Saturday 8 August 2009

ಪ್ಲಟೊನಿಕ್ ಲವ್

ಗೋಪಿಕೆಯರಿಗೆ ಕೃಷ್ಣನ ಮೇಲಿರುವ ಪ್ರೀತಿ ಅಲೌಕಿಕವಾದುದು ಹಾಗೂ ದಿವ್ಯವಾದುದು.ಅಷ್ಟೊಂದು ಸಂಖ್ಯೆಯ ಗೋಪಿಕೆಯರು ಶ್ರೀಕೃಷ್ಣ ದೇವರು ಎನ್ನುವ ಸಂಗತಿ ತಿಳಿದಿತ್ತು.ಆದ ಕಾರಣ ಅವರು ತಮ್ಮ ಪ್ರೀತಿಯನ್ನು ಆತನಿಗೆ ಧಾರೆ ಎರೆದರು ಎಂದು ಭಕ್ತಿಸೂತ್ರದಲ್ಲಿ ನಾರದ ಮಹರ್ಷಿ ವಿವರಿಸಿದ್ದಾರೆ.ಅಲೌಕಿಕ  ರೀತಿಯಿಂದ ಪ್ರೀತಿಸುವುದಕ್ಕೂ ಹಾಗೂ ಲೌಕಿಕ ಪ್ರೇಮಕ್ಕೂ ನಡುವೆ ಇರುವ ವ್ಯತ್ಯಾಸದ ಬಗ್ಗೆಯೂ ಇದರಲ್ಲಿ ತಿಳಿಸಿದೆ,ಲೌಕಿಕ ಸ್ವಾರ್ಥಪೂರಿತ ,ಆದರೆ ಅಲೌಕಿಕ ನಿಸ್ವಾರ್ಥವಾದ ಪ್ರೀತಿ.ನಮಗೆ ಯಾವ ಸಂಗತಿ,ವಸ್ತು ಇಲ್ಲವೇ ಮನುಷ್ಯನಿಂದ ಸಂತಸ ಸಿಗುತ್ತದೆಯೋ ಅಂತಹವುಗಳನ್ನು ಪ್ರೀತಿಸುತ್ತೇವೆ,ಅದು ಸಹಜ ಕ್ರಿಯೆ.ಆದರೆ ಅದೇ ವ್ಯಕ್ತಿ,ಇಲ್ಲವೇ ವಸ್ತು ...ಸಂಬಂಧಿಸಿದಂತೆ ಬೇಸರ -ದುಃಖ ಉಂಟಾದರೆ ನಾವು ಅಷ್ಟು ಪ್ರೀತಿಸಿದ ವ್ಯಕ್ತಿಯನ್ನು ದ್ವೇಷಿಸುತ್ತೇವೆ,ಕೊಪಗೊಳ್ಳುತ್ತೇವೆ ಇದು ಪ್ರೀತಿಯ ಒಂದು ರೂಪವೇ ಅನ್ನುವ ಪ್ರಶ್ನೆ ಉದ್ಭವ ಆಗುತ್ತದೆ,ಆದರೆ ಲೌಕಿಕ ಪ್ರೀತಿಯಲ್ಲಿ ಇದು ಸಾಮಾನ್ಯ,ಆದ ಕಾರಣ ಗೋಪಿಕೆಯರು ಅಲೌಕಿಕದತ್ತ ತಮ್ಮ ಗಮನ ನೆಟ್ಟರು .ಆ ಭಗವಂತನನ್ನು ಪ್ರೀತಿಸಿದರು.ಇದು ಭಗವಂತನಿಗೂ  ಗೊತ್ತು,ತನ್ನ ಬಗ್ಗೆ ಅಪಾರ ಪ್ರೀತಿ ಹೊಂದಿದ ವ್ಯಕ್ತಿಗೆ ತನ್ನ ಹೃದಯದಲ್ಲಿ ಸ್ಥಾನ ಬೇಕೇ ಹೊರೆತು ಇಂದ್ರ,ಇಲ್ಲವೇ ರಾಜ್ಯಪದವಿ ಅಲ್ಲ .ಗೋಪಿಕೆಯರು ಬಯಸಿದ್ದು ಇದೆ ಅಂಶವನ್ನು,ಅವರು ಎಂದಿಗೂ ಕೃಷ್ಣ ನು ತಮ್ಮ ಬಳಿಯಲ್ಲಿಯೇ ಇರಬೇಕು ಎಂದು ಬಯಸಲಿಲ್ಲ,ಇದೊಂತರ ಈಗಿನ ತಿಳಿದವರು ಹೇಳುವ ಪ್ಲಟೊನಿಕ್ ಲವ್ ನಂತಹುದು.
ಗೋಪಿಕ ಸ್ತ್ರೀಯರ ಪ್ರೀತಿಯ ಬಗ್ಗೆ ಹೇಳುವುದಾದರೆ-ಒಮ್ಮೆ ಶ್ರೀ ಕೃಷ್ಣನಿಗೆ ಸಿಕ್ಕಾಪಟ್ಟೆ ತಲೆನೋವು ಬಂತಂತೆ.ಎಷ್ಟು ಉಪಚಾರ ಮಾಡಿದರೂ,ಔಷಧ ನೀಡಿದರು ನೋವು ಉಪಶಮನಕ್ಕೆಬರಲೇ ಇಲ್ಲ .ಎಲ್ಲರು ಚಿಂತಿತರಾದರು,ಆಗ ಶ್ರೀಕೃಷ್ಣ ಯಾರಾದರು ತಮ್ಮ ಪಾದ ಧೂಳು ಹಣೆಗೆ ಹಚ್ಚಿದರೆ ತನ್ನ ನೋವು ದೂರವಾಗುತ್ತದೆ ಎಂದು ತಿಳಿಸಿದಾಗ ಯಾರೂ ಆ ಕೆಲಸ ಮಾಡಲು ಮುಂದೆ ಬರಲೇಇಲ್ಲವಂತೆ.ಕೃಷ್ಣನಿಗೆ ತಲೆನೋವು ವಾಸಿ ಆಗಲೇ ಇಲ್ಲ,ಆಗ ಶ್ರೀ ಕೃಷ್ಣ ತನ್ನ ಸೇವಕರನ್ನು ಗೋಪಿಕ ಸ್ತ್ರೀಯರ ಬಳಿತನ್ನ ಸೇವಕರನ್ನು ಕಳುಹಿಸಿ ಪಾದ ಧೂಳು ತರುವಂತೆ ತಿಳಿಸಿದನು .ಆಗ ಅಲ್ಲಿದ್ದ ಗೋಪಿಕೆಯರು ಈ ಸೇವೆಗೆ ಸಿದ್ಧರಾದರಂತೆ.ಆಗ ಅವರ ಜೊತೆ ಇದ್ದ ಸೇವಕ ಈ ಕ್ರಿಯೆಯಿಂದ ನೀವು ನರಕಕ್ಕೆ ಹೋಗುವುದಿಲ್ಲವೇ ಎಂದು ಪ್ರಶ್ನಿಸುತ್ತಾನಂತೆ,ಆಗ ಆ ಹೆಣ್ಣುಮಕ್ಕಳು ನಮಗೆ ಕೃಷ್ಣ ಕಷ್ಟ ಪಡೋದನ್ನು ನೋಡಲು ಆಗುವುದಿಲ್ಲ,.ನಮ್ಮ ಈ ಕೆಲಸದಿಂದ ನಾವು ನರಕಕ್ಕೆ ಹೋದರು ಚಿಂತಿಲ್ಲ, ಕೃಷ್ಣ ಹುಶಾರಾದರೆ ಸಾಕು ಎಂದುಹೇಳಿದರಂತೆ.

No comments:

Post a Comment

Followers