿಗೆ ಅನೇಕ ರಾಸಾಯನಿಕಗಳನ್ನು ಇಂಜೆಕ್ಟ್ ಮಾಡುತ್ತಾ ಇದ್ದನಂತೆ.ಒಂದೇ ರೀತಿ ಇರುವ ಅವಳಿಗಳ ಮೇಲೆ ಅನೇಕ ಪ್ರಯೋಗ ಮಾಡುತ್ತಾ ಇದ್ದನಂತೆ.ತನಗೆ ಬೇಡದ ವ್ಯಕ್ತಿಯನ್ನು ಆತ ನಿರ್ದಾಕ್ಷಣ್ಯವಾಗಿ ಸಾಯಿಸಿ ಬಿಡುತ್ತಾ ಇದ್ದನಂತೆ..ಹೇಗೆ,ಎಂದು ಬಂದ ಎಂದು ಯಾರಿಗೂ ತಿಳಿದಿಲ್ಲ,1963 ರಿಂದ ಈ ಸ್ಥಳದ ಹೆಣ್ಣುಮಕ್ಕಳು ಅವಳಿಗಳಿಗೆ ಜನ್ಮ ನೀಡಲು ಆರಂಭ ಮಾಡಿದರಂತೆ.ಇಷ್ಟು ಕಾಲ ರಹಸ್ಯವಾಗಿ ಇದ್ದ ಅವಳಿಗಳ ನಗರದ ಕಥೆ ಈಗ ಈ ರೀತಿ ಪ್ರಪಂಚದ ಕಣ್ಣಿಗೆ ಬಿದ್ದಿದೆ.

Friday 13 February 2009

ನಾ ನಿನ್ನ ಕನಸಿಗೆ .....

ಅವಳು
ಪ್ರಾಯಶ: ಇನ್ನು ಮುಂದೆ ನೀನೂ ನನ್ನ ಪ್ರೀತಿ ಮಾಡಲ್ಲ ಅಂತ ಕಾಣುತ್ತೆ.. ಗೊತ್ತಿಲ್ಲ ಇಷ್ಟು ವರ್ಷಗಳ ಪ್ರೀತಿ ಮುರುಕೊಂಡು ಚೂರು ಚೂರು ಆಗಿದೆ ಅಂತ ನನಗೆ ಅನ್ನಿಸ್ತಾಯಿದೆ.ಚಿನ್ನ ನಿನಗೆ ಜ್ಞಾಪಕ ಇದೆಯಾ ಎಂತಹ ಸ್ಥಿತಿ ನೋಡು ನಂದು ಹಳೆದೆಲ್ಲ ಜ್ಞಾಪಿಸುವ ಪರಿಸ್ಥಿತಿ ನಂಗೆ.,ಅಂದು ನೀನೂ ನಾನು ಮೊದಲ ಬಾರಿ ಭೇಟಿ ಆದಾಗ ನಿನ್ನ ಸುತ್ತಲು ಫ್ರೆಂಡ್ಸ್ ಗುಂಪು.ನಾನು ಒಂದು ಕಡೆ ಸುಮ್ಮನೆ ಕುಳಿತಿದ್ದೆ,ಹಾಗಂತ ಮೊದಲ ನೋಟದಲ್ಲೇ ನಿನ್ನನ್ನು ಮೆಚ್ಚಿದೆ ಅಂತ ಅರ್ಥ ಅಲ್ಲ.ಸುಮ್ನೆ ಹಾಗೆ ಕುತೂಹಲದಿಂದ ಅವಡುಗಚ್ಚಿ ನೋಡಿದೆ.ನನಗೆ ಗೊತ್ತೇ ಆಗಿರಲಿಲ್ಲ ತುಂಬಾ ದಿನ ನೀನೂ ನನ್ನನ್ನು ಮೊದಲ ಭೇಟಿಯಲ್ಲೇ ಮೆಚ್ಚಿದ್ದೆ ಅಂತ,ನಾನು ಒರಟಿತುಸು ಹಠಮಾರಿ,ಗೆಳತಿಯರು ಸತ್ಯಭಾಮ ಅಂತ ಹೆಸರು ನಾಮಕರಣ ಮಾಡಿದ್ದರು,ಒಂದು ಸುಂದರ ಸಂಜೆ ನೀನೂ ನನಗೆ ಪ್ರಪೋಸ್ ಮಾಡಿದೆ,ಅದಕ್ಕೂ ಮುನ್ನ ನಂಗೆ ನೀನೂ ನನ್ನನ್ನು ಇಷ್ಟ ಪಡ್ತಾ ಇದ್ದೀಯ ಅನ್ನೋದು ಗೊತ್ತಾಗಿತ್ತು.ನೀನೂ ನನ್ನ ಹತ್ತಿರ ನಿನ್ನ ಮನ ಬಿಚ್ಚಿದರು ಉತ್ತರಿಸೋಕೆ ತುಂಬಾ ಸಮಯ ತೆಗೆದುಕೊಂಡೆ,ಯಾಕೋ ನಿನ್ನನ್ನು ಸತಾಯಿಸ ಬೇಕು ಅಂತ ಅನ್ನಿಸಿತ್ತು,ನನಗೆ ಗೊತ್ತಿಲ್ಲದೆ ನೀನೂ ಇಷ್ಟಾ ಆಗೋಕೆ ಶುರು ಆದೆ,ನಾನು ಸಮ್ಮತಿ ಸೂಚಿಸಿದೆ.ನಾನು ಸತ್ಯಭಾಮಳ ಪ್ರತಿರೂಪ ಅಂತ ನಿನಗೆ ಗೊತ್ತಿತ್ತಲ್ಲ ಆದಷ್ಟು ಹುಡುಗಿಯರ ಜೊತೆ ಮಾತಾಡುವಾಗ ಎಚ್ಚರ ವಹಿಸುತ್ತಿದ್ದೆ,ಎಲ್ಲ ವಿಷಯದಲ್ಲೂ ತುಂಬಾ ಗಮನ ಕೊಡ್ತಾಯಿದ್ದೆ,ಅದಷ್ಟೇ ಆಗಿದ್ದಿದ್ದರೆ ಎಷ್ಟು ಚೆನ್ನಿತ್ತು?ಮೊನ್ನೆ ಸುಮ್ಮಿ ಹೇಳೋತನಕ ನನಗೆ ವಿಷಯ ಆ ವಿಷಯದ ಬಗ್ಗೆ ಗೊತ್ತೇ ಆಗಿರಲಿಲ್ಲ.ನೀನೂ ಆ ರಾಧಿನ್ನ ಪ್ರೀತಿ ಮಾಡ್ತಾ ಇದ್ದಿಯಂತೆ? ನಿಜಾನ ಅಂತ ನಿನ್ನನ್ನು ಈ ಪತ್ರದ ಮೂಲಕ ಕೇಳೋ ಪ್ರಯತ್ನ ಮಾಡ್ತಾ ಇದ್ದೀನಿ.ಇಲ್ಲಿತನಕ ನಾನು ನಿನ್ನವಳು ಅಂತ ತಿಳಿದಿದ್ದೆ ಇನ್ನು ಮುಂದೆ ಏನ್ ಬರೀಬೇಕು ಅಂತ ಗೊತ್ತಿ ಲ್ಲಹೋಗು ಅಳು ಬರ್ತಾಯಿದೆ ಇನ್ನು ಮುಂದೆ ನನ್ನ ಕನಸಿನ ಕೋಟೆಗೆ ಬಾಗಿಲು ಹಾಕೋತಿನಿ ಯಾರು ಬೇಕಾಗಿಲ್ಲ ನಂಗೆ .ಒಂಟಿಯಾಗಿ ಇರ್ತೀನಿ ,ಅಳು ತಡಿಯೋಕೆ ಆಗ್ತಾ ಇಲ್ಲ .........
ಅವನು
ನನಗೆ ಗೆಳೆಯರ ಬಳಗ ತುಂಬಾ.ಗೊತ್ತಿಲ್ಲ ಅದ್ಯಾಕೆ ಈ ಪರಿ ನಂಗೆ ಫ್ರೆಂಡ್ಸ್ ಆಗ್ತಾರೋ.ಪ್ರೀತಿಯಿಂದ ನನ್ನ ಸ್ನೇಹವಲಯ ಕೃಷ್ಣಾ ಅಂತ ಕರೆಯೋದು.ನನ್ನ ಮಾತುಗಾರಿಕೆ,ಸಮಸ್ಯೆ ಬಗೆ ಹರಿಸುವ ವಿಧಾನ ಜನಕ್ಕೆ ಇಷ್ಟ ಆಗಿರ ಬೇಕು,ಗೊತ್ತಿಲ್ಲ,,ಯಾರಿಗೆ ಯಾವುದೇ ಇಷ್ಟ ಆಗಿರಲಿ ನನಗೆ ಸತ್ಯಳ ಮೊನಚು ಕೋಪ ತುಂಬಾ ತುಂಬ ಇಷ್ಟ.ಮೊದಲ ದಿನ ಅವಳು ನನ್ನನ್ನು ಅವಡುಗಚ್ಚಿ ನೋಡಿದ ರೀತಿಗೆ ನಾನು ಕ್ಲೀನ್ ಬೋಲ್ಡ್ ! ನಕ್ಕರೆ ಯಾವ ಪ್ರಪಂಚ ಮುಳುಗಿ ಹೋಗುತ್ತೋ ಅನ್ನುವ ಗಡಸು ಹುಡುಗಿ,ನಾನು ಅವಳನ್ನು ಇಷ್ಟ ಪಡ್ತಾ ಇದ್ದೀನಿ ಅಂತ ಗೊತ್ತಾದರೂ ಸಿಕ್ಕಾಪಟ್ಟೆ ಸತಾಯಿಸಿದ ತುಂಟ ಗೆಳತಿ,ಎಲ್ಲ ವಿಷಯದಲ್ಲೂ ಒಂದು ಕೈ ಮುಂದೆ ಇರುವ ಬುದ್ಧಿವಂತೆ.ಆದರು ಪ್ರೀತಿಯ ವಿಷಯದಲ್ಲಿ ಸಂಪೂರ್ಣ ದಡ್ಡಿ ,ಕೃಷ್ಣನ ಒಲವಿನ ಸಖಿ ಸತ್ಯಳಂತೆ ಪೊಸೆಸಿವ್ ,ಈ ವಿಷಯದಲ್ಲಿ ಸರಿ ಹೋಗಲು ಇಚ್ಚಿಸದೆ ಇರುವ ನನ್ನ ಒಲವು.ರಾಧಿ ನನ್ನ ಬಾಲ್ಯದ ಗೆಳತಿ,ಊರಿಂದ ಯಾವುದೋ ಕೆಲಸಕ್ಕಾಗಿ ನಮ್ಮ ಮನೆಗೆ ಬಂದು ಇದ್ದಾಳೆ ,ತುಂಬಾ ಸಲುಗೆ ನಮ್ಮಿಬ್ಬರಲ್ಲೂ ಇದೆ.ಅಪ್ಪ ಅಮ್ಮನಿಗೆ ಅವಳನ್ನು ಸೊಸೆ ಮಾಡಿಕೊಳ್ಳುವ ಆಸೆ.ಈ ವಿಷಯ ನನ್ನನ್ನು ಕೇಳಿದಾಗ ನಾನು ಯಾಕೋ ಏನು ಮಾತಾಡಲಿಲ್ಲ.ಅದನ್ನು ಸಮ್ಮತಿ ಅಂತ ಮನೆಯವರು ತಿಳಿದರು,ಅದಕ್ಕೆ ತಕ್ಕಂತೆ ನಾನು ನನ್ನ ಮುದ್ದು ಹುಡುಗಿಯನ್ನು ಮೀಟ್ ಮಾಡೋಕೆ ಆಗಲಿಲ್ಲ,ಚಿನ್ನ ನಂಗೊತ್ತು ಈ ರಾಧಿ ವಿಷ್ಯ ನಿನಗೆ ಸುಮ್ಮಿಯಿಂದ ಗೊತ್ತಾಗಿದೆ ಅಂತ.ಐ ಲವ್ ಯು ಕಣೆ ಹುಡುಗಿ,ಗೊತ್ತು ನಂಗೆ ನೀನೂ ನನಗೆ ಯಾರು ಬೇಡ ಅಂತ ಬಿಗಿದು ಕುಳಿತು ಬಿಟ್ಟು ಇರ್ತೀಯಾಂತ ,ಆದರೆ ನೀನೂ ಇಷ್ಟ ಬಂದಂಗೆ ಇರೋಕೆ ನಾನು ಬಿಡ್ತೀನ? ನಾ ನಿನ್ನ ಕನಸಿಗೆ ಚಂದಾದಾರನು ಚಂದ ಬಾಕಿ ನೀಡಲು ಬಂದೆ ಬರುವೆನು.. ನಿನ್ನವನು ಚಿನ್ನ ಅನುಮಾನವೇ ಬೇಡ.

Friday 6 February 2009

ಸೇಲ್ಸ್ ಮ್ಯಾನ್ :ಸರ್ ಇರುವೆಗೆ ಹಾಕುವ ಪೌಡರ್ ಇದೆ ದಯವಿಟ್ಟು ತಗೊಳ್ಳಿ...

ಸರ್ದಾರ್: ಬೇಡಪ್ಪ.. ಇವತ್ತು ಪೌಡರ್ ಹಾಕಿದರೆ,ನಾಳೆ ಲಿಪ್ಸ್ಟಿಕ್ ಕೇಳುತ್ತೆ,ನಾನು ಎಲ್ಲಿಂದ ತರಲಿ!!

Followers