ಮಳೆ , ನಾನು ಮತ್ತು ಕೊಡೆ.....
ಮತ್ತೊಂದು ಮುಂಗಾರು ಮಳೆ ... ಭೋರ್ಗೆರೆಯುವ ಮಳೆಯ ಸದ್ದು....ನೆನಪುಗಳು ಅದೇ ಭೋರ್ಗೆರತದಲ್ಲಿ ...! ಅಂದು ಮುಂಗಾರು.. ಇಂದು ಮುಂಗಾರು.. ಆದರೆ ಅಂದು ನೀನಿದ್ದೆ ಗೆಳೆಯ .. ಇಂದು ನಾ ಮಾತ್ರ ಇದ್ದೇನೆ .. ನಮ್ಮಿಬ್ಬರ ಪ್ರೇಮಕ್ಕೆ ಮೂಕ ಸಾಕ್ಷಿಯಾಗಿ ಮಳೆ ... ಈ ಕೊಡೆ.. !
ರಸ್ತೆ ಯಲ್ಲಿ ನಡೆಯುವಾಗ ಮಳೆಯ ಹನಿಗಳದ್ದು ಕೊಡೆಯ ಮೇಲೆ ಜಾರೋ ಬಂಡಿ ಆಟ! ನಿನ್ನದು ಪ್ರೀತಿಯ ತುಂಟಾಟ ..! ಮತ್ತೊಂದು ಮುಂಗಾರು ಬೆಚ್ಚಗಿನ ಭುಜ ಹಿಡಿದು ನಡೆಯುವಾಗ ಅರಿಯದ ಸಾಂತ್ವನ. ಅಂದು ನಾನು ನೀನು ಮಳೆ ಮತ್ತು ಕೊಡೆ .. ಜೊತೆಗೆ ಭರವಸೆ.. ದಿನೇದಿನೇ ನಿನ್ನ ಹಿಡಿತ ಸಡಿಲ ವಾಗ್ತಾ ಬ೦ತು ಪರಿವೆ ಇಲ್ಲದ ನಾನು ಅದೇ ,ಕೊಡೆ, ಭರವಸೆಗಳೊಂದಿಗೆ ಹಾಕಿದ್ದೆ ಹೆಜ್ಜೆ.. !
ಮೊಂಡು ಮುಂಗಾರಲ್ಲಿ ನಾನೊಬ್ಬಳೆ ನಡೆದಿದ್ದೆ.. ಅಲ್ಲಿ ಮತ್ತೆ ಮಳೆ ಕೊಡೆ, ಜೊತೆಗೆ ನಾನು.. ಬೇಡದ ಭೋರ್ಗೆರೆಯುವ ನೆನಪುಗಳು ...!
ಈಗ ಮತ್ತೊಂದು ಮುಂಗಾರು ... !
Saturday, 1 June 2013
Saturday, 2 March 2013
ಯಾಕೆಂದ್ರೆ..

ಮತ್ತೊಂದು ಪತ್ರ ಬರೆಯುವ ಆಸೆ ..ಆದರೆ ಬರೆಯಲು ಮನವೆ ಇಲ್ಲ ಕಣೆ.. ಅಷ್ಟೊಂದು ಕೋಪ ಮಾಡಿಕೊಂಡರೆ ನನ್ನ ಗತಿ ಏನು..
ನಿಜ ಕೋಪ ಬರೋದು ಸಹಜ.ನಿನಗೆ .. ಯಾಕೆಂದ್ರೆ..
ನಾನು ಕೇವಲ ನಿನ್ನ ಫೇಸ್ ಬುಕ್ ಗೆಳೆಯ .. ಅರ್ಥ ಆಗಲಿಲ್ವ ಅಂತ ಕೇಳಲ್ಲ ... ನೀ ಜಾಣೆ ಅದನ್ನು ನಾ ಬಲ್ಲೆ. ಅಷ್ಟೊಂದು ಸ್ಟೇಟಸ್ ಗಳನ್ನೂ ಹಾಕೋ ನೀನು ನಾನು ಬರೆಯುವ ಕಾಮೆಂಟ್ ಗೆ ಹೆಚ್ಚು ರಿಯಾಕ್ಟ್ ಮಾಡ್ತೀಯ . ನನಗೆ ಗೊತ್ತು ನೀನು ಅಷ್ಟೊಂದು ಆಸಕ್ತಿ ತೋರುತ್ತಿರುವುದು ನನಗೆ ಮಾತ್ರವಲ್ಲ ಗೆಳೆಯ ಪವನ್ ಗೂ ಸಹ. ಪವನ್ ಹೇಳಿದ ಮಾತಿಗೆ ನೀನು ಫೇಸ್ ಬುಕ್ನಲ್ಲಿ ಕಿಲ ಕಿಲ ಅಂತ ನಗುವ ಚಿತ್ರ ಹಾಕುತ್ತ ಉತ್ತ ರಿಸುವಾಗ ಅಸೂಯೆ ಕಾಡುವುದು ಸುಳ್ಳಲ್ಲ . ಆ ಅಸೂಯೆಯೇ ನಿನ್ನೆ ನಿನ್ನ ಸ್ಟೇಟಸ್ ಗೆ ಸ್ವಲ್ಪ ಕಾರದ ಉತ್ತರ ಬರೆಯೋಕೆ ಪ್ರೇರೆಪಿಸಿದ್ದು .
ನೀನು ನಾನು ಭೇಟಿ ಆಗೇ ಇಲ್ಲ ಆದರೂ ಅದ್ಯಾಕೋ ನನಗೆ ನೀನು ತುಂಬಾ ಹತ್ತಿರ ಅನ್ನಿಸಿದೆ. ನಿನ್ನ ಭಾವನೆಗಳು, ಮನದ ಮಾತುಗಳು ಸೇಮ್ ಸೇಮ್ ..
ಅದೇನನ್ನನ್ನು ನಿನ್ನ ಬಳಿ ಸೆಳೆದಿದ್ದು . ಹೇಯ್ ಲವ್ ಯು ಕಣೆ .. ನೀನು ಫೇಸ್ಬುಕ್ ಮಾತ್ರವಲ್ಲ ಎದುರು ಸಿಕ್ಕಾಗಲು ಒಳ್ಳೆಯ ಮನಸ್ಸಿನಿಂದ ಮಾತಾಡುವ ಸರಳ ಹೆಣ್ಣು ಅಂತ ನಿನ್ನನ್ನು ಭೇಟಿ ಮಾಡಿರುವ ನನ್ನ ಫೇಸ್ಬುಕ್ ಫ್ರೆಂಡ್ಸ್ ಹೇಳಿದ್ದಾರೆ . ನನಗೆ ನಿನ್ನನ್ನು ನೋಡುವ ಆಸೆ ಆದರೆ ಅದ್ಯಾಕೋ ಆಗ್ತಾ ಇಲ್ಲ. ನನ್ನ ಕನಸು ಹೀಗೆ ಉಳಿದು ಬಿಡುತ್ತಾ ಅನ್ನುವ ಆತಂಕ ನನಗೆ..
ಬಿಡು ಹೇಗಾದರೂ ಮಾಡಿ ನಿನ್ನನ್ನು ನಾನು ಭೇಟಿ ಮಾಡೇ ಮಾಡ್ತೀನಿ ..
ಆದರೆ ಅದಕ್ಕೂ ಮುನ್ನ ನಾನು ನನ್ನ ಮನಸ್ಸು ನಿನ್ನ ಮುಂದೆ ಬಿಚ್ಚಿಡಲೇ ಬೇಕು ಅಂತ ನಿರ್ಧಾರ ಮಾಡಿ ಈ ಪತ್ರ ಬರೆಯುತ್ತಿದ್ದಿನಿ .ಮತ್ತೊಂದು ವಿಷ್ಯ ನೀನು ನೋಡೋಕೆ ತುಂಬಾ ಮುದ್ದಾಗಿದ್ದೀಯ . ಹೇಗಿದ್ರೂ ಪತ್ರ ತಾನೇ ನೇರವಾಗಿ ಹೇಳೋಕೇನು ಭಯ.. ಆದರೆ ನಿಜವಾಗಿಯೂ ನನಗೆ ಭಯ ಕಾಡುತ್ತಿದೆ ನೀನು ಈ ಪತ್ರ ಓದಿದ ಬಳಿಕ ನನ್ನನ್ನು ನಿನ್ನ ಫ್ರೆಂಡ್ ಲಿಸ್ಟ್ ನಿಂದ ತೆಗೆದು ಬಿಟ್ರೆ .. ನನ್ನ ಅಕೌಂಟ್ ಬ್ಲಾಕ್ ಮಾಡಿ ಬಿಟ್ರೆ ..!
ಆದಷ್ಟು ಒಂದು ವಾರ ಫೇಸ್ಬುಕ್ ಕಡೆ ತಲೆ ಹಾಕಲ್ಲ ಅಂತ ನಿರ್ಧಾರ ಮಾಡಿದ್ದೀನಿ .. ಅಂದ್ರೆ ನಿನ್ನ ವಾಲ್ ಕಡೆ .. ಬ್ಲಾಕ್ ಅಗ್ತಿನೋ,ಡಿಲೀಟ್ ಆಗ್ತಿನೋ ಒಟ್ಟಲ್ಲಿ ಮನಸ್ಸು ಬಿಚ್ಚಿಟ್ಟೆನಲ್ಲ ಧೈರ್ಯವಾಗಿ ...
ಸ್ವಲ್ಪ ಸಾಫ್ಟ್ ಕಾರ್ನರ್ ಆದ್ರೆ ನೀನು...
ಏನು ಯೋಚಿಸುವುದಕ್ಕೂ ಆಗುತ್ತಿಲ್ಲ..
ನಿನ್ನವನಾಗಲು ಬಯಸುತ್ತಿರುವ
ಸುಮಂತ್
Tuesday, 26 February 2013
ನೀನಾ ನಾನಾ
ಇದು ನೀನಾ ನಾನಾ
ನನಗೆ ನೀನು ನಿನಗೆ ನಾನು
ಹಾಗಂದ್ರೆ ಏನ್ ಗೆಳತಿ !
ಸಾಕು ಪದಗಳ ಗೋಜಲು
ಯಾರಿಗೆ ಯಾರು ಆದರೆನು..
ಪ್ರೇಮದಲಿ ,ಮೋಹದಲಿ ಅದರಲ್ಲಿ ಇದರಲ್ಲಿ
ನೀನು ನಾನು ಒಂದೇ ಅಲ್ವೆನು..
ನಾವು ಒಂದಾಗುವುದು ..
ಬೆರೆಯುವುದನ್ನು ಏನು ಬೇಕಾದರೂ
ಕರೆಯಲಿ ಈ ಜಗತ್ತು
ಒಂದಾದ ಗಳಿಗೆಯಂತೂ ಸತ್ಯ..
ಅದರ ಮುಂದೆ ಈ ನಾನು-ನೀನು ಎಂಬ ಹುಂಬ ವಾದವೇಕೆ !
ಹೇಳು ...
*********
ಏನಿದೆ ಮನದಲೆನಿದೆ ಎಂದು ಹುಡುಕುವ ಭರದಲ್ಲಿ
ಮನವ ನಾ ಬಿಚ್ಚಿಟ್ಟೆ ಹುಡುಗ....
ಹುಡುಕುವ ಆಟದಲಿ ನೀ ಗೆದ್ದೇ ನಾ ಸೋತೆ..
ಆ ಸೋಲು ನಿನ್ನ ಗೆಲುವಿಗಿಂತ ಹೆಚ್ಚು ಬಲ್ಲೆಯಾ ನೀನು
Thursday, 14 February 2013
ನಿಜ ಕಣೆ.. !
ಅವಳು :
ಮತ್ತೊಂದು ವ್ಯಾಲೆಂಟೈನ್ ದಿನ...
ನನ್ನ ನೆನಪುಗಳ ಭಿತ್ತಿಯಲ್ಲಿ ನಿನ್ನ ರೂಪ ಗೋಚರ-ಅಗೋಚರ...!
ನೆನಪಿದೆಯ ಗೆಳೆಯ... ಈ ದಿನಕ್ಕಾಗಿ ನೀ ವರ್ಷವಿಡಿ ಕಾಯುತ್ತಿದೆ.. ಕೈಲೊಂದು ಪುಟ್ಟ ಗುಲಾಬಿ ಬೊಕ್ಕೆ, ಅದರ ಜೊತೆಯಲ್ಲಿ ಒಂದು ಕಾರ್ಡು.. ಕೆಂಪನೆಯ ದೊಡ್ಡ ಹೃದಯ ...ಜೊತೆಯಲ್ಲಿ ಪುಟ್ಟ ಪುಟ್ಟ ಪಿಂಕ್ ಹಾರ್ಟ್ ...!
ನಿನ್ನ ಕಾರ್ಡ್ ತೆಗೆದುಕೊಳ್ಳುವಾಗ ಸೋಕಿದ ನಿನ್ನ ಒರಟು ಚರ್ಮದ ಬಿರುಸಿಗೆ ಮರುಳಾಗುತ್ತಿತ್ತು ನನ್ನ ಬೆರಳ ತುದಿ... ಮೂಗಿನಂಚಿನಲಿ ಬೆವರಿನ ಮುತ್ತು ಮುತ್ತು...!
ಲವ್ ಯು ಕಣೆ... ಲವ್ ಯು ಅಂದಾಗ ಪ್ರಪಂಚದಲ್ಲಿ ನಾವಿಬ್ಬರೇ ಅನ್ನುವ ಪುಳಕ...
ನನ್ನಿ೦ದ ಬರದ ಉತ್ತರ ನಿನ್ನ ಕಣ್ಣಲ್ಲಿ ಪ್ರಶ್ನಾರ್ಥಕ.. ನಿನ್ನ ಒರಟುತನ ನನಗೆಲ್ಲಿದೆ ... ಮೃದು ನಾನು...! ಉತ್ತರ ಸಿಕ್ಕ ನಿನಗ ಬದುಕು ಸಿಕ್ಕಾಗಲಿಲ್ಲ ಅನ್ನುವ ಖುಷಿ...
ಖುಷಿಯ ಕ್ಷಣ ... ಅಂದೇ ಮುಗಿಯಿತೇನೋ...ನಿನ್ನನ್ನು ಅವಳ ಜೊತೆ ಕಂಡಾಗ... ನನ್ನ ಪತ್ರ-ನಿನ್ನ ಖುಷಿ ಎಲ್ಲವೂ ಖಾಲಿ ಖಾಲಿ...
ಮತ್ತೆ ವ್ಯಾಲೆಂಟೈನ್ಸ್ ಡೆ ನಾನು ಇನ್ನು ನಿನ್ನ ನೆನಪಲ್ಲಿ ಉಳಿದಿದ್ದಿನಾ ? ಹೇಳು...?
ಅವನು...
ಮತ್ತೊಂದು ವ್ಯಾಲೆಂಟೈನ್ಸ್ ಡೇ .. ಈ ದಿನ ಕಹಿ ಕಹಿ ,,,
ನಿನಗೆ ನಾನು ನನಗೆ ನೀನು ಇದು ನಮ್ಮ ಬದುಕಿನ ಟ್ಯಾಗ್ ಲೈನ್ .. ಎಷ್ಟೊಂದು ಕನಸುಗಳು ನಮ್ಮಿಬ್ಬರದ್ದು... ಮನೆ ಮಕ್ಕಳು... ಒಹ್... ಹೇಳು ಗೆಳತಿ... ನಾನು ನಿನಗೆ ಕೊಟ್ಟಾ ಆಶ್ವಾಸನೆ ಬರಿ ಪೊಳ್ಳು...
ಮರೆತ ನಿನ್ನ ನಾನು ಆ ಕ್ಷಣ ಅವಳ ಜೊತೆ ಸೇರಿದಾಗ.. ಮುದ್ದಾದ ಕೂಸಿನ ಸಂಭ್ರಮ... ನನ್ನ ಬದುಕಲ್ಲಿ ನೀ ಸ್ವಲ್ಪ ಕಾಲ ಮಂಗ ಮಾಯಾ... ತಪ್ಪು ನನ್ನದು.. ತಪ್ಪಾಗಿದೆ ಎಂದು ಹೇಳಲಾಗದ ಸಿಡಿಮಿಡಿ .. ಮುಗಿದ ಕಥೆ ಮುನ್ನುಡಿ ಬರೆಯಲು ಹೊರಟರೆ ಆದೀತೆ.. ಆ ಕ್ಷಣ ಮರೆತ ನಾನು ಈಗ ಪ್ರತಿಕ್ಷಣ ನಿನ್ನ ನೆನಪಲ್ಲಿ ಲೀನ.. ಹೇಳು ಚಿನ್ನ ನನ್ನನ್ನು ಕ್ಷಮಿಸುವೆಯ,,,ನೀ ಎಲ್ಲೇ ಇದ್ದರೂ .. ಹ್ಯಾಪಿ ವ್ಯಾಲೆಂಟೈನ್ಸ್ ಡೇ .... ಮರುವಿಗೂ ಹೇಳಿದ್ದೇನೆ.. ನಿನ್ನ ನೆನಪು ಮಾತ್ರ ಜೀವಂತವಾಗಿಡು ಎಂದು... ನಿಜ ಕಣೆ.. !
Sunday, 3 February 2013
ಪ್ರೇಮ ?
ಹೇಳುವ ಮಾತುಗಳು ಸಾವಿರ ಇದ್ದರೂ
ನಿನ್ನ ಒಂದು ನೋಟ
ಲಕ್ಷ ಮಾತುಗಳನ್ನು ಹೇಳಿತು,
ನನ್ನ ಮೌನ ಕೋಟಿ
ಭಾವನೆಗಳನ್ನು ತಿಳಿಸಿತು..
ಏನನ್ನಲಿ ಇದನ ಪ್ರೀತಿ, ಪ್ರೇಮ ?
******
ಎಷ್ಟು ನಿಜ ನಿನ್ನ ನೆನಪು ,
ಅದೆಷ್ಟು ನಿಜ ನೀ ಕೊಟ್ಟ ನೋವು ನಿಜ
ಅನ್ನುವ ವಾದದಲ್ಲಿ ಸುಳ್ಳಿನ ಸಂಬಂಧವು
ಮತ್ತೆ ಜೀವ ತಳೆಯಿತು
ನಿಜ ನಿಜ ನೀನೆಷ್ಟು ಸುಳ್ಳು..
Monday, 10 December 2012
ನೀನಿಲ್ಲ
ನನ್ನ ಅಸಹನೆ ತುಮುಲಗಳ ಬಿಸಿಲ ನಾಡಲ್ಲಿ
ನಿನ್ನ ನಗೆಯ ನೆನಪು ಹಾಯಿ ತಂಗಾಳಿ..
ನೆನಪು ಸುಂದರ,ಗತದಷ್ಟೇ ಚಲುವ..
ನಿನ್ನೆಯು ಇಂದಾಗ ಬಾರದಾಗಿತ್ತೆ ಅನ್ನುವ ಆಶಯ
ನೀನು ತೊರೆದ ಕ್ಷಣವೇ ಅದು ಮರೀಚಿಕೆ
ಆ ಮಾತು ಮರೆತಿತ್ತು ಆಗ ..!
ಈಗ ಪದೇಪದೇ ನೆನಪಿಗೆ ಬರುತಿದೆ
ಯಾಕೆಂದ್ರೆ ನೀನಿಲ್ಲ ನಲ್ಲ !
Sunday, 9 December 2012
ಇಷ್ಟ
ಕೆಲವು ಬರಹಗಳು ಹೆಚ್ಚು ಆಪ್ತ ಅನ್ನಿಸೋಲ್ಲಾ.. ಪ್ರಾಯಶಃ ನಾನು ನಿರೀಕ್ಷಿಸಿದ ಸಂಗತಿಗಳು, ಮಾಧುರ್ಯ ಅದರಲ್ಲಿ ಇರದೇ ಹೋಗಿರುವುದು ಒಂದು ಕಾರಣ ಇರಬಹುದು, ಇಲ್ಲವೇ ಅದರಲ್ಲಿನ ಸತ್ಯಗಳನ್ನು ಅರಗಿಸಿ ಕೊಳ್ಳುವುದಕ್ಕೆ ಸಾಧ್ಯ ಆಗದೆ ಇರುವುದು ಒಂದು ಮುಖ್ಯ ಸಂಗತಿ ಆಗಿರ ಬಹುದು.
ಚಂದಮಾಮ ಓದುವ ಖುಷಿಯಲ್ಲಿ ಓದಿನ ಸವಿ ಈವರೆಗೂ ಕಡಿಮೆ ಆಗಿಲ್ಲ.. ಅನೇಕ ಫ್ಯಾಂಟಸಿ ಒಳಗೊಂಡ ಕಥೆಗಳು, ಅದರಲ್ಲೂ ಸುಂದರ ಏಳು ಮಲ್ಲಿಗೆ ತೂಕದ ರಾಜಕುಮಾರಿ ಕಥೆ ತುಂಬಾ ದಿನ ಮನದಲ್ಲಿ ಸಣ್ಣ ಖುಷಿಯ ಪುಳಕ ನೀಡಿತ್ತು. ಓದುವ ಹವ್ಯಾಸ ಅಮ್ಮನದ್ದು,ಅವರು ಬಾಲ್ಯದಲ್ಲೇ ದೊಡ್ಡ ದೊಡ್ಡ ಕಾದಂಬರಿ ಓದಿ ಜೀರ್ಣಿಸಿಕೊಂಡವರು .ಅದರ ಬಗ್ಗೆ ನನ್ನಜ್ಜಿ ಬಳಿ ಹೇಳ್ತಾ ಇರೋರು. ಅವರನ್ನು ಹೆಚ್ಚು ಕಾದಿದ್ದು ಭೈರಪ್ಪನವರ ಪರ್ವ.ಹೀಗೂ ಉಂಟೆ ಅನ್ನುವ ಅವರ ಆ ಭಾವ ಚಂದಮಾಮನ ಕಥೆಯ ನನಗೆ ಅರ್ಥ ಆಗಿರಲಿಲ್ಲ..
ಬಳಿಕ ಕಾರಂತರು, ಕುವೆಂಪು, ಮಾಸ್ತಿ,ಭೈರಪ್ಪನವರು ಮಾತ್ರವಲ್ಲದೆ ಬರಗೂರು,ಕುಂ.ವೀ.,ದೇವನೂರು ಮಹಾದೇವ , ಅರವಿನದ ಮಾಲಗತ್ತಿ.. ಇಷ್ಟ ಆಗೋಕೆ ಆರಂಭಿಸಿತು.
ಇವುಗಳ ಜೊತೆಗೆ ಉಷಾ ನವರತ್ನ ರಾಮ್ , ಭುವನೇಶ್ವರಿ ಹೆಗಡೆ, ಎಂ.ಕೆ.ಇಂದಿರಾ ಅವರ ಬರಹಗಳು ಖುಷಿ ಕೊಟ್ಟಿತ್ತು.
ಎಂ.ಕೆ.ಇಂದಿರಾ ಮಾಡಿದಷ್ಟು ಮೋಡಿ ... ಬೇರೆ ಸ್ತ್ರೀ ಬರಹಗಾರ್ತಿಯರು ಮಾಡಲಿಲ್ಲ.ಅವರ ಸರಳ ಕನ್ನಡ, ಆರಾಮವಾಗಿ ಅರ್ಥ ಆಗುವ ವಿಷಯ ಎಲ್ಲವೂ ಸುಂದರ..ಅದೇ ರೀತಿ ಹೆಚ್ಚು ಖುಷಿ ಕೊಟ್ಟವರು ದೇವನೂರು ಮಹಾದೇವ..ವಾಸ್ತವತೆಯ ಸ್ಪಷ್ಟ ಚಿತ್ರಣ
ಕೇವಲ ಕನ್ನಡವಲ್ಲ ತೆಲುಗು, ಹಿಂದಿ, ಆಂಗ್ಲ. ಸಾಹಿತ್ಯದ ಮಜಾ ಸಿಕ್ತಾ ಹೋಯ್ತು.. ನನಗೆ ಆಪ್ತ ಅನ್ನಿಸಿದ ಬರಹಗಾರರಲ್ಲಿ ಪತ್ತೇದಾರಿ ಬರಹಗಾರ ಟಿ .ಕೆ. ರಾಮರಾವ್ ಒಬ್ಬರು .ಪತ್ತೆ ಮಾಡ ಬೇಕಾದ ಸಂಗತಿಗಳು ಸಖತ್ ಕುತೂಹಲ ಮೂಡಿಸ್ತಾನೆ ಇರೋದು. ಒಟ್ಟಾರೆ ನಾವೇ ಪತ್ತೆದಾರರು ಆಗುವಂತೆ ಮಾಡುವ ಬರಹ ಶೈಲಿ..ಶರ್ಲಾಕ್ ಹೋಮ್ಸ್, ಅಗಾಥ ಕ್ರಿಸ್ಟಿ ..ವಾವ್
ಹೆಚ್ಚು ಸಣ್ಣ ಕಥೆಗಳನ್ನು ಓದುವುದು ನಾನು..ಲೇಖನಗಳು ಅಷ್ಟೇ ಸರಳವಾಗಿ ಇರ ಬೇಕು..! ಆ ನಿಟ್ಟಿನಲ್ಲಿ ಜಿ.ಎನ್ .ಮೋಹನ್, ವಿಶ್ವೇಶ್ವರ ಭಟ್ಟರು ಪ್ರೇಂ ಶೇಖರ್ ...........ಲಿಸ್ಟ್ ದೊಡ್ಡದು :-) ರವಿ ಬೆಳಗೆರೆ ಬರೆಯುವ ಶೈಲಿ ,ವಿವರಿಸುವ ರೀತಿ, ಹೇಳುವ ಭಾವ ಇಷ್ಟ ಆಗುತ್ತದೆ.ಅದೇ ರೀತಿ ಅನಂತ್ ಚಿನಿವಾರ್..ಜೋಗಿ ಬರಹಗಳು ಹಲಸಿನ ಹಣ್ಣಂತೆ ಓಡುತ್ತಾ ಹೋದಂತೆ ಸಿಹಿಸಿಹಿ ತಿರುಳು..!
Subscribe to:
Posts (Atom)






