Thursday, 30 July 2009

ಡಿಶ್ಯುಂ ಡಿಶ್ಯುಂ ....!


ಸಾಮಾನ್ಯವಾಗಿ ಸ್ಟೇಡಿಯಂನಲ್ಲಿ ಪಂದ್ಯಗಳನ್ನು ವೀಕ್ಷಿಸುವಾಗ ಎರಡು ತಂಡಗಳಿಗೂ ಅವರದೇ ಆದ ಅಭಿಮಾನಿ ವಲಯ ಇರುತ್ತಾರೆ,ಅವರ ಫೆವರೆಟ್ ಕ್ರೀಡಾಪಟುಗಳಿಗೆ ಜಯಕಾರ ಹಾಕಿ ಪ್ರೋತ್ಸಾಹ ನೀಡುವುದು ಸಾಮಾನ್ಯ.ಕೇವಲ ನಿರ್ದಿಷ್ಟ ಪಂದ್ಯಗಳಿಗೆ ಇಂತಹ ಪ್ರೋತ್ಸಾಹ ಸಿಕ್ಕುತ್ತೆ ಅಂತೇನೂ ಇಲ್ಲ,ಕ್ರೀಡಾಭಿಮಾನಿಗಳು ಇರುವ ತನಕ ಸಿಳ್ಳೆ,ಕಿರುಚಾಟ,ಕೂಗಾಟದ ಸದ್ದು ಇದ್ದೆ ಇರುತ್ತದೆ ಆಟದ ಬಯಲಲ್ಲಿ.ಇದು ಕ್ರೀಡಾಪಟುಗಳಲ್ಲಿ ಉತ್ಸಾಹವನ್ನು ಹೆಚ್ಚು ಮಾಡಿ ಅವರು ಮತ್ತಷ್ಟು ಉತ್ಸಾಹದಿಂದ ಆತ ಮುಂದುವರೆಸುತ್ತಾರೆ.ಇಂತಹ ಮನಸ್ತತ್ವ ಪಕ್ಷಿಗಳಲ್ಲೂಇದೆಯೆನ್ನುವ ಸಂಗತಿಯನ್ನು ವಿಜ್ಞಾನಿ ಗಳು ಕಂಡು ಹಿಡಿದಿದ್ದಾರೆ.ಅದು ಯಾವಾಗ ಗೊತ್ತೇ? ಎರಡು ಪಕ್ಷಿಗಳಲ್ಲಿ ದಿಷ್ಯುಂ ದಿಷ್ಯುಂ ....! ಆರಂಭ ಆದಾಗ! ಗುಂಪು ಗುಂಪಾಗಿ ಬದುಕ ಸಾಗಿಸುವ ಪಕ್ಷಿಗಳಲ್ಲಿ ಇಂತಹ ವರ್ತನೆ ಕಾಣ ಸಿಗುತ್ತದೆ ಅಂತ ಲಂಡನ್ಗೆ ಸೇರಿದ ವಿಜ್ಞಾನಿಗಳು ತಿಳಿಸಿದ್ದಾರೆ.ಇವರು ದಕ್ಷಿಣ ಆಫ್ರಿಕಾದಲ್ಲಿ ಕಾಣಸಿಗುವ ಗ್ರೀನ್ ವುಡ್ ಹೌಸ್ ಅನ್ನುವ ಪಕ್ಷಿಗಳ ಮೇಲೆ ನಡೆಸಿದ ಅಧ್ಯಯನದಿಂದ ಈ ಸಂಗತಿಯನ್ನು ಕಂಡು ಹಿಡಿದ್ದಾರಂತೆ! ಹನ್ನೆರಡು ಪಕ್ಷಿಗಳ ಒಂದು ವೃಂದ ಹೊಂದಿರುತ್ತದೆ,ಅವುಗಳಲ್ಲಿ ಒಂದು ಪಕ್ಷಿ ಲೀಡರ್ರು! ಮೊತ್ತೊಂದು ಗುಂಪಿನ ಪಕ್ಷಿಗಳು ಆಹಾರಕ್ಕಾಗಿಯೋ,ಮತ್ತೆ ಇನ್ಯಾವುದೋ ವಿಷಯಕ್ಕಾಗಿಯೋ ಕಿರಿಕ್ ಮಾಡಿದರೆ ಲೀಡರ್ ಸುಮ್ನೆ ಇರೋಕೆ ಆಗಲ್ವಲ್ವ,ಸರಿ ಹೊಡೆದಾಟ ಆರಂಭ.ಆಗ ತಮ್ಮ ನಾಯಕನನ್ನು ಬೆಂಬಲಿಸಲು ಇವುಗಳು ಕಿರುಚಾಡಲು ಶುರು ಮಾಡುತ್ತದಂತೆ.ಒಂದು ವೇಳೆ ನಾಯಕ ಓಡಿ ಹೋದ್ರೆ ಆಗ ಇವುಗಳ ಸದ್ದು ಅಡಗುತ್ತದೆಯಂತೆ! ಎಷ್ಟು ವಿಚಿತ್ರ!!

Wednesday, 29 July 2009

ಜಾಣ ಸಂಕುಲಗಳು!

ಕಾಗೆ ಮಾನವನ ಜೊತೆ ವಾಸಿಸುವ ಪಕ್ಷಿ.ಅದು ತುಂಬ ಬುದ್ಧಿ ಇರುವ ಪಕ್ಷಿ ಎಂದು ನಮಗೆ ಗೊತ್ತೇ ಇದೆ.ಈ ಕಾಗೆ ಚಿಕ್ಕ ಹಾಗೂ ತೆಳುವಾದ ವೈರನ್ನು ಸಂಗ್ರಹಿಸಿ ಇಡುತ್ತದೆ,ಅದನ್ನು ತನಗೆ ಬೇಕಾದ ಆಕಾರಕ್ಕೆ ಬದಲಾಯಿಸಿ ನಂತರ ಮರದ ದಿಮ್ಮಿ,ಬಿಲಗಳಲ್ಲಿ ಈ ವೈರನ್ನು ತೂರಿಸಿ ಕ್ರಿಮಿ ಕೀಟಗಳನ್ನು ಎಳೆದು ತಿನ್ನುತ್ತದೆ.ಈ ಕಂಬಿಯನ್ನು ಅದು ಸದಾ ತನ್ನ ಜೊತೆ ಎಲ್ಲ ಕಡೆಯೂ ಕೊಂಡೊಯ್ಯುತ್ತದೆಯಂತೆ.!!
ಹೆರಾನ್

ಜಪಾನ್ ದೇಶದಲ್ಲಿ ವಾಸ ಮಾಡುವ ಹೆರಾನ್ ಅನ್ನುವ ಪಕ್ಷಿ ತನ್ನ ಆಹಾರ ಹೊಂಚು ಹಾಕಿ ಪಡೆಯುವುದು ಹೇಗೆ ಗೊತ್ತೇ? ಚಿಕ್ಕ ಚಿಕ್ಕ ಬೀಜಗಳನ್ನು,ಪುಟ್ಟ ಕ್ರಿಮಿ ಕೀಟಗಳನ್ನು ತಂದು ನೀರಿನ ಮೇಲೆ ಹಾಕುತ್ತದೆ.ಆಗ ನೀರಿನ ಒಳಗೆ ಇರುವ ಪುಟ್ಟ ಪುಟ್ಟ ಮೀನುಗಳು ಮೇಲೆ ಬರುತ್ತಲ್ಲ ಅವುಗಳನ್ನು ತಿನ್ನಲು,ತಕ್ಷಣ ಈ ಪಕ್ಷಿ ಲಬಕ್ ಅಂತ ಮೀನುಗಳನ್ನು ಹಿಡಿದು ಹೊಟ್ಟೆ ತುಂಬಿಸಿಕೊಳ್ಳುತ್ತದೆ.
ಆಟರ್
ಸಮುದ್ರದಲ್ಲಿ ಆಟರ್ ಅನ್ನುವ ಜೀವಿ ವಾಸ ಮಾಡುತ್ತದೆ.ಇದು ತನ್ನ ಹೊಟ್ಟೆಯನ್ನು ಡೈನಿಂಗ್ ಟೇಬಲ್ನಂತೆ ಬಳಸುತ್ತದೆ.ಸಮುದ್ರದಲ್ಲಿ ಹಿಡಿದ ಚಿಪ್ಪಿರುವ ಪ್ರಾಣಿಗಳನ್ನು ತನ್ನ ಹೊಟ್ಟೆ ಮೇಲೆ ಇಟ್ಟು ಕೈಯ್ಯಲ್ಲಿ ಹಿಡಿದು ಬಾಯಲ್ಲಿ ಕಲ್ಲು ಎತ್ತಿಕೊಂಡು ಅದನ್ನು ಒಡೆದು ಅದರೊಳಗೆ ಇರುವ ಜೀವಿಗಳನ್ನು ಭಕ್ಷಿಸಿ ಹೊಟ್ಟೆ ತುಂಬಿಸಿ ಕೊಳ್ಳುತ್ತದೆಯಂತೆ

ಪಕ್ಷಿಗಳಲ್ಲಿ ಇಂತಹ ಬುದ್ಧಿವಂತಿಕೆ ಇಲ್ಲ ಅಂತೇನೂ ಇಲ್ಲ.ಫೆಸಿಫಿಕ್ ಮಹಾ ಸಾಗರದಲ್ಲಿ ಇರುವ ಗಳ ಪಗಾಸ್ ದ್ವೀಪದಲ್ಲಿ ಇರುವ ಮರ ಕುಟುಕ ಎನ್ ಮಾಡುತ್ತೆ ಗೊತ್ತೇ? ಇದು ಗಿಡಗಳ ಒಣ ಕಡ್ಡಿ ಗಳನ್ನೂ ಶೇಖರಿಸಿ ,ಬಳಿಕ ಅದರ ಕೊನೆಯನ್ನು ಚೂಪು ಮಾಡುತ್ತದೆ.ಎಲ್ಲಿ ಅಂತೀರ? ಕಲ್ಲಿನ ಮೇಲೆ,ಬಳಿಕ ಅದನ್ನು ತನ್ನ ಕೊಕ್ಕಿಂದ ಹಿಡಿದು ಬಿಲ,ಇನ್ನು ಹಲವು ಕಡೆ ವಾಸಿಸುವ ಕ್ರಿಮಿಕೀಟಗಳು ಇರುವ ಕಡೆ ಈ ಕಡ್ಡಿಯನ್ನು ತೋರಿಸುತ್ತದೆ,ಬಳಿಕ ನಿಧಾನವಾಗಿ ತೆಗೆದು ಆ ಕ್ರಿಮಿಕೀಟಗಳನ್ನು ತಿಂದು ಹೊಟ್ಟೆ ತುಂಬಿಸಿ ಕೊಳ್ಳುತ್ತದೆ.

Tuesday, 28 July 2009

ಇವುಗಳ ಆಯುಧಗಳು!


ಚಿಂಪಾಂಜಿ ಗಳು ಇರುವೆ ,ಗೆದ್ದಲು ರೀತಿಯ ಹುಳು ಹುಪ್ಪಟೆಗಳನ್ನು ಹಿಡಿಯುವುದು ಹೇಗೆ ಗೊತ್ತೇ? ಸಣ್ಣ ಬಿಲದ ರೀತಿ ಇರುವ ಸ್ಥಳ ದ ಬಳಿ ಬಂದು ಒಂದು ಚಿಕ್ಕ ಕಟ್ಟಿ ಅದರೊಳಗೆ ತೂರಿಸಿ ಇಡುತ್ತದೆ ಸ್ವಲ್ಪ ಹೊತ್ತಾದ ಬಳಿಕ ಇರುವೆಗಳು ಕಡ್ಡಿಗೆ ಅಂಟಿ ಕೊಳ್ಳುತ್ತದಲ್ಲ,ಆಗ ಅದನ್ನು ಬಾಯಲ್ಲಿ ಇತ್ತು ಕಚ ಕಚನೆ ಚಪ್ಪರಿಸುತ್ತಾ ತಿನ್ನುತ್ತದೆ.ವಾಟ್ ಅನ್ ಐಡಿಯ ಸರ್ ಜಿ!!
ಉರಂಗಟಾನ್


ಉರಂಗಟಾನ್ ಹಾಗೂ ಚಿಂಪಾಂಜಿ ತಮ್ಮ ರಕ್ಷಣೆಗಾಗಿ ಕೆಲವು ಆಯುಧಗಳನ್ನೂ ಸಿದ್ಧ ಮಾಡಿಕೊಂಡು ಇರುತ್ತವೆ,ಕಲ್ಲು,ಕಟ್ಟಿಗೆಯನ್ನು ಚೂಪು ಮಾಡಿರುತ್ತದೆ.ಹೀಗೆ ಸುಮಾರು ಐವತ್ತು ನಾಲ್ಕು ರೀತಿಯ ಆಯುಧಗಳನ್ನು ರೆಡಿ ಇಟ್ಟುಕೊಂಡಿರುತ್ತದೆ.ಹೊಳೆ,ನದಿ ದಾಟ ಬೇಕಾದ ಸಂದರ್ಭ ಒದಗಿದರೆ ಅವುಗಳು ತಮ್ಮ ಕೈಲಿ ಕಟ್ಟಿಗೆ ಹಿಡಿದು ನೀರಲ್ಲಿ ಬಿತ್ತು ನಂತರ ನಡೆಯುತ್ತದೆ,ಹೀಗೆ ಅದು ಆಳ ಕಂಡು ಹಿಡಿಯುತ್ತದೆ!
ಆಸ್ಟ್ರಿಚ್ ಮೊಟ್ಟೆ
ವಿಶ್ವದಲ್ಲಿರುವ ಪಕ್ಷಿ ಸಂಕುಲದಲ್ಲಿ ಆಸ್ಟ್ರಿಚ್ ಪಕ್ಷಿಯ ಮೊಟ್ಟೆ ತುಂಬಾ ದೊಡ್ಡದು.ಬೇರೆ ಪಕ್ಷಿಗಳ ಮೊಟ್ಟೆಯಂತೆ ಇದನ್ನು ಸುಲಭವಾಗಿ ಒಡೆಯಲಾಗದು.ಆದ ಕಾರಣ ಈಗಿಪ್ತ್ ದೇಶದ ಒಂದು ಪಕ್ಷಿ ಏನು ಮಾಡುತ್ತೆ ಗೊತ್ತೇ? ಈ ಮೊಟ್ಟೆ ಒಡೆಯಲು ತನ್ನ ಕೊಕ್ಕಿನ ತುದಿಗೆ ಕಲ್ಲನ್ನು ಸಿಕ್ಕಿಸಿ ಕೊಳ್ಳುತ್ತದೆ.ಅದರಿಂದ ಮೊಟ್ಟೆ ಒಡೆದು ರಸ ಹೀರುತ್ತದೆ.ಅದೇ ರೀತಿ ಈಜಿಪ್ಟಿನಲ್ಲಿರುವ ಮುಂಗುಸಿಗಳು ಮೊಟ್ಟೆಯನ್ನು ವೆರದು ಕಾಲುಗಳ ನಡುವೆ ಇತ್ತು ಬಂಡೆಗೆ ಒಡೆದು ಅದರಲ್ಲಿರುವ ರಸವನ್ನು ಸೇವಿಸುತ್ತದೆ.ಎಷ್ಟು ಆಶ್ಚರ್ಯಅಲ್ವ!

Monday, 27 July 2009

ಉದರದಲ್ಲಿ ಚೀಲ!

ಕೋತಿಯ ಹೆಸರನ್ನು ಪಡೆದಿದೆ,ಗೂಡು ಹೊಂದಿದೆ,ಹೊಟ್ಟೆಯಲ್ಲಿ ಚೀಲ ಇದೆ ಆದರೆ ಇದು ಕೋತಿಯಾಗಲಿ,ಪಕ್ಷಿ ಆಗಲಿ ಇಲ್ಲವೇ ಕಾಂಗರೂ ಅಗಲಿ ಅಲ್ಲವೇ ಅಲ್ಲ.ಆದರೆ ವಿಶ್ವದಲ್ಲಿ ಇರುವ ಅಪರೂಪದ ಪ್ರಾಣಿಗಳಲ್ಲಿ ಇದೂ ಒಂದಾಗಿದೆ.ಸಾಮಾನ್ಯವಾಗಿ ನಮಗೆ ತಿಳಿದಿರುವ ಮಟ್ಟಿಗೆ ಪಕ್ಷಿ ಗೂಡು ಕಟ್ಟುತ್ತದೆ.ಆದರೆ ಕೋತಿ ಗೂಡು ಕಟ್ಟಿರುವುದನ್ನು ಕಂಡಿದ್ದೀರ? ಇಲ್ಲವೇ ಕೇಳಿದ್ದೀರಾ? ಅಂತಹ ವಿಶೇಷ ಜೀವಿ ಹೆಸರು ಲಿಟಲ್ ಮೌಂಟನ್ ಮಂಕಿ.ಮಂಕಿ ಎಂದು ಹೆಸರು ಇದ್ದ ಮೇಲೆ ಅದು ಕೋತಿ ಆಗಿರ ಬೇಕಿಲ್ಲ,ಏಕೆ ಅಂತ ಅಂದರೆ ಅದರ ನಿಜವಾದ ಹೆಸರು ಮಾನಿಟೋ ಡೆಲ್ಮಾಂಟೆ .ಇದನ್ನು ಇನ್ನು ಮುದ್ದಾದ ಹೆಸರಲ್ಲಿ ಕರೀತಾರೆ,ಅದೇ ಕೊಲೋಕೊಲೋ .ಇದರ ಬಗ್ಗೆ ಇನ್ನು ಆಸಕ್ತಿಕರ ಸಂಗತಿಗಳು ಇವೆ.
ಇದು ಆಸ್ಟ್ರೇಲಿಯ ವಾಸಿ ಕಾಂಗರೂ ಸಮೀಪದ ನೆಂಟ ಗೊತ್ತೇ.ಇದಕ್ಕೊ ಕಾಂಗೂರು ವಿನಂತೆ ಉದರದಲ್ಲಿ ಚೀಲ ಇದೆ.ಇಂತಹ ಜೀವಿಗಳನ್ನು ಮಾರ್ಸುಪಿಯಲ್ಸ್ ಎಂದು ಕರೆಯುತ್ತಾರೆ.ಆಕುಟುಂಬಕ್ಕೆ ಈ ಮಾಂಟೆ ಸೇರಿದೆ.ಆದರೆ ಇದು ಇಲಿಗಿಂತ ಸ್ವಲ್ಪ ದೊಡ್ದಗಾತ್ರ ಪಡೆದಿದೆ ಅಷ್ಟೇ.ಸಾಮಾನ್ಯವಾಗಿ ಗಿಡ-ಮರಗಳಲ್ಲಿ ವಾಸಿಸುವ ಮಾಂಟೆ ಕಟ್ಟುವ ಗೂಡುಗಳು ವಿಶೇಷವಾಗಿ ಇರುತ್ತವೆ.ಒಂದರ್ಥದಲ್ಲಿ ಇದು ಗೋಲಾಕಾರದಲ್ಲಿ ಗೂಡು ಕಟ್ಟುತ್ತದೆ. ಇದು ಮುಂದೆ ತನ್ನ ಮಕ್ಕಳಿಗಾಗಿ ಕಟ್ಟಿಡುವ ಮನೆಯಲ್ಲ,ಬದಲಿಗೆ ಚಳಿಗಾಲದಲ್ಲಿ ತನ್ನ ರಕ್ಷಣೆಗೆ ಸಿದ್ಧ ಮಾಡಿಕೊಳ್ಳುವ ಸುರಕ್ಷಿತ ಜಾಗ.ಇದು ನಾಲ್ಕರಿಂದ ಹದಿನಾಲ್ಕು ಮಕ್ಕಳನ್ನು ಹೆರುತ್ತದೆ.ತನ್ನ ಉದರದಲ್ಲಿ ಇರುವ ಚೀಲದಲ್ಲಿ ಇಟ್ಟುಕೊಂಡು ಸಂರಕ್ಷಿಸುತ್ತದೆ.
ಚಳಿಗಾಲದಲ್ಲಿ ಆಹಾರಕ್ಕಾಗಿ ಕಷ್ಟ ಪಡುವುದನ್ನು ತಪ್ಪಿಸಿಕೊಳ್ಳಲು ಇದು ತನ್ನ ದೇಹದಲ್ಲಿ ಮೊದಲೇ ಶೇಖರಿಸಿ ಇಟ್ಟುಕೊಂಡಿರುವ ಕೊಬ್ಬನ್ನು ಆ ಸಮಯದಲ್ಲಿ ಬಳಸಿ (ಕರಗಿ ಇದನ್ನು ರಕ್ಷಿಸುತ್ತದೆ) ಜೀವ ಉಳಿಸಿಕೊಳ್ಳು ತ್ತದೆ.ಈ ಕೊಬ್ಬು ಎಲ್ಲಿರುತ್ತದೆ ಗೊತ್ತೇ? ಅದರ ಬಾಲದಲ್ಲಿ.ಅನೇಕ ವೃಕ್ಷ ಸಂಪತ್ತನ್ನು ರಕ್ಷಿಸುವಲ್ಲಿ ಈ ಪುಟ್ಟ ಪ್ರಾಣಿ ತುಂಬಾ ಸಹಾಯಕಾರಿ .ಡೀ ಗ್ಲಿರೈಡ್ಸ್ ಎನ್ನುವ ಮರಗಳ ಹಣ್ಣುಗಳನ್ನು ಇದು ಸೇವಿಸುತ್ತದೆ.ಇವು ಬಿಸಾಡಿದ ಬೀಜಗಳಿಂದ ಈ ಗಿಡಗಳ ಹುಟ್ಟಿಗೆ ಕಾರಣ ಆಗ್ತಾ ಇದೆಯಂತೆ.ಈ ರೀತಿ ವೃಕ್ಷ ಸಂಪತ್ತಿನ ಬೆಳವಣಿಗೆಗೆ ಕಾರಣ ಆಗಿರುವ ಈ ಮಾಂಟೆ ಮಾಂಸಹಾರಿಯೂ ಆಗಿದೆ.ಏನೇ ಇರಲಿ ಈ ಪುಟ್ಟ ಪ್ರಾಣಿಗೆ ಮಾತ್ರ ಮುರೈನ್ ರಾಟ್ ಎನ್ನುವ ಪ್ರಾಣಿಯನ್ನು ಕಂಡರೆ ಮಾತ್ರ ಜೀವ ಪುಕಪುಕ!

Wednesday, 1 July 2009

ರಕ್ಕಸಗಾತ್ರದ ಇಲಿ!

ಮೂಷಿಕವಾಹನ ವಿನಾಯಕ ದೇವನದು .ಆತನಿಂದ ಆ ಪುಟ್ಟ ಪ್ರಾಣಿಗೆ ಮಾನ್ಯತೆ ಸಿಕ್ಕಿದೆ ನಮ್ಮ ಬದುಕಲ್ಲಿ. ಸಾಮಾನ್ಯವಾಗಿ ಜನರಿಗೆ ಇಲಿ ಅಂದ್ರೆ ಕಿರಿಕಿರಿ ಬೇಸರ.ಬಿಳಿ ಇಲಿ ತನ್ನ ಬಣ್ಣದ ಕಾರಣದಿಂದ ಕೆಲವು ಜನರ ಮೆಚ್ಚುಗೆ ಗಳಿದೆ ಅಷ್ಟೇ.ಸಾಕಷ್ಟು ಜನರು ತಿಳಿದಿರುವಂತೆ ಇಲಿಗೆ ರಾಜಸ್ತಾನದ ಒಂದು ಸ್ಥಳದಲ್ಲಿ ಹೆಚ್ಚು ಮಾನ್ಯತೆ ಇದೆ.ಅದು ಮನೆ ಮಗನಿಗಿಂತ ಸರ್ವತಂತ್ರ ಸ್ವತಂತ್ರ.ಅದಕ್ಕೆ ಇಷ್ಟ ಬಂದಂತೆ ಇರಬಹುದು.ಸಾಮಾನ್ಯವಾಗಿ ನಮಗೆ ಇಲಿ ಹೆಚ್ಚು ಖುಷಿ ಕೊಡೋದು ಟಾಮ್ ಏನ್ ಜೆರ್ರಿ ಅನ್ನುವ ಕಾರ್ಟೂನ್ ಜೋಡಿಯಲ್ಲಿ. ಅದರಲ್ಲಿ ಇಲಿ ಹಾಗೂ ಬೇಕ್ಕಿನಾತ ಸದಾ ಸಂತಸ ನೀಡುತ್ತದೆ.ಅದರ ಆಟ,ತರಲೆತನ ಖುಷಿ ಕೊಡುತ್ತದೆ.ಇವೆಲ್ಲ ಈಗಿನ ವಿಷಯ,ಆದರೆ ನಾವು ಬೃಹತ್ ಗಾತ್ರದ ಇಲಿಗಳ ಬಗ್ಗೆ ತಿಳಿಯ ಬೇಕು ಅಂತ ಆಸೆ ಪಟ್ರೆ! ಇರಬೇಕಲ್ಲ ಅನ್ನುವ ಉತ್ರ ಎದುರಾಗುತ್ತದೆ.ಆದರೆ ಆಂಗ್ಲ ಹಾರರ್ ಕಥೆಗಳನ್ನು ಓದುವ ಅಭ್ಯಾಸ ಇರುವವರಿಗೆ ರಕ್ಕಸ ಇಲಿಗಳ ದರ್ಶನವನ್ನು ಲೇಖಕ ಕೊಡ್ತಾನೆ ಇರ್ತಾನೆ.
ಹತ್ತು ಅಡಿ ದೊಡ್ಡದಾದ ಶರೀರದಿಂದ ನೂರು ಕೆಜಿ ತೂಕ ಹೊಂದಿದ ಇಲಿಯ ಬಗ್ಗೆ ಹೇಳಲು ಹೊರಟರೆ ಅಬ್ಬ ಅಂತ ಅನ್ನಿಸುತ್ತದೆ ಅಲ್ವ! ಇಂತಹ ಇಲಿ ದಕ್ಷಿಣ ಅಮೆರಿಕದಲ್ಲಿ ಅಂತಹ ಇಲಿ ಇತ್ತು ಅದೂ ಸಾವಿರಾರು ವರ್ಷಗಳ ಹಿಂದೆ.ಒಬ್ಬ ವಿಜ್ಞಾನಿಗೆ ಇಲಿ ಆಕಾರದ ಒಂದು ಪಳಯುಳಿಕೆ ಸಿಕ್ಕಿತು.ಅದನ್ನು ಕಂಡು ಆತನಿಗೆ ವಿಸ್ಮಯ.ಇದು ವಿಶ್ವದ ಅತ್ಯಂತ ದೊಡ್ಡ ಇಲಿ ಎನ್ನುವ ಅಗ್ಗಳಿಕೆ ಪಡೆದುಕೊಂಡಿತು.ಏಕೆಂದರೆ ಈ ಇಲಿ ಆ ವಿಜ್ಞಾನಿ ಕೈಗೆ ಸಿಗುವ ಮೊದಲು ವೆನುಜುವಲ ದೇಶದಲ್ಲಿ ಸಿಕ್ಕ ಇಲಿ ಪ್ರಭೇದದ ಗುಂಪಿಗೆ ಸೇರಿದ ಪ್ರಾಣಿಯು ವಿಶ್ವದಲ್ಲಿ ಅತಿ ದೊಡ್ಡ ರೋಡೆ೦ಟ್ ಆಗಿತ್ತು.ಆದರೆ ಅದು ಈ ಇಲಿಯಿಂದ ಅದು ತನ್ನ ಮೊದಲ ಸ್ಥಾನ ಕಳೆದುಕೊಳ್ಳ ಬೇಕಾಗಿ ಬಂದಿದೆ.( ಈಗ ನಾನು ತಿಳಿಸುತ್ತಿರುವ ಈ ಇಲಿ ಸಹ ಸಿಕ್ಕು ವರ್ಷ ಆಗಿದೆ).ಇಷ್ಟು ಜೋರಾಗಿದ್ದರು ಪಾಪ ಪ್ರಾಣಿಗಳನ್ನು ಬೇಟೆ ಆಡ್ತಾ ಇರಲಿಲ್ಲ.ಅದರ ಊಟ? ಅನ್ನುವ ಪ್ರಶ್ನೆ ಉದ್ಭವ ಆಗೋದು ಸಹಜ. ಆದರೆ ಅದು ನೀರಲ್ಲಿ ಬೆಳೆಯುವ ಗಿಡಗಳು,ಹಣ್ಣುಗಳನ್ನು ಸೇವಿಸಿ ಬದುಕ್ತಾ ಇತ್ತಂತೆ! ಅಂದಂಗೆ ಅದರ ತೂಕ ಸರಿಸುಮಾರು ಮುನ್ನೂರು ಕಿಲೋಗಿಂತ ಹೆಚ್ಚಿದೆ ಅಂತಾರೆ ವಿಜ್ಞಾನಿಗಳು.
ಈ ಭಾರಿ ಇಲಿಯ ಹೆಸರು ಜೋಸೆಫೋಯಾರ್ಟಿಗೇಸಿಯಾ ಮೊನೆಸಿ .ಇದು ನಲವತ್ತು ವರ್ಷಗಳ ಹಿಂದೆ ಉರುಗ್ವೆ ನದಿ ತೀರದಲ್ಲಿ ವಾಸಿಸುತ್ತ ಇತ್ತಂತೆ.ಇಂತಹ ಬೃಹತ್ ಪ್ರಾಣಿಗಳು ಯಾವರೀತಿ ನಾಶ ಆಗಿರಬಹುದು ಎಂದು ಸಂಶೋಧಕರು ನಡೆಸಿದ ಸಂಶೋಧನೆಯಿಂದ ರಹಸ್ಯ ಹೊರ ಬಿದ್ದ ಸಂಗತಿ-ಆರು ಕೋಟಿ ವರ್ಷಗಳ ಹಿಂದೆ ದಕ್ಷಿಣ ಅಮೇರಿಕ ಒಂದು ದ್ವೀಪದಂತೆ ಇತ್ತಂತೆ.ಕ್ರಮೇಣ ಪನಾಮ ಭೂಭಾಗ ಮೇಲೆ ತೇಲಿದ ಕಾರಣ ಉತ್ತರ ಹಾಗೂ ದಕ್ಷಿಣ ಅಮೆರಿಕ ನಡುವೆ ದಾರಿ ಆಯಿತು.ಪರಿಣಾಮ ಕೆಲವು ಜೀವಿಗಳು ಉತ್ತರ ಅಮೆರಿಕಾದಿಂದ ದಕ್ಷಿಣ ಅಮೆರಿಕಕ್ಕೆ ವಲಸೆಬಂದವಂತೆ,ಇದು ಆ ಬೃಹತ್ ಇಲಿಗಳ ನಾಶಕ್ಕೆ ಕಾರಣ ಆಗಿರಬಹುದು ಎನ್ನುತ್ತಾರೆ ವಿಜ್ಞಾನಿಗಳು.

Saturday, 27 June 2009

ನನಗೆ ಭಯ....!

ಇದು ತುಂಬ ಹಳೆಯ ವಿಷ್ಯ,ಆದರೆ ನಾನು ಈಗ ಅದರ ಬಗ್ಗೆ ಹೇಳೋಕೆ ಹೊರಟಿದ್ದೀನಿ.ಸಾಮಾನ್ಯವಾಗಿ ಭಯ ಎಲ್ಲರಲ್ಲೂ ಎಲ್ಲೋ ಒಂದು ಕಡೆ ಅವತು ಕುಳಿತಿರುವ ತರ್ಲೆ.ಕೆಲವರಿಗೆ ತನ್ನ ಪ್ರಭಾವ ಹೆಚ್ಚು ತೋರಿದರೆ,ಒಂದಷ್ಟು ಜನರ ಬಳಿ ತಗ್ಗಿಬಗ್ಗಿ ಇರುತ್ತದೆ ಆ ವಿಷ್ಯ ಬೇರೆ ! ಚಲನಚಿತ್ರ ಕಲಾವಿದರು ತೆರೆಯಮೇಲೆ ಹಾವನ್ನು ಹಿಡಿದು,ಹುಲಿಯನ್ನು ಹೊಡೆದು,ದೆವ್ವದೊಂದಿಗೆ ಬಡೆದಾಡಿದರು,ಮರೆಯಲ್ಲಿ ಅವರು ಕೆಲವು ವಿಷಯಗಳಿಗೆ ಭಯಭೀತರು!ಕೆಲವು ಸಿನಿಮಾಗಳಲ್ಲಿ ಹಿರೋಯಿನ್ ಒಲಿಬೇಕಾದ್ರೆ ನಮ್ ಹೀರೋ ಜಿರಳೆ ಹಿಡೀಲೆ ಬೇಕು ಅಂತಹ ಪರಿಸ್ಥಿತಿ! ನಮ್ಮ ಸ್ಯಾಂಡಲ್ ವುಡ್ಡಿನಲ್ಲಿ ತನ್ನ ಪ್ರತಿಭೆ ತೋರಿದ್ದ ನೆರೆಯ ರಾಜ್ಯದ ನಟಿ ಶ್ರೀದೇವಿ (ನವನಟಿ )ಗೆ ಹಲ್ಲಿ ಕಂಡ್ರೆ ಹೆದರಿ ಸಾಯೋ ಹಾಗೆ ಆಗುತ್ತಂತೆ ,ಅದೇ ರೀತಿ ಅದೇ ನಮ್ ಪುನಿತ್ ರಾಜ್ ಕುಮಾರ್ ಜೋಡಿ ಆಗಿದ್ದ ಮಲೆಯಾಳಂ ಕುಟ್ಟಿ ಮೀರ ಜಾಸ್ಮಿನ್ಗೆ ಸಹ ಹಲ್ಲಿ ಕಂಡ್ರೆ ಸಿಕ್ಕಾಪಟ್ಟೆ ಹೆದರಿಕೆ,ಅದೆಷ್ಟು ಅಂತ ಅಂದ್ರೆ ಕಿರ್ಚಾಡಿ...ಕಿರ್ಚಾಡಿ....! ಬ್ಯಾಡ ಮನೆಯವರ ಕಥೆ! ಇದೆ ವರ್ಗಕ್ಕೆ ಸೇರಿದ ಬಾಲಿವುಡ್ ಹೆಣ್ಣುಮಕ್ಕಳ ಬಗ್ಗೆ ಹೇಳೋದೇ ಆದ್ರೆ,ವಿದ್ಯಾಬಾಲನ್,ಪ್ರಿಯಾಂಕ ಚೋಪ್ರಾ,ಹಲ್ಲಿಪ್ರಿಯರು! ಆದರೆ ಮಾಧುರಿ ದೀಕ್ಷಿತ್ಗೆ ಜಿರಳೆ ಕಂಡ್ರೆ ಹೆದರಿಕೆಯಂತೆ!ಅಮಿಷ ಪಟೇಲ್,ಅಯೇಶ ತಕಿಯಾ,ಪರಿಸ್ಥಿತಿ ಸಹ ಹೀಗೆ ಇದೆ.ಹಲ್ಲಿ,ಜಿರಳೆ ನಂತರ ಸ್ಥಾನ ಪಡೆದುಕೊಳ್ಳುವುದು ಹಾವು....!
ಪ್ರಾಣಿಗಳ ವಿಷಯ ಹೀಗಾದ್ರೆ ಹೆಚ್ಚು ಜನರಿಗೆ ಹೆದರಿಕೆ ಉಂಟಾಗೋದು ದೆವ್ವಗಳನ್ನು ಕಂಡ್ರೆ.ದೆವ್ವದ ವಿಷಯಕ್ಕೆ ಬಂದ್ರೆ ಬಾಲಿವುಡ್ ದೆವ್ವಪ್ರಿಯ ರಾಮ್ಗೋಪಾಲ್ ವರ್ಮ ಜ್ಞಾಪಕಕ್ಕೆ ಬರ್ತಾರೆ.ಆತ ಸಹ ಸಿಕ್ಕಾಪಟ್ಟೆ ಹೆದರುಪುಕ್ಲ.ಆ ಹೆದರಿಕೆಯಿಂದ ದೂರ ಆಗಲು ಆತ ಜನ ಹೆದರುವ ಸಿನಿಮಾ ತೆಗೆಯುತ್ತಾನಂತೆ.ರಾಮುಗೆ ಕತ್ತಲು,ಒಂಟಿಯಾಗಿ ಪ್ರಯಾಣ,ಕಳ್ಳ-ಪೋಲೀಸ್ ಇಬ್ಬರನ್ನು ಕಂಡರೂ ಹೆದರಿಕೆಯಂತೆ!ಈತ ನಿರ್ಮಿಸಿದ ಸಿನಿಮಾ ನೋಡೋಕೆ ತುಂಬಾ ಹೆದರ್ತಾರಂತೆ ರಾಮು!ಬಿಂದಾಸ್ ನಟಿ ಬಿಪಾಸ ಬಸುಗೆ ಸಹ ಒಂಟಿಯಾಗಿ ಇರಲು,ದೆವ್ವಗಳನ್ನು ಕಂಡ್ರೆ ಭಯ....ಭಯ! ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ಗೆ ಅತಿ ಎತ್ತರದ ಕಟ್ಟಡದ ಮೇಲಿಂದ ಕೆಳಗೆ ನೋಡಲು ಸಿಕ್ಕಾಪಟ್ಟೆ ಹೆದರಿಕೆ.ರಿಸ್ಕ್ ಶಾಟ್ ಸಂದರ್ಭದಲ್ಲಿ ಆತ ಗಾಯತ್ರಿ ಮಂತ್ರವನ್ನು ಜಪಿಸುತ್ತಾನಂತೆ.ದೀಪಿಕಾ ಪಡುಕೋಣೆ ಸಹ ಇದೆ ಗುಂಪಿಗೆ ಸೇರಿದ್ದಾರೆ.ಶಾಲೆಯಲ್ಲಿ ಇದ್ದಾಗ ಎಲ್ಲರಿಗಿಂತ ಮೊದಲು ನಿಲ್ಲಲು,ಮಾತನಾಡಲು ಹೆದರಿಕೆ ಇತ್ತು ಇದು ತಬು ಪರಿಸ್ಥಿತಿ! ಎಗರೆಗರಿ ನಗುವ ನಿರೂಪಕ ಸಿದ್ದು ಗೆವ ಮಾತು ಆಡೋದು ಅಂದ್ರೆ ಅಷ್ಟಕಷ್ಟೇ.ಒಂಟಿತನ,ಸೋಲು,ಅಪನಿಂದೆ....! ಹಲವು ಕಾರಣಗಳು ಹೆದರಿಕೆಗೆ ಕಾರಣ ಆಗುತ್ತದೆ.ಆದ್ರೆ ಭಯ ನಿಜವಾಗಲು ಭಯ ಪಡಿಸುವ ವಿಷಯವೇ ತಾನೇ!

Thursday, 25 June 2009

ನಮ್ಮ ಉನ್ನತಿಗಾಗಿ ಪ್ರಾರ್ಥನೆ

ಸಾಮಾನ್ಯವಾಗಿ ನಾವು ಅನೇಕ ರೀತಿಯ ಚಿಕಿತ್ಸಾ ವಿಧಾನದ ಬಗ್ಗೆ ಕೇಳಿ ಇರುತ್ತೇವೆ.ಕೆಲವು ಸರ್ತಿ ಅನುಭವದ ಮೂಲಕ ಅವುಗಳ ಫಲಿತಾಂಶ ತಿಳಿದೇ ಇರುತ್ತೇವೆ.ಆದರೆ ಪ್ರಾರ್ಥನಾ ಚಿಕ್ತಿಸೆ ಬಗ್ಗೆ ಎಷ್ಟು ಜನಕ್ಕೆ ತಿಳಿದಿದೆ?ಅದಕ್ಕೋ ಸಹ ಕೆಲವು ನಿಯಮಗಳನ್ನು ಅನುಸರಿಸ ಬೇಕು ಅಂತ ಹೇಳ್ತಾರೆ ತಜ್ಞರು.ಕ್ರಮಬದ್ಧ ಪದ್ದತಿಯಿಂದ ರೋಗಿಗಳು ರೋಗಮುಕ್ತರಾಗುತ್ತಾರೆ ಎಂದು ಸಹ ತಿಳಿಸಿದ್ದಾರೆ. ನಮ್ಮ ಶಾಸ್ತ್ರಗಳಲ್ಲಿ ಪ್ರಾರ್ಥನೆ ಮೂಲಕ ಮಹರ್ಷಿಗಳು ಚಿಕಿತ್ಸೆ ಮಾಡ್ತಾ ಇದ್ದರು ಅನ್ನುವ ಸಂಗತಿ ಗೊತ್ತೇ ಇದೆ.ಅದಕ್ಕೆ ಪೂರಕವಾದ ಪ್ರಮಾಣಗಳು ದೊರಕಿವೆ.ಯೇಸು,ಶಿರಡಿ ಸಾಯಿಬಾಬ,ರಾಮಕೃಷ್ಣ ಪರಮ ಹಂಸ ಮುಂತಾದ ಮಹಾನುಭಾವರು ಸ್ಪರ್ಶದ ಮೂಲಕ ರೋಗವನ್ನು ದೂರಮಾಡಿದ ಉದಾಹರಣೆಗಳು ಸಾಕಷ್ಟಿವೆ.ಇವೆಲ್ಲವೂ ಪ್ರಾರ್ಥನೆಯ ಮೂರ್ತ ರೂಪ ಅಂತಲೇ ಹೇಳ ಬೇಕು.ಪ್ರಾರ್ಥನೆ ಮಾಡುವವರ ದೇಹದಲ್ಲಿ ಕೆಲವು ರಾಸಾಯನಿಕ ಪರಿವರ್ತನೆಗಳು ನಡೆಯುತ್ತದೆ.ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಮನಸ್ಸು ನಿರ್ಮಲವಾಗಿ,ಸಕಾರಾತ್ಮಕ ವಾಗಿ ಆಲೋಚಿಸುವ ವ್ಯಕ್ತಿತ್ವ ಉಂಟಾಗುತ್ತದೆ.ಪ್ರಾರ್ಥನೆಗೆ ಎಲ್ಲದಕಿಂತ ಮುಖ್ಯವಾದುದು ಶ್ರದ್ಧೆ,ವಿಶ್ವಾಸ.ಚಂಚಲ ಮನಸಿನಿಂದ ಉತ್ತಮ ಫಲಿತಾಮ್ಶಕ್ಕೆ ಖೋತ ಬೀಳುತ್ತದೆ!ಪ್ರಾರ್ಥನೆಯ ವಿಶೇಷತೆ ಅಂತ ಅಂದ್ರೆ ಇದಕ್ಕೆ ಆಸ್ತಿಕ ಹಾಗೂ ನಾಸ್ತಿಕ ಅನ್ನುವ ಬೇಧ ಭಾವ ಇಲ್ಲ,ಎಲ್ಲರು ಇಷ್ಟಪಟ್ಟು ಮಾಡುವ ಒಂದು ಸಾರ್ವತ್ರಿಕ ಆರೋಗ್ಯ ರಕ್ಷಣಾ ವಿಧಾನವಾಗಿದೆ.
ಒಂದೊಂದು ಧರ್ಮದಲ್ಲಿ ಒಂದೊಂದು ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು ಮೂಲ ಉದ್ದೇಶದಲ್ಲಿ ಯಾವುದೇ ಭಿನ್ನತೆ ಇರದು.ಪ್ರಾರ್ಥನೆ ಅಂದರೆ ಕೆಲವರ ಪ್ರಕಾರ ಅವಸರವರವಾಗಿ ಮಾಡುವ ಕ್ರಿಯೆ.ಆದರೆ ಅದು ಆ ರೀತಿಯದ್ದಲ್ಲ,,ಸಹಜವಾಗಿ ಉದ್ಭವ ಆಗುವ ಪ್ರಕ್ರಿಯೆ!ಪ್ರಾರ್ಥನೆ ಪ್ರೇಮದ ಪರಮ ಉತ್ಕೃಷ್ಟ ರೂಪ ಆಗಿದೆ.'ಭಗವಂತಎಲ್ಲರಿಗೂ ಆರೋಗ್ಯ ನೀಡಪ್ಪ 'ಅಂದುಕೊಂಡರೆ ಸಾಕು ನಿಮ್ಮ ಆರೋಗ್ಯದಲ್ಲಿ ಮಹತ್ತರವಾದ ಬದಲಾವಣೆ ಸಿಗುತ್ತದೆ ಅಂತಾರೆ ತಜ್ಞರು!ಆದರೆ ಪ್ರಾರ್ಥನೆ ಮಾಡಲು ಮುಂಜಾನೆ ಅಥವಾ ಸಂಜೆ ಅತ್ಯಂತ ಸೂಕ್ತವಾದುದು.ಆ ಸಮಯದಲ್ಲಿ ಈಶ್ವರ ತತ್ವ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ.ಇದು ಸಹ ಗುರುವಿನ ಮೂಲಕ ಕಲಿಯ ಬೇಕಾದ ವಿದ್ಯೆ.ಗುರು ಇದರ ರಹಸ್ಯಗಳನ್ನು ಹೇಳಿಕೊಟ್ಟಾಗ ಸುಲಭ ರೀತಿಯಯಲ್ಲಿ ಏಕಾಗ್ರತೆ ಹೊ೦ದಬಹುದು .ಆದರೆ ಈ ಪ್ರಕ್ರಿಯೆಗೂ ಸಾಧನೆ ಅತ್ಯಗತ್ಯ!

Followers