Saturday 6 July 2013

ಕೈಲಾಗದವರು !

ದಿನ ಒಂದೊಂದು ಸಂಗತಿಗಳು  , ಬೇಸರಗಳು ಸಂತೋಷಗಳು  .. ಹೀಗೆ ಬದುಕು ಸಾಗ್ತಾ ಇದೆ.. ನಿನ್ನೆ ಗೆಳತಿ ಒಬ್ಬಳು ನನಗೆ ಯಾಕೋ ತುಂಬಾ ಅಳು ಬರ್ತಾ ಇದೆ ಜೈ ಅಂತ ಹೇಳಿದಳು.. ಆಕೆಯ ದುಃಖದ ಕಾರಣ ನನಗೆ ತಿಳಿದಿದ್ದರೂ ಕೇಳಿದೆ ಯಾಕೆ ಏನಾಯ್ತು ಅಂತ..ಜನಗಳು ನಮ್ಮ ಹತ್ರ ಕೆಲಸ ಮಾಡಿಸಿಕೊಳ್ಳುವಾಗ ಅದೆಷ್ಟು  ಹೊಗಳುತ್ತಾರೆ, ಅದೇ ಅವರನ್ನು ನಾವು ವಿರೋಧಿಸಿದಾಗ ಕೆಟ್ಟದಾಗಿ ಮಾತಾಡ್ತಾರೆ.. !
ಆಕೆಯ ದುಖದ ಮೂಲ ಅವಳಾಗಿರಲಿಲ್ಲ ನಾನು ಆಗಿದ್ದೆ . ನನ್ನ ಬಗ್ಗೆ ಆ ವ್ಯಕ್ತಿ  ಮಾತನಾಡಿದ ರೀತಿಗೆ ಅವಳಿಗೆ ನೋವಾಗಿತ್ತು.. ನೋಡು ನಿನ್ನೆ ಒಬ್ಬರಿದ್ದರೆ, ಇಂದು ನಾನು ನಾಳೆ ನೀನು.. ಒಟ್ಟಿನಲ್ಲಿ ತಮ್ಮ ಮೂಗಿನ ನೇರಕ್ಕೆ ನಡೆಯದಿದ್ದರೆ, ಇಲ್ಲವೇ ತಮಗೆ ಯಾರೇ ಆಗಿರಲಿ ಸಹಾಯಹಸ್ತ ನೀಡದೆ ಇದ್ದರೆ ಹೀಗೆ ರಿಯಾಕ್ಟ್ ಮಾಡೋದು ಸಹಜ.. ಅದು ಅವರ ವೀಕ್ ನೆಸ್ . ಅದರ ಬಗ್ಗೆ ಹೆಚ್ಚು ತಲೆಗೆ ಹಾಕಿಕೋ ಬ್ಯಾಡ ಅಂದೇ.. ಅದಕ್ಕೆ ಪೂರಕವಾಗಿ ನನ್ನ ಆಫೀಸಿನಲ್ಲಿ ಒಬ್ಬಾತ ಮುಗ್ಧ ಒರಟ ಇದ್ದಾನೆ. ಹಾಸನದ ಆತನ ಮಾತು ಒರಟು ಆದರೆ ಪಾಪದವ ಒಳ್ಳೆಯವ. ಆತ ಸಂಸ್ಥೆಯನ್ನು ಹಾಳು ಮಾಡಲು ಹೊರಟ 'ಸಂಭಾವಿತ ಕಳ್ಳ' ನನ್ನು ಹಿಡಿದು ಕೊಟ್ಟಿದ್ದಕ್ಕೆ ಆ ಕಳ್ಳ ಈ ವ್ಯಕ್ತಿಯ ಬಗ್ಗೆ ಅಪಪ್ರಚಾರ ಮಾಡೋಕೆ ಆರಂಭಿಸಿದ್ದಾನೆ.. ಅದನ್ನು ಹೇಳುತ್ತಾ ಆತ ಬೇಸರ ಮಾಡಿಕೊಂಡ.. ಹೀಗೆ ಮಾಡೋವರನ್ನು ಕೈಲಾಗದವರು....  ! :-)

1 comment:

  1. ಕೆಲಸ ಮಾಡುವ ಪರಿಸರದಲ್ಲಿ ಒಳ್ಳೆಯ ವಾತಾವರಣ ಇರಲೇ ಬೇಕು. ಆರೋಗ್ಯಕರ ಪೈಪೋಟಿ ನಮ್ಮೊಳಗಿನ ಸೃಜನಶೀಲತೆಯನ್ನು ಬೆಳೆಸಿದರೆ - ಇಂತಹ ಕುತ್ಸಿತ ಮನೋಭಾವಗಳ ವ್ಯಕ್ತಿಗಳ ಬೆನ್ನ ಹಿಂದಿನ ಅಥವಾ ನೇರಾ ನೇರ ಕದನಗಳು ಮನಸ್ಸನ್ನು ಮುದುಡಿಸಿ, ಕೆಲಸದಲ್ಲೇ ಆಸಕ್ತಿಯನ್ನೂ ಅಳಿಸಿ ಹಾಕುತ್ತವೆ. 'ಹಲ್ಕಟ್ ಮನುಷ್ಯರು' ಎಲ್ಲ ಕಡೆ ಇದ್ದದ್ದೇ ಅವರನ್ನು ತಿದ್ದುವ ದೇವರೇ ಯಾಕೋ ನಿಶ್ಯಬ್ಧ.

    ಎಲ್ಲ ಕುದುರಿಕೊಂಡು ಒಳ್ಳೆಯದೇ ಆಗಲಿ ಎನ್ನುವುದು ನಮ್ಮ ಆಶಯ.

    ReplyDelete

Followers