Saturday 8 May 2010

ಅಮ್ಮ ....!

ಅಮ್ಮ ....! ದೇವರು ಸಮಸ್ತ ಜೀವ ಕೋಟಿಗೂ ನೀಡಿದ ಅಪರೂಪದ ವರ. ಆ ಅಮ್ಮ ಭಗವಂತ ಸೃಷ್ಟಿ ಸಿದ  ಎಲ್ಲ ಜೀವರಾಶಿಗಳಲ್ಲಿ ಜೀವಂತವಾಗಿರುತ್ತಾಳೆ...ಅಮ್ಮ... ! ಜೈಪುರದಲ್ಲಿ ರಸ್ತೆಯಲ್ಲಿ ಕೋತಿಮರಿಯೊಂದು ಸ್ಕೂಟರ್ ಸವಾರನ ನಿರ್ಲಕ್ಷ್ಯದಿಂದ ಗಾಯಗೊಂಡಿತು. ಎಲ್ಲರಿಗೂ ಬದುಕುವ ಆಸೆ ಸದಾ ಇದ್ದೆ ಇರುತ್ತದೆ. ಪ್ರಯತ್ನ ಪಟ್ಟು ಆ ಮುದ್ದು ಮರಿ ಮೇಲೇಳಲು ಪ್ರಯತ್ನಿಸಿತು...! ಸೃಷ್ಟಿಯಲ್ಲಿ ಎಲ್ಲ ಜೀವಿಗಳು ಬದುಕಿಗೆ ಆದ್ಯತೆ ನೀಡುತ್ತದೆ. ಈ ಮರಿ ಬದುಕಲು ಪ್ರಯತ್ನಿಸಿದಂತೆ, ತನ್ನ ಹೊಟ್ಟೆ ತುಂಬಿಸಿ ಕೊಂಡು ಜೀವ ಉಳಿಸಿ ಕೊಳ್ಳಲು ಆಲ್ಲೆಲ್ಲೋ ಇದ್ದ ನಾಯಿ  ಆ ಸ್ಥಳಕ್ಕೆ ಧಾವಿಸಿ ಈ ಮರಿಯ ಮೇಲೆ ಅಟಾಕ್ ಮಾಡಿತು. ಆ ನಾಯಿ ಈ ಕೂಸಿಗೊಂದು ಅಮ್ಮ ಇದ್ದಾಳೆ  ಎನ್ನುವ ಸಂಗತಿ ಮರೆತಿತ್ತು ಅಂತ ಕಾಣುತ್ತೆ, ಆದೆ ಅಮ್ಮ ಹಾಗಲ್ಲವಲ್ಲ, ತನ್ನ ಪ್ರಾಣ ಹೊಸದರೂ ಸರಿಯೇ ಕಂದನನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡೇ ತೀರುತ್ತಾಳೆ.. ಅಮ್ಮ ಮಂಗ ಮಾಡಿದ್ದು ಅದನ್ನೇ, ತನ್ನ ಕಂದನನ್ನು ತಿನ್ನಲು ಬಂದ ನಾಯಿಯ ಮೇಲೆ ತೀವ್ರವಾಗಿ ದಾಳಿ ನಡೆಸಿ ಅಮ್ಮನ ಕೆಲಸ ಮಾಡಿತು.. ಇದರ ಸಿಟ್ಟಿಗೆ ಹೆದರಿ ನಾಯಿ  ಓಟ ಕೀಳ್ತು.ಆ ಬಳಿಕ ಕಷ್ಟ ಪಟ್ಟು ಮಗುವನ್ನು ಸುರಕ್ಷಿತ ಜಾಗಕ್ಕೆ ಕೊಂಡೊಯ್ಯಿತು ...! ನನಗೆ ಬಂದ ಮೇಲ್ಗಳಲ್ಲಿ ತುಂಬಾ ಇಷ್ಟ ಆಗಿದ್ದು ಇದು...!

Followers