Saturday 9 May 2009

ವೇದಗಳಲ್ಲಿ ಇಂದ್ರ

ರಾಮಾಯಣ ಹಾಗು ಮಹಾ ಭಾರತ ಗಳಲ್ಲಿ ಇಂದ್ರನನ್ನು ತುಂಬಾ ಪರಾಕ್ರಮಶಾಲಿ ಎಂದು ಹಾಗೂ ಕಾಮುಕನೆಂದು ವರ್ಣಿಸಲಾಗಿದೆ.ಆದರೆ ವೇದಗಳಲ್ಲಿ ಈತನನ್ನು ಉದಾತ್ತಶಾಲಿ,ಪ್ರತಿಭಾವಂತ,ಶತ್ರು ಸಂಹಾರಕ ಎಂದು ವರ್ಣಿಸಲಾಗಿದೆ. ವೇದಗಳಲ್ಲಿ ಮುವ್ವತ್ಮೂರು ಕೋಟಿ ದೇವಿ ದೇವತೆಗಳ ವರ್ಣನೆ ಮಾಡಲಾಗಿದೆ .ಇದನ್ನು ಮೂರು ಭಾಗಗಳಾಗಿ ವಿಭಾಗಿಸಲಾಗಿದೆ. ದ್ಯು=ಆಕಾಶದಲ್ಲಿ ನೆಲೆಸಿರುವವರು,ದೇವತಾ=ಅಂತರಿಕ್ಷ(ಮಧ್ಯ),ಸ್ಥಳೀಯ ದೇವತೆ .ಅಂತರಿಕ್ಷ ದೇವತೆಗಳಲ್ಲಿ ಇಂದ್ರ ಅಗ್ರಮಾನ್ಯ.ಆರ್ಯರಿಗೆ ಇಂದ್ರ ಪ್ರಿಯನಾದ ದೇವತೆ.ಇಂದ್ರನನ್ನು ಸ್ತುತಿಸುವ ಇನ್ನೂರ ಐವತ್ತು ಶ್ಲೋಕಗಳು ( ಚಿಕ್ಕ-ದೊಡ್ಡ,ಎಲ್ಲವನ್ನು ಜೊತೆ ಸೇರಿಸಿದರೆ ಮುನ್ನೂರಾಗುತ್ತದೆ).ಶತ್ರು ಸಂಹಾರಕನಾದ ಇಂದ್ರನಿಗೆ ವಿಶೇಷ ಸ್ಥಾನ ಇದೆ.ವ್ರುತ್ತಾಸುರ,,ಶತ್ರುಪುರಿ,ಶಂಭಾರ....!ಇನ್ನು ಅನೇಕ ರಾಕ್ಷಸರನ್ನು ನಾಶ ಮಾಡಿದ ದೇವತೆ ಅನ್ನುವ ಅಗ್ಗಳಿಕೆ ಈತ ಹೊಂದಿದ್ದಾನೆ ಋಗ್ವೇದದಲ್ಲಿ .ಇಂದ್ರ ವಜ್ರಾಯುಧಡಿದ ಶತ್ರು ಸಂಹಾರ ಮಾಡಿದರೂ,ಆಗಾಗ ಆತ ಬಾಣ ಉಪಯೋಗಿಸಿ ಶತ್ರು ಸಂಹಾರ ಮಾಡುತ್ತಾನೆ.ಇಂದ್ರ ಬಾಣದಲ್ಲಿ ಯುದ್ಧ ಮಾಡಿದ ಬಗ್ಗೆ ಅಥರ್ವಣ ವೇದದಲ್ಲಿ ವರ್ಣನೆ ಇದೆ(19/13/4) . ಋಗ್ವೆದದಿಂದ ಹಿಡಿದು ಉಪನಿಷತ್ ತನಕ ಇಂದ್ರ ಶತ್ರುಸಂಹಾರಕ ಎಂದು ತಿಳಿಸಲಾಗಿದೆ.ವೈದಿಕ ಕಾಲದಲ್ಲಿ ಇಂದ್ರ ರಾಷ್ಟ್ರೀಯ ದೇವತೆಯಾಗಿ ಪೂಜಿಸಲ್ಪಡುತ್ತಿದ್ದ.ಈತ ಮಹಾ ಬುದ್ಧಿವಂತ ಎಂದು ಋಗ್ವೇದದಲ್ಲಿ ವರ್ಣಿಸುತ್ತದೆ.ಜನರ ಪ್ರಾಣ ರಕ್ಷಕ.....!ಹಲವಾರು ರೀತಿ ವರ್ಣಿಸಲಾಗಿದೆ.ಅಜೇಯ,ವೀರತೆ,ಸಾರ್ವಭೌಮತ್ವ ,ಜ್ಞಾನ ಇವೆಲ್ಲದರ ಅಧಿಪತಿ ಅನ್ನುವ ವರ್ಣನೆಯು ಇಂದ್ರನಿಗೆ ಗಿಟ್ಟಿದೆ.ಈ ಎಲ್ಲ ಕಾರಣದಿಂದ ಈತ ಸ್ವರ್ಗಕ್ಕೆ ರಾಜ ಹಾಗು ದೇವತೆಗಳ ಅಧಿಪತಿ. ಆದರೆ ಸಾಮಾನ್ಯವಾಗಿ ಪೌರಾಣಿಕ ಚಲನಚಿತ್ರಗಳಲ್ಲಿ ಹಾಗು ಪೌರಾಣಿಕ ಇಂದ್ರ ಋಗ್ವೇದದಲ್ಲಿ ತಿಳಿಸಿರುವಷ್ಟು ಬುದ್ಧಿವಂತನಲ್ಲ ... !ಜೊತೆಗೆ ವಿಲಾಸಿ,ಹೀಗೆ ಹತ್ತು ಹಲವಾರು ರೀತಿಯಲ್ಲಿ ಆತನನ್ನು ತೋರಿಸುತ್ತಾರೆ.ಏನಾದರು ಇಂದ್ರ ವೇದಗಳ ಕಾಲದ ಅಧಿಪತಿ ಅನ್ನುವುದನ್ನು ಮಾತ್ರ ಒಪ್ಪಿಕೊಳ್ಳಲೇ ಬೇಕು.

No comments:

Post a Comment

Followers