Saturday 27 June 2009

ನನಗೆ ಭಯ....!

ಇದು ತುಂಬ ಹಳೆಯ ವಿಷ್ಯ,ಆದರೆ ನಾನು ಈಗ ಅದರ ಬಗ್ಗೆ ಹೇಳೋಕೆ ಹೊರಟಿದ್ದೀನಿ.ಸಾಮಾನ್ಯವಾಗಿ ಭಯ ಎಲ್ಲರಲ್ಲೂ ಎಲ್ಲೋ ಒಂದು ಕಡೆ ಅವತು ಕುಳಿತಿರುವ ತರ್ಲೆ.ಕೆಲವರಿಗೆ ತನ್ನ ಪ್ರಭಾವ ಹೆಚ್ಚು ತೋರಿದರೆ,ಒಂದಷ್ಟು ಜನರ ಬಳಿ ತಗ್ಗಿಬಗ್ಗಿ ಇರುತ್ತದೆ ಆ ವಿಷ್ಯ ಬೇರೆ ! ಚಲನಚಿತ್ರ ಕಲಾವಿದರು ತೆರೆಯಮೇಲೆ ಹಾವನ್ನು ಹಿಡಿದು,ಹುಲಿಯನ್ನು ಹೊಡೆದು,ದೆವ್ವದೊಂದಿಗೆ ಬಡೆದಾಡಿದರು,ಮರೆಯಲ್ಲಿ ಅವರು ಕೆಲವು ವಿಷಯಗಳಿಗೆ ಭಯಭೀತರು!ಕೆಲವು ಸಿನಿಮಾಗಳಲ್ಲಿ ಹಿರೋಯಿನ್ ಒಲಿಬೇಕಾದ್ರೆ ನಮ್ ಹೀರೋ ಜಿರಳೆ ಹಿಡೀಲೆ ಬೇಕು ಅಂತಹ ಪರಿಸ್ಥಿತಿ! ನಮ್ಮ ಸ್ಯಾಂಡಲ್ ವುಡ್ಡಿನಲ್ಲಿ ತನ್ನ ಪ್ರತಿಭೆ ತೋರಿದ್ದ ನೆರೆಯ ರಾಜ್ಯದ ನಟಿ ಶ್ರೀದೇವಿ (ನವನಟಿ )ಗೆ ಹಲ್ಲಿ ಕಂಡ್ರೆ ಹೆದರಿ ಸಾಯೋ ಹಾಗೆ ಆಗುತ್ತಂತೆ ,ಅದೇ ರೀತಿ ಅದೇ ನಮ್ ಪುನಿತ್ ರಾಜ್ ಕುಮಾರ್ ಜೋಡಿ ಆಗಿದ್ದ ಮಲೆಯಾಳಂ ಕುಟ್ಟಿ ಮೀರ ಜಾಸ್ಮಿನ್ಗೆ ಸಹ ಹಲ್ಲಿ ಕಂಡ್ರೆ ಸಿಕ್ಕಾಪಟ್ಟೆ ಹೆದರಿಕೆ,ಅದೆಷ್ಟು ಅಂತ ಅಂದ್ರೆ ಕಿರ್ಚಾಡಿ...ಕಿರ್ಚಾಡಿ....! ಬ್ಯಾಡ ಮನೆಯವರ ಕಥೆ! ಇದೆ ವರ್ಗಕ್ಕೆ ಸೇರಿದ ಬಾಲಿವುಡ್ ಹೆಣ್ಣುಮಕ್ಕಳ ಬಗ್ಗೆ ಹೇಳೋದೇ ಆದ್ರೆ,ವಿದ್ಯಾಬಾಲನ್,ಪ್ರಿಯಾಂಕ ಚೋಪ್ರಾ,ಹಲ್ಲಿಪ್ರಿಯರು! ಆದರೆ ಮಾಧುರಿ ದೀಕ್ಷಿತ್ಗೆ ಜಿರಳೆ ಕಂಡ್ರೆ ಹೆದರಿಕೆಯಂತೆ!ಅಮಿಷ ಪಟೇಲ್,ಅಯೇಶ ತಕಿಯಾ,ಪರಿಸ್ಥಿತಿ ಸಹ ಹೀಗೆ ಇದೆ.ಹಲ್ಲಿ,ಜಿರಳೆ ನಂತರ ಸ್ಥಾನ ಪಡೆದುಕೊಳ್ಳುವುದು ಹಾವು....!
ಪ್ರಾಣಿಗಳ ವಿಷಯ ಹೀಗಾದ್ರೆ ಹೆಚ್ಚು ಜನರಿಗೆ ಹೆದರಿಕೆ ಉಂಟಾಗೋದು ದೆವ್ವಗಳನ್ನು ಕಂಡ್ರೆ.ದೆವ್ವದ ವಿಷಯಕ್ಕೆ ಬಂದ್ರೆ ಬಾಲಿವುಡ್ ದೆವ್ವಪ್ರಿಯ ರಾಮ್ಗೋಪಾಲ್ ವರ್ಮ ಜ್ಞಾಪಕಕ್ಕೆ ಬರ್ತಾರೆ.ಆತ ಸಹ ಸಿಕ್ಕಾಪಟ್ಟೆ ಹೆದರುಪುಕ್ಲ.ಆ ಹೆದರಿಕೆಯಿಂದ ದೂರ ಆಗಲು ಆತ ಜನ ಹೆದರುವ ಸಿನಿಮಾ ತೆಗೆಯುತ್ತಾನಂತೆ.ರಾಮುಗೆ ಕತ್ತಲು,ಒಂಟಿಯಾಗಿ ಪ್ರಯಾಣ,ಕಳ್ಳ-ಪೋಲೀಸ್ ಇಬ್ಬರನ್ನು ಕಂಡರೂ ಹೆದರಿಕೆಯಂತೆ!ಈತ ನಿರ್ಮಿಸಿದ ಸಿನಿಮಾ ನೋಡೋಕೆ ತುಂಬಾ ಹೆದರ್ತಾರಂತೆ ರಾಮು!ಬಿಂದಾಸ್ ನಟಿ ಬಿಪಾಸ ಬಸುಗೆ ಸಹ ಒಂಟಿಯಾಗಿ ಇರಲು,ದೆವ್ವಗಳನ್ನು ಕಂಡ್ರೆ ಭಯ....ಭಯ! ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್ಗೆ ಅತಿ ಎತ್ತರದ ಕಟ್ಟಡದ ಮೇಲಿಂದ ಕೆಳಗೆ ನೋಡಲು ಸಿಕ್ಕಾಪಟ್ಟೆ ಹೆದರಿಕೆ.ರಿಸ್ಕ್ ಶಾಟ್ ಸಂದರ್ಭದಲ್ಲಿ ಆತ ಗಾಯತ್ರಿ ಮಂತ್ರವನ್ನು ಜಪಿಸುತ್ತಾನಂತೆ.ದೀಪಿಕಾ ಪಡುಕೋಣೆ ಸಹ ಇದೆ ಗುಂಪಿಗೆ ಸೇರಿದ್ದಾರೆ.ಶಾಲೆಯಲ್ಲಿ ಇದ್ದಾಗ ಎಲ್ಲರಿಗಿಂತ ಮೊದಲು ನಿಲ್ಲಲು,ಮಾತನಾಡಲು ಹೆದರಿಕೆ ಇತ್ತು ಇದು ತಬು ಪರಿಸ್ಥಿತಿ! ಎಗರೆಗರಿ ನಗುವ ನಿರೂಪಕ ಸಿದ್ದು ಗೆವ ಮಾತು ಆಡೋದು ಅಂದ್ರೆ ಅಷ್ಟಕಷ್ಟೇ.ಒಂಟಿತನ,ಸೋಲು,ಅಪನಿಂದೆ....! ಹಲವು ಕಾರಣಗಳು ಹೆದರಿಕೆಗೆ ಕಾರಣ ಆಗುತ್ತದೆ.ಆದ್ರೆ ಭಯ ನಿಜವಾಗಲು ಭಯ ಪಡಿಸುವ ವಿಷಯವೇ ತಾನೇ!

No comments:

Post a Comment

Followers