Saturday, 8 August 2009

ಪ್ಲಟೊನಿಕ್ ಲವ್

ಗೋಪಿಕೆಯರಿಗೆ ಕೃಷ್ಣನ ಮೇಲಿರುವ ಪ್ರೀತಿ ಅಲೌಕಿಕವಾದುದು ಹಾಗೂ ದಿವ್ಯವಾದುದು.ಅಷ್ಟೊಂದು ಸಂಖ್ಯೆಯ ಗೋಪಿಕೆಯರು ಶ್ರೀಕೃಷ್ಣ ದೇವರು ಎನ್ನುವ ಸಂಗತಿ ತಿಳಿದಿತ್ತು.ಆದ ಕಾರಣ ಅವರು ತಮ್ಮ ಪ್ರೀತಿಯನ್ನು ಆತನಿಗೆ ಧಾರೆ ಎರೆದರು ಎಂದು ಭಕ್ತಿಸೂತ್ರದಲ್ಲಿ ನಾರದ ಮಹರ್ಷಿ ವಿವರಿಸಿದ್ದಾರೆ.ಅಲೌಕಿಕ  ರೀತಿಯಿಂದ ಪ್ರೀತಿಸುವುದಕ್ಕೂ ಹಾಗೂ ಲೌಕಿಕ ಪ್ರೇಮಕ್ಕೂ ನಡುವೆ ಇರುವ ವ್ಯತ್ಯಾಸದ ಬಗ್ಗೆಯೂ ಇದರಲ್ಲಿ ತಿಳಿಸಿದೆ,ಲೌಕಿಕ ಸ್ವಾರ್ಥಪೂರಿತ ,ಆದರೆ ಅಲೌಕಿಕ ನಿಸ್ವಾರ್ಥವಾದ ಪ್ರೀತಿ.ನಮಗೆ ಯಾವ ಸಂಗತಿ,ವಸ್ತು ಇಲ್ಲವೇ ಮನುಷ್ಯನಿಂದ ಸಂತಸ ಸಿಗುತ್ತದೆಯೋ ಅಂತಹವುಗಳನ್ನು ಪ್ರೀತಿಸುತ್ತೇವೆ,ಅದು ಸಹಜ ಕ್ರಿಯೆ.ಆದರೆ ಅದೇ ವ್ಯಕ್ತಿ,ಇಲ್ಲವೇ ವಸ್ತು ...ಸಂಬಂಧಿಸಿದಂತೆ ಬೇಸರ -ದುಃಖ ಉಂಟಾದರೆ ನಾವು ಅಷ್ಟು ಪ್ರೀತಿಸಿದ ವ್ಯಕ್ತಿಯನ್ನು ದ್ವೇಷಿಸುತ್ತೇವೆ,ಕೊಪಗೊಳ್ಳುತ್ತೇವೆ ಇದು ಪ್ರೀತಿಯ ಒಂದು ರೂಪವೇ ಅನ್ನುವ ಪ್ರಶ್ನೆ ಉದ್ಭವ ಆಗುತ್ತದೆ,ಆದರೆ ಲೌಕಿಕ ಪ್ರೀತಿಯಲ್ಲಿ ಇದು ಸಾಮಾನ್ಯ,ಆದ ಕಾರಣ ಗೋಪಿಕೆಯರು ಅಲೌಕಿಕದತ್ತ ತಮ್ಮ ಗಮನ ನೆಟ್ಟರು .ಆ ಭಗವಂತನನ್ನು ಪ್ರೀತಿಸಿದರು.ಇದು ಭಗವಂತನಿಗೂ  ಗೊತ್ತು,ತನ್ನ ಬಗ್ಗೆ ಅಪಾರ ಪ್ರೀತಿ ಹೊಂದಿದ ವ್ಯಕ್ತಿಗೆ ತನ್ನ ಹೃದಯದಲ್ಲಿ ಸ್ಥಾನ ಬೇಕೇ ಹೊರೆತು ಇಂದ್ರ,ಇಲ್ಲವೇ ರಾಜ್ಯಪದವಿ ಅಲ್ಲ .ಗೋಪಿಕೆಯರು ಬಯಸಿದ್ದು ಇದೆ ಅಂಶವನ್ನು,ಅವರು ಎಂದಿಗೂ ಕೃಷ್ಣ ನು ತಮ್ಮ ಬಳಿಯಲ್ಲಿಯೇ ಇರಬೇಕು ಎಂದು ಬಯಸಲಿಲ್ಲ,ಇದೊಂತರ ಈಗಿನ ತಿಳಿದವರು ಹೇಳುವ ಪ್ಲಟೊನಿಕ್ ಲವ್ ನಂತಹುದು.
ಗೋಪಿಕ ಸ್ತ್ರೀಯರ ಪ್ರೀತಿಯ ಬಗ್ಗೆ ಹೇಳುವುದಾದರೆ-ಒಮ್ಮೆ ಶ್ರೀ ಕೃಷ್ಣನಿಗೆ ಸಿಕ್ಕಾಪಟ್ಟೆ ತಲೆನೋವು ಬಂತಂತೆ.ಎಷ್ಟು ಉಪಚಾರ ಮಾಡಿದರೂ,ಔಷಧ ನೀಡಿದರು ನೋವು ಉಪಶಮನಕ್ಕೆಬರಲೇ ಇಲ್ಲ .ಎಲ್ಲರು ಚಿಂತಿತರಾದರು,ಆಗ ಶ್ರೀಕೃಷ್ಣ ಯಾರಾದರು ತಮ್ಮ ಪಾದ ಧೂಳು ಹಣೆಗೆ ಹಚ್ಚಿದರೆ ತನ್ನ ನೋವು ದೂರವಾಗುತ್ತದೆ ಎಂದು ತಿಳಿಸಿದಾಗ ಯಾರೂ ಆ ಕೆಲಸ ಮಾಡಲು ಮುಂದೆ ಬರಲೇಇಲ್ಲವಂತೆ.ಕೃಷ್ಣನಿಗೆ ತಲೆನೋವು ವಾಸಿ ಆಗಲೇ ಇಲ್ಲ,ಆಗ ಶ್ರೀ ಕೃಷ್ಣ ತನ್ನ ಸೇವಕರನ್ನು ಗೋಪಿಕ ಸ್ತ್ರೀಯರ ಬಳಿತನ್ನ ಸೇವಕರನ್ನು ಕಳುಹಿಸಿ ಪಾದ ಧೂಳು ತರುವಂತೆ ತಿಳಿಸಿದನು .ಆಗ ಅಲ್ಲಿದ್ದ ಗೋಪಿಕೆಯರು ಈ ಸೇವೆಗೆ ಸಿದ್ಧರಾದರಂತೆ.ಆಗ ಅವರ ಜೊತೆ ಇದ್ದ ಸೇವಕ ಈ ಕ್ರಿಯೆಯಿಂದ ನೀವು ನರಕಕ್ಕೆ ಹೋಗುವುದಿಲ್ಲವೇ ಎಂದು ಪ್ರಶ್ನಿಸುತ್ತಾನಂತೆ,ಆಗ ಆ ಹೆಣ್ಣುಮಕ್ಕಳು ನಮಗೆ ಕೃಷ್ಣ ಕಷ್ಟ ಪಡೋದನ್ನು ನೋಡಲು ಆಗುವುದಿಲ್ಲ,.ನಮ್ಮ ಈ ಕೆಲಸದಿಂದ ನಾವು ನರಕಕ್ಕೆ ಹೋದರು ಚಿಂತಿಲ್ಲ, ಕೃಷ್ಣ ಹುಶಾರಾದರೆ ಸಾಕು ಎಂದುಹೇಳಿದರಂತೆ.

Thursday, 6 August 2009

ಈತನ ವ್ಯಕ್ತಿತ್ವ ಅತ್ಯಂತ ವಿಶೇಷ


ಭಾರತೀಯ ಸಾಹಿತ್ಯ ಸುಂದರ ಉದ್ಯಾನವನದಲ್ಲಿ ವಿಕಸಿತ ಹೂವುಗಳು ರಾಮಾಯಣ ಹಾಗೂ ಮಹಾ ಭಾರತ ಅಂತ ತಿಳಿದವರು ಹೇಳ್ತಾರೆ.ಅದು ನೂರಕ್ಕೆ ನೂರರಷ್ಟು ಸತ್ಯ.ಈ ಹೂಗಳ ಘಮಕ್ಕೆ ಬೆಲೆಕಟ್ಟಲಾಗದು ಅಷ್ಟೇ.ರಾಮಾಯಣ ಹಾಗೂ ಮಹಾ ಭಾರತ ಕೇವಲ ಭಾರತೀಯರಿಗೆ ಮಾತ್ರವಲ್ಲ ವಿಶ್ವದ ಜನಸಮುದಾಯಕ್ಕೆ ಮಾರ್ಗದರ್ಶಿ ಆಗಿರುವ ಮಹತ್ತರ ಗ್ರಂಥ ಅನ್ನುವವರು ಇದ್ದರೆ,ಅದು ನಿಜ! ಈ ಎರಡು ಮಹಾಗ್ರಂಥಗಳಲ್ಲಿ ಕೆಲವು ವಿಶಿಷ್ಟವಾದ ಪಾತ್ರಗಳು ಇವೆ.ರಾಮಾಯಣದ ವಿಷಯಕ್ಕೆ ಬಂದರೆ ಶತ್ರುಘ್ನ ಅತ್ಯಂತ ವಿಭಿನ್ನ ಪಾತ್ರವಾಗಿ ಕಾಣ ಸಿಗುತ್ತಾನೆ.ಈತನ ವ್ಯಕ್ತಿತ್ವ ಅತ್ಯಂತ ವಿಶೇಷ.ರಾಮಾಯಣವನ್ನು ವಿವರವಾಗಿ ಪರಿಶೀಲಿಸಿದರೆ ಶತ್ರುಘ್ನ ರಾಮನ ದಾಸರಲ್ಲಿ ಅಗ್ರಮಾನ್ಯ ಸ್ಥಾನ ಪಡೆದುಕೊಳ್ಳು ತ್ತಾನೆ.ಶತ್ರುಗಳ ಹೃದಯದ ಬಡಿತ ನಿಲ್ಲಿಸುವಶ್ತು ಪರಾಕ್ರಮಿ.ಹೇಗೆ ಲಕ್ಷ್ಮಣ ರಾಮನ ಬೆನ್ನೆಲುಬಾಗಿ ಇದ್ದನೋ ಅದೇ ರೀತಿ ಶತ್ರುಘ್ನ ಭರತನ ನ್ನೆಲುಬಾಗಿ ಇದ್ದ ಸಹೋದರ ಶತ್ರುಘ್ನ.ಅಯೋಧ್ಯಕಾಂಡ ದಲ್ಲಿ ಉಲ್ಲೇಕ ಇರುವ ಒಂದು ಪ್ರಸಂಗ "ಭಾರತ ತನ್ನ ಸೋದರ ಮಾವನ ಮನೆಗೆ ಹೋಗುವಾಗ ತನ್ನನ್ನು ಅನುಸರಿಸುತ್ತ,ಶತ್ರುಸಂಹಾರ ಮಾಡುತ್ತಾ ಶತ್ರುಘ್ನ ಪ್ರೀತಿಯಿಂದ ಕರೆದೊಯ್ದನಂತೆ".ಅಣ್ಣ ತಮ್ಮಂದಿರ ಪ್ರೀತಿಗೆ ಉತ್ತಮ ಉದಾಹರಣೆ ದಶರತ ಕುಮಾರರು.ಲಕ್ಷ್ಮಣನಿಗೆ ರಾಮ ಅತ್ಯಾಪ್ತನಾದರೆ,ಶತ್ರುಘ್ನನಿಗೆ ಭರತ ಪರಮ ಪ್ರೀತಿಪಾತ್ರ.ಈ ಅನ್ನತಮ್ಮಂದಿರಿಬ್ಬರು ಸುಮಿತ್ರೆಯ ಮಕ್ಕಳೇ!ರಾಮ ಕಾಡಿಗೆ ಹೋದ ಸಂಗತಿ ತಿಳಿದು ಅತ್ಯಂತ ದುಖಿತನಾಗಿ ಶತ್ರುಘ್ನ ಇದಕ್ಕೆ ಕಾರಣಳಾದ ಮಂಥರೆಯನ್ನು ವಧೆ ಮಾಡಲು ಹೋಗುತ್ತಾನೆ,ಆದರೆ ಸ್ತ್ರೀ ಹತ್ಯೆ ಮಹಾಪಾಪ ಎಂದು ತಡೆಯುತ್ತಾನೆ ಭರತ .ಶ್ರೀರಾಮನನ್ನು ವನವಾಸದಿಂದ ಹಿಂತಿರುಗಿ ಬರುವಂತೆ ಭರತನ ಒಡಗೂಡಿ ಒತ್ತಾಯಿಸುವ ಕೆಲಸವನ್ನು ಸಹ ಶತ್ರುಘ್ನ ಮಾಡುತ್ತಾನೆ,ಅದು ಫಲಕಾರಿ ಆಗದೆ ಭರತನ ಜೊತೆಗೂಡಿ ಅಯೋಧ್ಯೆಗೆ ಹಿಂತಿರುಗುತ್ತಾನೆ ಈತ.ಅದೇ ರೀತಿ ಶ್ರೀರಾಮ ವನವಾಸ ಮುಗಿದ ಬಳಿಕ ಆತನನ್ನು ಬರಮಾಡಿಕೊಳ್ಳಲು ಸಿದ್ಧತೆ ಮಾಡುವುದು ಸಹ ಶತ್ರುಘ್ನನೆ,
ರಾಮನ ಪಟ್ಟಾಭಿಷೇಕ ಆದ ಕೆಲವು ಕಾಲದ ಬಳಿಕ ಲವಣಾಸುರ ಎನ್ನುವ ರಾಕ್ಷಸನ ಉಪಟಳ ತಡೆಯಲಿಕ್ಕೆ ಆಗುತ್ತಿಲ್ಲ ಎನ್ನುವ ಮಹರ್ಷಿಗಳ ಮೊರೆ ಕೇಳಿ ಶ್ರೀರಾಮ ಆ ರಾಕ್ಷಸನನ್ನು ಸಂಹರಿಸುವ ಹೊಣೆ ಭರತನಿಗೆ ನೀಡಿದಾಗ,ಹದಿನಾಲ್ಕು ವರ್ಷ ಜಟಾಧಾರಿಯಾಗಿ ಕಂದಮೂಲ ಸೇವಿಸುತ್ತ ಬದುಕಿದ ಭರತನು ಈ ಕೆಲಸಕ್ಕೆ ಬೇಡ ನಾನು ಈ ಕೆಲಸ ಮಾಡುತ್ತೇನೆ ಎಂದು ಹಿರಿಯ ಅಣ್ಣನ ಬಳಿ ವಿನಯದಿಂದ ಕೇಳಿ ,ಅನುಮತಿ ಪಡೆದು ಲವಣಾಸುರನ ಸಂಹಾರ ಮಾಡುತ್ತಾನೆ.ಈ ರಾಕ್ಷಸನ ಸಂಹಾರ ಮಾಡಿದ್ದನ್ನು ಕಂಡು ಶ್ರೀರಾಮ ಈತನಿಗೆ ಆ ರಾಜ್ಯ ಆಳುವಂತೆ ಹೇಳಿದಾಗ ಇಲ್ಲ ನನಗೆ ಬೇಡ ಹಿರಿಯರು ಇರುವಾಗ ನನಗೆ ರಾಜ್ಯದ ಪಾಲನೆಯ ಅಗತ್ಯ ಇಲ್ಲ ಎಂದು ವಿನಯವಾಗಿ ತಿರಸ್ಕರಿಸುತ್ತಾನೆ ಆತ.ಕೈಗೆ ಸಿಕ್ಕ ಅಧಿಕಾರವನ್ನು ಬೇಡವೆಂದ ಶತ್ರುಘ್ನ ರಾಮನ ಬಳಿ 'ತಂದೆ ಹದಿನಾಲ್ಕುವರ್ಷ ನಿಮ್ಮ ವಿಯೋಗದಿಂದ ನಾನುಅನುಭವಿಸಿದ ದುಃಖ ಹೇಳ ತೀರದ್ದು,ಪುನಃ ಅಧಿಕಾರದ ಹೆಸರಲ್ಲಿ ನನ್ನನು ದೂರ ಮಾಡದಿರಿ ಎಂದು ಬೇಡಿಕೊಳ್ಳುತ್ತಾನೆ ಶತ್ರುಘ್ನ.ಹೀಗೆ ಬದುಕಿರುವಷ್ಟು ಕಾಲ ರಾಮನನ್ನು ಸೇವಿಸುತ್ತ ಮೋಕ್ಷ ಹೊಂದುತ್ತಾನೆ.

Thursday, 30 July 2009

ಡಿಶ್ಯುಂ ಡಿಶ್ಯುಂ ....!


ಸಾಮಾನ್ಯವಾಗಿ ಸ್ಟೇಡಿಯಂನಲ್ಲಿ ಪಂದ್ಯಗಳನ್ನು ವೀಕ್ಷಿಸುವಾಗ ಎರಡು ತಂಡಗಳಿಗೂ ಅವರದೇ ಆದ ಅಭಿಮಾನಿ ವಲಯ ಇರುತ್ತಾರೆ,ಅವರ ಫೆವರೆಟ್ ಕ್ರೀಡಾಪಟುಗಳಿಗೆ ಜಯಕಾರ ಹಾಕಿ ಪ್ರೋತ್ಸಾಹ ನೀಡುವುದು ಸಾಮಾನ್ಯ.ಕೇವಲ ನಿರ್ದಿಷ್ಟ ಪಂದ್ಯಗಳಿಗೆ ಇಂತಹ ಪ್ರೋತ್ಸಾಹ ಸಿಕ್ಕುತ್ತೆ ಅಂತೇನೂ ಇಲ್ಲ,ಕ್ರೀಡಾಭಿಮಾನಿಗಳು ಇರುವ ತನಕ ಸಿಳ್ಳೆ,ಕಿರುಚಾಟ,ಕೂಗಾಟದ ಸದ್ದು ಇದ್ದೆ ಇರುತ್ತದೆ ಆಟದ ಬಯಲಲ್ಲಿ.ಇದು ಕ್ರೀಡಾಪಟುಗಳಲ್ಲಿ ಉತ್ಸಾಹವನ್ನು ಹೆಚ್ಚು ಮಾಡಿ ಅವರು ಮತ್ತಷ್ಟು ಉತ್ಸಾಹದಿಂದ ಆತ ಮುಂದುವರೆಸುತ್ತಾರೆ.ಇಂತಹ ಮನಸ್ತತ್ವ ಪಕ್ಷಿಗಳಲ್ಲೂಇದೆಯೆನ್ನುವ ಸಂಗತಿಯನ್ನು ವಿಜ್ಞಾನಿ ಗಳು ಕಂಡು ಹಿಡಿದಿದ್ದಾರೆ.ಅದು ಯಾವಾಗ ಗೊತ್ತೇ? ಎರಡು ಪಕ್ಷಿಗಳಲ್ಲಿ ದಿಷ್ಯುಂ ದಿಷ್ಯುಂ ....! ಆರಂಭ ಆದಾಗ! ಗುಂಪು ಗುಂಪಾಗಿ ಬದುಕ ಸಾಗಿಸುವ ಪಕ್ಷಿಗಳಲ್ಲಿ ಇಂತಹ ವರ್ತನೆ ಕಾಣ ಸಿಗುತ್ತದೆ ಅಂತ ಲಂಡನ್ಗೆ ಸೇರಿದ ವಿಜ್ಞಾನಿಗಳು ತಿಳಿಸಿದ್ದಾರೆ.ಇವರು ದಕ್ಷಿಣ ಆಫ್ರಿಕಾದಲ್ಲಿ ಕಾಣಸಿಗುವ ಗ್ರೀನ್ ವುಡ್ ಹೌಸ್ ಅನ್ನುವ ಪಕ್ಷಿಗಳ ಮೇಲೆ ನಡೆಸಿದ ಅಧ್ಯಯನದಿಂದ ಈ ಸಂಗತಿಯನ್ನು ಕಂಡು ಹಿಡಿದ್ದಾರಂತೆ! ಹನ್ನೆರಡು ಪಕ್ಷಿಗಳ ಒಂದು ವೃಂದ ಹೊಂದಿರುತ್ತದೆ,ಅವುಗಳಲ್ಲಿ ಒಂದು ಪಕ್ಷಿ ಲೀಡರ್ರು! ಮೊತ್ತೊಂದು ಗುಂಪಿನ ಪಕ್ಷಿಗಳು ಆಹಾರಕ್ಕಾಗಿಯೋ,ಮತ್ತೆ ಇನ್ಯಾವುದೋ ವಿಷಯಕ್ಕಾಗಿಯೋ ಕಿರಿಕ್ ಮಾಡಿದರೆ ಲೀಡರ್ ಸುಮ್ನೆ ಇರೋಕೆ ಆಗಲ್ವಲ್ವ,ಸರಿ ಹೊಡೆದಾಟ ಆರಂಭ.ಆಗ ತಮ್ಮ ನಾಯಕನನ್ನು ಬೆಂಬಲಿಸಲು ಇವುಗಳು ಕಿರುಚಾಡಲು ಶುರು ಮಾಡುತ್ತದಂತೆ.ಒಂದು ವೇಳೆ ನಾಯಕ ಓಡಿ ಹೋದ್ರೆ ಆಗ ಇವುಗಳ ಸದ್ದು ಅಡಗುತ್ತದೆಯಂತೆ! ಎಷ್ಟು ವಿಚಿತ್ರ!!

Wednesday, 29 July 2009

ಜಾಣ ಸಂಕುಲಗಳು!

ಕಾಗೆ ಮಾನವನ ಜೊತೆ ವಾಸಿಸುವ ಪಕ್ಷಿ.ಅದು ತುಂಬ ಬುದ್ಧಿ ಇರುವ ಪಕ್ಷಿ ಎಂದು ನಮಗೆ ಗೊತ್ತೇ ಇದೆ.ಈ ಕಾಗೆ ಚಿಕ್ಕ ಹಾಗೂ ತೆಳುವಾದ ವೈರನ್ನು ಸಂಗ್ರಹಿಸಿ ಇಡುತ್ತದೆ,ಅದನ್ನು ತನಗೆ ಬೇಕಾದ ಆಕಾರಕ್ಕೆ ಬದಲಾಯಿಸಿ ನಂತರ ಮರದ ದಿಮ್ಮಿ,ಬಿಲಗಳಲ್ಲಿ ಈ ವೈರನ್ನು ತೂರಿಸಿ ಕ್ರಿಮಿ ಕೀಟಗಳನ್ನು ಎಳೆದು ತಿನ್ನುತ್ತದೆ.ಈ ಕಂಬಿಯನ್ನು ಅದು ಸದಾ ತನ್ನ ಜೊತೆ ಎಲ್ಲ ಕಡೆಯೂ ಕೊಂಡೊಯ್ಯುತ್ತದೆಯಂತೆ.!!
ಹೆರಾನ್

ಜಪಾನ್ ದೇಶದಲ್ಲಿ ವಾಸ ಮಾಡುವ ಹೆರಾನ್ ಅನ್ನುವ ಪಕ್ಷಿ ತನ್ನ ಆಹಾರ ಹೊಂಚು ಹಾಕಿ ಪಡೆಯುವುದು ಹೇಗೆ ಗೊತ್ತೇ? ಚಿಕ್ಕ ಚಿಕ್ಕ ಬೀಜಗಳನ್ನು,ಪುಟ್ಟ ಕ್ರಿಮಿ ಕೀಟಗಳನ್ನು ತಂದು ನೀರಿನ ಮೇಲೆ ಹಾಕುತ್ತದೆ.ಆಗ ನೀರಿನ ಒಳಗೆ ಇರುವ ಪುಟ್ಟ ಪುಟ್ಟ ಮೀನುಗಳು ಮೇಲೆ ಬರುತ್ತಲ್ಲ ಅವುಗಳನ್ನು ತಿನ್ನಲು,ತಕ್ಷಣ ಈ ಪಕ್ಷಿ ಲಬಕ್ ಅಂತ ಮೀನುಗಳನ್ನು ಹಿಡಿದು ಹೊಟ್ಟೆ ತುಂಬಿಸಿಕೊಳ್ಳುತ್ತದೆ.
ಆಟರ್
ಸಮುದ್ರದಲ್ಲಿ ಆಟರ್ ಅನ್ನುವ ಜೀವಿ ವಾಸ ಮಾಡುತ್ತದೆ.ಇದು ತನ್ನ ಹೊಟ್ಟೆಯನ್ನು ಡೈನಿಂಗ್ ಟೇಬಲ್ನಂತೆ ಬಳಸುತ್ತದೆ.ಸಮುದ್ರದಲ್ಲಿ ಹಿಡಿದ ಚಿಪ್ಪಿರುವ ಪ್ರಾಣಿಗಳನ್ನು ತನ್ನ ಹೊಟ್ಟೆ ಮೇಲೆ ಇಟ್ಟು ಕೈಯ್ಯಲ್ಲಿ ಹಿಡಿದು ಬಾಯಲ್ಲಿ ಕಲ್ಲು ಎತ್ತಿಕೊಂಡು ಅದನ್ನು ಒಡೆದು ಅದರೊಳಗೆ ಇರುವ ಜೀವಿಗಳನ್ನು ಭಕ್ಷಿಸಿ ಹೊಟ್ಟೆ ತುಂಬಿಸಿ ಕೊಳ್ಳುತ್ತದೆಯಂತೆ

ಪಕ್ಷಿಗಳಲ್ಲಿ ಇಂತಹ ಬುದ್ಧಿವಂತಿಕೆ ಇಲ್ಲ ಅಂತೇನೂ ಇಲ್ಲ.ಫೆಸಿಫಿಕ್ ಮಹಾ ಸಾಗರದಲ್ಲಿ ಇರುವ ಗಳ ಪಗಾಸ್ ದ್ವೀಪದಲ್ಲಿ ಇರುವ ಮರ ಕುಟುಕ ಎನ್ ಮಾಡುತ್ತೆ ಗೊತ್ತೇ? ಇದು ಗಿಡಗಳ ಒಣ ಕಡ್ಡಿ ಗಳನ್ನೂ ಶೇಖರಿಸಿ ,ಬಳಿಕ ಅದರ ಕೊನೆಯನ್ನು ಚೂಪು ಮಾಡುತ್ತದೆ.ಎಲ್ಲಿ ಅಂತೀರ? ಕಲ್ಲಿನ ಮೇಲೆ,ಬಳಿಕ ಅದನ್ನು ತನ್ನ ಕೊಕ್ಕಿಂದ ಹಿಡಿದು ಬಿಲ,ಇನ್ನು ಹಲವು ಕಡೆ ವಾಸಿಸುವ ಕ್ರಿಮಿಕೀಟಗಳು ಇರುವ ಕಡೆ ಈ ಕಡ್ಡಿಯನ್ನು ತೋರಿಸುತ್ತದೆ,ಬಳಿಕ ನಿಧಾನವಾಗಿ ತೆಗೆದು ಆ ಕ್ರಿಮಿಕೀಟಗಳನ್ನು ತಿಂದು ಹೊಟ್ಟೆ ತುಂಬಿಸಿ ಕೊಳ್ಳುತ್ತದೆ.

Tuesday, 28 July 2009

ಇವುಗಳ ಆಯುಧಗಳು!


ಚಿಂಪಾಂಜಿ ಗಳು ಇರುವೆ ,ಗೆದ್ದಲು ರೀತಿಯ ಹುಳು ಹುಪ್ಪಟೆಗಳನ್ನು ಹಿಡಿಯುವುದು ಹೇಗೆ ಗೊತ್ತೇ? ಸಣ್ಣ ಬಿಲದ ರೀತಿ ಇರುವ ಸ್ಥಳ ದ ಬಳಿ ಬಂದು ಒಂದು ಚಿಕ್ಕ ಕಟ್ಟಿ ಅದರೊಳಗೆ ತೂರಿಸಿ ಇಡುತ್ತದೆ ಸ್ವಲ್ಪ ಹೊತ್ತಾದ ಬಳಿಕ ಇರುವೆಗಳು ಕಡ್ಡಿಗೆ ಅಂಟಿ ಕೊಳ್ಳುತ್ತದಲ್ಲ,ಆಗ ಅದನ್ನು ಬಾಯಲ್ಲಿ ಇತ್ತು ಕಚ ಕಚನೆ ಚಪ್ಪರಿಸುತ್ತಾ ತಿನ್ನುತ್ತದೆ.ವಾಟ್ ಅನ್ ಐಡಿಯ ಸರ್ ಜಿ!!
ಉರಂಗಟಾನ್


ಉರಂಗಟಾನ್ ಹಾಗೂ ಚಿಂಪಾಂಜಿ ತಮ್ಮ ರಕ್ಷಣೆಗಾಗಿ ಕೆಲವು ಆಯುಧಗಳನ್ನೂ ಸಿದ್ಧ ಮಾಡಿಕೊಂಡು ಇರುತ್ತವೆ,ಕಲ್ಲು,ಕಟ್ಟಿಗೆಯನ್ನು ಚೂಪು ಮಾಡಿರುತ್ತದೆ.ಹೀಗೆ ಸುಮಾರು ಐವತ್ತು ನಾಲ್ಕು ರೀತಿಯ ಆಯುಧಗಳನ್ನು ರೆಡಿ ಇಟ್ಟುಕೊಂಡಿರುತ್ತದೆ.ಹೊಳೆ,ನದಿ ದಾಟ ಬೇಕಾದ ಸಂದರ್ಭ ಒದಗಿದರೆ ಅವುಗಳು ತಮ್ಮ ಕೈಲಿ ಕಟ್ಟಿಗೆ ಹಿಡಿದು ನೀರಲ್ಲಿ ಬಿತ್ತು ನಂತರ ನಡೆಯುತ್ತದೆ,ಹೀಗೆ ಅದು ಆಳ ಕಂಡು ಹಿಡಿಯುತ್ತದೆ!
ಆಸ್ಟ್ರಿಚ್ ಮೊಟ್ಟೆ
ವಿಶ್ವದಲ್ಲಿರುವ ಪಕ್ಷಿ ಸಂಕುಲದಲ್ಲಿ ಆಸ್ಟ್ರಿಚ್ ಪಕ್ಷಿಯ ಮೊಟ್ಟೆ ತುಂಬಾ ದೊಡ್ಡದು.ಬೇರೆ ಪಕ್ಷಿಗಳ ಮೊಟ್ಟೆಯಂತೆ ಇದನ್ನು ಸುಲಭವಾಗಿ ಒಡೆಯಲಾಗದು.ಆದ ಕಾರಣ ಈಗಿಪ್ತ್ ದೇಶದ ಒಂದು ಪಕ್ಷಿ ಏನು ಮಾಡುತ್ತೆ ಗೊತ್ತೇ? ಈ ಮೊಟ್ಟೆ ಒಡೆಯಲು ತನ್ನ ಕೊಕ್ಕಿನ ತುದಿಗೆ ಕಲ್ಲನ್ನು ಸಿಕ್ಕಿಸಿ ಕೊಳ್ಳುತ್ತದೆ.ಅದರಿಂದ ಮೊಟ್ಟೆ ಒಡೆದು ರಸ ಹೀರುತ್ತದೆ.ಅದೇ ರೀತಿ ಈಜಿಪ್ಟಿನಲ್ಲಿರುವ ಮುಂಗುಸಿಗಳು ಮೊಟ್ಟೆಯನ್ನು ವೆರದು ಕಾಲುಗಳ ನಡುವೆ ಇತ್ತು ಬಂಡೆಗೆ ಒಡೆದು ಅದರಲ್ಲಿರುವ ರಸವನ್ನು ಸೇವಿಸುತ್ತದೆ.ಎಷ್ಟು ಆಶ್ಚರ್ಯಅಲ್ವ!

Monday, 27 July 2009

ಉದರದಲ್ಲಿ ಚೀಲ!

ಕೋತಿಯ ಹೆಸರನ್ನು ಪಡೆದಿದೆ,ಗೂಡು ಹೊಂದಿದೆ,ಹೊಟ್ಟೆಯಲ್ಲಿ ಚೀಲ ಇದೆ ಆದರೆ ಇದು ಕೋತಿಯಾಗಲಿ,ಪಕ್ಷಿ ಆಗಲಿ ಇಲ್ಲವೇ ಕಾಂಗರೂ ಅಗಲಿ ಅಲ್ಲವೇ ಅಲ್ಲ.ಆದರೆ ವಿಶ್ವದಲ್ಲಿ ಇರುವ ಅಪರೂಪದ ಪ್ರಾಣಿಗಳಲ್ಲಿ ಇದೂ ಒಂದಾಗಿದೆ.ಸಾಮಾನ್ಯವಾಗಿ ನಮಗೆ ತಿಳಿದಿರುವ ಮಟ್ಟಿಗೆ ಪಕ್ಷಿ ಗೂಡು ಕಟ್ಟುತ್ತದೆ.ಆದರೆ ಕೋತಿ ಗೂಡು ಕಟ್ಟಿರುವುದನ್ನು ಕಂಡಿದ್ದೀರ? ಇಲ್ಲವೇ ಕೇಳಿದ್ದೀರಾ? ಅಂತಹ ವಿಶೇಷ ಜೀವಿ ಹೆಸರು ಲಿಟಲ್ ಮೌಂಟನ್ ಮಂಕಿ.ಮಂಕಿ ಎಂದು ಹೆಸರು ಇದ್ದ ಮೇಲೆ ಅದು ಕೋತಿ ಆಗಿರ ಬೇಕಿಲ್ಲ,ಏಕೆ ಅಂತ ಅಂದರೆ ಅದರ ನಿಜವಾದ ಹೆಸರು ಮಾನಿಟೋ ಡೆಲ್ಮಾಂಟೆ .ಇದನ್ನು ಇನ್ನು ಮುದ್ದಾದ ಹೆಸರಲ್ಲಿ ಕರೀತಾರೆ,ಅದೇ ಕೊಲೋಕೊಲೋ .ಇದರ ಬಗ್ಗೆ ಇನ್ನು ಆಸಕ್ತಿಕರ ಸಂಗತಿಗಳು ಇವೆ.
ಇದು ಆಸ್ಟ್ರೇಲಿಯ ವಾಸಿ ಕಾಂಗರೂ ಸಮೀಪದ ನೆಂಟ ಗೊತ್ತೇ.ಇದಕ್ಕೊ ಕಾಂಗೂರು ವಿನಂತೆ ಉದರದಲ್ಲಿ ಚೀಲ ಇದೆ.ಇಂತಹ ಜೀವಿಗಳನ್ನು ಮಾರ್ಸುಪಿಯಲ್ಸ್ ಎಂದು ಕರೆಯುತ್ತಾರೆ.ಆಕುಟುಂಬಕ್ಕೆ ಈ ಮಾಂಟೆ ಸೇರಿದೆ.ಆದರೆ ಇದು ಇಲಿಗಿಂತ ಸ್ವಲ್ಪ ದೊಡ್ದಗಾತ್ರ ಪಡೆದಿದೆ ಅಷ್ಟೇ.ಸಾಮಾನ್ಯವಾಗಿ ಗಿಡ-ಮರಗಳಲ್ಲಿ ವಾಸಿಸುವ ಮಾಂಟೆ ಕಟ್ಟುವ ಗೂಡುಗಳು ವಿಶೇಷವಾಗಿ ಇರುತ್ತವೆ.ಒಂದರ್ಥದಲ್ಲಿ ಇದು ಗೋಲಾಕಾರದಲ್ಲಿ ಗೂಡು ಕಟ್ಟುತ್ತದೆ. ಇದು ಮುಂದೆ ತನ್ನ ಮಕ್ಕಳಿಗಾಗಿ ಕಟ್ಟಿಡುವ ಮನೆಯಲ್ಲ,ಬದಲಿಗೆ ಚಳಿಗಾಲದಲ್ಲಿ ತನ್ನ ರಕ್ಷಣೆಗೆ ಸಿದ್ಧ ಮಾಡಿಕೊಳ್ಳುವ ಸುರಕ್ಷಿತ ಜಾಗ.ಇದು ನಾಲ್ಕರಿಂದ ಹದಿನಾಲ್ಕು ಮಕ್ಕಳನ್ನು ಹೆರುತ್ತದೆ.ತನ್ನ ಉದರದಲ್ಲಿ ಇರುವ ಚೀಲದಲ್ಲಿ ಇಟ್ಟುಕೊಂಡು ಸಂರಕ್ಷಿಸುತ್ತದೆ.
ಚಳಿಗಾಲದಲ್ಲಿ ಆಹಾರಕ್ಕಾಗಿ ಕಷ್ಟ ಪಡುವುದನ್ನು ತಪ್ಪಿಸಿಕೊಳ್ಳಲು ಇದು ತನ್ನ ದೇಹದಲ್ಲಿ ಮೊದಲೇ ಶೇಖರಿಸಿ ಇಟ್ಟುಕೊಂಡಿರುವ ಕೊಬ್ಬನ್ನು ಆ ಸಮಯದಲ್ಲಿ ಬಳಸಿ (ಕರಗಿ ಇದನ್ನು ರಕ್ಷಿಸುತ್ತದೆ) ಜೀವ ಉಳಿಸಿಕೊಳ್ಳು ತ್ತದೆ.ಈ ಕೊಬ್ಬು ಎಲ್ಲಿರುತ್ತದೆ ಗೊತ್ತೇ? ಅದರ ಬಾಲದಲ್ಲಿ.ಅನೇಕ ವೃಕ್ಷ ಸಂಪತ್ತನ್ನು ರಕ್ಷಿಸುವಲ್ಲಿ ಈ ಪುಟ್ಟ ಪ್ರಾಣಿ ತುಂಬಾ ಸಹಾಯಕಾರಿ .ಡೀ ಗ್ಲಿರೈಡ್ಸ್ ಎನ್ನುವ ಮರಗಳ ಹಣ್ಣುಗಳನ್ನು ಇದು ಸೇವಿಸುತ್ತದೆ.ಇವು ಬಿಸಾಡಿದ ಬೀಜಗಳಿಂದ ಈ ಗಿಡಗಳ ಹುಟ್ಟಿಗೆ ಕಾರಣ ಆಗ್ತಾ ಇದೆಯಂತೆ.ಈ ರೀತಿ ವೃಕ್ಷ ಸಂಪತ್ತಿನ ಬೆಳವಣಿಗೆಗೆ ಕಾರಣ ಆಗಿರುವ ಈ ಮಾಂಟೆ ಮಾಂಸಹಾರಿಯೂ ಆಗಿದೆ.ಏನೇ ಇರಲಿ ಈ ಪುಟ್ಟ ಪ್ರಾಣಿಗೆ ಮಾತ್ರ ಮುರೈನ್ ರಾಟ್ ಎನ್ನುವ ಪ್ರಾಣಿಯನ್ನು ಕಂಡರೆ ಮಾತ್ರ ಜೀವ ಪುಕಪುಕ!

Wednesday, 1 July 2009

ರಕ್ಕಸಗಾತ್ರದ ಇಲಿ!

ಮೂಷಿಕವಾಹನ ವಿನಾಯಕ ದೇವನದು .ಆತನಿಂದ ಆ ಪುಟ್ಟ ಪ್ರಾಣಿಗೆ ಮಾನ್ಯತೆ ಸಿಕ್ಕಿದೆ ನಮ್ಮ ಬದುಕಲ್ಲಿ. ಸಾಮಾನ್ಯವಾಗಿ ಜನರಿಗೆ ಇಲಿ ಅಂದ್ರೆ ಕಿರಿಕಿರಿ ಬೇಸರ.ಬಿಳಿ ಇಲಿ ತನ್ನ ಬಣ್ಣದ ಕಾರಣದಿಂದ ಕೆಲವು ಜನರ ಮೆಚ್ಚುಗೆ ಗಳಿದೆ ಅಷ್ಟೇ.ಸಾಕಷ್ಟು ಜನರು ತಿಳಿದಿರುವಂತೆ ಇಲಿಗೆ ರಾಜಸ್ತಾನದ ಒಂದು ಸ್ಥಳದಲ್ಲಿ ಹೆಚ್ಚು ಮಾನ್ಯತೆ ಇದೆ.ಅದು ಮನೆ ಮಗನಿಗಿಂತ ಸರ್ವತಂತ್ರ ಸ್ವತಂತ್ರ.ಅದಕ್ಕೆ ಇಷ್ಟ ಬಂದಂತೆ ಇರಬಹುದು.ಸಾಮಾನ್ಯವಾಗಿ ನಮಗೆ ಇಲಿ ಹೆಚ್ಚು ಖುಷಿ ಕೊಡೋದು ಟಾಮ್ ಏನ್ ಜೆರ್ರಿ ಅನ್ನುವ ಕಾರ್ಟೂನ್ ಜೋಡಿಯಲ್ಲಿ. ಅದರಲ್ಲಿ ಇಲಿ ಹಾಗೂ ಬೇಕ್ಕಿನಾತ ಸದಾ ಸಂತಸ ನೀಡುತ್ತದೆ.ಅದರ ಆಟ,ತರಲೆತನ ಖುಷಿ ಕೊಡುತ್ತದೆ.ಇವೆಲ್ಲ ಈಗಿನ ವಿಷಯ,ಆದರೆ ನಾವು ಬೃಹತ್ ಗಾತ್ರದ ಇಲಿಗಳ ಬಗ್ಗೆ ತಿಳಿಯ ಬೇಕು ಅಂತ ಆಸೆ ಪಟ್ರೆ! ಇರಬೇಕಲ್ಲ ಅನ್ನುವ ಉತ್ರ ಎದುರಾಗುತ್ತದೆ.ಆದರೆ ಆಂಗ್ಲ ಹಾರರ್ ಕಥೆಗಳನ್ನು ಓದುವ ಅಭ್ಯಾಸ ಇರುವವರಿಗೆ ರಕ್ಕಸ ಇಲಿಗಳ ದರ್ಶನವನ್ನು ಲೇಖಕ ಕೊಡ್ತಾನೆ ಇರ್ತಾನೆ.
ಹತ್ತು ಅಡಿ ದೊಡ್ಡದಾದ ಶರೀರದಿಂದ ನೂರು ಕೆಜಿ ತೂಕ ಹೊಂದಿದ ಇಲಿಯ ಬಗ್ಗೆ ಹೇಳಲು ಹೊರಟರೆ ಅಬ್ಬ ಅಂತ ಅನ್ನಿಸುತ್ತದೆ ಅಲ್ವ! ಇಂತಹ ಇಲಿ ದಕ್ಷಿಣ ಅಮೆರಿಕದಲ್ಲಿ ಅಂತಹ ಇಲಿ ಇತ್ತು ಅದೂ ಸಾವಿರಾರು ವರ್ಷಗಳ ಹಿಂದೆ.ಒಬ್ಬ ವಿಜ್ಞಾನಿಗೆ ಇಲಿ ಆಕಾರದ ಒಂದು ಪಳಯುಳಿಕೆ ಸಿಕ್ಕಿತು.ಅದನ್ನು ಕಂಡು ಆತನಿಗೆ ವಿಸ್ಮಯ.ಇದು ವಿಶ್ವದ ಅತ್ಯಂತ ದೊಡ್ಡ ಇಲಿ ಎನ್ನುವ ಅಗ್ಗಳಿಕೆ ಪಡೆದುಕೊಂಡಿತು.ಏಕೆಂದರೆ ಈ ಇಲಿ ಆ ವಿಜ್ಞಾನಿ ಕೈಗೆ ಸಿಗುವ ಮೊದಲು ವೆನುಜುವಲ ದೇಶದಲ್ಲಿ ಸಿಕ್ಕ ಇಲಿ ಪ್ರಭೇದದ ಗುಂಪಿಗೆ ಸೇರಿದ ಪ್ರಾಣಿಯು ವಿಶ್ವದಲ್ಲಿ ಅತಿ ದೊಡ್ಡ ರೋಡೆ೦ಟ್ ಆಗಿತ್ತು.ಆದರೆ ಅದು ಈ ಇಲಿಯಿಂದ ಅದು ತನ್ನ ಮೊದಲ ಸ್ಥಾನ ಕಳೆದುಕೊಳ್ಳ ಬೇಕಾಗಿ ಬಂದಿದೆ.( ಈಗ ನಾನು ತಿಳಿಸುತ್ತಿರುವ ಈ ಇಲಿ ಸಹ ಸಿಕ್ಕು ವರ್ಷ ಆಗಿದೆ).ಇಷ್ಟು ಜೋರಾಗಿದ್ದರು ಪಾಪ ಪ್ರಾಣಿಗಳನ್ನು ಬೇಟೆ ಆಡ್ತಾ ಇರಲಿಲ್ಲ.ಅದರ ಊಟ? ಅನ್ನುವ ಪ್ರಶ್ನೆ ಉದ್ಭವ ಆಗೋದು ಸಹಜ. ಆದರೆ ಅದು ನೀರಲ್ಲಿ ಬೆಳೆಯುವ ಗಿಡಗಳು,ಹಣ್ಣುಗಳನ್ನು ಸೇವಿಸಿ ಬದುಕ್ತಾ ಇತ್ತಂತೆ! ಅಂದಂಗೆ ಅದರ ತೂಕ ಸರಿಸುಮಾರು ಮುನ್ನೂರು ಕಿಲೋಗಿಂತ ಹೆಚ್ಚಿದೆ ಅಂತಾರೆ ವಿಜ್ಞಾನಿಗಳು.
ಈ ಭಾರಿ ಇಲಿಯ ಹೆಸರು ಜೋಸೆಫೋಯಾರ್ಟಿಗೇಸಿಯಾ ಮೊನೆಸಿ .ಇದು ನಲವತ್ತು ವರ್ಷಗಳ ಹಿಂದೆ ಉರುಗ್ವೆ ನದಿ ತೀರದಲ್ಲಿ ವಾಸಿಸುತ್ತ ಇತ್ತಂತೆ.ಇಂತಹ ಬೃಹತ್ ಪ್ರಾಣಿಗಳು ಯಾವರೀತಿ ನಾಶ ಆಗಿರಬಹುದು ಎಂದು ಸಂಶೋಧಕರು ನಡೆಸಿದ ಸಂಶೋಧನೆಯಿಂದ ರಹಸ್ಯ ಹೊರ ಬಿದ್ದ ಸಂಗತಿ-ಆರು ಕೋಟಿ ವರ್ಷಗಳ ಹಿಂದೆ ದಕ್ಷಿಣ ಅಮೇರಿಕ ಒಂದು ದ್ವೀಪದಂತೆ ಇತ್ತಂತೆ.ಕ್ರಮೇಣ ಪನಾಮ ಭೂಭಾಗ ಮೇಲೆ ತೇಲಿದ ಕಾರಣ ಉತ್ತರ ಹಾಗೂ ದಕ್ಷಿಣ ಅಮೆರಿಕ ನಡುವೆ ದಾರಿ ಆಯಿತು.ಪರಿಣಾಮ ಕೆಲವು ಜೀವಿಗಳು ಉತ್ತರ ಅಮೆರಿಕಾದಿಂದ ದಕ್ಷಿಣ ಅಮೆರಿಕಕ್ಕೆ ವಲಸೆಬಂದವಂತೆ,ಇದು ಆ ಬೃಹತ್ ಇಲಿಗಳ ನಾಶಕ್ಕೆ ಕಾರಣ ಆಗಿರಬಹುದು ಎನ್ನುತ್ತಾರೆ ವಿಜ್ಞಾನಿಗಳು.

Followers