Monday 25 May 2009

ಪೆಥಲಾಜಿಕಲ್ ಗ್ಯಾಮ್ಬ್ಲಿಂಗ್

ಈಗಷ್ಟೇ ಟ್ವೆಂಟಿ-20 ಮ್ಯಾಚ್ ಮುಗಿಯಿತು.ಅದರಿಂದ ಯಾರಿಗೆಷ್ಟು ಪ್ರಯೋಜನ ಆಗೋತ್ತೋ ಏನೋ ಗೊತ್ತಿಲ್ಲ,ಆದರೆ ಇಂತಹ ಪಂದ್ಯಗಳ ಆಟಗಾರರ ಮೇಲೆ ಕಟ್ಟುವ ಬೆಟ್ಟಿಂಗ್ ಹಾವಳಿ ಮಾತ್ರ ಸಿಕ್ಕಾಪಟ್ಟೆ ಜೋರಾಗಿ ಇರುತ್ತದೆ .ಈ ರೀತಿಯ ಬೆಟ್ಟಿಂಗ್ ಕಟ್ಟುವ ಅಭ್ಯಾಸಕ್ಕೆ ವೈದ್ಯಕೀಯ ಪರಿಭಾಷೆಯಲ್ಲಿ ಪೆಥಲಾಜಿಕಲ್ ಗ್ಯಾಮ್ಬ್ಲಿಗ್ ಎಂದು ಕರೆಯುತ್ತಾರೆ.ಇದು ಹೆಚ್ಚಾಗಿ ನಮಗೆ ಕ್ರೀಡಾ ಕ್ಷೇತ್ರದಲ್ಲೋ ಅಥವಾ ,ಕುದುರೆ ರೇಸ್ ನಲ್ಲಿಯೂ ಕಂಡು ಬರುತ್ತದೆ.ಇದೊಂದು ಮಾನಸಿಕ ವ್ಯಾಧಿ.ಈ ಸಮಸ್ಯೆಗೆ ಒಳಗಾದವರು ತಮ್ಮ ಹಿಂದಿನ ಅನುಭವಗಳನ್ನು ಮರೆತು ಹೋಗುತ್ತಾರಲ್ಲದೆ,ಪುನಃ ಹೊಸ ಯೋಜನೆಯ ತಯಾರಿಯತ್ತ ತಮ್ಮ ಗಮನ ಕೇಂದ್ರೀಕರಿಸುತ್ತಾರಂತೆ.ತಮ್ಮ ಮನಸ್ಸು ಖುಷಿಯಾಗಲು ಅವರು ಹೆಚ್ಚಿನ ಮೊತ್ತವನ್ನೇ ಖರ್ಚು ಮಾಡುತ್ತಾರೆ .ಮತ್ತೊಮ್ಮೆ ಇಂತಹ ಬೆಟ್ಟಿಂಗ್ ಕಡೆ ಕಣ್ಣೆತ್ತಿ ನೋಡಬಾರದು ಎಂದು ಸದಾ ನಿರ್ಣಯಗಳನ್ನು ತೆಗೆದುಕೊಂಡು ಅದನ್ನು ಪಾಲಿಸಲಾಗದೆ ವಿಫಲಗೊಳ್ಳುವುದುತನ್ನ ಇಂತಹ ಅಭ್ಯಾಸದಿಂದ .ಒಂದು ವೇಳೆ ಬಿಟ್ಟೆ ಬಿಡ ಬೇಕು ಎಂದು ಗಟ್ಟಿ ನಿರ್ಣಯ ತೆಗೆದುಕೊಂಡು ಬಳಿಕ ಅಶಾಂತಿಯಿಂದ ಎಗರಾದುವುದು,ಹಣಕ್ಕಾಗಿ ಮೋಸ,ವಂಚನೆ ಯತ್ತ ಕೈ ಹಾಕುವುದು.ಗ್ಯಾಮ್ಬ್ಲಿಂಗ್ ಕಾರಣದಿಂದ ಕೆಲಸ ಮಾಡುವ ಕಡೆ ಮತ್ತು ಸ್ನೇಹಿತರ ,ಆಪ್ತೇಷ್ಟರ ಬಳಿ ಸುಳ್ಳು ಹೇಳುವುದು.....! ಹೀಗೆ ಅನೇಕಾನೇಕ.ಇಂತಹ ಮನೋ ವ್ಯಾಧಿಗೆ ಗುರಿಯಾದ ವ್ಯಕ್ತಿಗಳಲ್ಲಿ ಈಗ ಲಕ್ಷಣಗಳು ಕಾಣಸಿಗುತ್ತದೆ.
ಗೆಲುವು :- ಗ್ಯಾಮ್ಬ್ಲಿಂಗ್ ನಲ್ಲಿ ಮೊದಲ ಬಾರಿ ದೊರೆತ ವಿಜಯವನ್ನು ದೊಡ್ಡದು ಮಾಡಿಕೊಂಡು ಸಂಭ್ರಮಿಸುವುದು.ನಂತರ ತಾವೆಷ್ಟು ಕ್ರೀಡಾ ನಿಪುಣರೆಂದು ಹೆಮ್ಮೆ ಪಡುವುದಲ್ಲದೆ,ಪ್ರತಿ ಸರ್ತಿ ಗೆಲುವು ತಮಗೆ ಕಟ್ಟಿ ಇಟ್ಟಿದ್ದು ಎಂದು ಕನಸು ಕಾಣುವುದು.
ಸೋತ ಮೊತ್ತ ಮತ್ತೆ ಪಡೆಯುವ ಪ್ರಯತ್ನ :-ತಾವು ಎಷ್ಟು ಹಣ ಕಳೆದುಕೊಂದಿದ್ದೆವೋ ಅದನ್ನು ಪುನಃ ಪಡೆಯುವತ್ತ ತಮ್ಮ ಗಮನ ನೆಟ್ಟಿರುತ್ತಾರೆ.ಪರಿಣಾಮ ಮತ್ತಷ್ಟು ಹಣದ ಹೂಡಿಕೆ.ಅಲ್ಲದೆ ಈಸರ್ತಿ ಅಷ್ಟೇ ಮತ್ತೆಂದಿಗೂ ಅದರತ್ತ ಸುಳಿಯೇ ಅನ್ನುವ ಆಶ್ವಾಸನೆ ......!

ನಿರಾಸೆ:-ಈ ರೀತಿಯ ಅಭ್ಯಾಸದಿಂದ ಹಣದ ಹೊಳೆ ಹರಿದು ಅವರ ಆರ್ಥಿಕ ಸ್ಥಿತಿ ಬತ್ತಿದ ನದಿಯಾಗುತ್ತದೆ.ಪರಿಣಾಮ ಚೆಕ್ ಬೌನ್ಸ್ !ತಮ್ಮ ಆಪ್ತರ ಸಹಾಯ ಪಡೆದು ಇವರು ಸಮಸ್ಯೆಯಿಂದ ಪಾರಾಗ ಬಹುದು,ಆದರೆ ಅದೇ ಚಟವಾಗಿ ಮಾರ್ಪಾಡಾಗುತ್ತದೆ.ಮೇಲೆ ತಿಳಿಸಿದ ಘಟ್ಟಗಳೂ ದಾಟಿದರೆ ಅವರ ಸ್ಥಿತಿ ದಮನೀಯವಾಗುತ್ತದೆ.ಯಾರ ಬಳಿಯೂ ಸಹಾಯ ಸಿಗದೇ ಡಿಪ್ರೆಶನ್ ಜೊತೆಯಾಗುತ್ತದೆ.ಆತ್ಮಹತ್ಯೆ ಮಾಡಿಕೊಳ್ಳುವ ಸಂಭವವು ಅಧಿಕವಾಗಿರುತ್ತದೆ.ಅಂತಹ ಸಮಯದಲ್ಲಿ ಆತ್ಮಹತ್ಯೆಗೆ ಶರಣಾಗುವ ಸಂಭವ ಇರುತ್ತದೆ.
ಚಿಕಿತ್ಸೆ:- ಉತ್ತಮ ಬಾಂಧವ್ಯ ಬೆಳೆಯುವುದರತ್ತ ಆದ್ಯತೆ ನೀದುದ್ವುದು.ಇಲ್ಲಿ ಕುಟುಂಬದ ಸದಸ್ಯರ ಪಾತ್ರ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದು ಕೊಳ್ಳುತ್ತದೆ..ಅವರನ್ನು ಕೆಲಸಕ್ಕೆ ಹೋಗುವಂತೆ ಪ್ರೋತ್ಸಾಹಿಸುವುದು.ಅವರನ್ನು ಮಾನಸಿಕ ತಜ್ಞರ ಬಳಿ ಕರೆದೊಯ್ಯುವುದು.ಅವರಿಂದ ಕೌನ್ಸಿಲಿಂಗ್ ಕೊಡಿಸುವುದು.....!
ನನ್ನ ಮಿತ್ರರೊಬ್ಬರು ಬೆಟ್ ಕಟ್ಟೋ ಗುಣ ಹೊಂದಿದ್ದಾರೆ.ಅವರಿಗೆ ಇವೆಲ್ಲ ಹೇಳಿದ್ದೇನೆ,ಆದರೆ ಆಟ ಸಾರಿ ಹೋಗಲ್ಲ ಅಂತ ಇನ್ನೊಬ್ಬ ಮಿತ್ರ ನನ್ನ ಬಳಿ ಬೆಟ್ ಕಟ್ಟಿದ್ದಾನೆ ನೋಡ್ ಬೇಕು ಯಾರು ಗೆಲ್ತೀವೋ ಅಂತ :-)

Saturday 9 May 2009

ವೇದಗಳಲ್ಲಿ ಇಂದ್ರ

ರಾಮಾಯಣ ಹಾಗು ಮಹಾ ಭಾರತ ಗಳಲ್ಲಿ ಇಂದ್ರನನ್ನು ತುಂಬಾ ಪರಾಕ್ರಮಶಾಲಿ ಎಂದು ಹಾಗೂ ಕಾಮುಕನೆಂದು ವರ್ಣಿಸಲಾಗಿದೆ.ಆದರೆ ವೇದಗಳಲ್ಲಿ ಈತನನ್ನು ಉದಾತ್ತಶಾಲಿ,ಪ್ರತಿಭಾವಂತ,ಶತ್ರು ಸಂಹಾರಕ ಎಂದು ವರ್ಣಿಸಲಾಗಿದೆ. ವೇದಗಳಲ್ಲಿ ಮುವ್ವತ್ಮೂರು ಕೋಟಿ ದೇವಿ ದೇವತೆಗಳ ವರ್ಣನೆ ಮಾಡಲಾಗಿದೆ .ಇದನ್ನು ಮೂರು ಭಾಗಗಳಾಗಿ ವಿಭಾಗಿಸಲಾಗಿದೆ. ದ್ಯು=ಆಕಾಶದಲ್ಲಿ ನೆಲೆಸಿರುವವರು,ದೇವತಾ=ಅಂತರಿಕ್ಷ(ಮಧ್ಯ),ಸ್ಥಳೀಯ ದೇವತೆ .ಅಂತರಿಕ್ಷ ದೇವತೆಗಳಲ್ಲಿ ಇಂದ್ರ ಅಗ್ರಮಾನ್ಯ.ಆರ್ಯರಿಗೆ ಇಂದ್ರ ಪ್ರಿಯನಾದ ದೇವತೆ.ಇಂದ್ರನನ್ನು ಸ್ತುತಿಸುವ ಇನ್ನೂರ ಐವತ್ತು ಶ್ಲೋಕಗಳು ( ಚಿಕ್ಕ-ದೊಡ್ಡ,ಎಲ್ಲವನ್ನು ಜೊತೆ ಸೇರಿಸಿದರೆ ಮುನ್ನೂರಾಗುತ್ತದೆ).ಶತ್ರು ಸಂಹಾರಕನಾದ ಇಂದ್ರನಿಗೆ ವಿಶೇಷ ಸ್ಥಾನ ಇದೆ.ವ್ರುತ್ತಾಸುರ,,ಶತ್ರುಪುರಿ,ಶಂಭಾರ....!ಇನ್ನು ಅನೇಕ ರಾಕ್ಷಸರನ್ನು ನಾಶ ಮಾಡಿದ ದೇವತೆ ಅನ್ನುವ ಅಗ್ಗಳಿಕೆ ಈತ ಹೊಂದಿದ್ದಾನೆ ಋಗ್ವೇದದಲ್ಲಿ .ಇಂದ್ರ ವಜ್ರಾಯುಧಡಿದ ಶತ್ರು ಸಂಹಾರ ಮಾಡಿದರೂ,ಆಗಾಗ ಆತ ಬಾಣ ಉಪಯೋಗಿಸಿ ಶತ್ರು ಸಂಹಾರ ಮಾಡುತ್ತಾನೆ.ಇಂದ್ರ ಬಾಣದಲ್ಲಿ ಯುದ್ಧ ಮಾಡಿದ ಬಗ್ಗೆ ಅಥರ್ವಣ ವೇದದಲ್ಲಿ ವರ್ಣನೆ ಇದೆ(19/13/4) . ಋಗ್ವೆದದಿಂದ ಹಿಡಿದು ಉಪನಿಷತ್ ತನಕ ಇಂದ್ರ ಶತ್ರುಸಂಹಾರಕ ಎಂದು ತಿಳಿಸಲಾಗಿದೆ.ವೈದಿಕ ಕಾಲದಲ್ಲಿ ಇಂದ್ರ ರಾಷ್ಟ್ರೀಯ ದೇವತೆಯಾಗಿ ಪೂಜಿಸಲ್ಪಡುತ್ತಿದ್ದ.ಈತ ಮಹಾ ಬುದ್ಧಿವಂತ ಎಂದು ಋಗ್ವೇದದಲ್ಲಿ ವರ್ಣಿಸುತ್ತದೆ.ಜನರ ಪ್ರಾಣ ರಕ್ಷಕ.....!ಹಲವಾರು ರೀತಿ ವರ್ಣಿಸಲಾಗಿದೆ.ಅಜೇಯ,ವೀರತೆ,ಸಾರ್ವಭೌಮತ್ವ ,ಜ್ಞಾನ ಇವೆಲ್ಲದರ ಅಧಿಪತಿ ಅನ್ನುವ ವರ್ಣನೆಯು ಇಂದ್ರನಿಗೆ ಗಿಟ್ಟಿದೆ.ಈ ಎಲ್ಲ ಕಾರಣದಿಂದ ಈತ ಸ್ವರ್ಗಕ್ಕೆ ರಾಜ ಹಾಗು ದೇವತೆಗಳ ಅಧಿಪತಿ. ಆದರೆ ಸಾಮಾನ್ಯವಾಗಿ ಪೌರಾಣಿಕ ಚಲನಚಿತ್ರಗಳಲ್ಲಿ ಹಾಗು ಪೌರಾಣಿಕ ಇಂದ್ರ ಋಗ್ವೇದದಲ್ಲಿ ತಿಳಿಸಿರುವಷ್ಟು ಬುದ್ಧಿವಂತನಲ್ಲ ... !ಜೊತೆಗೆ ವಿಲಾಸಿ,ಹೀಗೆ ಹತ್ತು ಹಲವಾರು ರೀತಿಯಲ್ಲಿ ಆತನನ್ನು ತೋರಿಸುತ್ತಾರೆ.ಏನಾದರು ಇಂದ್ರ ವೇದಗಳ ಕಾಲದ ಅಧಿಪತಿ ಅನ್ನುವುದನ್ನು ಮಾತ್ರ ಒಪ್ಪಿಕೊಳ್ಳಲೇ ಬೇಕು.

Followers