Friday 7 February 2014

ಒಕ್ಕಲಿಗರು.



ಕಳೆದ ಕೆಲವು ದಿನಗಳಿಂದ ಲಾರ  ಇಂಗಲ್ಸ್ ಅವರ ಕಥೆ ಓದ್ತಾ ಇದ್ದೀನಿ. ನನ್ನ ಇಷ್ಟದ ಪುಸ್ತಕಗಳಲ್ಲಿ ಲಾರ ಇಂಗಲ್ಸ್ ವೈಲ್ಡರ್ ರಚನೆಗಳು  ಸಹ ಒಂದು. ಅವರ ಪುಸ್ತಕಗಳನ್ನು  ಕನ್ನಡಕ್ಕೆ ಎಸ್. ಅನಂತ ನಾರಾಯಣ ಅವರು. ಅತ್ಯಂತ ಸುಂದರ ನಿರೂಪಣೆ ಮಾಡಿದ್ದಾರೆ ದಿ. ಅನಂತ್ ನಾರಾಯಣ ಅವರು.
ಇಲ್ಲಿ ಬರುವ ಪಾತ್ರಧಾರಿಗಳು ಪ್ರಕೃತಿಯ ಮಕ್ಕಳು . ಅನ್ನದಾತರು. ಒಂದು ಕಾಡಿನಲ್ಲಿ ಅದರಲ್ಲೂ 1880 ರ ಇಸವಿಯಲ್ಲಿನ ಅಮೇರಿಕ ಬದುಕನ್ನು ಅದರಲ್ಲಿ ತಿಳಿಸಲಾಗಿದೆ. ಎಲ್ಲವು ಮತ್ತೆ ಮತ್ತೆ ಓದುವ ಆಸೆ ಉಂಟಾಗುತ್ತದೆ.  ಧರ್ಮಗಳ  ಯಾವುದೇ ಸಂಕೋಲೆ ಇಲ್ಲದೆ ಪ್ರಕೃತಿಯನ್ನೇ ನಂಬಿದ ಕುಟುಂಬಗಳೇ  ಆ ಪುಸ್ತಕದ ಮುಖ್ಯ ಸಂಗತಿಗಳು . ಹೆಣ್ಣಿಗಿರುವ ಸಮಾನತೆ, ಆಕೆಗೆ ನೀಡುವ ಗೌರವ ಎಲ್ಲವು ಮಾದರಿ. ಒಕ್ಕಲಿಗ ಜಾತಿ ಅನ್ನುವುದಕ್ಕಿಂತ ಕೆಲಸ ವೃತ್ತಿ ಎನ್ನುವುದು ಸೂಕ್ತ. ಯಾರು ಶ್ರಮಜೀವಿಯೊ ಅವರೆಲ್ಲ ಒಕ್ಕಲಿಗರೇ. ಯಾರು ಹೊಸತರ ಬಗ್ಗೆ ಪ್ರಕೃತಿ ಮಾತೆಯ  ಬಗ್ಗೆ ಪ್ರೀತಿ ಹೊಂದಿರುವವರೆಲ್ಲರೂ ಒಕ್ಕಲಿಗರು.
ಇವೆಲ್ಲ ಯಾಕೆ ಹೇಳೋಕೆ ಹೊರಟೆ ಅಂದ್ರೆ ಇತ್ತೀಚಿಗೆ ನನ್ನ ಕಸಿನ್ ರಶ್ಮಿ ಮಗುವಿನ ನಾಮಕರಣ  ರಾಜರಾಜೇಶ್ವರಿ ನಗರದಲ್ಲಿ ಆಯಿತು. ಅಲ್ಲಿ ಹಾಗೆ ಅಡ್ಡಾಡುವಾಗ ಒಂದು ಬ್ಯಾನರ್ ಕಣ್ಣಿಗೆ ಬಿತ್ತು. ಅದರಲ್ಲಿ ಸಂಕ್ರಾಂತಿ ಹಬ್ಬದ ಹಾರೈಕೆ ಇತ್ತು.. ಜೊತೆಗೆ ಆ ಮಹನೀಯರು ಒಕ್ಕಲಿಗ ಗೌಡಾಸ್ ಹಬ್ಬ ಸಂಕ್ರಾಂತಿ ಎಂದಿತ್ತು  ( ಬೆಳೆ ಬೆಳೆಯುವವರು ತಾವು ಮಾತ್ರ ಎನ್ನುವ ಮನಸ್ಥಿತಿ ಹೊಂದಿರುವುದು  ಎದ್ದು ಕಾಣುತ್ತಿತ್ತು) ಸಕತ್ ನಗು ಬಂತು ನನಗೆ ಅದನ್ನು ಓದಿ . ಯಾಕೆಂದ್ರೆ ಒಕ್ಕಲಿಗ ಎನ್ನುವ ಅರ್ಥ ತಿಳಿಯದವರು ಮಾತ್ರ ಹೀಗೆಲ್ಲಾ ಹೇಳಿಕೊಂಡು ತಿರುಗೋದು. ಅಂತಹವರು ಲಾರ ಇಂಗಲ್ಸ್ ವೈಲ್ಡರ್   ಬರೆದ ಪುಸ್ತಕ ಆದ ಬೇಕು.. ಆಗ ತಿಳಿಯುತ್ತೆ ಒಕ್ಕಲುತನದ ಪ್ರಾಮುಖ್ಯತೆ, ಅದಕ್ಕಿರುವ ಗೌರವ ! 

1 comment:

  1. ಕೆಲಸ ವೃತ್ತಿಯ ಗೌರವ ಎತ್ತಿ ಹಿಡಿದ ಕಿರು ಪರಿಚಯ ಲೇಖನ.
    ಲಾರ ಇಂಗಲ್ಸ್ ಮತ್ತು ದಿ. ಅನಂತ್ ನಾರಾಯಣ ಇಬ್ಬರಿಗೂ ನಾವೂ ಚಿರಋಣಿ.

    ReplyDelete

Followers