Friday 25 July 2014

ಮಗು..ನನಗಾದಂತೆ..ತೊಂದರೆ ಆಗದಿರಲಿ



ತಂದೆ ತಾಯಿ ತಮ್ಮಪಾಡಿಗೆ ತಾವು ಬದುಕಿದ್ದರು. ಒಂದು ದಿನ ಅಪ್ಪ ಮರಣಿಸಿದ. ಅಮ್ಮನನ್ನು ಸಾಕಲಾಗದಷ್ಟು ಹೃದಯಹೀನ ಆಗಿದ್ದ  ಶ್ರೀಮಂತ ಮಗ ತಂದೆಯ ಕ್ರಿಯಾಕರ್ಮಗಳು ಮುಗಿದ ನಂತರ  ಆಕೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿದ. ಸಾಕಷ್ಟು ಸಮಯ ಕಳೆಯಿತು. ಒಂದು ದಿನ ಆಶ್ರಮದಿಂದ ಕರೆ ಬಂತು. ಆತನ ತಾಯಿಯ ಸ್ಥಿತಿ ಗಂಭೀರವಾಗಿತ್ತು. ಆಕೆ ಅಂತಿಮ ಕ್ಷಣಗಳನ್ನು ಎಣಿಸುತ್ತಿದ್ದರು . ಸರಿ ಮಗ ಹೊರಟ. ಅಲ್ಲಿ ಮಲಗಿದ್ದ   ಹಣ್ಣುಹಣ್ಣು ಅಮ್ಮ ಮಗನನ್ನು ಕಂಡೊಡನೆ ಹತ್ತಿರ  ಕರೆದರು.

ಮಗು  ಈ ಕೋಣೆಯಲ್ಲಿ ಫ್ಯಾನ್ ಇಲ್ಲ. ಸಿಕ್ಕಾಪಟ್ಟೆ ಸೊಳ್ಳೆಗಳು ಕಚ್ಚಿ ಸಾಯಿಸ್ತಾ ಇದೆ. ಅದೇ ರೀತಿ ಇಲ್ಲಿ ನೀಡುವ ಆಹಾರ ಸಹ ಸುಮಾರಾಗಿದೆ. ಏನೋ ಒಂದು ಮುಖದ ಮೇಲೆ ಬಿಸಾಡಿಬಿಡ್ತಾರೆ. ನೀನು ಹೇಗಾದ್ರು ಸಮಯ ಮಾಡಿಕೊಂಡು   ಬಾ ಇಲ್ಲಿರುವ ಎಲ್ಲಾ ಕೋಣೆಗಳಿಗೂ ಫ್ಯಾನ್ ಹಾಕಿಸು. ಅದೇರೀತಿ ಆಶ್ರಮದವರ ಜೊತೆ ಮಾತಾಡಿ ಸರಿಯಾದ ಊಟದ ವ್ಯವಸ್ಥೆ ಮಾಡು.

ಹೀಗೆ ಹೇಳುತ್ತಾ ಸಾಗಿದ ಇನ್ನೇನು ಸಾಯುವ ಸ್ಥಿತಿಯಲ್ಲಿದ್ದ ತಾಯಿಯನ್ನು ಕಂಡು ಮಗನಿಗೆ ಅಚ್ಚರಿ ಆಯ್ತು. ಇಷ್ಟು ದಿನಗಳ ಕಾಲ ಒಂದೇ ಒಂದು ದಿನವು ತನಗಿರುವ ಸಮಸ್ಯೆ ಹೇಳಲೇ ಇಲ್ಲ, ಆದರೆ ಮರಣಿಸುವ ಸಮಯ ಹತ್ತಿರ ಬಂದಾಗ ಈ ರೀತಿಯ ಬೇಡಿಕೆ ಸಲಹೆ ಇಡ್ತಾ ಇದ್ದಾಳಲ್ಲ ಅಮ್ಮ  ಎನ್ನುವ ಆಶ್ಚರ್ಯ ತಡೆಯಲಾಗದೆ ಈ ಮಾತುಗಳು ಯಾಕಮ್ಮ ನನಗೆ ಈಗ ಹೇಳ್ತಾ ಇದ್ದೀಯ ಎಂದು ಕೇಳಿದ. 
ಆಗ ಆಕೆ ನಿಧಾನವಾಗಿ ಮಗನ ಕಡೆ ಹೇಳಿದ ಉತ್ತರವೂ ಎಂದೆಂದಿಗೂ ನೆನಪಲ್ಲಿ ಉಳಿದು ಹೋಯ್ತು.. ಆಕೆ ಹೇಳಿದ್ದಿಷ್ಟೇ

" ಮಗು ನಿನಗೂ ವಯಸ್ಸಾಗುತ್ತಿದೆ. ಸ್ವಲ್ಪ ದಿನಗಳು ಕಳೆದ ಬಳಿಕ ನಿನ್ನ ಮಕ್ಕಳು ಒಂದು ಗುರಿ ತಲಪುತ್ತಾರೆ. ಆಗ ಖಂಡಿತ ಅವರು ನಿನ್ನನ್ನು ಇಲ್ಲಿಗೆ ಸೇರಿಸುತ್ತಾರೆ. ಆಗ ನಿನಗೆ ನನ್ನಂತೆ ತೊಂದರೆ ಆಗ ಬಾರದಲ್ವೆ.. ಅದಕ್ಕೆ ಇಷ್ಟೆಲ್ಲಾ ಹೇಳಿದ್ದು ! "

Friday 18 July 2014

ಕಲ್ಲು-ವಜ್ರ


ಮಾನವಜನ್ಮ ದೊಡ್ಡದು ಅದ ಹಾನಿ ಮಾಡಿಕೊಳ್ಳ ಬೇಡಿ ಹುಚ್ಚಪ್ಪ ಗಳಿರಾ  ಅಂತ ದಾಸರು ಹೇಳಿರುವಹಾಡಿಗೆ ಹೊಂದಿಕೆ ಆಗುವ ಸಣ್ಣ ಕಥೆ ಇಲ್ಲಿದೆ ಸ್ವೀಕರಿಸಿ..
ಕಲ್ಲು ಹೊಡೆದು ಚೂರು ಮಾಡಿ ಬದುಕುವ ಒಬ್ಬಾತನಿಗೆ ಒಮ್ಮೆ ಸುಂದರವಾದ ಕಲ್ಲೊಂದು ದೊರಕಿತು ಅದನ್ನು ಆತ ತನ್ನ ಬಟ್ಟೆಯೊಳಗೆ ಕಟ್ಟಿಕೊಂಡು ಮನೆಯತ್ತ ನಡೆದ. ಅದನ್ನು ತನ್ನ ಪತ್ನಿಗೆ ನೀಡಿದ. ಆಕೆ ಆ  ಬಟ್ಟೆಯ ಚೀಲವನ್ನು ಅಲ್ಲಿಯೇ ಇದ್ದ ಮರದ ಗೂಟಕ್ಕೆ ತಗುಲಿ ಹಾಕಿದಳು. 


ಅದಾದ ಸ್ವಲ್ಪ ದಿನಗಳ ನಂತರ ಆಕೆಗೆ ಅಂಟುವಾಳದ ಕಾಯನ್ನು ಒಡೆದು ಚೂರು ಮಾಡಬೇಕಿತ್ತು, ತನ್ನ ಪತಿ ತಂದ ಚೀಲದಲ್ಲಿ ಕಲ್ಲು ಇರುವುದರ ಬಗ್ಗೆ ಆಕೆ ಗೊತ್ತಿತ್ತು, ಅದನ್ನು ತೆಗೆದುಕೊಂಡು ಅದರಿಂದ ಆ ಕಾಯಿಗಳನ್ನು ಒಡೆದಳು.. ಹಲವಾರು ಬಾರಿ ಇಂತಹ ಕೆಲಸಗಳಿಗೆ ಅದು ಬಳಕೆ ಆಯಿತು. 
ಅದಾದ ಬಳಿಕ   ದಂಪತಿಗಳ  ಮಗನಿಗೆ ಈ  ಕಲ್ಲಿನ ಮೇಲೆ ಗಮನ ಬಿಟ್ಟು, ಆತ ಅದನ್ನು ಆಟವಾಡಲು ಕೊಂಡೊಯ್ದ.  ಸ್ವಲ್ಪ ದಿನಗಳಾದ   ಬಳಿಕ ಆ  ಊರಿಗೆ ಬಂದ ಮಿಠಾಯಿ ಮಾರುವವನ ಕಣ್ಣಿಗೆ ಬಿತ್ತು, ಆತನ ಆ ಮಗುವನ್ನು ಪುಸಲಾಯಿಸಿ  ಜಾಸ್ತಿ ಮಿಠಾಯಿ ನೀಡಿ ಅದನ್ನು ಅವನ ಹತ್ತಿರದಿಂದ ತೆಗೆದುಕೊಂಡ.     
ಸಂಜೆ ಈ ಸಿಹಿ ಮಾರುವವನ ಸ್ನೇಹಿತ ಸಿಕ್ಕ, ಆತ  ಹಳೆ   ಸಾಮಾನುಗಳನ್ನು ಮಾರಾಟ ಮಾಡುವ ವ್ಯಾಪಾರಿ ಆಗಿದ್ದ. ಆತನಿಗೆ ಈ ಕಲ್ಲಿನ  ಮೇಲೆ ಆಸಕ್ತಿ ಉಂಟಾಯಿತು. ಅದನ್ನು ತನಗೆ ಕೊಡುವಂತೆ ಗೆಳೆಯನನ್ನು ಕೇಳಿದ. ಸಿಹಿ ಮಾರುವವನಿಗೆ ಗೆಳೆಯನಿಗೆ ಬೇಸರ ಮಾಡಲು ಇಷ್ಟ ಇಲ್ಲದೆ ಅದನ್ನು ನೀಡಿದ. ಹೀಗೆ ಅಂಟುವಾಳದ ಕಾಯಿ ಒಡೆಯಲು ಬಳಕೆ ಆದ ಕಲ್ಲು, ಮಗುವಿನ ಆಟಕ್ಕೆ ಉಪಯೋಗವಾದ ಕಲ್ಲು, ಸಿಹಿ ಮಾರುವವನ ಕಣ್ಣಿಗೆ ಆಸೆ ಉಂಟು ಮಾಡಿದ ಕಲ್ಲು ಅಂತಿಮವಾಗಿ  ಹಳೆ ಸಾಮಾನು ಮಾರುವ ಚೀಲದಲ್ಲಿ ಹಳೆಯ ಪಾತ್ರೆಗಳ ಜೊತೆ ಸೇರಿತು.
ಆ  ಹಳೆ ಪಾತ್ರೆ ಮಾರಾಟಮಾಡುವವನು ಅವುಗಳನ್ನು ಮಾರಲು ಅಂಗಡಿಗೆ ಹೋದನು. ಅಲ್ಲಿ ಕಲ್ಲನ್ನು ಹೊರೆತು ಪಡಿಸಿ ಉಳಿದೆಲ್ಲ ನೀಡಿದ. ಆ ದರೆ ಆ ವ್ಯಾಪಾರಿಗೆ ಆ ಕಲ್ಲು ಆಕರ್ಷಿಸಿತು. ಆತ ಅದನ್ನು ಸ್ವಲ್ಪ ಹಣ ನೀಡಿ ಕೊಂಡುಕೊಂಡ. ಅದನ್ನು ಆತ ಪೇಪರ್ ವೇಟ್ ನಂತೆ ಬಳಕೆ ಮಾಡಿದ. ಅದಾದ ಬಳಿಕ ಸ್ವಲ್ಪ ದಿನಗಳು ಹಾಗೆ ಉರುಳಿತು. ಆ ಅಂಗಡಿಗೆ ಓರ್ವ ವ್ಯಾಪಾರಿ ಬಂದ. ಆತನಿಗೆ  ಆ ಕಲ್ಲಿನ ಮೇಲೆ ಗಮನ ಹೋಯಿತು. ಅದನ್ನು ದುಡ್ಡುಕೊಟ್ಟು ಕೊಂಡ. ಬಳಿಕ ಅದನ್ನು ವಜ್ರದ ವ್ಯಾಪಾರಿ ಬಳಿ ಹೋಗಿ ಪರೀಕ್ಷೆ ಮಾಡಿಸಿದಾಗ ಅದು ಅತ್ಯುತ್ತಮವಾದ ವಜ್ರ ಎನ್ನುವ ಸಂಗತಿ ತಿಳಿಯಿತು. 
 ನೀತಿ : ಮಾನವ ಜನ್ಮ ದೊಡ್ಡದು ಅದು ನಮ್ಮಗೆ ದೊರತಿರುವುದು ಪೂರ್ವ ಜನ್ಮದ ಪುಣ್ಯದಿಂದ, ಅದನ್ನು ಸರಿಯಾದ ಕ್ರಮದಲ್ಲಿ ನಡೆಸಿದರೆ ಉತ್ತಮ ಫಲ ನಮ್ಮದಾಗುತ್ತದೆ, ಆಗ  ಬದುಕು ಬಂಗಾರ ವಾಗುತ್ತದೆ!

Followers