Thursday 6 August 2009

ಈತನ ವ್ಯಕ್ತಿತ್ವ ಅತ್ಯಂತ ವಿಶೇಷ


ಭಾರತೀಯ ಸಾಹಿತ್ಯ ಸುಂದರ ಉದ್ಯಾನವನದಲ್ಲಿ ವಿಕಸಿತ ಹೂವುಗಳು ರಾಮಾಯಣ ಹಾಗೂ ಮಹಾ ಭಾರತ ಅಂತ ತಿಳಿದವರು ಹೇಳ್ತಾರೆ.ಅದು ನೂರಕ್ಕೆ ನೂರರಷ್ಟು ಸತ್ಯ.ಈ ಹೂಗಳ ಘಮಕ್ಕೆ ಬೆಲೆಕಟ್ಟಲಾಗದು ಅಷ್ಟೇ.ರಾಮಾಯಣ ಹಾಗೂ ಮಹಾ ಭಾರತ ಕೇವಲ ಭಾರತೀಯರಿಗೆ ಮಾತ್ರವಲ್ಲ ವಿಶ್ವದ ಜನಸಮುದಾಯಕ್ಕೆ ಮಾರ್ಗದರ್ಶಿ ಆಗಿರುವ ಮಹತ್ತರ ಗ್ರಂಥ ಅನ್ನುವವರು ಇದ್ದರೆ,ಅದು ನಿಜ! ಈ ಎರಡು ಮಹಾಗ್ರಂಥಗಳಲ್ಲಿ ಕೆಲವು ವಿಶಿಷ್ಟವಾದ ಪಾತ್ರಗಳು ಇವೆ.ರಾಮಾಯಣದ ವಿಷಯಕ್ಕೆ ಬಂದರೆ ಶತ್ರುಘ್ನ ಅತ್ಯಂತ ವಿಭಿನ್ನ ಪಾತ್ರವಾಗಿ ಕಾಣ ಸಿಗುತ್ತಾನೆ.ಈತನ ವ್ಯಕ್ತಿತ್ವ ಅತ್ಯಂತ ವಿಶೇಷ.ರಾಮಾಯಣವನ್ನು ವಿವರವಾಗಿ ಪರಿಶೀಲಿಸಿದರೆ ಶತ್ರುಘ್ನ ರಾಮನ ದಾಸರಲ್ಲಿ ಅಗ್ರಮಾನ್ಯ ಸ್ಥಾನ ಪಡೆದುಕೊಳ್ಳು ತ್ತಾನೆ.ಶತ್ರುಗಳ ಹೃದಯದ ಬಡಿತ ನಿಲ್ಲಿಸುವಶ್ತು ಪರಾಕ್ರಮಿ.ಹೇಗೆ ಲಕ್ಷ್ಮಣ ರಾಮನ ಬೆನ್ನೆಲುಬಾಗಿ ಇದ್ದನೋ ಅದೇ ರೀತಿ ಶತ್ರುಘ್ನ ಭರತನ ನ್ನೆಲುಬಾಗಿ ಇದ್ದ ಸಹೋದರ ಶತ್ರುಘ್ನ.ಅಯೋಧ್ಯಕಾಂಡ ದಲ್ಲಿ ಉಲ್ಲೇಕ ಇರುವ ಒಂದು ಪ್ರಸಂಗ "ಭಾರತ ತನ್ನ ಸೋದರ ಮಾವನ ಮನೆಗೆ ಹೋಗುವಾಗ ತನ್ನನ್ನು ಅನುಸರಿಸುತ್ತ,ಶತ್ರುಸಂಹಾರ ಮಾಡುತ್ತಾ ಶತ್ರುಘ್ನ ಪ್ರೀತಿಯಿಂದ ಕರೆದೊಯ್ದನಂತೆ".ಅಣ್ಣ ತಮ್ಮಂದಿರ ಪ್ರೀತಿಗೆ ಉತ್ತಮ ಉದಾಹರಣೆ ದಶರತ ಕುಮಾರರು.ಲಕ್ಷ್ಮಣನಿಗೆ ರಾಮ ಅತ್ಯಾಪ್ತನಾದರೆ,ಶತ್ರುಘ್ನನಿಗೆ ಭರತ ಪರಮ ಪ್ರೀತಿಪಾತ್ರ.ಈ ಅನ್ನತಮ್ಮಂದಿರಿಬ್ಬರು ಸುಮಿತ್ರೆಯ ಮಕ್ಕಳೇ!ರಾಮ ಕಾಡಿಗೆ ಹೋದ ಸಂಗತಿ ತಿಳಿದು ಅತ್ಯಂತ ದುಖಿತನಾಗಿ ಶತ್ರುಘ್ನ ಇದಕ್ಕೆ ಕಾರಣಳಾದ ಮಂಥರೆಯನ್ನು ವಧೆ ಮಾಡಲು ಹೋಗುತ್ತಾನೆ,ಆದರೆ ಸ್ತ್ರೀ ಹತ್ಯೆ ಮಹಾಪಾಪ ಎಂದು ತಡೆಯುತ್ತಾನೆ ಭರತ .ಶ್ರೀರಾಮನನ್ನು ವನವಾಸದಿಂದ ಹಿಂತಿರುಗಿ ಬರುವಂತೆ ಭರತನ ಒಡಗೂಡಿ ಒತ್ತಾಯಿಸುವ ಕೆಲಸವನ್ನು ಸಹ ಶತ್ರುಘ್ನ ಮಾಡುತ್ತಾನೆ,ಅದು ಫಲಕಾರಿ ಆಗದೆ ಭರತನ ಜೊತೆಗೂಡಿ ಅಯೋಧ್ಯೆಗೆ ಹಿಂತಿರುಗುತ್ತಾನೆ ಈತ.ಅದೇ ರೀತಿ ಶ್ರೀರಾಮ ವನವಾಸ ಮುಗಿದ ಬಳಿಕ ಆತನನ್ನು ಬರಮಾಡಿಕೊಳ್ಳಲು ಸಿದ್ಧತೆ ಮಾಡುವುದು ಸಹ ಶತ್ರುಘ್ನನೆ,
ರಾಮನ ಪಟ್ಟಾಭಿಷೇಕ ಆದ ಕೆಲವು ಕಾಲದ ಬಳಿಕ ಲವಣಾಸುರ ಎನ್ನುವ ರಾಕ್ಷಸನ ಉಪಟಳ ತಡೆಯಲಿಕ್ಕೆ ಆಗುತ್ತಿಲ್ಲ ಎನ್ನುವ ಮಹರ್ಷಿಗಳ ಮೊರೆ ಕೇಳಿ ಶ್ರೀರಾಮ ಆ ರಾಕ್ಷಸನನ್ನು ಸಂಹರಿಸುವ ಹೊಣೆ ಭರತನಿಗೆ ನೀಡಿದಾಗ,ಹದಿನಾಲ್ಕು ವರ್ಷ ಜಟಾಧಾರಿಯಾಗಿ ಕಂದಮೂಲ ಸೇವಿಸುತ್ತ ಬದುಕಿದ ಭರತನು ಈ ಕೆಲಸಕ್ಕೆ ಬೇಡ ನಾನು ಈ ಕೆಲಸ ಮಾಡುತ್ತೇನೆ ಎಂದು ಹಿರಿಯ ಅಣ್ಣನ ಬಳಿ ವಿನಯದಿಂದ ಕೇಳಿ ,ಅನುಮತಿ ಪಡೆದು ಲವಣಾಸುರನ ಸಂಹಾರ ಮಾಡುತ್ತಾನೆ.ಈ ರಾಕ್ಷಸನ ಸಂಹಾರ ಮಾಡಿದ್ದನ್ನು ಕಂಡು ಶ್ರೀರಾಮ ಈತನಿಗೆ ಆ ರಾಜ್ಯ ಆಳುವಂತೆ ಹೇಳಿದಾಗ ಇಲ್ಲ ನನಗೆ ಬೇಡ ಹಿರಿಯರು ಇರುವಾಗ ನನಗೆ ರಾಜ್ಯದ ಪಾಲನೆಯ ಅಗತ್ಯ ಇಲ್ಲ ಎಂದು ವಿನಯವಾಗಿ ತಿರಸ್ಕರಿಸುತ್ತಾನೆ ಆತ.ಕೈಗೆ ಸಿಕ್ಕ ಅಧಿಕಾರವನ್ನು ಬೇಡವೆಂದ ಶತ್ರುಘ್ನ ರಾಮನ ಬಳಿ 'ತಂದೆ ಹದಿನಾಲ್ಕುವರ್ಷ ನಿಮ್ಮ ವಿಯೋಗದಿಂದ ನಾನುಅನುಭವಿಸಿದ ದುಃಖ ಹೇಳ ತೀರದ್ದು,ಪುನಃ ಅಧಿಕಾರದ ಹೆಸರಲ್ಲಿ ನನ್ನನು ದೂರ ಮಾಡದಿರಿ ಎಂದು ಬೇಡಿಕೊಳ್ಳುತ್ತಾನೆ ಶತ್ರುಘ್ನ.ಹೀಗೆ ಬದುಕಿರುವಷ್ಟು ಕಾಲ ರಾಮನನ್ನು ಸೇವಿಸುತ್ತ ಮೋಕ್ಷ ಹೊಂದುತ್ತಾನೆ.

No comments:

Post a Comment

Followers