Saturday 27 June 2009

ನನಗೆ ಭಯ....!

ಇದು ತುಂಬ ಹಳೆಯ ವಿಷ್ಯ,ಆದರೆ ನಾನು ಈಗ ಅದರ ಬಗ್ಗೆ ಹೇಳೋಕೆ ಹೊರಟಿದ್ದೀನಿ.ಸಾಮಾನ್ಯವಾಗಿ ಭಯ ಎಲ್ಲರಲ್ಲೂ ಎಲ್ಲೋ ಒಂದು ಕಡೆ ಅವತು ಕುಳಿತಿರುವ ತರ್ಲೆ.ಕೆಲವರಿಗೆ ತನ್ನ ಪ್ರಭಾವ ಹೆಚ್ಚು ತೋರಿದರೆ,ಒಂದಷ್ಟು ಜನರ ಬಳಿ ತಗ್ಗಿಬಗ್ಗಿ ಇರುತ್ತದೆ ಆ ವಿಷ್ಯ ಬೇರೆ ! ಚಲನಚಿತ್ರ ಕಲಾವಿದರು ತೆರೆಯಮೇಲೆ ಹಾವನ್ನು ಹಿಡಿದು,ಹುಲಿಯನ್ನು ಹೊಡೆದು,ದೆವ್ವದೊಂದಿಗೆ ಬಡೆದಾಡಿದರು,ಮರೆಯಲ್ಲಿ ಅವರು ಕೆಲವು ವಿಷಯಗಳಿಗೆ ಭಯಭೀತರು!ಕೆಲವು ಸಿನಿಮಾಗಳಲ್ಲಿ ಹಿರೋಯಿನ್ ಒಲಿಬೇಕಾದ್ರೆ ನಮ್ ಹೀರೋ ಜಿರಳೆ ಹಿಡೀಲೆ ಬೇಕು ಅಂತಹ ಪರಿಸ್ಥಿತಿ! ನಮ್ಮ ಸ್ಯಾಂಡಲ್ ವುಡ್ಡಿನಲ್ಲಿ ತನ್ನ ಪ್ರತಿಭೆ ತೋರಿದ್ದ ನೆರೆಯ ರಾಜ್ಯದ ನಟಿ ಶ್ರೀದೇವಿ (ನವನಟಿ )ಗೆ ಹಲ್ಲಿ ಕಂಡ್ರೆ ಹೆದರಿ ಸಾಯೋ ಹಾಗೆ ಆಗುತ್ತಂತೆ ,ಅದೇ ರೀತಿ ಅದೇ ನಮ್ ಪುನಿತ್ ರಾಜ್ ಕುಮಾರ್ ಜೋಡಿ ಆಗಿದ್ದ ಮಲೆಯಾಳಂ ಕುಟ್ಟಿ ಮೀರ ಜಾಸ್ಮಿನ್ಗೆ ಸಹ ಹಲ್ಲಿ ಕಂಡ್ರೆ ಸಿಕ್ಕಾಪಟ್ಟೆ ಹೆದರಿಕೆ,ಅದೆಷ್ಟು ಅಂತ ಅಂದ್ರೆ ಕಿರ್ಚಾಡಿ...ಕಿರ್ಚಾಡಿ....! ಬ್ಯಾಡ ಮನೆಯವರ ಕಥೆ! ಇದೆ ವರ್ಗಕ್ಕೆ ಸೇರಿದ ಬಾಲಿವುಡ್ ಹೆಣ್ಣುಮಕ್ಕಳ ಬಗ್ಗೆ ಹೇಳೋದೇ ಆದ್ರೆ,ವಿದ್ಯಾಬಾಲನ್,ಪ್ರಿಯಾಂಕ ಚೋಪ್ರಾ,ಹಲ್ಲಿಪ್ರಿಯರು! ಆದರೆ ಮಾಧುರಿ ದೀಕ್ಷಿತ್ಗೆ ಜಿರಳೆ ಕಂಡ್ರೆ ಹೆದರಿಕೆಯಂತೆ!ಅಮಿಷ ಪಟೇಲ್,ಅಯೇಶ ತಕಿಯಾ,ಪರಿಸ್ಥಿತಿ ಸಹ ಹೀಗೆ ಇದೆ.ಹಲ್ಲಿ,ಜಿರಳೆ ನಂತರ ಸ್ಥಾನ ಪಡೆದುಕೊಳ್ಳುವುದು ಹಾವು....!
ಪ್ರಾಣಿಗಳ ವಿಷಯ ಹೀಗಾದ್ರೆ ಹೆಚ್ಚು ಜನರಿಗೆ ಹೆದರಿಕೆ ಉಂಟಾಗೋದು ದೆವ್ವಗಳನ್ನು ಕಂಡ್ರೆ.ದೆವ್ವದ ವಿಷಯಕ್ಕೆ ಬಂದ್ರೆ ಬಾಲಿವುಡ್ ದೆವ್ವಪ್ರಿಯ ರಾಮ್ಗೋಪಾಲ್ ವರ್ಮ ಜ್ಞಾಪಕಕ್ಕೆ ಬರ್ತಾರೆ.ಆತ ಸಹ ಸಿಕ್ಕಾಪಟ್ಟೆ ಹೆದರುಪುಕ್ಲ.ಆ ಹೆದರಿಕೆಯಿಂದ ದೂರ ಆಗಲು ಆತ ಜನ ಹೆದರುವ ಸಿನಿಮಾ ತೆಗೆಯುತ್ತಾನಂತೆ.ರಾಮುಗೆ ಕತ್ತಲು,ಒಂಟಿಯಾಗಿ ಪ್ರಯಾಣ,ಕಳ್ಳ-ಪೋಲೀಸ್ ಇಬ್ಬರನ್ನು ಕಂಡರೂ ಹೆದರಿಕೆಯಂತೆ!ಈತ ನಿರ್ಮಿಸಿದ ಸಿನಿಮಾ ನೋಡೋಕೆ ತುಂಬಾ ಹೆದರ್ತಾರಂತೆ ರಾಮು!ಬಿಂದಾಸ್ ನಟಿ ಬಿಪಾಸ ಬಸುಗೆ ಸಹ ಒಂಟಿಯಾಗಿ ಇರಲು,ದೆವ್ವಗಳನ್ನು ಕಂಡ್ರೆ ಭಯ....ಭಯ! ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ಗೆ ಅತಿ ಎತ್ತರದ ಕಟ್ಟಡದ ಮೇಲಿಂದ ಕೆಳಗೆ ನೋಡಲು ಸಿಕ್ಕಾಪಟ್ಟೆ ಹೆದರಿಕೆ.ರಿಸ್ಕ್ ಶಾಟ್ ಸಂದರ್ಭದಲ್ಲಿ ಆತ ಗಾಯತ್ರಿ ಮಂತ್ರವನ್ನು ಜಪಿಸುತ್ತಾನಂತೆ.ದೀಪಿಕಾ ಪಡುಕೋಣೆ ಸಹ ಇದೆ ಗುಂಪಿಗೆ ಸೇರಿದ್ದಾರೆ.ಶಾಲೆಯಲ್ಲಿ ಇದ್ದಾಗ ಎಲ್ಲರಿಗಿಂತ ಮೊದಲು ನಿಲ್ಲಲು,ಮಾತನಾಡಲು ಹೆದರಿಕೆ ಇತ್ತು ಇದು ತಬು ಪರಿಸ್ಥಿತಿ! ಎಗರೆಗರಿ ನಗುವ ನಿರೂಪಕ ಸಿದ್ದು ಗೆವ ಮಾತು ಆಡೋದು ಅಂದ್ರೆ ಅಷ್ಟಕಷ್ಟೇ.ಒಂಟಿತನ,ಸೋಲು,ಅಪನಿಂದೆ....! ಹಲವು ಕಾರಣಗಳು ಹೆದರಿಕೆಗೆ ಕಾರಣ ಆಗುತ್ತದೆ.ಆದ್ರೆ ಭಯ ನಿಜವಾಗಲು ಭಯ ಪಡಿಸುವ ವಿಷಯವೇ ತಾನೇ!

Thursday 25 June 2009

ನಮ್ಮ ಉನ್ನತಿಗಾಗಿ ಪ್ರಾರ್ಥನೆ

ಸಾಮಾನ್ಯವಾಗಿ ನಾವು ಅನೇಕ ರೀತಿಯ ಚಿಕಿತ್ಸಾ ವಿಧಾನದ ಬಗ್ಗೆ ಕೇಳಿ ಇರುತ್ತೇವೆ.ಕೆಲವು ಸರ್ತಿ ಅನುಭವದ ಮೂಲಕ ಅವುಗಳ ಫಲಿತಾಂಶ ತಿಳಿದೇ ಇರುತ್ತೇವೆ.ಆದರೆ ಪ್ರಾರ್ಥನಾ ಚಿಕ್ತಿಸೆ ಬಗ್ಗೆ ಎಷ್ಟು ಜನಕ್ಕೆ ತಿಳಿದಿದೆ?ಅದಕ್ಕೋ ಸಹ ಕೆಲವು ನಿಯಮಗಳನ್ನು ಅನುಸರಿಸ ಬೇಕು ಅಂತ ಹೇಳ್ತಾರೆ ತಜ್ಞರು.ಕ್ರಮಬದ್ಧ ಪದ್ದತಿಯಿಂದ ರೋಗಿಗಳು ರೋಗಮುಕ್ತರಾಗುತ್ತಾರೆ ಎಂದು ಸಹ ತಿಳಿಸಿದ್ದಾರೆ. ನಮ್ಮ ಶಾಸ್ತ್ರಗಳಲ್ಲಿ ಪ್ರಾರ್ಥನೆ ಮೂಲಕ ಮಹರ್ಷಿಗಳು ಚಿಕಿತ್ಸೆ ಮಾಡ್ತಾ ಇದ್ದರು ಅನ್ನುವ ಸಂಗತಿ ಗೊತ್ತೇ ಇದೆ.ಅದಕ್ಕೆ ಪೂರಕವಾದ ಪ್ರಮಾಣಗಳು ದೊರಕಿವೆ.ಯೇಸು,ಶಿರಡಿ ಸಾಯಿಬಾಬ,ರಾಮಕೃಷ್ಣ ಪರಮ ಹಂಸ ಮುಂತಾದ ಮಹಾನುಭಾವರು ಸ್ಪರ್ಶದ ಮೂಲಕ ರೋಗವನ್ನು ದೂರಮಾಡಿದ ಉದಾಹರಣೆಗಳು ಸಾಕಷ್ಟಿವೆ.ಇವೆಲ್ಲವೂ ಪ್ರಾರ್ಥನೆಯ ಮೂರ್ತ ರೂಪ ಅಂತಲೇ ಹೇಳ ಬೇಕು.ಪ್ರಾರ್ಥನೆ ಮಾಡುವವರ ದೇಹದಲ್ಲಿ ಕೆಲವು ರಾಸಾಯನಿಕ ಪರಿವರ್ತನೆಗಳು ನಡೆಯುತ್ತದೆ.ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಮನಸ್ಸು ನಿರ್ಮಲವಾಗಿ,ಸಕಾರಾತ್ಮಕ ವಾಗಿ ಆಲೋಚಿಸುವ ವ್ಯಕ್ತಿತ್ವ ಉಂಟಾಗುತ್ತದೆ.ಪ್ರಾರ್ಥನೆಗೆ ಎಲ್ಲದಕಿಂತ ಮುಖ್ಯವಾದುದು ಶ್ರದ್ಧೆ,ವಿಶ್ವಾಸ.ಚಂಚಲ ಮನಸಿನಿಂದ ಉತ್ತಮ ಫಲಿತಾಮ್ಶಕ್ಕೆ ಖೋತ ಬೀಳುತ್ತದೆ!ಪ್ರಾರ್ಥನೆಯ ವಿಶೇಷತೆ ಅಂತ ಅಂದ್ರೆ ಇದಕ್ಕೆ ಆಸ್ತಿಕ ಹಾಗೂ ನಾಸ್ತಿಕ ಅನ್ನುವ ಬೇಧ ಭಾವ ಇಲ್ಲ,ಎಲ್ಲರು ಇಷ್ಟಪಟ್ಟು ಮಾಡುವ ಒಂದು ಸಾರ್ವತ್ರಿಕ ಆರೋಗ್ಯ ರಕ್ಷಣಾ ವಿಧಾನವಾಗಿದೆ.
ಒಂದೊಂದು ಧರ್ಮದಲ್ಲಿ ಒಂದೊಂದು ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು ಮೂಲ ಉದ್ದೇಶದಲ್ಲಿ ಯಾವುದೇ ಭಿನ್ನತೆ ಇರದು.ಪ್ರಾರ್ಥನೆ ಅಂದರೆ ಕೆಲವರ ಪ್ರಕಾರ ಅವಸರವರವಾಗಿ ಮಾಡುವ ಕ್ರಿಯೆ.ಆದರೆ ಅದು ಆ ರೀತಿಯದ್ದಲ್ಲ,,ಸಹಜವಾಗಿ ಉದ್ಭವ ಆಗುವ ಪ್ರಕ್ರಿಯೆ!ಪ್ರಾರ್ಥನೆ ಪ್ರೇಮದ ಪರಮ ಉತ್ಕೃಷ್ಟ ರೂಪ ಆಗಿದೆ.'ಭಗವಂತಎಲ್ಲರಿಗೂ ಆರೋಗ್ಯ ನೀಡಪ್ಪ 'ಅಂದುಕೊಂಡರೆ ಸಾಕು ನಿಮ್ಮ ಆರೋಗ್ಯದಲ್ಲಿ ಮಹತ್ತರವಾದ ಬದಲಾವಣೆ ಸಿಗುತ್ತದೆ ಅಂತಾರೆ ತಜ್ಞರು!ಆದರೆ ಪ್ರಾರ್ಥನೆ ಮಾಡಲು ಮುಂಜಾನೆ ಅಥವಾ ಸಂಜೆ ಅತ್ಯಂತ ಸೂಕ್ತವಾದುದು.ಆ ಸಮಯದಲ್ಲಿ ಈಶ್ವರ ತತ್ವ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ.ಇದು ಸಹ ಗುರುವಿನ ಮೂಲಕ ಕಲಿಯ ಬೇಕಾದ ವಿದ್ಯೆ.ಗುರು ಇದರ ರಹಸ್ಯಗಳನ್ನು ಹೇಳಿಕೊಟ್ಟಾಗ ಸುಲಭ ರೀತಿಯಯಲ್ಲಿ ಏಕಾಗ್ರತೆ ಹೊ೦ದಬಹುದು .ಆದರೆ ಈ ಪ್ರಕ್ರಿಯೆಗೂ ಸಾಧನೆ ಅತ್ಯಗತ್ಯ!

Followers