Thursday 25 June 2009

ನಮ್ಮ ಉನ್ನತಿಗಾಗಿ ಪ್ರಾರ್ಥನೆ

ಸಾಮಾನ್ಯವಾಗಿ ನಾವು ಅನೇಕ ರೀತಿಯ ಚಿಕಿತ್ಸಾ ವಿಧಾನದ ಬಗ್ಗೆ ಕೇಳಿ ಇರುತ್ತೇವೆ.ಕೆಲವು ಸರ್ತಿ ಅನುಭವದ ಮೂಲಕ ಅವುಗಳ ಫಲಿತಾಂಶ ತಿಳಿದೇ ಇರುತ್ತೇವೆ.ಆದರೆ ಪ್ರಾರ್ಥನಾ ಚಿಕ್ತಿಸೆ ಬಗ್ಗೆ ಎಷ್ಟು ಜನಕ್ಕೆ ತಿಳಿದಿದೆ?ಅದಕ್ಕೋ ಸಹ ಕೆಲವು ನಿಯಮಗಳನ್ನು ಅನುಸರಿಸ ಬೇಕು ಅಂತ ಹೇಳ್ತಾರೆ ತಜ್ಞರು.ಕ್ರಮಬದ್ಧ ಪದ್ದತಿಯಿಂದ ರೋಗಿಗಳು ರೋಗಮುಕ್ತರಾಗುತ್ತಾರೆ ಎಂದು ಸಹ ತಿಳಿಸಿದ್ದಾರೆ. ನಮ್ಮ ಶಾಸ್ತ್ರಗಳಲ್ಲಿ ಪ್ರಾರ್ಥನೆ ಮೂಲಕ ಮಹರ್ಷಿಗಳು ಚಿಕಿತ್ಸೆ ಮಾಡ್ತಾ ಇದ್ದರು ಅನ್ನುವ ಸಂಗತಿ ಗೊತ್ತೇ ಇದೆ.ಅದಕ್ಕೆ ಪೂರಕವಾದ ಪ್ರಮಾಣಗಳು ದೊರಕಿವೆ.ಯೇಸು,ಶಿರಡಿ ಸಾಯಿಬಾಬ,ರಾಮಕೃಷ್ಣ ಪರಮ ಹಂಸ ಮುಂತಾದ ಮಹಾನುಭಾವರು ಸ್ಪರ್ಶದ ಮೂಲಕ ರೋಗವನ್ನು ದೂರಮಾಡಿದ ಉದಾಹರಣೆಗಳು ಸಾಕಷ್ಟಿವೆ.ಇವೆಲ್ಲವೂ ಪ್ರಾರ್ಥನೆಯ ಮೂರ್ತ ರೂಪ ಅಂತಲೇ ಹೇಳ ಬೇಕು.ಪ್ರಾರ್ಥನೆ ಮಾಡುವವರ ದೇಹದಲ್ಲಿ ಕೆಲವು ರಾಸಾಯನಿಕ ಪರಿವರ್ತನೆಗಳು ನಡೆಯುತ್ತದೆ.ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಮನಸ್ಸು ನಿರ್ಮಲವಾಗಿ,ಸಕಾರಾತ್ಮಕ ವಾಗಿ ಆಲೋಚಿಸುವ ವ್ಯಕ್ತಿತ್ವ ಉಂಟಾಗುತ್ತದೆ.ಪ್ರಾರ್ಥನೆಗೆ ಎಲ್ಲದಕಿಂತ ಮುಖ್ಯವಾದುದು ಶ್ರದ್ಧೆ,ವಿಶ್ವಾಸ.ಚಂಚಲ ಮನಸಿನಿಂದ ಉತ್ತಮ ಫಲಿತಾಮ್ಶಕ್ಕೆ ಖೋತ ಬೀಳುತ್ತದೆ!ಪ್ರಾರ್ಥನೆಯ ವಿಶೇಷತೆ ಅಂತ ಅಂದ್ರೆ ಇದಕ್ಕೆ ಆಸ್ತಿಕ ಹಾಗೂ ನಾಸ್ತಿಕ ಅನ್ನುವ ಬೇಧ ಭಾವ ಇಲ್ಲ,ಎಲ್ಲರು ಇಷ್ಟಪಟ್ಟು ಮಾಡುವ ಒಂದು ಸಾರ್ವತ್ರಿಕ ಆರೋಗ್ಯ ರಕ್ಷಣಾ ವಿಧಾನವಾಗಿದೆ.
ಒಂದೊಂದು ಧರ್ಮದಲ್ಲಿ ಒಂದೊಂದು ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು ಮೂಲ ಉದ್ದೇಶದಲ್ಲಿ ಯಾವುದೇ ಭಿನ್ನತೆ ಇರದು.ಪ್ರಾರ್ಥನೆ ಅಂದರೆ ಕೆಲವರ ಪ್ರಕಾರ ಅವಸರವರವಾಗಿ ಮಾಡುವ ಕ್ರಿಯೆ.ಆದರೆ ಅದು ಆ ರೀತಿಯದ್ದಲ್ಲ,,ಸಹಜವಾಗಿ ಉದ್ಭವ ಆಗುವ ಪ್ರಕ್ರಿಯೆ!ಪ್ರಾರ್ಥನೆ ಪ್ರೇಮದ ಪರಮ ಉತ್ಕೃಷ್ಟ ರೂಪ ಆಗಿದೆ.'ಭಗವಂತಎಲ್ಲರಿಗೂ ಆರೋಗ್ಯ ನೀಡಪ್ಪ 'ಅಂದುಕೊಂಡರೆ ಸಾಕು ನಿಮ್ಮ ಆರೋಗ್ಯದಲ್ಲಿ ಮಹತ್ತರವಾದ ಬದಲಾವಣೆ ಸಿಗುತ್ತದೆ ಅಂತಾರೆ ತಜ್ಞರು!ಆದರೆ ಪ್ರಾರ್ಥನೆ ಮಾಡಲು ಮುಂಜಾನೆ ಅಥವಾ ಸಂಜೆ ಅತ್ಯಂತ ಸೂಕ್ತವಾದುದು.ಆ ಸಮಯದಲ್ಲಿ ಈಶ್ವರ ತತ್ವ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ.ಇದು ಸಹ ಗುರುವಿನ ಮೂಲಕ ಕಲಿಯ ಬೇಕಾದ ವಿದ್ಯೆ.ಗುರು ಇದರ ರಹಸ್ಯಗಳನ್ನು ಹೇಳಿಕೊಟ್ಟಾಗ ಸುಲಭ ರೀತಿಯಯಲ್ಲಿ ಏಕಾಗ್ರತೆ ಹೊ೦ದಬಹುದು .ಆದರೆ ಈ ಪ್ರಕ್ರಿಯೆಗೂ ಸಾಧನೆ ಅತ್ಯಗತ್ಯ!

No comments:

Post a Comment

Followers